ETV Bharat / bharat

ಗಂಗೆಯಲ್ಲಿ ಹೆಚ್ಚಾದ ನೀರಿನ ಪ್ರಮಾಣ: ಮೃತದೇಹಗಳು ತೇಲಿ ಬರುವ ಸಾಧ್ಯತೆ

ಕಳೆದ ಒಂದೂವರೆ ತಿಂಗಳಿಂದ ಮೃತಪಟ್ಟಿದ್ದ ಕೋವಿಡ್​ ರೋಗಿಗಳನ್ನು ದಡದಲ್ಲಿಯೇ ಸಮಾಧಿ ಮಾಡಿದ್ದರಿಂದ, ಹೆಣಗಳು ತೇಲಿ ಬರುವ ಸಾಧ್ಯತೆಯಿದೆ. ಒಂದು ವೇಳೆ ಶವಗಳು ತೇಲಿ ಬಂದರೆ ಮಾಲಿನ್ಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಹಾಗಾಗಿ ಜಿಲ್ಲಾಡಳಿತವು ಈಗಾಗಲೇ ಹೂಳಲಾಗಿರುವ ಮೃತದೇಹಗಳನ್ನು ಹೊರತೆಗೆದು ವಿಲೇವಾರಿ ಮಾಡಲು ಮುಂದಾಗಿದೆ.

author img

By

Published : Jun 3, 2021, 9:53 PM IST

ಮೃತದೇಹಗಳು ತೇಲಿ ಬರುವ ಸಾಧ್ಯತೆ..!
ಮೃತದೇಹಗಳು ತೇಲಿ ಬರುವ ಸಾಧ್ಯತೆ..!

ಪ್ರಯಾಗರಾಜ್: ಉತ್ತರಪ್ರದೇಶದ ಹಲವೆಡೆ ಮಳೆಯಾಗುತ್ತಿರುವುದರಿಂದ ದಿನೇದಿನೆ ಗಂಗಾ ನದಿಯ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಇದರಿಂದಾಗಿ ಪಕ್ಕದಲ್ಲಿರುವ ಫಫಮೌ ಘಾಟ್‌ಗೆ ನದಿಯ ನೀರಿನ ಅಲೆಗಳು ಜೋರಾಗಿ ಅಪ್ಪಳಿಸುತ್ತಿದ್ದು, ನದಿ ತೀರದಲ್ಲಿ ಸವೆತ ಉಂಟಾಗಿದೆ.

ಕಳೆದ ಒಂದೂವರೆ ತಿಂಗಳಿಂದ ಮೃತಪಟ್ಟಿದ್ದ ಕೋವಿಡ್​ ರೋಗಿಗಳನ್ನು ದಡದಲ್ಲಿಯೇ ಸಮಾಧಿ ಮಾಡಿದ್ದರಿಂದ, ಹೆಣಗಳು ತೇಲಿ ಬರುವ ಸಾಧ್ಯತೆಯಿದೆ. ಒಂದು ವೇಳೆ ಶವಗಳು ತೇಲಿ ಬಂದರೆ ಮಾಲಿನ್ಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಹಾಗಾಗಿ ಜಿಲ್ಲಾಡಳಿತವು ಈಗಾಗಲೇ ಹೂಳಲಾಗಿರುವ ಮೃತದೇಹಗಳನ್ನು ಹೊರತೆಗೆದು ವಿಲೇವಾರಿ ಮಾಡಲು ಮುಂದಾಗಿದೆ.

ಜಿಲ್ಲೆಯಲ್ಲಿ ಫಫಮೌ, ಶ್ರೀಂಗ್ವರ್​ಪುರ್ ಮತ್ತು ದಿಯೋರಖ್ ಘಾಟ್ ಪ್ರಮುಖ ಸ್ಮಶಾನಗಳಾಗಿವೆ. ಸ್ಥಳೀಯ ಸರ್ಕಾರಿ ಸಂಸ್ಥೆಗಳು ಘಟ್ಟಗಳ ಮೇಲೆ ಸಮಾಧಿ ಮಾಡುವುದನ್ನು ನಿಷೇಧಿಸಿದೆ. ಹಾಗಾಗಿ ಮೃತದೇಹಗಳನ್ನು ಸುಡಲು ಜಿಲ್ಲಾಡಳಿತ ಮುಂದಾಗಿದೆ.

ನದಿ ತೀರದಲ್ಲಿ ಎಸ್​ಡಿಆರ್​ಎಫ್ ಮತ್ತು ವಾಟರ್​​ ಪೊಲೀಸರ ತಂಡವನ್ನು ನಿಯೋಜಿಸಲಾಗಿದೆ. ನದಿಯಲ್ಲಿ ನೀರಿನ ಮಟ್ಟ ಏರುತ್ತಿರುವುದರಿಂದ ಅಲ್ಲಿದ್ದ ಅಂಗಡಿಗಳನ್ನೂ ಎತ್ತಂಗಡಿ ಮಾಡಿಸಲಾಗಿದೆ.

