ETV Bharat / bharat

ಚೀನಾದಿಂದ ​ಬರುವವರಿಗೆ ಆರ್​ಟಿಪಿಸಿಆರ್​, ಪಾಸಿಟಿವ್​ ಬಂದರೆ ಕ್ವಾರಂಟೈನ್​: ಕೇಂದ್ರ ಸರ್ಕಾರದ ಸ್ಟ್ರಿಕ್ಟ್​​ ಆರ್ಡರ್​​​!

author img

By

Published : Dec 24, 2022, 1:23 PM IST

Updated : Dec 24, 2022, 1:50 PM IST

ಚೀನಾ, ಜಪಾನ್​, ಥಾಯ್ಲೆಂಡ್​​ ಸೇರಿದಂತೆ ವಿವಿಧ ದೇಶಗಳಿಂದ ಬರುವ ಎಲ್ಲ ಪ್ರಯಾಣಿಕರಿಗೆ ಆರ್​ಟಿಪಿಸಿಆರ್​ ಕೊರೊನಾ ಪರೀಕ್ಷೆಯನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಿದೆ.

union-health-minister-mandaviya
ಚೀನಾದಿಂದ ​ಬರುವವರಿಗೆ ಆರ್​ಟಿಪಿಸಿಆರ್

ಗಾಂಧಿನಗರ (ಗುಜರಾತ್): ಚೀನಾ, ಜಪಾನ್​, ದಕ್ಷಿಣ ಕೊರಿಯಾ, ಹಾಂ​ಕಾಂಗ್​ ಮತ್ತು ಥಾಯ್ಲೆಂಡ್​ನಿಂದ ಬರುವ ಎಲ್ಲ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಕೊರೊನಾ ಪರೀಕ್ಷೆಗೆ ಒಳಗಾಗುವುದು ಕಡ್ಡಾಯ. ಆರ್​ಟಿಪಿಸಿಆರ್​ ವರದಿಯನುಸಾರ ಪಾಸಿಟಿವ್​ ಬಂದರೆ ಅವರನ್ನು ಕ್ವಾರಂಟೈನ್​ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಸೂಚಿತ ವಿದೇಶಗಳಿಗೆ ಹೋಗುವ ಮತ್ತು ಬರುವ ಜನರು ಪ್ರಯಾಣಕ್ಕೂ ಮೊದಲು ಏರ್​ ಸುವಿಧಾ ಫಾರ್ಮ್​ ಅನ್ನು ಭರ್ತಿ ಮಾಡಿ ಆರೋಗ್ಯದ ಬಗ್ಗೆ ಮಾಹಿತಿ ನೀಡಬೇಕು. ಕೊರೊನಾ ತಡೆ ಸಲುವಾಗಿ ವಿದೇಶಗಳಿಂದ ಬರುವ ಪ್ರಯಾಣಿಕರಿಗೆ ಆರ್​ಟಿಪಿಸಿಆರ್​ ಪರೀಕ್ಷೆ ಕಡ್ಡಾಯ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಶನಿವಾರ ಹೇಳಿದರು.

ಚೀನಾ, ಜಪಾನ್, ದಕ್ಷಿಣ ಕೊರಿಯಾ, ಹಾಂ​ಕಾಂಗ್ ಮತ್ತು ಥಾಯ್ಲೆಂಡ್​​​​​​​​​​​ನಲ್ಲಿ ಕೊರೊನಾ ವಿಪರೀತವಾಗಿದೆ. ಆ ದೇಶಗಳಿಂದ ಇಲ್ಲಿಗೆ ಬರುವ ಎಲ್ಲ ಪ್ರಯಾಣಿಕರು ಕೊರೊನಾಗೆ ಪರೀಕ್ಷೆಗೆ ಒಳಗಾಗಬೇಕು. ವರದಿಯಲ್ಲಿ ಪಾಸಿಟಿವ್​​ ಬಂದರೆ ಅಂಥವರನ್ನು ಪ್ರತ್ಯೇಕವಾಗಿ ಕ್ವಾರಂಟೈನ್​ ಮಾಡಲಾಗುವುದು ಎಂದು ತಿಳಿಸಿದರು.

