ETV Bharat / bharat

'ಪಾಂಡವರು ಕೂಡಾ ತಮ್ಮ ಸಂಬಂಧಿಗಳನ್ನು ಆಯ್ಕೆ ಮಾಡಲಿಲ್ಲ, ನೆರೆಹೊರೆ ದೇಶಗಳ ವಿಚಾರದಲ್ಲಿ ನಾವೂ ಅಷ್ಟೇ'

author img

By

Published : Jan 29, 2023, 8:13 AM IST

ಭಾರತ ಸರ್ಕಾರದ ಬಗ್ಗೆ ವಿದೇಶಿ ಮಾಧ್ಯಮಗಳು ಹೊಂದಿರುವ ನಿಲುವು, ಭಾರತ-ಚೀನಾ, ಭಾರತ-ಪಾಕ್‌ ಸಂಬಂಧಗಳ ಕುರಿತಾಗಿ ವಿದೇಶಾಂಗ ಸಚಿವ ಎಸ್.ಜೈಶಂಕರ್​ ಮಾತನಾಡಿದ್ದಾರೆ.

jaishankar-slams-foreign-media
ವಿದೇಶಿ ಮಾಧ್ಯಮಗಳಿಗೆ ಕೇಂದ್ರ ಸಚಿವ ಜೈಶಂಕರ್​ ಛೀಮಾರಿ

ಪುಣೆ: "ಪಾಂಡವರು ಕೂಡಾ ತಮ್ಮ ಸಂಬಂಧಿಗಳನ್ನು ಆಯ್ಕೆ ಮಾಡಲಿಲ್ಲ. ಭೌಗೋಳಿಕ ನೆರೆಹೊರೆ ದೇಶಗಳ ಆಯ್ಕೆ ವಿಚಾರದಲ್ಲಿ ಭಾರತಕ್ಕೂ ಇದು ಸಾಧ್ಯವಾಗದು" ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್‌ ಹೇಳಿದರು. ನಮ್ಮ ನೆರೆ ದೇಶ ಅಣ್ವಸ್ತ್ರ ಹೊಂದಿರುವ ಕಪಟಿ ಪಾಕಿಸ್ತಾನ ನಮಗೆ ಆಸ್ತಿಯೋ ಅಥವಾ ಬಾಧ್ಯತೆಯೇ ಎಂಬ ಮಾಧ್ಯಮ ಪ್ರತಿನಿಧಿಯೊಬ್ಬರ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದರು. "ಇದು ಇಂದಿನ ವಾಸ್ತವತೆ. ಆದರೆ ಒಳ್ಳೆಯ ವಿಚಾರಗಳು ಮೇಲುಗೈ ಸಾಧಿಸಬಹುದು ಎಂಬ ನಿರೀಕ್ಷೆ ನಮ್ಮದು" ಎಂದರು.

