ETV Bharat / bharat

ಅಟಾರ್ನಿ ಜನರಲ್​ ಹುದ್ದೆ ತಿರಸ್ಕರಿಸಿದ ಹಿರಿಯ ವಕೀಲ ಮುಕುಲ್​ ರೋಹಟಗಿ

author img

By

Published : Sep 26, 2022, 6:12 PM IST

ಹಿರಿಯ ವಕೀಲ ಮುಕುಲ್​ ರೋಹಟಗಿ ಅವರು ಮತ್ತೆ ಅಟಾರ್ನಿ ಜನರಲ್​ ಹುದ್ದೆಯನ್ನು ಅಲಂಕರಿಸಲು ನಿರಾಕರಿಸಿದ್ದಾರೆ. ಕೇಂದ್ರ ಸರ್ಕಾರ ರೋಹಟಗಿ ಅವರನ್ನು ಆಯ್ಕೆ ಮಾಡುವ ಪ್ರಸ್ತಾಪ ಸಲ್ಲಿಸಿತ್ತು.

rohatgi-declines-attorney-generals-post
ಅಟಾರ್ನಿ ಜನರಲ್​ ಹುದ್ದೆ ತಿರಸ್ಕರಿಸಿದ ಹಿರಿಯ ವಕೀಲ ಮುಕುಲ್​ ರೋಹಟಗಿ

ನವದೆಹಲಿ: 2002 ರ ಗುಜರಾತ್​ ಗಲಭೆ, ಕರ್ನಾಟಕದ 17 ಶಾಸಕರು ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ ಪ್ರಕರಣದಲ್ಲಿ ವಾದಿಸಿದ್ದ ಮಾಜಿ ಅಟಾರ್ನಿ ಜನರಲ್​ ಮುಕುಲ್​ ರೋಹಟಗಿ ಅವರು ಮತ್ತೆ ಭಾರತ ಸರ್ಕಾರದ ಉನ್ನತ ವಕೀಲ ಹುದ್ದೆಯನ್ನು ಅಲಂಕರಿಸಲು ನಿರಾಕರಿಸಿದ್ದಾರೆ.

ಪ್ರಸ್ತುತ ಅಟಾರ್ನಿ ಜನರಲ್​ ಆಗಿರುವ ವೇಣುಗೋಪಾಲ್​ ಅವರ ಅವಧಿ ಇದೇ ಸೆಪ್ಟೆಂಬರ್​ 30ಕ್ಕೆ ಪೂರ್ಣಗೊಳ್ಳಲಿದ್ದು, ಹಿರಿಯ ವಕೀಲ ಮುಕುಲ್​ ರೋಹಟಗಿ ಅವರನ್ನು ಮತ್ತೆ ಅಟಾರ್ನಿ ಜನರಲ್​ ಆಗಲು ಕೇಂದ್ರ ಸರ್ಕಾರ ಪ್ರಸ್ತಾಪ ಸಲ್ಲಿಸಿತ್ತು. ಆದರೆ, ಇದನ್ನು ರೋಹಟಗಿ ಅವರು ತಿರಸ್ಕರಿಸಿದ್ದಾರೆ.

ಕೇಂದ್ರ ಸರ್ಕಾರದ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕೆ ರೋಹಟಗಿ ಅವರು ಯಾವುದೇ ಕಾರಣ ನೀಡಿಲ್ಲ. ಈ ಮೊದಲು ಅವರು ಸರ್ಕಾರದ ಪ್ರಸ್ತಾಪವನ್ನು ಒಪ್ಪಿದ್ದರೂ, ಬಳಿಕ ನಿರಾಕರಣೆ ಮಾಡಿದ್ದಾರೆ. ಹಿರಿಯ ವಕೀಲ ಮುಕುಲ್​ ರೋಹಟಗಿ ಅವರು 2014 ರಿಂದ 2017 ರವರೆಗೆ ಅಟಾರ್ನಿ ಜನರಲ್​ ಆಗಿ ಕೆಲಸ ಮಾಡಿದ್ದರು.

2002 ರ ಗೋದ್ರಾ ಗಲಭೆ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಗುಜರಾತ್ ಸರ್ಕಾರದ ಪರವಾಗಿ ವಾದಿಸಿದ್ದ ರೋಹಟಗಿ ಅವರನ್ನು 2014 ರಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರ ವಹಿಸಿಕೊಂಡಾಗ ಅವರನ್ನು ಅಟಾರ್ನಿ ಜನರಲ್​ ಆಗಿ ನೇಮಿಸಿತ್ತು.

ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ಗಳ ನ್ಯಾಯಾಧೀಶರನ್ನು ನೇಮಿಸುವ ರಾಷ್ಟ್ರೀಯ ನ್ಯಾಯಾಂಗ ಆಯೋಗದ ಸ್ಥಾಪನೆ, ಆಧಾರ್​ ಕಡ್ಡಾಯದಂತಹ ಪ್ರಮುಖ ಪ್ರಕರಣಗಳಲ್ಲಿ ಕೇಂದ್ರದ ಪರವಾಗಿ ಸುಪ್ರೀಂನಲ್ಲಿ ವಾದಿಸಿದ್ದರು.