ಪಾಸಿಟಿವ್​ ಬಂದ ಪ್ರಯಾಣಿಕರ ಮೇಲೆ ಅಧಿಕಾರಿಗಳು ನಿರಂತರವಾಗಿ ನಿಗಾ ವಹಿಸಲಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​ ಧಾರಣೆ ಕಡ್ಡಾಯವಾಗಿದೆ. ವಿಮಾನ ನಿಲ್ದಾಣಗಳಲ್ಲಿ ರ್ಯಾಂಡಮ್​ ಟೆಸ್ಟ್​ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ಆಮ್ಲಜನಕ ಸಿದ್ಧತೆಗೆ ಸೂಚನೆ: ದೇಶದಲ್ಲಿ ಕೊರೊನಾ ಭೀತಿ ಸೃಷ್ಟಿಯಾಗುತ್ತಿರುವ ಕಾರಣ ಅಗತ್ಯ ವೈದ್ಯಕೀಯ ಸಿದ್ಧತೆಗೆ ಕೇಂದ್ರ ಸರ್ಕಾರ ಸೂಚಿಸಿದೆ. ಈ ಬಗ್ಗೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದು, ಕೋವಿಡ್​ ನಿರ್ವಹಣೆಗಾಗಿ ಆಮ್ಲಜನಕದ ದಾಸ್ತಾನು ಮತ್ತು ಪೂರೈಕೆಯನ್ನು ಪರಿಶೀಲಿಸಿಕೊಳ್ಳಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಕೊರೊನಾ ಕೇಸ್​ ಕಡಿಮೆಯಿದ್ದರೂ ವೈದ್ಯಕೀಯ ಮೂಲಸೌಕರ್ಯಗಳ ಸಿದ್ಧತೆ ಮಾಡಿಕೊಳ್ಳಿ. ಪಿಎಸ್‌ಎ ಸ್ಥಾವರಗಳ ಕಾರ್ಯನಿರ್ವಹಣೆ, ಅವುಗಳ ಪರಿಶೀಲನೆ ನಡೆಸಿ. ಆಮ್ಲಜನಕದ ನಿರಂತರ ಪೂರೈಕೆ ಮತ್ತು ಅದರ ಮರುಪೂರಣವನ್ನು ಖಚಿತಪಡಿಸಿಕೊಳ್ಳಿ ಎಂದು ನಿರ್ದೇಶನ ನೀಡಿದೆ.

ಓದಿ: ಕೋವಿಡ್​ ವಿಚಾರದಲ್ಲಿ ಪ್ರಧಾನಮಂತ್ರಿ ಸೂಚಿಸಿದಂತೆ ಕ್ರಮ ಕೈಗೊಳ್ಳಲಾಗಿದೆ: ಸಿಎಂ ಬೊಮ್ಮಾಯಿ

ಗಾಂಧಿನಗರ (ಗುಜರಾತ್): ಚೀನಾ, ಜಪಾನ್​, ದಕ್ಷಿಣ ಕೊರಿಯಾ, ಹಾಂ​ಕಾಂಗ್​ ಮತ್ತು ಥಾಯ್ಲೆಂಡ್​ನಿಂದ ಬರುವ ಎಲ್ಲ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಕೊರೊನಾ ಪರೀಕ್ಷೆಗೆ ಒಳಗಾಗುವುದು ಕಡ್ಡಾಯ. ಆರ್​ಟಿಪಿಸಿಆರ್​ ವರದಿಯನುಸಾರ ಪಾಸಿಟಿವ್​ ಬಂದರೆ ಅವರನ್ನು ಕ್ವಾರಂಟೈನ್​ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಸೂಚಿತ ವಿದೇಶಗಳಿಗೆ ಹೋಗುವ ಮತ್ತು ಬರುವ ಜನರು ಪ್ರಯಾಣಕ್ಕೂ ಮೊದಲು ಏರ್​ ಸುವಿಧಾ ಫಾರ್ಮ್​ ಅನ್ನು ಭರ್ತಿ ಮಾಡಿ ಆರೋಗ್ಯದ ಬಗ್ಗೆ ಮಾಹಿತಿ ನೀಡಬೇಕು. ಕೊರೊನಾ ತಡೆ ಸಲುವಾಗಿ ವಿದೇಶಗಳಿಂದ ಬರುವ ಪ್ರಯಾಣಿಕರಿಗೆ ಆರ್​ಟಿಪಿಸಿಆರ್​ ಪರೀಕ್ಷೆ ಕಡ್ಡಾಯ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಶನಿವಾರ ಹೇಳಿದರು.