ರಾಹುಲ್ ಆರೋಪಕ್ಕೆ ಪ್ರತಿಕ್ರಿಯೆ: ಲಡಾಕ್‌ನಲ್ಲಿ ಭಾರತ ತನ್ನ 65 ಗಸ್ತು ಕೇಂದ್ರಗಳ ಪೈಕಿ 26 ಅನ್ನು ಈಗಾಗಲೇ ಕಳೆದುಕೊಂಡಿದೆ ಎಂದು ರಾಹುಲ್ ಗಾಂಧಿ ಹಿರಿಯ ಅಧಿಕಾರಿಯೊಬ್ಬರ ವರದಿಯನ್ನು ಉಲ್ಲೇಖಿಸಿ ಇತ್ತೀಚೆಗೆ ಕೇಂದ್ರ ಸರ್ಕಾರವನ್ನು ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್.ಜೈಶಂಕರ್, "ವಿರೋಧ ಪಕ್ಷದ ನಾಯಕರು ಹೇಳುವ ಅತಿಕ್ರಮಣ ವಿಚಾರ 1962 ರಲ್ಲಿ ಆಗಿದ್ದು" ಎಂದರು. ಜವಾಹರ್ ಲಾಲ್ ನೆಹರು ಅವರು ದೇಶದ ಪ್ರಧಾನಿಯಾಗಿದ್ದಾಗ ನಡೆದ ಭಾರತ-ಚೀನಾ ಯುದ್ಧವನ್ನು ಉಲ್ಲೇಖಿಸಿ ಜೈಶಂಕರ್ ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರನ್ನು ಟೀಕಿಸಿದ ಸಚಿವರು, "ಕೆಲವೊಮ್ಮೆ ಸುಳ್ಳು ಎಂದು ಗೊತ್ತಿದ್ದರೂ ಅವರು ಅಂಥ ಸುದ್ದಿಗಳನ್ನು ಹರಡುತ್ತಾರೆ. 1962ರಲ್ಲಿ ನಡದೆ ಘಟನೆಗಳನ್ನು ಅವರು ಈಗ ನಡೆದಿರುವಂತೆ ಬಿಂಬಿಸುತ್ತಿದ್ದಾರೆ. ಆದರೆ ಅಂದು ನಡೆದ ನಿಜ ಸಂಗತಿಯನ್ನು ಅವರು ಮಾತನಾಡಲಾರರು" ಎಂದರು.

  • #WATCH | It is a reality to us. In life, you have what you have. Pandavas could not choose their relatives, we can't choose our neighbours. Naturally, we hope good sense prevails...: EAM Dr Jaishankar when asked if Pakistan, as our neighbour will be an asset or a liability to us pic.twitter.com/2g1BRIBKy7

    — ANI (@ANI) January 28, 2023 " class="align-text-top noRightClick twitterSection" data=" ">

ವಿದೇಶಿ ಮಾಧ್ಯಮಗಳಿಗೆ ಛೀಮಾರಿ: ಗೋಧ್ರೋತ್ತರ ಗಲಭೆ ಕುರಿತು ಆಂಗ್ಲ ಮಾಧ್ಯಮ ಬಿಬಿಸಿ ಚಿತ್ರಿಸಿರುವ ವಿವಾದಿತ ಸಾಕ್ಷ್ಯಚಿತ್ರ ದೇಶದಲ್ಲಿ ಟೀಕೆಗೆ ಗುರಿಯಾಗಿದ್ದು, ವಿದೇಶಿ ಮಾಧ್ಯಮಗಳು ಭಾರತ ಸರ್ಕಾರಕ್ಕೆ, "ಹಿಂದು ಹಣೆಪಟ್ಟಿ" ಕಟ್ಟಿದ್ದಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಛೀಮಾರಿ ಹಾಕಿದ್ದಾರೆ. ಅಮೆರಿಕ, ಯುರೋಪ್​ ರಾಷ್ಟ್ರಗಳ ಸರ್ಕಾರಗಳಿಗೆ "ಕ್ರಿಶ್ಚಿಯನ್​ ನ್ಯಾಷನಲಿಸ್ಟ್​ಎಂದು ಹೇಳಬಲ್ಲಿರಾ" ಎಂದು ಪ್ರಶ್ನಿಸಿದ್ದಾರೆ.

"ವಿದೇಶಿ ಮಾಧ್ಯಮಗಳಲ್ಲಿ ಭಾರತ ಸರ್ಕಾರವನ್ನು ಹಿಂದು ರಾಷ್ಟ್ರೀಯವಾದಕ್ಕೆ ಹೋಲಿಸಲಾಗುತ್ತಿದೆ. ಪಾಶ್ಚಿಮಾತ್ಯ ರಾಷ್ಟ್ರಗಳ ಸರ್ಕಾರಗಳು ಕ್ರಿಶ್ಚಿಯಾನಿಟಿ ಆಧರಿತವಾಗಿವೆ ಎಂದು ಹೇಳುವುದಿಲ್ಲ. ಭಾರತಕ್ಕೆ ಮಾತ್ರ ಈ ಗುಣವಿಶೇಷಗಳನ್ನು ಸೀಮಿತವಾಗಿಸಿದ್ದಾರೆ. ನಮ್ಮ ದೇಶ ಪ್ರಪಂಚದ ಯಾವ ರಾಷ್ಟ್ರಗಳಿಗೂ ಕಡಿಮೆ ಇಲ್ಲ. ವಿಶ್ವಕ್ಕಿಂತಲೂ ಯಾವುದರಲ್ಲೂ ಹಿಂದೆ ಇಲ್ಲ" ಎಂದು ಪ್ರತಿಪಾದಿಸಿದರು.

