ETV Bharat / bharat

ಪಠ್ಯಪುಸ್ತಕದ ಕವಿತೆಯಿಂದ ಪ್ರೇರಣೆ: ಮಗ 'ಅಬ್ಬು', 'ಅಮ್ಮಿ' ಎಂದು ಕರೆದಿದ್ದಕ್ಕೆ ದೂರು ದಾಖಲಿಸಿದ ತಂದೆ - ಈಟಿವಿ ಭಾರತ ಕನ್ನಡ ನ್ಯೂಸ್​​

ಪಠ್ಯಪುಸ್ತಕದಲ್ಲಿನ ಕವಿತೆ ಓದಿದ ನಂತರ ವಿದ್ಯಾರ್ಥಿ ತನ್ನ ಪೋಷಕರಿಗೆ ಅಬ್ಬು ಅಮ್ಮಿ ಎಂದು ಕರೆದಿದ್ದಕ್ಕೆ ವಿದ್ಯಾರ್ಥಿಯ ತಂದೆ ಜಿಲ್ಲಾ ಮ್ಯಾಜಿಸ್ಟ್ರೇಟ್​ ಸೋನಿಕಾ ಸಿಂಗ್​​​​ ದೂರು ಸಲ್ಲಿಸಿರುವ ಘಟನೆ ಉತ್ತರಾಖಂಡ್​​ ನಲ್ಲಿ ನಡೆದಿದೆ.

student-calls-parents-abbu-ammi-after-reading-poem-in-textbook-father-files-complaint
ಪಠ್ಯಪುಸ್ತಕದ ಕವಿತೆಯಿಂದ ಪ್ರೇರಣೆ : ಮಗ ಅಬ್ಬು, ಅಮ್ಮಿ ಎಂದು ಕರೆದಿದ್ದಕ್ಕೆ ದೂರು ದಾಖಲಿಸಿದ ತಂದೆ
author img

By

Published : Apr 5, 2023, 10:19 PM IST

ಡೆಹ್ರಾಡೂನ್​ (ಉತ್ತರಾಖಂಡ್​​​) : ಪಠ್ಯಪುಸ್ತಕದಲ್ಲಿನ ಕವಿತೆಯನ್ನು ಓದಿ ವಿದ್ಯಾರ್ಥಿಯೋರ್ವ ತನ್ನ ಪೋಷಕರನ್ನು ಅಬ್ಬು, ಅಮ್ಮಿ ಎಂದು ಸಂಬೋಧಿಸಿರುವುದಕ್ಕೆ ವಿದ್ಯಾರ್ಥಿಯ ತಂದೆ ಜಿಲ್ಲಾ ಮ್ಯಾಜಿಸ್ಟ್ರೇಟ್​​ಗೆ ದೂರು ನೀಡಿರುವ ಘಟನೆ ಉತ್ತರಾಖಂಡ್​​​ನ ಡೆಹ್ರಾಡೂನ್​ನಲ್ಲಿ ನಡೆದಿದೆ.

2ನೇ ತರಗತಿಯ ಇಂಗ್ಲೀಷ್​ ಪಠ್ಯಪುಸ್ತಕದ ಗುಲ್ಮೋಹರ್​-2 ಎಂಬ ಕವಿತೆಯೊಂದರಲ್ಲಿ ಪೋಷಕರನ್ನು ಅಬ್ಬು ಮತ್ತು ಅಮ್ಮಿ ಎಂದು ಸಂಬೋಧಿಸಲಾಗಿದೆ. ಇದನ್ನು ಕಲಿತ ನಮ್ಮ ಮಗ ನಮ್ಮನ್ನು ಅಬ್ಬು ಮತ್ತು ಅಮ್ಮಿ ಎಂದು ಕರೆಯಲು ಆರಂಭಿಸಿದ್ದಾನೆ ಎಂದು ವಿದ್ಯಾರ್ಥಿಯ ತಂದೆ ಮನೀಶ್​ ಮಿತ್ತಲ್ ತಿಳಿಸಿದ್ದಾರೆ. ಈ ಸಂಬಂಧ ಜಿಲ್ಲಾ ಮ್ಯಾಜಿಸ್ಟ್ರೇಟ್​ ಸೋನಿಕಾ ಸಿಂಗ್​ ಅವರಿಗೆ ಮಿತ್ತಲ್​ ದೂರು ಸಲ್ಲಿಸಿದ್ದಾರೆ.