ಚೀನಾ, ಜಪಾನ್, ದಕ್ಷಿಣ ಕೊರಿಯಾ, ಹಾಂ​ಕಾಂಗ್ ಮತ್ತು ಥಾಯ್ಲೆಂಡ್​​​​​​​​​​​ನಲ್ಲಿ ಕೊರೊನಾ ವಿಪರೀತವಾಗಿದೆ. ಆ ದೇಶಗಳಿಂದ ಇಲ್ಲಿಗೆ ಬರುವ ಎಲ್ಲ ಪ್ರಯಾಣಿಕರು ಕೊರೊನಾಗೆ ಪರೀಕ್ಷೆಗೆ ಒಳಗಾಗಬೇಕು. ವರದಿಯಲ್ಲಿ ಪಾಸಿಟಿವ್​​ ಬಂದರೆ ಅಂಥವರನ್ನು ಪ್ರತ್ಯೇಕವಾಗಿ ಕ್ವಾರಂಟೈನ್​ ಮಾಡಲಾಗುವುದು ಎಂದು ತಿಳಿಸಿದರು.

ಪಾಸಿಟಿವ್​ ಬಂದ ಪ್ರಯಾಣಿಕರ ಮೇಲೆ ಅಧಿಕಾರಿಗಳು ನಿರಂತರವಾಗಿ ನಿಗಾ ವಹಿಸಲಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​ ಧಾರಣೆ ಕಡ್ಡಾಯವಾಗಿದೆ. ವಿಮಾನ ನಿಲ್ದಾಣಗಳಲ್ಲಿ ರ್ಯಾಂಡಮ್​ ಟೆಸ್ಟ್​ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ಆಮ್ಲಜನಕ ಸಿದ್ಧತೆಗೆ ಸೂಚನೆ: ದೇಶದಲ್ಲಿ ಕೊರೊನಾ ಭೀತಿ ಸೃಷ್ಟಿಯಾಗುತ್ತಿರುವ ಕಾರಣ ಅಗತ್ಯ ವೈದ್ಯಕೀಯ ಸಿದ್ಧತೆಗೆ ಕೇಂದ್ರ ಸರ್ಕಾರ ಸೂಚಿಸಿದೆ. ಈ ಬಗ್ಗೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದು, ಕೋವಿಡ್​ ನಿರ್ವಹಣೆಗಾಗಿ ಆಮ್ಲಜನಕದ ದಾಸ್ತಾನು ಮತ್ತು ಪೂರೈಕೆಯನ್ನು ಪರಿಶೀಲಿಸಿಕೊಳ್ಳಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಕೊರೊನಾ ಕೇಸ್​ ಕಡಿಮೆಯಿದ್ದರೂ ವೈದ್ಯಕೀಯ ಮೂಲಸೌಕರ್ಯಗಳ ಸಿದ್ಧತೆ ಮಾಡಿಕೊಳ್ಳಿ. ಪಿಎಸ್‌ಎ ಸ್ಥಾವರಗಳ ಕಾರ್ಯನಿರ್ವಹಣೆ, ಅವುಗಳ ಪರಿಶೀಲನೆ ನಡೆಸಿ. ಆಮ್ಲಜನಕದ ನಿರಂತರ ಪೂರೈಕೆ ಮತ್ತು ಅದರ ಮರುಪೂರಣವನ್ನು ಖಚಿತಪಡಿಸಿಕೊಳ್ಳಿ ಎಂದು ನಿರ್ದೇಶನ ನೀಡಿದೆ.

ಓದಿ: ಕೋವಿಡ್​ ವಿಚಾರದಲ್ಲಿ ಪ್ರಧಾನಮಂತ್ರಿ ಸೂಚಿಸಿದಂತೆ ಕ್ರಮ ಕೈಗೊಳ್ಳಲಾಗಿದೆ: ಸಿಎಂ ಬೊಮ್ಮಾಯಿ

Last Updated : Dec 24, 2022, 1:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.