ಇದಕ್ಕೂ ಮುನ್ನ ಜೈಶಂಕರ್ ವಿರಚಿತ ಇಂಗ್ಲಿಷ್ ಪುಸ್ತಕವಾದ, "ದಿ ಇಂಡಿಯಾ ವೇ: ಸ್ಟ್ರಾಟಜೀಸ್ ಫಾರ್ ಆನ್ ಅನ್ಸರ್ಟೈನ್ ವರ್ಲ್ಡ್" ಮರಾಠಿ ಭಾಷೆಗೆ "ಭಾರತ್​ ಮಾರ್ಗ್​" ಎಂದು ಅನುವಾದವಾಗಿದ್ದು, ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಬಿಡುಗಡೆ ಮಾಡಿದರು.

ಇದೇ ವೇಳೆ ವಿದೇಶಿ ಮಾಧ್ಯಮಗಳು ಭಾರತದ ಬಗ್ಗೆ ಹೊಂದಿರುವ ನಿಲುವನ್ನು ಟೀಕಿಸಿದ ವಿದೇಶಾಂಗ ಸಚಿವರು, "ಕೇಂದ್ರ ಸರ್ಕಾರ ಕಳೆದ 9 ವರ್ಷಗಳಲ್ಲಿ ರಾಜಕೀಯದಾಚೆಗೂ ಕೆಲಸ ಮಾಡಿದೆ. ರಾಷ್ಟ್ರೀಯವಾದವನ್ನೂ ಮೀರಿ, ದೇಶದ ಅಭ್ಯುದಯಕ್ಕೆ ದುಡಿಯುತ್ತಿದೆ. ಸಂಕಷ್ಟ ಕಾಲದಲ್ಲಿ ಇದೇ ರಾಷ್ಟ್ರೀಯವಾದಿಗಳು ವಿದೇಶಗಳಿಗೆ ನೆರವು ನೀಡಿದ್ದರು. ಅವರೇ ಆ ಸಮಯದಲ್ಲಿ ದೇಶ ತೊರೆದಿದ್ದರು. ಸರ್ಕಾರ ಒಬ್ಬರ ಪರವಾಗಿಲ್ಲ" ಎಂದು ಒತ್ತಿ ಹೇಳಿದರು.

ಹಿಂಜರಿಕೆಯ ಮನೋಭಾವವಿಲ್ಲ: "ಸರ್ಕಾರದ ನೀತಿ ನಿಲುವುಗಳಲ್ಲಿ ಯಾವುದೇ ಹಿಂಜರಿಕೆ ಮನೋಭಾವವಿಲ್ಲ. ಈ ಬಗ್ಗೆ ಕ್ಷಮೆ ಕೇಳುವ ಪ್ರಮೇಯವೂ ಬರುವುದಿಲ್ಲ. ಕೆಲಸದ ಬಗ್ಗೆ ನಮಗೆ ಹೆಮ್ಮೆ ಇದೆ. ರಾಷ್ಟ್ರೀಯವಾದದ ಹೊರತಾಗಿಯೂ ಸರ್ಕಾರ ದೃಢ ನಿರ್ಧಾರ ತೆಗೆದುಕೊಳ್ಳುತ್ತದೆ" ಎಂದು ಹೇಳಿದರು.