ಈ ವಿದ್ಯಾರ್ಥಿಯು ಡೆಹ್ರಾಡೂನ್​​ನಲ್ಲಿರುವ ಖಾಸಗಿ ಶಾಲೆಯಲ್ಲಿ 2ನೇ ತರಗತಿಯಲ್ಲಿ ಓದುತ್ತಿದ್ದಾನೆ. ಇದು ಇಂಡಿಯನ್​ ಸರ್ಟಿಫಿಕೆಟ್​ ಆಫ್​​ ಸೆಕೆಂಡರಿ ಎಜುಕೇಷನ್​ನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ವಿದ್ಯಾರ್ಥಿಯು ಈ ರೀತಿ ಸಂಬೋಧಿಸುತ್ತಿರುವುದನ್ನು ಕಂಡು ಪೋಷಕರು ಅಚ್ಚರಿಗೊಳಗಾಗಿದ್ದಾರೆ.

ಇದನ್ನೂ ಓದಿ : ಬಾತ್‌ರೂಂನಲ್ಲಿದ್ದ ಆ್ಯಸಿಡ್ ಕುಡಿದು ಮಗು ಸಾವು

ನನ್ನ ಮಗ ನನ್ನನ್ನು​ ಮತ್ತು ನನ್ನ ಹೆಂಡತಿಯನ್ನು ಅಬ್ಬು ಮತ್ತು ಅಮ್ಮಿ ಎಂದು ಕರೆದಾಗ ನಮಗೆ ಒಮ್ಮೆಗೆ ದಿಗ್ಭ್ರಮೆ ಉಂಟಾಯಿತು. ಈ ರೀತಿ ಕರೆಯುವುದನ್ನು ಎಲ್ಲಿಂದ ಕಲಿತೆ ಎಂದು ಮಗನನ್ನು ಕೇಳಿದಾಗ, ಆತ ತನ್ನ ಎರಡನೇ ತರಗತಿ ಪುಸ್ತಕವನ್ನು ತೋರಿಸಿದನು. ಈ ಪಠ್ಯದಲ್ಲಿರುವ ಕವಿತೆಯೊಂದರಲ್ಲಿ ಪೋಷಕರನ್ನು ಅಬ್ಬು ಮತ್ತು ಅಮ್ಮಿ ಎಂದು ತೋರಿಸಿದ್ದಾನೆ ಎಂದು ದೂರಿನಲ್ಲಿ ಮನೀಶ್​ ಮಿತ್ತಲ್ ಉಲ್ಲೇಖಿಸಿದ್ದಾರೆ.

ನಾವು ಮೊದಲಿಗೆ ಗಂಭೀರವಾಗಿ ಪರಿಗಣಿಸಿರಲಿಲ್ಲ. ಯಾವಾಗ ನಮ್ಮ ಮಗ ನಮ್ಮನ್ನು ಸತತವಾಗಿ ಅಬ್ಬು ಮತ್ತು ಅಮ್ಮಿ ಎಂದು ಕರೆಯಲು ಮುಂದುವರೆಸಿದನೋ ಆಗ ಅಚ್ಚರಿಗೊಂಡೆವು. ನಾನು ಜಿಲ್ಲಾ ಮ್ಯಾಜಿಸ್ಟ್ರೇಟ್​ಗೆ ದೂರು ಸಲ್ಲಿಸಿದ್ದೇನೆ ಎಂದು ಮನೀಶ್​ ಮಿತ್ತಲ್​ ಹೇಳಿದ್ದಾರೆ.

