ETV Bharat / bharat

ಪಂಚರಾಜ್ಯಗಳ ಮತ ಎಣಿಕೆಗೂ ಮುನ್ನ VVPAT ಪರಿಶೀಲನೆಗಾಗಿ ಮನವಿ.. ನಾಳೆ ಸುಪ್ರೀಂನಲ್ಲಿ ಅರ್ಜಿ ವಿಚಾರಣೆ

author img

By

Published : Mar 8, 2022, 12:18 PM IST

ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಮಾರ್ಚ್​ 10ರಂದು ಬಹಿರಂಗಗೊಳ್ಳಲಿದ್ದು, ಇದರ ಮಧ್ಯೆ ನಾಳೆ ಸುಪ್ರೀಂಕೋರ್ಟ್​​ನಲ್ಲಿ ವಿವಿಪ್ಯಾಟ್​​ಗಳ ಪರಿಶೀಲನೆ ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಯಲಿದೆ.

SC to hear plea regarding VVPAT slips
SC to hear plea regarding VVPAT slips

ನವದೆಹಲಿ: ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಪಂಚರಾಜ್ಯಗಳ ಚುನಾವಣೆ ಈಗಾಗಲೇ ಮುಕ್ತಾಯವಾಗಿದ್ದು, ಮಾರ್ಚ್​​ 10ರಂದು ಫಲಿತಾಂಶ ಬಹಿರಂಗಗೊಳ್ಳಲಿದೆ. ಮತ ಎಣಿಕೆ ಮಾಡುವುದಕ್ಕೂ ಮುನ್ನ VVPAT ಪರಿಶೀಲನೆ ಮಾಡುವಂತೆ ಸಲ್ಲಿಕೆ ಮಾಡಲಾಗಿರುವ ಮನವಿ ವಿಚಾರಣೆ ನಾಳೆ ಸುಪ್ರೀಂಕೋರ್ಟ್​​ನಲ್ಲಿ ನಡೆಯಲಿದೆ.

EVM ಮತಗಳ ಎಣಿಕೆಯ ಕೊನೆಯಲ್ಲಿ ಪರಿಶೀಲನೆ ನಡೆಸುವ ಬದಲಿಗೆ ಎಣಿಕೆ ಆರಂಭವಾಗುವುದಕ್ಕೂ ಮೊದಲು VVPAT ಪರಿಶೀಲನೆ ನಡೆಸುವಂತೆ ಕೋರಿ ಸುಪ್ರೀಂಕೋರ್ಟ್​ನಲ್ಲಿ PIL ಸಲ್ಲಿಕೆಯಾಗಿದ್ದು, ನಾಳೆ ಅದರ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್​ ಸಮ್ಮತಿಸಿದೆ.

ವಿವಿಪ್ಯಾಟ್​​ಗಳ ಪರಿಶೀಲನೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದು, ಅದರ ವಿಚಾರಣೆ ನಡೆಸಲು ಒಪ್ಪಿಕೊಂಡಿರುವ ಸುಪ್ರೀಂಕೋರ್ಟ್​ ನಾಳೆ ಅರ್ಜಿ ವಿಚಾರಣೆ ನಡೆಸಲಿದೆ.

ಇಷ್ಟು ದಿನ ಮತ ಎಣಿಕೆ ಮುಗಿದ ನಂತರ ವಿವಿಪ್ಯಾಟ್ ಪರಿಶೀಲನೆ ನಡೆಸಲಾಗುತ್ತಿತ್ತು ಎಂದು ಹಿರಿಯ ವಕೀಲ ಮೀನಾಕ್ಷಿ ಆರೋರಾ ಹೇಳಿದ್ದಾರೆ. ಆದರೆ, ಎತ ಎಣಿಕೆ ಮುಗಿದ ನಂತರ ವಿವಿಪ್ಯಾಟ್ ಪರಿಶೀಲನೆಯಾಗುವ ವೇಳೆಗೆ ಎಲ್ಲ ಚುನಾವಣಾ ಎಜೆಂಟ್​ಗಳು ತೆರಳುವ ಕಾರಣ ಅದರಲ್ಲಿ ಯಾವುದೇ ರೀತಿಯ ಪಾರದರ್ಶಕತೆ ಇರಲ್ಲ ಎಂದು ಅರೋರಾ ತಿಳಿಸಿದ್ದಾರೆ.

ಇದನ್ನೂ ಓದಿರಿ: ಯುಪಿ ಮತ್ತೆ BJPಗೆ, AAP ಕೈಗೆ ಪಂಜಾಬ್: ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ಹೀಗಿದೆ..