"ನೀವು ವಿದೇಶಿ ಪತ್ರಿಕೆಗಳನ್ನು ಓದಿ ನೋಡಿ. ಅವು ಯಾವಾಗಲೂ ನಮ್ಮ ದೇಶವನ್ನು ಹಿಂದು ಹಣೆಪಟ್ಟಿಯಲ್ಲೇ ಗುರುತಿಸುತ್ತವೆ. ಇದು ದಾರಿ ತಪ್ಪಿಸುವ ವಿಷಯವಾಗಿದೆ. ಅವರ ಸರ್ಕಾರವನ್ನು ಮಾತ್ರ ಕ್ರಿಶ್ಚಿಯನ್​ ಧರ್ಮಕ್ಕೆ ತಳುಕು ಹಾಕುವುದಿಲ್ಲ. ಭಾರತವನ್ನು ಮಾತ್ರ ಅವು ಟಾರ್ಗೆಟ್​​ ಮಾಡಿಕೊಂಡಿವೆ. ಇಂದು ದೇಶ ವಿಶ್ವದೆಲ್ಲಾ ರಾಷ್ಟ್ರಗಳಿಗೂ ಯಾವುದರಲ್ಲಿ ಕಮ್ಮಿ ಇಲ್ಲ. ವಿಶ್ವಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧವಿದೆ" ಎಂದು ಜೈಶಂಕರ್ ಹೇಳಿದರು.

"ಜಿ20 ಅಧ್ಯಕ್ಷತೆ ಸಿಕ್ಕ ಬಳಿಕ ವಿಶ್ವದ ಎಲ್ಲ ರಾಷ್ಟ್ರಗಳ ಪ್ರಧಾನಿಗಳು, ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದಾರೆ. 200 ಸಭೆಗಳನ್ನು ನಡೆಸಲಾಗುತ್ತಿದೆ. ಜಗತ್ತಿಗೆ ನಮ್ಮ ಸಾಮರ್ಥ್ಯವನ್ನು ತೋರಿಸಲು ಬಯಸುತ್ತೇವೆ. ಭಾರತವನ್ನು ನೋಡಲು ಬನ್ನಿ. ಭಾರತದಲ್ಲಿನ ಬದಲಾವಣೆಗಳನ್ನು ಕಾಣಿರಿ. ಇಲ್ಲಿನ ಉತ್ಸಾಹ ಮತ್ತು ಸಕಾರಾತ್ಮಕ ಭಾವನೆಗಳನ್ನು ಗುರುತಿಸಿ" ಎಂದು ಜೈಶಂಕರ್ ಸಲಹೆ ನೀಡಿದರು.

ಬಿಬಿಸಿ ಸಾಕ್ಷ್ಯಚಿತ್ರ ವಿವಾದ: ಬಿಬಿಸಿ 2002 ರಲ್ಲಿ ನಡೆದ ಗೋಧ್ರೋತ್ತರ ಗಲಭೆ ಕುರಿತು ಚಿತ್ರಿಸಲಾದ ಇಂಡಿಯಾ: ದಿ ಮೋದಿ ಕ್ವೆಶ್ಚನ್ ಸಾಕ್ಷ್ಯಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಆಕ್ಷೇಪಾರ್ಹವಾದ ಸಂಗತಿಯನ್ನು ಬಳಕೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಇದರಿಂದ ದೇಶದಲ್ಲಿ ಸಾಕ್ಷ್ಯಚಿತ್ರದ ಪ್ರದರ್ಶನಕ್ಕೆ ನಿಷೇಧ ಹೇರಲಾಗಿದೆ. ಅಲ್ಲದೇ, ಇದರ ಕೊಂಡಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲೂ ಬಳಕೆ ಮಾಡುವಂತಿಲ್ಲ ಎಂದೂ ಸೂಚಿಸಿ ಕೇಂದ್ರ ಸರ್ಕಾರ ಆದೇಶಿಸಿದೆ. ಬಿಬಿಸಿಯ ಸಾಕ್ಷ್ಯಚಿತ್ರ ಪ್ರಚಾರದ ತುಣುಕಾಗಿದೆ. ಸುಳ್ಳು ಮಾಹಿತಿ, ನಿರಾಧಾರ, ಪೂರ್ವಗ್ರಹಪೀಡಿತವಾದ ವಿಡಿಯೋವಾಗಿದೆ ಎಂದು ಕೇಂದ್ರ ಸರ್ಕಾರ ಟೀಕಿಸಿದೆ.