ಈ ಪ್ರಕರಣ ಸಂಬಂಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮುಖ್ಯ ಶಿಕ್ಷಣಾಧಿಕಾರಿಗೆ ಜಿಲ್ಲಾ ಮ್ಯಾಜಿಸ್ಟ್ರೇಟ್​ ಸೂಚನೆ ನೀಡಿದ್ದಾರೆ. ಇಲಾಖೆಯು ಈ ವಿಷಯವನ್ನು ಪರಿಶೀಲಿಸುತ್ತಿದೆ. ದೂರಿನ ವಿವರಗಳನ್ನು ಪರಿಶೀಲಿಸಿದ ನಂತರ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ ಎಂದು ಶಿಕ್ಷಣ ಇಲಾಖೆಯ ಮಹಾನಿರ್ದೇಶಕ ಬನ್ಸಿಧರ್ ತಿವಾರಿ ತಿಳಿಸಿದ್ದಾರೆ.

ಇದನ್ನೂ ಓದಿ : ಪ್ರಧಾನಿ ನರೇಂದ್ರ ಮೋದಿ, ಸಿಎಂ ಯೋಗಿಗೆ ಕೊಲೆ ಬೆದರಿಕೆ..!

ಡೆಹ್ರಾಡೂನ್​ (ಉತ್ತರಾಖಂಡ್​​​) : ಪಠ್ಯಪುಸ್ತಕದಲ್ಲಿನ ಕವಿತೆಯನ್ನು ಓದಿ ವಿದ್ಯಾರ್ಥಿಯೋರ್ವ ತನ್ನ ಪೋಷಕರನ್ನು ಅಬ್ಬು, ಅಮ್ಮಿ ಎಂದು ಸಂಬೋಧಿಸಿರುವುದಕ್ಕೆ ವಿದ್ಯಾರ್ಥಿಯ ತಂದೆ ಜಿಲ್ಲಾ ಮ್ಯಾಜಿಸ್ಟ್ರೇಟ್​​ಗೆ ದೂರು ನೀಡಿರುವ ಘಟನೆ ಉತ್ತರಾಖಂಡ್​​​ನ ಡೆಹ್ರಾಡೂನ್​ನಲ್ಲಿ ನಡೆದಿದೆ.

2ನೇ ತರಗತಿಯ ಇಂಗ್ಲೀಷ್​ ಪಠ್ಯಪುಸ್ತಕದ ಗುಲ್ಮೋಹರ್​-2 ಎಂಬ ಕವಿತೆಯೊಂದರಲ್ಲಿ ಪೋಷಕರನ್ನು ಅಬ್ಬು ಮತ್ತು ಅಮ್ಮಿ ಎಂದು ಸಂಬೋಧಿಸಲಾಗಿದೆ. ಇದನ್ನು ಕಲಿತ ನಮ್ಮ ಮಗ ನಮ್ಮನ್ನು ಅಬ್ಬು ಮತ್ತು ಅಮ್ಮಿ ಎಂದು ಕರೆಯಲು ಆರಂಭಿಸಿದ್ದಾನೆ ಎಂದು ವಿದ್ಯಾರ್ಥಿಯ ತಂದೆ ಮನೀಶ್​ ಮಿತ್ತಲ್ ತಿಳಿಸಿದ್ದಾರೆ. ಈ ಸಂಬಂಧ ಜಿಲ್ಲಾ ಮ್ಯಾಜಿಸ್ಟ್ರೇಟ್​ ಸೋನಿಕಾ ಸಿಂಗ್​ ಅವರಿಗೆ ಮಿತ್ತಲ್​ ದೂರು ಸಲ್ಲಿಸಿದ್ದಾರೆ.

ಈ ವಿದ್ಯಾರ್ಥಿಯು ಡೆಹ್ರಾಡೂನ್​​ನಲ್ಲಿರುವ ಖಾಸಗಿ ಶಾಲೆಯಲ್ಲಿ 2ನೇ ತರಗತಿಯಲ್ಲಿ ಓದುತ್ತಿದ್ದಾನೆ. ಇದು ಇಂಡಿಯನ್​ ಸರ್ಟಿಫಿಕೆಟ್​ ಆಫ್​​ ಸೆಕೆಂಡರಿ ಎಜುಕೇಷನ್​ನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ವಿದ್ಯಾರ್ಥಿಯು ಈ ರೀತಿ ಸಂಬೋಧಿಸುತ್ತಿರುವುದನ್ನು ಕಂಡು ಪೋಷಕರು ಅಚ್ಚರಿಗೊಳಗಾಗಿದ್ದಾರೆ.

