ETV Bharat / bharat

ಸಾಲ ತೀರಿಸದ್ದಕ್ಕೆ ರೈತರ ಜಮೀನು ಹರಾಜು ಹಾಕಿದ ಬ್ಯಾಂಕ್​​ ಸಿಬ್ಬಂದಿ.. ಮನವಿಗೂ ಸಿಗದ ಮನ್ನಣೆ

author img

By

Published : Jan 19, 2022, 3:37 PM IST

ಬ್ಯಾಂಕ್​ ಸಾಲ ಮರುಪಾವತಿ ಮಾಡಿಲ್ಲ ಎಂಬ ಕಾರಣಕ್ಕಾಗಿ ಅಧಿಕಾರಿಗಳು ರೈತರ ಜಮೀನು ಹರಾಜು ಹಾಕಿರುವ ಘಟನೆ ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ.

farmer land was auctioned in Rajasthan
farmer land was auctioned in Rajasthan

ರಾಮಗಢ(ರಾಜಸ್ಥಾನ): ರಾಜಸ್ಥಾನದಲ್ಲಿ ಆಡಳಿತ ನಡೆಸುತ್ತಿರುವ ಅಶೋಕ್​ ಗೆಹ್ಲೋಟ್​ ಈ ಹಿಂದೆ ರೈತರ ಕೃಷಿ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿತ್ತು. ಇದೇ ಕಾರಣಕ್ಕಾಗಿ ಲಕ್ಷಾಂತರ ಅನ್ನದಾತರು ಸಾಲ ಮರುಪಾವತಿ ಮಾಡದೇ ಸುಮ್ಮನಾಗಿಬಿಟ್ಟರು. ಇದೀಗ, ರೈತರ ಹಿಂದೆ ಬ್ಯಾಂಕ್​ ಸಿಬ್ಬಂದಿ ಬೆನ್ನು ಬಿದ್ದ ಬೇತಾಳನಂತೆ ಕಾಡುತ್ತಿದ್ದಾರೆ.

ರಾಜಸ್ಥಾನದ ರಾಮಗಢದ ಪಂಚ್ವಾರಾ ಗ್ರಾಮದಲ್ಲಿ ಬ್ಯಾಂಕ್​ನಿಂದ ಕೃಷಿ ಸಾಲ ಪಡೆದುಕೊಂಡಿದ್ದ ರೈತರ ಜಮೀನನ್ನು ಬ್ಯಾಂಕ್​ ಸಿಬ್ಬಂದಿ ಹರಾಜು ಹಾಕಿದ್ದಾರೆ. ನಿನ್ನೆ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.

  • Rajasthan | A farmer's land was auctioned yesterday in Ramgarh Pachwara village of Dausa for non-payment of the loan amount

    My father had taken a loan & he is dead now. We were unable to repay it & requested bank but they denied to give any chance: Pappu Lal, farmer's son pic.twitter.com/4rdqXN8ehR

    — ANI (@ANI) January 19, 2022 " class="align-text-top noRightClick twitterSection" data=" ">

ಇದನ್ನೂ ಓದಿರಿ: ಮೂರು ದಿನಗಳಿಂದ ಕೆಸರಿನ ಹೊಂಡದಲ್ಲಿ ಸಿಲುಕಿದ್ದ ವೃದ್ಧನ ರಕ್ಷಿಸಿದ SI.. ಮಾನವೀಯತೆಗೆ ಮೆಚ್ಚುಗೆ..

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ರೈತ ಪಪ್ಪು ಲಾಲ್​, ಈ ಹಿಂದೆ ನನ್ನ ತಂದೆ ಬ್ಯಾಂಕ್​ನಲ್ಲಿ ಸಾಲ ಮಾಡಿದ್ದರು. ಆದರೆ, ಈಗಾಗಲೇ ಅವರು ತೀರಿಕೊಂಡಿದ್ದಾರೆ. ಅಸಲು ಮತ್ತು ಬಡ್ಡಿ ಸೇರಿ ಹೆಚ್ಚಿನ ಹಣವಾಗಿರುವ ಕಾರಣ ನಮ್ಮಿಂದ ಪಾವತಿಸಲು ಇದೀಗ ಸಾಧ್ಯವಾಗುತ್ತಿಲ್ಲ. ನಮ್ಮ ಮನೆಗೆ ಬ್ಯಾಂಕ್​ ಅಧಿಕಾರಿಗಳು ಬಂದ ಸಂದರ್ಭದಲ್ಲಿ ಕೆಲ ವರ್ಷಗಳ ಕಾಲ ಸಮಯವಕಾಶ ನೀಡುವಂತೆ ಮನವಿ ಮಾಡಿದ್ದೇವೆ. ಆದರೆ, ಅಧಿಕಾರಿಗಳು ನಮ್ಮ ಮಾತು ಕೇಳದೇ ಜಮೀನು ಹರಾಜು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಹಿಂದೆ 2019ರ ವಿಧಾಸನಭೆ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್​ ಪಕ್ಷ ಅಧಿಕಾರಕ್ಕೆ ಬಂದರೆ, ಕೃಷಿ ಸಾಲ ಮನ್ನಾ ಮಾಡುವುದಾಗಿ ರಾಹುಲ್​ ಗಾಂಧಿ ಭರವಸೆ ನೀಡಿದ್ದರು. ಅದರಂತೆ ರಾಜ್ಯದಲ್ಲಿ ಇದೀಗ ಕಾಂಗ್ರೆಸ್​ ಅಧಿಕಾರ ನಡೆಸುತ್ತಿದ್ದು, ರೈತರ ಸಾಲ ಮನ್ನಾ ಆಗಿಲ್ಲ. ಇದೇ ವಿಚಾರವಾಗಿ ಕಳೆದ ಕೆಲ ದಿನಗಳ ಹಿಂದೆ ಬಿಜೆಪಿ ವಾಗ್ದಾಳಿ ಸಹ ನಡೆಸಿತ್ತು.

ರಾಮಗಢ(ರಾಜಸ್ಥಾನ): ರಾಜಸ್ಥಾನದಲ್ಲಿ ಆಡಳಿತ ನಡೆಸುತ್ತಿರುವ ಅಶೋಕ್​ ಗೆಹ್ಲೋಟ್​ ಈ ಹಿಂದೆ ರೈತರ ಕೃಷಿ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿತ್ತು. ಇದೇ ಕಾರಣಕ್ಕಾಗಿ ಲಕ್ಷಾಂತರ ಅನ್ನದಾತರು ಸಾಲ ಮರುಪಾವತಿ ಮಾಡದೇ ಸುಮ್ಮನಾಗಿಬಿಟ್ಟರು. ಇದೀಗ, ರೈತರ ಹಿಂದೆ ಬ್ಯಾಂಕ್​ ಸಿಬ್ಬಂದಿ ಬೆನ್ನು ಬಿದ್ದ ಬೇತಾಳನಂತೆ ಕಾಡುತ್ತಿದ್ದಾರೆ.

ರಾಜಸ್ಥಾನದ ರಾಮಗಢದ ಪಂಚ್ವಾರಾ ಗ್ರಾಮದಲ್ಲಿ ಬ್ಯಾಂಕ್​ನಿಂದ ಕೃಷಿ ಸಾಲ ಪಡೆದುಕೊಂಡಿದ್ದ ರೈತರ ಜಮೀನನ್ನು ಬ್ಯಾಂಕ್​ ಸಿಬ್ಬಂದಿ ಹರಾಜು ಹಾಕಿದ್ದಾರೆ. ನಿನ್ನೆ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.

  • Rajasthan | A farmer's land was auctioned yesterday in Ramgarh Pachwara village of Dausa for non-payment of the loan amount

    My father had taken a loan & he is dead now. We were unable to repay it & requested bank but they denied to give any chance: Pappu Lal, farmer's son pic.twitter.com/4rdqXN8ehR

    — ANI (@ANI) January 19, 2022 " class="align-text-top noRightClick twitterSection" data=" ">

ಇದನ್ನೂ ಓದಿರಿ: ಮೂರು ದಿನಗಳಿಂದ ಕೆಸರಿನ ಹೊಂಡದಲ್ಲಿ ಸಿಲುಕಿದ್ದ ವೃದ್ಧನ ರಕ್ಷಿಸಿದ SI.. ಮಾನವೀಯತೆಗೆ ಮೆಚ್ಚುಗೆ..

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ರೈತ ಪಪ್ಪು ಲಾಲ್​, ಈ ಹಿಂದೆ ನನ್ನ ತಂದೆ ಬ್ಯಾಂಕ್​ನಲ್ಲಿ ಸಾಲ ಮಾಡಿದ್ದರು. ಆದರೆ, ಈಗಾಗಲೇ ಅವರು ತೀರಿಕೊಂಡಿದ್ದಾರೆ. ಅಸಲು ಮತ್ತು ಬಡ್ಡಿ ಸೇರಿ ಹೆಚ್ಚಿನ ಹಣವಾಗಿರುವ ಕಾರಣ ನಮ್ಮಿಂದ ಪಾವತಿಸಲು ಇದೀಗ ಸಾಧ್ಯವಾಗುತ್ತಿಲ್ಲ. ನಮ್ಮ ಮನೆಗೆ ಬ್ಯಾಂಕ್​ ಅಧಿಕಾರಿಗಳು ಬಂದ ಸಂದರ್ಭದಲ್ಲಿ ಕೆಲ ವರ್ಷಗಳ ಕಾಲ ಸಮಯವಕಾಶ ನೀಡುವಂತೆ ಮನವಿ ಮಾಡಿದ್ದೇವೆ. ಆದರೆ, ಅಧಿಕಾರಿಗಳು ನಮ್ಮ ಮಾತು ಕೇಳದೇ ಜಮೀನು ಹರಾಜು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಹಿಂದೆ 2019ರ ವಿಧಾಸನಭೆ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್​ ಪಕ್ಷ ಅಧಿಕಾರಕ್ಕೆ ಬಂದರೆ, ಕೃಷಿ ಸಾಲ ಮನ್ನಾ ಮಾಡುವುದಾಗಿ ರಾಹುಲ್​ ಗಾಂಧಿ ಭರವಸೆ ನೀಡಿದ್ದರು. ಅದರಂತೆ ರಾಜ್ಯದಲ್ಲಿ ಇದೀಗ ಕಾಂಗ್ರೆಸ್​ ಅಧಿಕಾರ ನಡೆಸುತ್ತಿದ್ದು, ರೈತರ ಸಾಲ ಮನ್ನಾ ಆಗಿಲ್ಲ. ಇದೇ ವಿಚಾರವಾಗಿ ಕಳೆದ ಕೆಲ ದಿನಗಳ ಹಿಂದೆ ಬಿಜೆಪಿ ವಾಗ್ದಾಳಿ ಸಹ ನಡೆಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.