ವಿವಿಪ್ಯಾಟ್ ಪರಿಶೀಲನೆ ವೇಳೆ ಲೋಪದೋಷಗಳು ಕಂಡುಬಂದಲ್ಲಿ, ಪ್ರತಿ ವಿಧಾನಸಭೆ ಕ್ಷೇತ್ರದ ಎಲ್ಲ ಮತ ಗಟ್ಟೆಗಳ ಶೇ.100 ರಷ್ಟು ವಿವಿಪ್ಯಾಟ್‌ಗಳನ್ನು ಪರಿಶೀಲಿಸಿ ನಂತರ ಅವುಗಳನ್ನು ವಿದ್ಯುನ್ಮಾನ ಮತಯಂತ್ರದ ಜತೆ ತುಲನೆ ಮಾಡಬೇಕು ಎಂದು ಈಗಾಗಲೇ ವಿವಿಧ ಪಕ್ಷಗಳು ಸಹ ಒತ್ತಾಯ ಮಾಡಿವೆ.

ನವದೆಹಲಿ: ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಪಂಚರಾಜ್ಯಗಳ ಚುನಾವಣೆ ಈಗಾಗಲೇ ಮುಕ್ತಾಯವಾಗಿದ್ದು, ಮಾರ್ಚ್​​ 10ರಂದು ಫಲಿತಾಂಶ ಬಹಿರಂಗಗೊಳ್ಳಲಿದೆ. ಮತ ಎಣಿಕೆ ಮಾಡುವುದಕ್ಕೂ ಮುನ್ನ VVPAT ಪರಿಶೀಲನೆ ಮಾಡುವಂತೆ ಸಲ್ಲಿಕೆ ಮಾಡಲಾಗಿರುವ ಮನವಿ ವಿಚಾರಣೆ ನಾಳೆ ಸುಪ್ರೀಂಕೋರ್ಟ್​​ನಲ್ಲಿ ನಡೆಯಲಿದೆ.

EVM ಮತಗಳ ಎಣಿಕೆಯ ಕೊನೆಯಲ್ಲಿ ಪರಿಶೀಲನೆ ನಡೆಸುವ ಬದಲಿಗೆ ಎಣಿಕೆ ಆರಂಭವಾಗುವುದಕ್ಕೂ ಮೊದಲು VVPAT ಪರಿಶೀಲನೆ ನಡೆಸುವಂತೆ ಕೋರಿ ಸುಪ್ರೀಂಕೋರ್ಟ್​ನಲ್ಲಿ PIL ಸಲ್ಲಿಕೆಯಾಗಿದ್ದು, ನಾಳೆ ಅದರ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್​ ಸಮ್ಮತಿಸಿದೆ.

ವಿವಿಪ್ಯಾಟ್​​ಗಳ ಪರಿಶೀಲನೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದು, ಅದರ ವಿಚಾರಣೆ ನಡೆಸಲು ಒಪ್ಪಿಕೊಂಡಿರುವ ಸುಪ್ರೀಂಕೋರ್ಟ್​ ನಾಳೆ ಅರ್ಜಿ ವಿಚಾರಣೆ ನಡೆಸಲಿದೆ.

ಇಷ್ಟು ದಿನ ಮತ ಎಣಿಕೆ ಮುಗಿದ ನಂತರ ವಿವಿಪ್ಯಾಟ್ ಪರಿಶೀಲನೆ ನಡೆಸಲಾಗುತ್ತಿತ್ತು ಎಂದು ಹಿರಿಯ ವಕೀಲ ಮೀನಾಕ್ಷಿ ಆರೋರಾ ಹೇಳಿದ್ದಾರೆ. ಆದರೆ, ಎತ ಎಣಿಕೆ ಮುಗಿದ ನಂತರ ವಿವಿಪ್ಯಾಟ್ ಪರಿಶೀಲನೆಯಾಗುವ ವೇಳೆಗೆ ಎಲ್ಲ ಚುನಾವಣಾ ಎಜೆಂಟ್​ಗಳು ತೆರಳುವ ಕಾರಣ ಅದರಲ್ಲಿ ಯಾವುದೇ ರೀತಿಯ ಪಾರದರ್ಶಕತೆ ಇರಲ್ಲ ಎಂದು ಅರೋರಾ ತಿಳಿಸಿದ್ದಾರೆ.

ಇದನ್ನೂ ಓದಿರಿ: ಯುಪಿ ಮತ್ತೆ BJPಗೆ, AAP ಕೈಗೆ ಪಂಜಾಬ್: ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ಹೀಗಿದೆ..

ವಿವಿಪ್ಯಾಟ್ ಪರಿಶೀಲನೆ ವೇಳೆ ಲೋಪದೋಷಗಳು ಕಂಡುಬಂದಲ್ಲಿ, ಪ್ರತಿ ವಿಧಾನಸಭೆ ಕ್ಷೇತ್ರದ ಎಲ್ಲ ಮತ ಗಟ್ಟೆಗಳ ಶೇ.100 ರಷ್ಟು ವಿವಿಪ್ಯಾಟ್‌ಗಳನ್ನು ಪರಿಶೀಲಿಸಿ ನಂತರ ಅವುಗಳನ್ನು ವಿದ್ಯುನ್ಮಾನ ಮತಯಂತ್ರದ ಜತೆ ತುಲನೆ ಮಾಡಬೇಕು ಎಂದು ಈಗಾಗಲೇ ವಿವಿಧ ಪಕ್ಷಗಳು ಸಹ ಒತ್ತಾಯ ಮಾಡಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.