ಇದನ್ನೂ ಓದಿ : ಬಾತ್‌ರೂಂನಲ್ಲಿದ್ದ ಆ್ಯಸಿಡ್ ಕುಡಿದು ಮಗು ಸಾವು

ನನ್ನ ಮಗ ನನ್ನನ್ನು​ ಮತ್ತು ನನ್ನ ಹೆಂಡತಿಯನ್ನು ಅಬ್ಬು ಮತ್ತು ಅಮ್ಮಿ ಎಂದು ಕರೆದಾಗ ನಮಗೆ ಒಮ್ಮೆಗೆ ದಿಗ್ಭ್ರಮೆ ಉಂಟಾಯಿತು. ಈ ರೀತಿ ಕರೆಯುವುದನ್ನು ಎಲ್ಲಿಂದ ಕಲಿತೆ ಎಂದು ಮಗನನ್ನು ಕೇಳಿದಾಗ, ಆತ ತನ್ನ ಎರಡನೇ ತರಗತಿ ಪುಸ್ತಕವನ್ನು ತೋರಿಸಿದನು. ಈ ಪಠ್ಯದಲ್ಲಿರುವ ಕವಿತೆಯೊಂದರಲ್ಲಿ ಪೋಷಕರನ್ನು ಅಬ್ಬು ಮತ್ತು ಅಮ್ಮಿ ಎಂದು ತೋರಿಸಿದ್ದಾನೆ ಎಂದು ದೂರಿನಲ್ಲಿ ಮನೀಶ್​ ಮಿತ್ತಲ್ ಉಲ್ಲೇಖಿಸಿದ್ದಾರೆ.

ನಾವು ಮೊದಲಿಗೆ ಗಂಭೀರವಾಗಿ ಪರಿಗಣಿಸಿರಲಿಲ್ಲ. ಯಾವಾಗ ನಮ್ಮ ಮಗ ನಮ್ಮನ್ನು ಸತತವಾಗಿ ಅಬ್ಬು ಮತ್ತು ಅಮ್ಮಿ ಎಂದು ಕರೆಯಲು ಮುಂದುವರೆಸಿದನೋ ಆಗ ಅಚ್ಚರಿಗೊಂಡೆವು. ನಾನು ಜಿಲ್ಲಾ ಮ್ಯಾಜಿಸ್ಟ್ರೇಟ್​ಗೆ ದೂರು ಸಲ್ಲಿಸಿದ್ದೇನೆ ಎಂದು ಮನೀಶ್​ ಮಿತ್ತಲ್​ ಹೇಳಿದ್ದಾರೆ.

ಈ ಪ್ರಕರಣ ಸಂಬಂಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮುಖ್ಯ ಶಿಕ್ಷಣಾಧಿಕಾರಿಗೆ ಜಿಲ್ಲಾ ಮ್ಯಾಜಿಸ್ಟ್ರೇಟ್​ ಸೂಚನೆ ನೀಡಿದ್ದಾರೆ. ಇಲಾಖೆಯು ಈ ವಿಷಯವನ್ನು ಪರಿಶೀಲಿಸುತ್ತಿದೆ. ದೂರಿನ ವಿವರಗಳನ್ನು ಪರಿಶೀಲಿಸಿದ ನಂತರ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ ಎಂದು ಶಿಕ್ಷಣ ಇಲಾಖೆಯ ಮಹಾನಿರ್ದೇಶಕ ಬನ್ಸಿಧರ್ ತಿವಾರಿ ತಿಳಿಸಿದ್ದಾರೆ.

ಇದನ್ನೂ ಓದಿ : ಪ್ರಧಾನಿ ನರೇಂದ್ರ ಮೋದಿ, ಸಿಎಂ ಯೋಗಿಗೆ ಕೊಲೆ ಬೆದರಿಕೆ..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.