ಇದನ್ನೂ ಓದಿ: ಇಂದು ಬೆಳಗ್ಗೆ 11ಕ್ಕೆ ಹೊಸ ವರ್ಷದ ಮೊದಲ 'ಮನ್​ ಕಿ ಬಾತ್': ಮೋದಿ ಮನದ ಮಾತಿನ ಕುತೂಹಲ

ಪುಣೆ: "ಪಾಂಡವರು ಕೂಡಾ ತಮ್ಮ ಸಂಬಂಧಿಗಳನ್ನು ಆಯ್ಕೆ ಮಾಡಲಿಲ್ಲ. ಭೌಗೋಳಿಕ ನೆರೆಹೊರೆ ದೇಶಗಳ ಆಯ್ಕೆ ವಿಚಾರದಲ್ಲಿ ಭಾರತಕ್ಕೂ ಇದು ಸಾಧ್ಯವಾಗದು" ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್‌ ಹೇಳಿದರು. ನಮ್ಮ ನೆರೆ ದೇಶ ಅಣ್ವಸ್ತ್ರ ಹೊಂದಿರುವ ಕಪಟಿ ಪಾಕಿಸ್ತಾನ ನಮಗೆ ಆಸ್ತಿಯೋ ಅಥವಾ ಬಾಧ್ಯತೆಯೇ ಎಂಬ ಮಾಧ್ಯಮ ಪ್ರತಿನಿಧಿಯೊಬ್ಬರ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದರು. "ಇದು ಇಂದಿನ ವಾಸ್ತವತೆ. ಆದರೆ ಒಳ್ಳೆಯ ವಿಚಾರಗಳು ಮೇಲುಗೈ ಸಾಧಿಸಬಹುದು ಎಂಬ ನಿರೀಕ್ಷೆ ನಮ್ಮದು" ಎಂದರು.

ರಾಹುಲ್ ಆರೋಪಕ್ಕೆ ಪ್ರತಿಕ್ರಿಯೆ: ಲಡಾಕ್‌ನಲ್ಲಿ ಭಾರತ ತನ್ನ 65 ಗಸ್ತು ಕೇಂದ್ರಗಳ ಪೈಕಿ 26 ಅನ್ನು ಈಗಾಗಲೇ ಕಳೆದುಕೊಂಡಿದೆ ಎಂದು ರಾಹುಲ್ ಗಾಂಧಿ ಹಿರಿಯ ಅಧಿಕಾರಿಯೊಬ್ಬರ ವರದಿಯನ್ನು ಉಲ್ಲೇಖಿಸಿ ಇತ್ತೀಚೆಗೆ ಕೇಂದ್ರ ಸರ್ಕಾರವನ್ನು ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್.ಜೈಶಂಕರ್, "ವಿರೋಧ ಪಕ್ಷದ ನಾಯಕರು ಹೇಳುವ ಅತಿಕ್ರಮಣ ವಿಚಾರ 1962 ರಲ್ಲಿ ಆಗಿದ್ದು" ಎಂದರು. ಜವಾಹರ್ ಲಾಲ್ ನೆಹರು ಅವರು ದೇಶದ ಪ್ರಧಾನಿಯಾಗಿದ್ದಾಗ ನಡೆದ ಭಾರತ-ಚೀನಾ ಯುದ್ಧವನ್ನು ಉಲ್ಲೇಖಿಸಿ ಜೈಶಂಕರ್ ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರನ್ನು ಟೀಕಿಸಿದ ಸಚಿವರು, "ಕೆಲವೊಮ್ಮೆ ಸುಳ್ಳು ಎಂದು ಗೊತ್ತಿದ್ದರೂ ಅವರು ಅಂಥ ಸುದ್ದಿಗಳನ್ನು ಹರಡುತ್ತಾರೆ. 1962ರಲ್ಲಿ ನಡದೆ ಘಟನೆಗಳನ್ನು ಅವರು ಈಗ ನಡೆದಿರುವಂತೆ ಬಿಂಬಿಸುತ್ತಿದ್ದಾರೆ. ಆದರೆ ಅಂದು ನಡೆದ ನಿಜ ಸಂಗತಿಯನ್ನು ಅವರು ಮಾತನಾಡಲಾರರು" ಎಂದರು.

