ಭೋಪಾಲ್(ಮಧ್ಯಪ್ರದೇಶ): ಕಳೆದ ಒಂದು ವರ್ಷದಿಂದ ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿ ಜೋರಾಗಿದ್ದು, ಕೆಲವೊಂದು ರಾಜ್ಯಗಳಲ್ಲಿ ಕೊರೊನಾ ಸೋಂಕಿತರಿಗೆ ವೈದ್ಯರು ದೇವರ ರೂಪದಲ್ಲಿ ಚಿಕಿತ್ಸೆ ನೀಡ್ತಿದ್ದಾರೆ.
ಮಧ್ಯಪ್ರದೇಶದ ಭೋಪಾಲ್ನಲ್ಲಿನ ಕೊರೊನಾ ರೋಗಿಗಳ ಪಾಲಿಗೆ ದೇವರಾಗಿರುವ ಡಾ. ಸತ್ಯಂಧ್ರ ಮಿಶ್ರಾ ಇದೀಗ ಕೊರೊನಾ ಸೋಂಕಿಗೊಳಗಾಗಿದ್ದು, ಅವರ ಶ್ವಾಸಕೋಶ ಶೇ. 80ರಷ್ಟು ಸೋಂಕಿಗೊಳಗಾಗಿದೆ. ಅವರಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡುವಂತೆ ಸಹೋದ್ಯೋಗಿಗಳು ಧ್ವನಿ ಎತ್ತುತ್ತಿದ್ದಂತೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೈದರಾಬಾದ್ನಲ್ಲಿರುವ ದೇಶದ ಖ್ಯಾತ ಶ್ವಾಸಕೋಶ ತಜ್ಞ ಅಪರ್ ಜಿಂದಾಲ್ ಅವರ ಬಳಿ ಕಳುಹಿಸಲು ನಿರ್ಧರಿಸಿದ್ದಾರೆ.

ಭಾನುವಾರ-ಸೋಮವಾರ ಮಧ್ಯರಾತ್ರಿ ಹೈದರಾಬಾದ್ನ ತಜ್ಞರ ತಂಡ ಸಾಗರ್ ತಲುಪಿತು. ಅಲ್ಲಿಂದ ಭೋಪಾಲ್ಗೆ ಡಾ. ಸತ್ಯೇಂದ್ರ ಮಿಶ್ರಾ ಅವನ್ನ ಕರೆತರಲಾಗಿದ್ದು, ಅಲ್ಲಿಂದ ಏರ್ ಆ್ಯಂಬುಲೆನ್ಸ್ ಮೂಲಕ ಹೈದರಾಬಾದ್ಗೆ ಕರೆತರಲಾಗಿದ್ದು, ಇದೀಗ ಚಿಕಿತ್ಸೆ ಆರಂಭಗೊಂಡಿದೆ.

ಅವರನ್ನ ಕರೆತರುವ ಉದ್ದೇಶದಿಂದ 175 ಕಿಲೋ ಮೀಟರ್ ಉದ್ಧದ ಹಸಿರು ಕಾರಿಡಾರ್ ನಿರ್ಮಿಸಲಾಗಿತ್ತು ಎಂದು ಜಿಲ್ಲಾಧಿಕಾರಿ ದೀಪಕ್ ಸಿಂಗ್ ತಿಳಿಸಿದ್ದಾರೆ. ಬುಂದೇಲ್ಖಂಡ್ದ ವೈದ್ಯಕೀಯ ಕಾಲೇಜ್ನಲ್ಲಿ ಡಾ. ಸತ್ಯೇಂದ್ರ ಮಿಶ್ರಾ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದರು. ಈ ವೇಳೆ ಅವರಿಗೆ ಶೇ.80ರಷ್ಟು ಶ್ವಾಸಕೋಶ ಕೊರೊನಾದಿಂದ ಸೋಂಕಿಗೊಳಗಾಗಿದೆ. ವಿಶೇಷ ಚಿಕಿತ್ಸೆಗಾಗಿ ಮಧ್ಯಪ್ರದೇಶ ಸರ್ಕಾರ ಆಂಬ್ಯುಲೆನ್ಸ್ ಒದಗಿಸಿದ್ದು, ಅದರಲ್ಲೇ ಹೈದರಾಬಾದ್ಗೆ ಕಳುಹಿಸಲಾಗಿದೆ. ಈಗಾಗಲೇ ಹೈದರಾಬಾದ್ನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.