ಈಗಾಗಲೇ ಹತ್ತಾರು ಹೆಣಗಳು ನದಿಯಲ್ಲಿ ತೇಲಿ ಬರುತ್ತಿದ್ದು, ಪಕ್ಷಿಗಳು, ನಾಯಿಗಳು ತಿನ್ನುತ್ತಿವೆ. ದುರ್ವಾಸನೆಯಿಂದಾಗಿ ಭಕ್ತರು ಸ್ನಾನ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:VIDEO: ಕಾಗೆಗಳಿಂದ ತಪ್ಪಿಸಿಕೊಳ್ಳುವಾಗ ಹೈವೋಲ್ಟೇಜ್ ತಂತಿಗೆ ಡಿಕ್ಕಿ ಹೊಡೆದ ಕೋತಿ

ಈ ಮೊದಲು ಶವಗಳನ್ನು ಗಂಗಾ ತೀರದಲ್ಲಿ ಹೂಳಲಾಗಿತ್ತು. ಆದರೆ, ಇತ್ತೀಚೆಗೆ ಕೋವಿಡ್​ನಿಂದ ಮೃತಪಟ್ಟ ಸಾವಿರಾರು ಹೆಣಗಳನ್ನು ಇಲ್ಲಿ ಹೂಳಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಪ್ರಯಾಗರಾಜ್: ಉತ್ತರಪ್ರದೇಶದ ಹಲವೆಡೆ ಮಳೆಯಾಗುತ್ತಿರುವುದರಿಂದ ದಿನೇದಿನೆ ಗಂಗಾ ನದಿಯ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಇದರಿಂದಾಗಿ ಪಕ್ಕದಲ್ಲಿರುವ ಫಫಮೌ ಘಾಟ್‌ಗೆ ನದಿಯ ನೀರಿನ ಅಲೆಗಳು ಜೋರಾಗಿ ಅಪ್ಪಳಿಸುತ್ತಿದ್ದು, ನದಿ ತೀರದಲ್ಲಿ ಸವೆತ ಉಂಟಾಗಿದೆ.

ಕಳೆದ ಒಂದೂವರೆ ತಿಂಗಳಿಂದ ಮೃತಪಟ್ಟಿದ್ದ ಕೋವಿಡ್​ ರೋಗಿಗಳನ್ನು ದಡದಲ್ಲಿಯೇ ಸಮಾಧಿ ಮಾಡಿದ್ದರಿಂದ, ಹೆಣಗಳು ತೇಲಿ ಬರುವ ಸಾಧ್ಯತೆಯಿದೆ. ಒಂದು ವೇಳೆ ಶವಗಳು ತೇಲಿ ಬಂದರೆ ಮಾಲಿನ್ಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಹಾಗಾಗಿ ಜಿಲ್ಲಾಡಳಿತವು ಈಗಾಗಲೇ ಹೂಳಲಾಗಿರುವ ಮೃತದೇಹಗಳನ್ನು ಹೊರತೆಗೆದು ವಿಲೇವಾರಿ ಮಾಡಲು ಮುಂದಾಗಿದೆ.

ಜಿಲ್ಲೆಯಲ್ಲಿ ಫಫಮೌ, ಶ್ರೀಂಗ್ವರ್​ಪುರ್ ಮತ್ತು ದಿಯೋರಖ್ ಘಾಟ್ ಪ್ರಮುಖ ಸ್ಮಶಾನಗಳಾಗಿವೆ. ಸ್ಥಳೀಯ ಸರ್ಕಾರಿ ಸಂಸ್ಥೆಗಳು ಘಟ್ಟಗಳ ಮೇಲೆ ಸಮಾಧಿ ಮಾಡುವುದನ್ನು ನಿಷೇಧಿಸಿದೆ. ಹಾಗಾಗಿ ಮೃತದೇಹಗಳನ್ನು ಸುಡಲು ಜಿಲ್ಲಾಡಳಿತ ಮುಂದಾಗಿದೆ.

ನದಿ ತೀರದಲ್ಲಿ ಎಸ್​ಡಿಆರ್​ಎಫ್ ಮತ್ತು ವಾಟರ್​​ ಪೊಲೀಸರ ತಂಡವನ್ನು ನಿಯೋಜಿಸಲಾಗಿದೆ. ನದಿಯಲ್ಲಿ ನೀರಿನ ಮಟ್ಟ ಏರುತ್ತಿರುವುದರಿಂದ ಅಲ್ಲಿದ್ದ ಅಂಗಡಿಗಳನ್ನೂ ಎತ್ತಂಗಡಿ ಮಾಡಿಸಲಾಗಿದೆ.

ಈಗಾಗಲೇ ಹತ್ತಾರು ಹೆಣಗಳು ನದಿಯಲ್ಲಿ ತೇಲಿ ಬರುತ್ತಿದ್ದು, ಪಕ್ಷಿಗಳು, ನಾಯಿಗಳು ತಿನ್ನುತ್ತಿವೆ. ದುರ್ವಾಸನೆಯಿಂದಾಗಿ ಭಕ್ತರು ಸ್ನಾನ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:VIDEO: ಕಾಗೆಗಳಿಂದ ತಪ್ಪಿಸಿಕೊಳ್ಳುವಾಗ ಹೈವೋಲ್ಟೇಜ್ ತಂತಿಗೆ ಡಿಕ್ಕಿ ಹೊಡೆದ ಕೋತಿ

ಈ ಮೊದಲು ಶವಗಳನ್ನು ಗಂಗಾ ತೀರದಲ್ಲಿ ಹೂಳಲಾಗಿತ್ತು. ಆದರೆ, ಇತ್ತೀಚೆಗೆ ಕೋವಿಡ್​ನಿಂದ ಮೃತಪಟ್ಟ ಸಾವಿರಾರು ಹೆಣಗಳನ್ನು ಇಲ್ಲಿ ಹೂಳಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.