  • #WATCH | It is a reality to us. In life, you have what you have. Pandavas could not choose their relatives, we can't choose our neighbours. Naturally, we hope good sense prevails...: EAM Dr Jaishankar when asked if Pakistan, as our neighbour will be an asset or a liability to us pic.twitter.com/2g1BRIBKy7

    — ANI (@ANI) January 28, 2023 " class="align-text-top noRightClick twitterSection" data=" ">

ವಿದೇಶಿ ಮಾಧ್ಯಮಗಳಿಗೆ ಛೀಮಾರಿ: ಗೋಧ್ರೋತ್ತರ ಗಲಭೆ ಕುರಿತು ಆಂಗ್ಲ ಮಾಧ್ಯಮ ಬಿಬಿಸಿ ಚಿತ್ರಿಸಿರುವ ವಿವಾದಿತ ಸಾಕ್ಷ್ಯಚಿತ್ರ ದೇಶದಲ್ಲಿ ಟೀಕೆಗೆ ಗುರಿಯಾಗಿದ್ದು, ವಿದೇಶಿ ಮಾಧ್ಯಮಗಳು ಭಾರತ ಸರ್ಕಾರಕ್ಕೆ, "ಹಿಂದು ಹಣೆಪಟ್ಟಿ" ಕಟ್ಟಿದ್ದಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಛೀಮಾರಿ ಹಾಕಿದ್ದಾರೆ. ಅಮೆರಿಕ, ಯುರೋಪ್​ ರಾಷ್ಟ್ರಗಳ ಸರ್ಕಾರಗಳಿಗೆ "ಕ್ರಿಶ್ಚಿಯನ್​ ನ್ಯಾಷನಲಿಸ್ಟ್​ಎಂದು ಹೇಳಬಲ್ಲಿರಾ" ಎಂದು ಪ್ರಶ್ನಿಸಿದ್ದಾರೆ.

"ವಿದೇಶಿ ಮಾಧ್ಯಮಗಳಲ್ಲಿ ಭಾರತ ಸರ್ಕಾರವನ್ನು ಹಿಂದು ರಾಷ್ಟ್ರೀಯವಾದಕ್ಕೆ ಹೋಲಿಸಲಾಗುತ್ತಿದೆ. ಪಾಶ್ಚಿಮಾತ್ಯ ರಾಷ್ಟ್ರಗಳ ಸರ್ಕಾರಗಳು ಕ್ರಿಶ್ಚಿಯಾನಿಟಿ ಆಧರಿತವಾಗಿವೆ ಎಂದು ಹೇಳುವುದಿಲ್ಲ. ಭಾರತಕ್ಕೆ ಮಾತ್ರ ಈ ಗುಣವಿಶೇಷಗಳನ್ನು ಸೀಮಿತವಾಗಿಸಿದ್ದಾರೆ. ನಮ್ಮ ದೇಶ ಪ್ರಪಂಚದ ಯಾವ ರಾಷ್ಟ್ರಗಳಿಗೂ ಕಡಿಮೆ ಇಲ್ಲ. ವಿಶ್ವಕ್ಕಿಂತಲೂ ಯಾವುದರಲ್ಲೂ ಹಿಂದೆ ಇಲ್ಲ" ಎಂದು ಪ್ರತಿಪಾದಿಸಿದರು.

