ಚೆನ್ನೈ(ತಮಿಳುನಾಡು): ಕೊಯಮತ್ತೂರಿನ ಶಾಲಾ ಆವರಣದಲ್ಲಿ ನಡೆಯುತ್ತಿರುವ ಆರ್ಎಸ್ಎಸ್ ಕಾರ್ಯಕ್ರಮ ನಿಲ್ಲಿಸುವಂತೆ ತಮಿಳುನಾಡಿನ ವಿವಿಧ ರಾಜಕೀಯ ಪಕ್ಷಗಳು ಇದೀಗ ಆಂದೋಲನ ಶುರು ಮಾಡಿವೆ.
ಕೊಯಮತ್ತೂರಿನ ವಿಲಂಕುರಿಚಿಯಲ್ಲಿರುವ ಶಾಲೆವೊಂದರಲ್ಲಿ ಆರ್ಎಸ್ಎಸ್ ಕಳೆದ 8 ದಿನಗಳಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ರಾಜಕೀಯ ಪಕ್ಷಗಳಾದ ನಾಮ್ ತಮಿಳರ್ ಕಚ್ಚಿ, ತಂತೈ ಪೆರಿಯಾರ್ ದ್ರಾವಿಡರ್ ಕಳಗಂ, ವಿದುತಲೈ ಸಿರುತೈಕಲ್ ಕಚ್ಚಿ, ಮಕ್ಕಳ್ ಅತಿಕಾರಂ ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಜೊತೆಗೆ ಆರ್ಎಸ್ಎಸ್, ಬಿಜೆಪಿ ಮತ್ತು ಇತರೆ ಪಕ್ಷಗಳ ನಡುವೆ ಮಾತಿನ ಚಕಮಕಿ ಸಹ ನಡೆದಿದೆ.
ಇದನ್ನೂ ಓದಿರಿ: ಸೀಕ್ರೆಟ್ ಆಗಿ ಹಸೆಮಣೆ ಏರಿದ ಉರಿ ಚಿತ್ರದ ನಟ.. ಫೋಟೋ ವೈರಲ್!
ಪ್ರಕರಣಕ್ಕೆ ಸಂಬಂಧಿಸಿದಂತೆ ಪೀಲಮೇಡು ಪೊಲೀಸ್ ಠಾಣೆಯಲ್ಲಿ RSS ಜಿಲ್ಲಾ ಕಾರ್ಯದರ್ಶಿ ಮುರುಬಾಗ್, ಬಿಜೆಪಿಯ ಕಾಳಿದಾಸ್ ಸೇರಿದಂತೆ ಅನೇಕರ ವಿರುದ್ಧ ಸರ್ಕಾರಿ ನೌಕರರ ಕೆಲಸಕ್ಕೆ ಅಡ್ಡಿ ಸೇರಿದಂತೆ ವಿವಿಧ ಸೆಕ್ಷನ್ಗಳ ಅಡಿ ಪ್ರಕರಣ ದಾಖಲಾಗಿದೆ. ಇದೊಂದು ಕಾನೂನು ಬಾಹಿರ ಸಭೆಯಾಗಿದೆ ಎಂಬ ಆರೋಪಗಳಿದ್ದು, ಇಲ್ಲಿಯವರೆಗೆ ಯಾರನ್ನೂ ಬಂಧಿಸಿರುವ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ.