ETV Bharat / bharat

ಸ್ವಂತ ಗೂಡ್ಸ್​ ರೈಲು ಖರೀದಿಗೆ ಮುಂದಾದ ಪಂಜಾಬ್​​ ಸರ್ಕಾರ.. ಸಾವಿರ ಕೋಟಿ ಖರ್ಚು ಮಾಡಲು ನಿರ್ಧಾರ - Etv bharat kannada

ರಾಜ್ಯದ ರಫ್ತು ಮತ್ತು ಆಮದುದಾರರ ಸಹಾಯಕ್ಕಾಗಿ ಪಂಜಾಬ್​ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಸ್ವಂತ ರೈಲು ಖರೀದಿ ಮಾಡಲು ಮುಂದಾಗಿದೆ.

Punjab state government purchases trains
Punjab state government purchases trains
author img

By

Published : Aug 27, 2022, 6:39 PM IST

ಮೊಹಾಲಿ(ಪಂಜಾಬ್​​): ಪಂಜಾಬ್​​ನಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್​ ನೇತೃತ್ವದ ಆಮ್​ ಆದ್ಮಿ ಪಕ್ಷದ(ಎಎಪಿ) ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದಾಗಿನಿಂದಲೂ ಸದಾ ಒಂದಿಲ್ಲೊಂದು ಮಹತ್ವದ ನಿರ್ಧಾರ ಕೈಗೊಳ್ಳುವ ಮೂಲಕ ಜನ ಸಾಮಾನ್ಯರಿಗೆ ಹತ್ತಿರವಾಗುವ ಕೆಲಸ ಮಾಡ್ತಿದೆ. ಸದ್ಯ ಅಂತಹ ಮತ್ತೊಂದು ನಿರ್ಧಾರ ಕೈಗೊಂಡಿದೆ.

ಎಲ್ಲವೂ ರಾಜ್ಯ ಸರ್ಕಾರದ ಯೋಜನೆಯಂತೆ ನಡೆದರೆ, ಪಂಜಾಬ್​​ ವಿವಿಧ ವಸ್ತುಗಳನ್ನು ರಫ್ತು ಹಾಗೂ ಆಮದು ಮಾಡಿಕೊಳ್ಳಲು ಸ್ವಂತ ಗೂಡ್ಸ್​​ ರೈಲುಗಳನ್ನ ಹೊಂದಲಿದೆ. ಜೊತೆಗೆ ತನ್ನದೇ ಆದ ಗೂಡ್ಸ್​ ರೈಲುಗಳನ್ನ ಹೊಂದಿರುವ ದೇಶದ ಮೊದಲ ರಾಜ್ಯವಾಗಿ ಹೊರಹೊಮ್ಮಲಿದೆ. ರಾಜ್ಯದ ರಫ್ತುದಾರರು ಮತ್ತು ಆಮದುದಾರರ ಬಂಡವಾಳ ಉಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ನಿರ್ಧಾರಕ್ಕೆ ಕೈಹಾಕಿದೆ.

350 ಕೋಟಿ ರೂ. ನೀಡಿ ಗೂಡ್ಸ್​ ರೈಲು ಖರೀದಿ: ಅಸೋಚಾಮ್​​ ಸಹಯೋಗದಲ್ಲಿ ಆಯೋಜನೆ ಮಾಡಲಾಗಿದ್ದ 'ವಿಷನ್​​ ಪಂಜಾಬ್​' ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿರುವ ಮುಖ್ಯಮಂತ್ರಿ ಭಗವಂತ್ ಮಾನ್​, ರಾಜ್ಯದ ವಿವಿಧ ಸಾಮಗ್ರಿಗಳ ರಫ್ತು, ಆಮದು ಮಾಡಿಕೊಳ್ಳಲು ಮೂರು ಗೂಡ್ಸ್ ರೈಲು ಖರೀದಿಸುವ ಬಗ್ಗೆ ಆಲೋಚನೆಯಲ್ಲಿದ್ದೇವೆ. ಪ್ರತಿ ರೈಲಿಗೆ ಸುಮಾರು 350 ಕೋಟಿ ರೂ. ನೀಡಲು ಯೋಜಿಸುತ್ತಿದ್ದೇವೆ. ಈ ಉದ್ದೇಶಕ್ಕಾಗಿ ಶೇ. 3ರ ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಕೈಗಾರಿಕೋದ್ಯಮಿಗಳಿಗೆ ಮಹತ್ವದ ಆಫರ್ ನೀಡಿರುವ ಭಗವಂತ್ ಮಾನ್​, ಉದ್ಯಮಿಗಳು ಹೂಡಿಕೆ ಮಾಡಲು ಪಂಜಾಬ್​ ಒಳ್ಳೆಯ ವಾತಾವರಣ ನಿರ್ಮಾಣ ಮಾಡಿಕೊಡಲಿದ್ದು, ನಮ್ಮೊಂದಿಗೆ ಮುಕ್ತವಾಗಿ ಮಾತನಾಡಬಹುದಾಗಿದೆ ಎಂದು ಮುಕ್ತ ಆಹ್ವಾನವನ್ನು ನೀಡಿದ್ದಾರೆ.

ಇದನ್ನೂ ಓದಿ: ನಕಲಿ ಡಿಗ್ರಿ ಪಡೆದು ಸರ್ಕಾರಿ ಹುದ್ದೆ ಗಿಟ್ಟಿಸಿಕೊಂಡವರಿಗೆ ಶಾಕ್​​.. ವಜಾಗೊಳಿಸಲು ಮುಂದಾದ ಪಂಜಾಬ್ ಸಿಎಂ

ಇದೇ ವೇಳೆ, ಅಮೃತಸರ ಮತ್ತು ಮೊಹಾಲಿಯಿಂದ ನೇರ ಅಂತಾರಾಷ್ಟ್ರೀಯ ವಿಮಾನಯಾನ ಆರಂಭಿಸಲು ಪ್ರಮುಖ ವಿಮಾನಯಾನ ಸಂಸ್ಥೆ ಜೊತೆ ಮಾತುಕತೆ ನಡೆಸಿದ್ದಾಗಿ ಭಗವಂತ್ ಮಾನ್​​ ತಿಳಿಸಿದರು. ಅಮೃತಸರ ಮತ್ತು ಮೊಹಾಲಿಯಿಂದ ಇಂಗ್ಲೆಂಡ್​​, ವ್ಯಾಂಕೋವರ್, ಟೊರೊಂಟೊ, ಸಿಲಿಕಾನ್ ವ್ಯಾಲಿ ಮತ್ತು ಚಿಕಾಗೋಗೆ ನೇರ ವಿಮಾನ ಸಂಪರ್ಕ ಕಲ್ಪಿಸುವ ಇರಾದೆ ಇದೆ ಎಂದರು.

ಮುಖ್ಯವಾಗಿ ಏರ್​ ಇಂಡಿಯಾ, ವಿಸ್ತಾರಾ, ಬ್ರಿಟಿಷ್ ಏರ್‌ವೇಸ್ ಮತ್ತು ಏರ್ ಕೆನಡಾದೊಂದಿಗೆ ಮಾತುಕತೆ ನಡೆಸಿದ್ದಾಗಿ ತಿಳಿಸಿದರು. ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ನೀಡಲು ನಿರ್ಧರಿಸಲಾಗಿದ್ದು, ಉದಯಪುರ ಸರೋವರ ಮಾದರಿಯ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದು ಸಿಎಂ ಮಾನ್​ ವಿವರಿಸಿದರು.

ಮೊಹಾಲಿ(ಪಂಜಾಬ್​​): ಪಂಜಾಬ್​​ನಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್​ ನೇತೃತ್ವದ ಆಮ್​ ಆದ್ಮಿ ಪಕ್ಷದ(ಎಎಪಿ) ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದಾಗಿನಿಂದಲೂ ಸದಾ ಒಂದಿಲ್ಲೊಂದು ಮಹತ್ವದ ನಿರ್ಧಾರ ಕೈಗೊಳ್ಳುವ ಮೂಲಕ ಜನ ಸಾಮಾನ್ಯರಿಗೆ ಹತ್ತಿರವಾಗುವ ಕೆಲಸ ಮಾಡ್ತಿದೆ. ಸದ್ಯ ಅಂತಹ ಮತ್ತೊಂದು ನಿರ್ಧಾರ ಕೈಗೊಂಡಿದೆ.

ಎಲ್ಲವೂ ರಾಜ್ಯ ಸರ್ಕಾರದ ಯೋಜನೆಯಂತೆ ನಡೆದರೆ, ಪಂಜಾಬ್​​ ವಿವಿಧ ವಸ್ತುಗಳನ್ನು ರಫ್ತು ಹಾಗೂ ಆಮದು ಮಾಡಿಕೊಳ್ಳಲು ಸ್ವಂತ ಗೂಡ್ಸ್​​ ರೈಲುಗಳನ್ನ ಹೊಂದಲಿದೆ. ಜೊತೆಗೆ ತನ್ನದೇ ಆದ ಗೂಡ್ಸ್​ ರೈಲುಗಳನ್ನ ಹೊಂದಿರುವ ದೇಶದ ಮೊದಲ ರಾಜ್ಯವಾಗಿ ಹೊರಹೊಮ್ಮಲಿದೆ. ರಾಜ್ಯದ ರಫ್ತುದಾರರು ಮತ್ತು ಆಮದುದಾರರ ಬಂಡವಾಳ ಉಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ನಿರ್ಧಾರಕ್ಕೆ ಕೈಹಾಕಿದೆ.

350 ಕೋಟಿ ರೂ. ನೀಡಿ ಗೂಡ್ಸ್​ ರೈಲು ಖರೀದಿ: ಅಸೋಚಾಮ್​​ ಸಹಯೋಗದಲ್ಲಿ ಆಯೋಜನೆ ಮಾಡಲಾಗಿದ್ದ 'ವಿಷನ್​​ ಪಂಜಾಬ್​' ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿರುವ ಮುಖ್ಯಮಂತ್ರಿ ಭಗವಂತ್ ಮಾನ್​, ರಾಜ್ಯದ ವಿವಿಧ ಸಾಮಗ್ರಿಗಳ ರಫ್ತು, ಆಮದು ಮಾಡಿಕೊಳ್ಳಲು ಮೂರು ಗೂಡ್ಸ್ ರೈಲು ಖರೀದಿಸುವ ಬಗ್ಗೆ ಆಲೋಚನೆಯಲ್ಲಿದ್ದೇವೆ. ಪ್ರತಿ ರೈಲಿಗೆ ಸುಮಾರು 350 ಕೋಟಿ ರೂ. ನೀಡಲು ಯೋಜಿಸುತ್ತಿದ್ದೇವೆ. ಈ ಉದ್ದೇಶಕ್ಕಾಗಿ ಶೇ. 3ರ ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಕೈಗಾರಿಕೋದ್ಯಮಿಗಳಿಗೆ ಮಹತ್ವದ ಆಫರ್ ನೀಡಿರುವ ಭಗವಂತ್ ಮಾನ್​, ಉದ್ಯಮಿಗಳು ಹೂಡಿಕೆ ಮಾಡಲು ಪಂಜಾಬ್​ ಒಳ್ಳೆಯ ವಾತಾವರಣ ನಿರ್ಮಾಣ ಮಾಡಿಕೊಡಲಿದ್ದು, ನಮ್ಮೊಂದಿಗೆ ಮುಕ್ತವಾಗಿ ಮಾತನಾಡಬಹುದಾಗಿದೆ ಎಂದು ಮುಕ್ತ ಆಹ್ವಾನವನ್ನು ನೀಡಿದ್ದಾರೆ.

ಇದನ್ನೂ ಓದಿ: ನಕಲಿ ಡಿಗ್ರಿ ಪಡೆದು ಸರ್ಕಾರಿ ಹುದ್ದೆ ಗಿಟ್ಟಿಸಿಕೊಂಡವರಿಗೆ ಶಾಕ್​​.. ವಜಾಗೊಳಿಸಲು ಮುಂದಾದ ಪಂಜಾಬ್ ಸಿಎಂ

ಇದೇ ವೇಳೆ, ಅಮೃತಸರ ಮತ್ತು ಮೊಹಾಲಿಯಿಂದ ನೇರ ಅಂತಾರಾಷ್ಟ್ರೀಯ ವಿಮಾನಯಾನ ಆರಂಭಿಸಲು ಪ್ರಮುಖ ವಿಮಾನಯಾನ ಸಂಸ್ಥೆ ಜೊತೆ ಮಾತುಕತೆ ನಡೆಸಿದ್ದಾಗಿ ಭಗವಂತ್ ಮಾನ್​​ ತಿಳಿಸಿದರು. ಅಮೃತಸರ ಮತ್ತು ಮೊಹಾಲಿಯಿಂದ ಇಂಗ್ಲೆಂಡ್​​, ವ್ಯಾಂಕೋವರ್, ಟೊರೊಂಟೊ, ಸಿಲಿಕಾನ್ ವ್ಯಾಲಿ ಮತ್ತು ಚಿಕಾಗೋಗೆ ನೇರ ವಿಮಾನ ಸಂಪರ್ಕ ಕಲ್ಪಿಸುವ ಇರಾದೆ ಇದೆ ಎಂದರು.

ಮುಖ್ಯವಾಗಿ ಏರ್​ ಇಂಡಿಯಾ, ವಿಸ್ತಾರಾ, ಬ್ರಿಟಿಷ್ ಏರ್‌ವೇಸ್ ಮತ್ತು ಏರ್ ಕೆನಡಾದೊಂದಿಗೆ ಮಾತುಕತೆ ನಡೆಸಿದ್ದಾಗಿ ತಿಳಿಸಿದರು. ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ನೀಡಲು ನಿರ್ಧರಿಸಲಾಗಿದ್ದು, ಉದಯಪುರ ಸರೋವರ ಮಾದರಿಯ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದು ಸಿಎಂ ಮಾನ್​ ವಿವರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.