ಇದಕ್ಕೂ ಮುನ್ನ ಜೈಶಂಕರ್ ವಿರಚಿತ ಇಂಗ್ಲಿಷ್ ಪುಸ್ತಕವಾದ, "ದಿ ಇಂಡಿಯಾ ವೇ: ಸ್ಟ್ರಾಟಜೀಸ್ ಫಾರ್ ಆನ್ ಅನ್ಸರ್ಟೈನ್ ವರ್ಲ್ಡ್" ಮರಾಠಿ ಭಾಷೆಗೆ "ಭಾರತ್​ ಮಾರ್ಗ್​" ಎಂದು ಅನುವಾದವಾಗಿದ್ದು, ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಬಿಡುಗಡೆ ಮಾಡಿದರು.

ಇದೇ ವೇಳೆ ವಿದೇಶಿ ಮಾಧ್ಯಮಗಳು ಭಾರತದ ಬಗ್ಗೆ ಹೊಂದಿರುವ ನಿಲುವನ್ನು ಟೀಕಿಸಿದ ವಿದೇಶಾಂಗ ಸಚಿವರು, "ಕೇಂದ್ರ ಸರ್ಕಾರ ಕಳೆದ 9 ವರ್ಷಗಳಲ್ಲಿ ರಾಜಕೀಯದಾಚೆಗೂ ಕೆಲಸ ಮಾಡಿದೆ. ರಾಷ್ಟ್ರೀಯವಾದವನ್ನೂ ಮೀರಿ, ದೇಶದ ಅಭ್ಯುದಯಕ್ಕೆ ದುಡಿಯುತ್ತಿದೆ. ಸಂಕಷ್ಟ ಕಾಲದಲ್ಲಿ ಇದೇ ರಾಷ್ಟ್ರೀಯವಾದಿಗಳು ವಿದೇಶಗಳಿಗೆ ನೆರವು ನೀಡಿದ್ದರು. ಅವರೇ ಆ ಸಮಯದಲ್ಲಿ ದೇಶ ತೊರೆದಿದ್ದರು. ಸರ್ಕಾರ ಒಬ್ಬರ ಪರವಾಗಿಲ್ಲ" ಎಂದು ಒತ್ತಿ ಹೇಳಿದರು.

ಹಿಂಜರಿಕೆಯ ಮನೋಭಾವವಿಲ್ಲ: "ಸರ್ಕಾರದ ನೀತಿ ನಿಲುವುಗಳಲ್ಲಿ ಯಾವುದೇ ಹಿಂಜರಿಕೆ ಮನೋಭಾವವಿಲ್ಲ. ಈ ಬಗ್ಗೆ ಕ್ಷಮೆ ಕೇಳುವ ಪ್ರಮೇಯವೂ ಬರುವುದಿಲ್ಲ. ಕೆಲಸದ ಬಗ್ಗೆ ನಮಗೆ ಹೆಮ್ಮೆ ಇದೆ. ರಾಷ್ಟ್ರೀಯವಾದದ ಹೊರತಾಗಿಯೂ ಸರ್ಕಾರ ದೃಢ ನಿರ್ಧಾರ ತೆಗೆದುಕೊಳ್ಳುತ್ತದೆ" ಎಂದು ಹೇಳಿದರು.

"ನೀವು ವಿದೇಶಿ ಪತ್ರಿಕೆಗಳನ್ನು ಓದಿ ನೋಡಿ. ಅವು ಯಾವಾಗಲೂ ನಮ್ಮ ದೇಶವನ್ನು ಹಿಂದು ಹಣೆಪಟ್ಟಿಯಲ್ಲೇ ಗುರುತಿಸುತ್ತವೆ. ಇದು ದಾರಿ ತಪ್ಪಿಸುವ ವಿಷಯವಾಗಿದೆ. ಅವರ ಸರ್ಕಾರವನ್ನು ಮಾತ್ರ ಕ್ರಿಶ್ಚಿಯನ್​ ಧರ್ಮಕ್ಕೆ ತಳುಕು ಹಾಕುವುದಿಲ್ಲ. ಭಾರತವನ್ನು ಮಾತ್ರ ಅವು ಟಾರ್ಗೆಟ್​​ ಮಾಡಿಕೊಂಡಿವೆ. ಇಂದು ದೇಶ ವಿಶ್ವದೆಲ್ಲಾ ರಾಷ್ಟ್ರಗಳಿಗೂ ಯಾವುದರಲ್ಲಿ ಕಮ್ಮಿ ಇಲ್ಲ. ವಿಶ್ವಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧವಿದೆ" ಎಂದು ಜೈಶಂಕರ್ ಹೇಳಿದರು.