ಓದಿ: ಕೇರಳಕ್ಕೂ ಕಾಲಿಟ್ಟ ಹಿಜಾಬ್​ ವಿವಾದ.. ಸಮವಸ್ತ್ರ ಧರಿಸಲು ಸೂಚಿಸಿದ ಶಾಲೆಯ ವಿರುದ್ಧ ಪ್ರತಿಭಟನೆ

ನವದೆಹಲಿ: 2002 ರ ಗುಜರಾತ್​ ಗಲಭೆ, ಕರ್ನಾಟಕದ 17 ಶಾಸಕರು ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ ಪ್ರಕರಣದಲ್ಲಿ ವಾದಿಸಿದ್ದ ಮಾಜಿ ಅಟಾರ್ನಿ ಜನರಲ್​ ಮುಕುಲ್​ ರೋಹಟಗಿ ಅವರು ಮತ್ತೆ ಭಾರತ ಸರ್ಕಾರದ ಉನ್ನತ ವಕೀಲ ಹುದ್ದೆಯನ್ನು ಅಲಂಕರಿಸಲು ನಿರಾಕರಿಸಿದ್ದಾರೆ.

ಪ್ರಸ್ತುತ ಅಟಾರ್ನಿ ಜನರಲ್​ ಆಗಿರುವ ವೇಣುಗೋಪಾಲ್​ ಅವರ ಅವಧಿ ಇದೇ ಸೆಪ್ಟೆಂಬರ್​ 30ಕ್ಕೆ ಪೂರ್ಣಗೊಳ್ಳಲಿದ್ದು, ಹಿರಿಯ ವಕೀಲ ಮುಕುಲ್​ ರೋಹಟಗಿ ಅವರನ್ನು ಮತ್ತೆ ಅಟಾರ್ನಿ ಜನರಲ್​ ಆಗಲು ಕೇಂದ್ರ ಸರ್ಕಾರ ಪ್ರಸ್ತಾಪ ಸಲ್ಲಿಸಿತ್ತು. ಆದರೆ, ಇದನ್ನು ರೋಹಟಗಿ ಅವರು ತಿರಸ್ಕರಿಸಿದ್ದಾರೆ.

ಕೇಂದ್ರ ಸರ್ಕಾರದ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕೆ ರೋಹಟಗಿ ಅವರು ಯಾವುದೇ ಕಾರಣ ನೀಡಿಲ್ಲ. ಈ ಮೊದಲು ಅವರು ಸರ್ಕಾರದ ಪ್ರಸ್ತಾಪವನ್ನು ಒಪ್ಪಿದ್ದರೂ, ಬಳಿಕ ನಿರಾಕರಣೆ ಮಾಡಿದ್ದಾರೆ. ಹಿರಿಯ ವಕೀಲ ಮುಕುಲ್​ ರೋಹಟಗಿ ಅವರು 2014 ರಿಂದ 2017 ರವರೆಗೆ ಅಟಾರ್ನಿ ಜನರಲ್​ ಆಗಿ ಕೆಲಸ ಮಾಡಿದ್ದರು.

2002 ರ ಗೋದ್ರಾ ಗಲಭೆ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಗುಜರಾತ್ ಸರ್ಕಾರದ ಪರವಾಗಿ ವಾದಿಸಿದ್ದ ರೋಹಟಗಿ ಅವರನ್ನು 2014 ರಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರ ವಹಿಸಿಕೊಂಡಾಗ ಅವರನ್ನು ಅಟಾರ್ನಿ ಜನರಲ್​ ಆಗಿ ನೇಮಿಸಿತ್ತು.

ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ಗಳ ನ್ಯಾಯಾಧೀಶರನ್ನು ನೇಮಿಸುವ ರಾಷ್ಟ್ರೀಯ ನ್ಯಾಯಾಂಗ ಆಯೋಗದ ಸ್ಥಾಪನೆ, ಆಧಾರ್​ ಕಡ್ಡಾಯದಂತಹ ಪ್ರಮುಖ ಪ್ರಕರಣಗಳಲ್ಲಿ ಕೇಂದ್ರದ ಪರವಾಗಿ ಸುಪ್ರೀಂನಲ್ಲಿ ವಾದಿಸಿದ್ದರು.

ಓದಿ: ಕೇರಳಕ್ಕೂ ಕಾಲಿಟ್ಟ ಹಿಜಾಬ್​ ವಿವಾದ.. ಸಮವಸ್ತ್ರ ಧರಿಸಲು ಸೂಚಿಸಿದ ಶಾಲೆಯ ವಿರುದ್ಧ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.