"ಜಿ20 ಅಧ್ಯಕ್ಷತೆ ಸಿಕ್ಕ ಬಳಿಕ ವಿಶ್ವದ ಎಲ್ಲ ರಾಷ್ಟ್ರಗಳ ಪ್ರಧಾನಿಗಳು, ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದಾರೆ. 200 ಸಭೆಗಳನ್ನು ನಡೆಸಲಾಗುತ್ತಿದೆ. ಜಗತ್ತಿಗೆ ನಮ್ಮ ಸಾಮರ್ಥ್ಯವನ್ನು ತೋರಿಸಲು ಬಯಸುತ್ತೇವೆ. ಭಾರತವನ್ನು ನೋಡಲು ಬನ್ನಿ. ಭಾರತದಲ್ಲಿನ ಬದಲಾವಣೆಗಳನ್ನು ಕಾಣಿರಿ. ಇಲ್ಲಿನ ಉತ್ಸಾಹ ಮತ್ತು ಸಕಾರಾತ್ಮಕ ಭಾವನೆಗಳನ್ನು ಗುರುತಿಸಿ" ಎಂದು ಜೈಶಂಕರ್ ಸಲಹೆ ನೀಡಿದರು.

ಬಿಬಿಸಿ ಸಾಕ್ಷ್ಯಚಿತ್ರ ವಿವಾದ: ಬಿಬಿಸಿ 2002 ರಲ್ಲಿ ನಡೆದ ಗೋಧ್ರೋತ್ತರ ಗಲಭೆ ಕುರಿತು ಚಿತ್ರಿಸಲಾದ ಇಂಡಿಯಾ: ದಿ ಮೋದಿ ಕ್ವೆಶ್ಚನ್ ಸಾಕ್ಷ್ಯಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಆಕ್ಷೇಪಾರ್ಹವಾದ ಸಂಗತಿಯನ್ನು ಬಳಕೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಇದರಿಂದ ದೇಶದಲ್ಲಿ ಸಾಕ್ಷ್ಯಚಿತ್ರದ ಪ್ರದರ್ಶನಕ್ಕೆ ನಿಷೇಧ ಹೇರಲಾಗಿದೆ. ಅಲ್ಲದೇ, ಇದರ ಕೊಂಡಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲೂ ಬಳಕೆ ಮಾಡುವಂತಿಲ್ಲ ಎಂದೂ ಸೂಚಿಸಿ ಕೇಂದ್ರ ಸರ್ಕಾರ ಆದೇಶಿಸಿದೆ. ಬಿಬಿಸಿಯ ಸಾಕ್ಷ್ಯಚಿತ್ರ ಪ್ರಚಾರದ ತುಣುಕಾಗಿದೆ. ಸುಳ್ಳು ಮಾಹಿತಿ, ನಿರಾಧಾರ, ಪೂರ್ವಗ್ರಹಪೀಡಿತವಾದ ವಿಡಿಯೋವಾಗಿದೆ ಎಂದು ಕೇಂದ್ರ ಸರ್ಕಾರ ಟೀಕಿಸಿದೆ.

ಇದನ್ನೂ ಓದಿ: ಇಂದು ಬೆಳಗ್ಗೆ 11ಕ್ಕೆ ಹೊಸ ವರ್ಷದ ಮೊದಲ 'ಮನ್​ ಕಿ ಬಾತ್': ಮೋದಿ ಮನದ ಮಾತಿನ ಕುತೂಹಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.