ETV Bharat / bharat

ಗುಜರಾತ್​ನ ಕೆವಾಡಿಯಾದಲ್ಲಿ ಮಿಲಿಟರಿ ನಾಯಕತ್ವ ಸಮಾವೇಶ: ನಾಡಿದ್ದು ಪ್ರಧಾನಿ ಭಾಷಣ - ಗುಜರಾತ್​ನಲ್ಲಿ ಮಿಲಿಟರಿ ನಾಯಕತ್ವ ಸಮಾವೇಶ

ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನರವಣೆ, ಏರ್ ಚೀಫ್ ಮಾರ್ಷಲ್ ಆರ್ ಕೆ ಎಸ್ ಭದೌರಿಯಾ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಮತ್ತು ರಕ್ಷಣಾ ಸಚಿವಾಲಯ ಮತ್ತು ಸಶಸ್ತ್ರ ಪಡೆಗಳ ಹಿರಿಯ ಅಧಿಕಾರಿಗಳು ಉನ್ನತ ಮಟ್ಟದ ಮಿಲಿಟರಿ ನಾಯಕತ್ವದ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮೋದಿ
ಮೋದಿ
author img

By

Published : Mar 4, 2021, 1:44 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಕೆವಾಡಿಯಾದಲ್ಲಿ ಶನಿವಾರ ದೇಶದ ಉನ್ನತ ಮಟ್ಟದ ಮಿಲಿಟರಿ ನಾಯಕತ್ವದ ಸಮಾವೇಶ ಉದ್ದೇಶಿ ಮಾತನಾಡಲಿದ್ದು, ಈ ವೇಳೆ ಸೈನಿಕರು ಮತ್ತು ಕಿರಿಯ ಆಯೋಗದ ಅಧಿಕಾರಿಗಳು (ಜೆಸಿಒ) ಮೊದಲ ಬಾರಿಗೆ ಭಾಗವಹಿಸಲಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದಿನಿಂದ ಪ್ರಾರಂಭವಾದ ಮೂರು ದಿನಗಳ ಜಂಟಿ ಕಮಾಂಡರ್‌ಗಳ ಸಮಾವೇಶದಲ್ಲಿ ಸೈನಿಕರು ಮತ್ತು ಜೆಸಿಒಗಳು ಮಾನವ ಸಂಪನ್ಮೂಲ ಸಮಸ್ಯೆಗಳಿಗೆ ಸಂಬಂಧಿತ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನರವಣೆ, ಏರ್ ಚೀಫ್ ಮಾರ್ಷಲ್ ಆರ್ ಕೆ ಎಸ್ ಭದೌರಿಯಾ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಮತ್ತು ರಕ್ಷಣಾ ಸಚಿವಾಲಯ ಮತ್ತು ಸಶಸ್ತ್ರ ಪಡೆಗಳ ಹಿರಿಯ ಅಧಿಕಾರಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: 'ನಾರದ'ನಂತೆ ವರ್ತಿಸುವುದನ್ನ ಬಿಟ್ಟು ಬಿಡಿ: ಅಮೆಜಾನ್​ ಸಿಇಒಗೆ ಭಾರತದ FMCG ಒಕ್ಕೂಟ ಪತ್ರ

ಸಮ್ಮೇಳನದ ಕೊನೆಯ ದಿನದಂದು ಪ್ರಧಾನಿ ತಮ್ಮ ಭಾಷಣ ಮಾಡುವ ನಿರೀಕ್ಷೆಯಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಭಾಗವಹಿಸಲಿದ್ದಾರೆ. ಪೂರ್ವ ಲಡಾಖ್‌ನಲ್ಲಿ ಸೈನ್ಯ ನಿಯೋಜಿಸುವ ಕುರಿತು ಭಾರತ ಮತ್ತು ಚೀನಾ ಮಾತುಕತೆ ನಡೆಸುತ್ತಿರುವ ವೇಳೆ ಕೆವಾಡಿಯಾದಲ್ಲಿ ಉನ್ನತ ಮಿಲಿಟರಿ ಸಭೆ ನಡೆಯುತ್ತಿದೆ.

ಪ್ಯಾಂಗೊಂಗ್ ಸರೋವರ ಪ್ರದೇಶದಲ್ಲಿ ಹಿಂಸಾತ್ಮಕ ಘರ್ಷಣೆಯ ನಂತರ ಕಳೆದ ವರ್ಷ ಮೇ 5ರಂದು ಭಾರತೀಯ ಮತ್ತು ಚೀನಾ ನಡುವಿನ ಗಡಿರೇಖೆಯಲ್ಲಿ ಬಿಕ್ಕಟ್ಟು ಉಂಟಾಗಿತ್ತು. ಉಭಯ ರಾಷ್ಟ್ರಗಳು ಸೈನಿಕರು ಮತ್ತು ಮಿಲಿಟರಿ ಪಟೆಗಳ ನಿಯೋಜನೆ ಮಾಡಿದವು. ನೆರೆಹೊರೆಯವರ ನಡುವೆ ಹಲವು ಸುತ್ತಿನ ಮಾತುಕತೆ ನಡೆದಿತ್ತು.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಕೆವಾಡಿಯಾದಲ್ಲಿ ಶನಿವಾರ ದೇಶದ ಉನ್ನತ ಮಟ್ಟದ ಮಿಲಿಟರಿ ನಾಯಕತ್ವದ ಸಮಾವೇಶ ಉದ್ದೇಶಿ ಮಾತನಾಡಲಿದ್ದು, ಈ ವೇಳೆ ಸೈನಿಕರು ಮತ್ತು ಕಿರಿಯ ಆಯೋಗದ ಅಧಿಕಾರಿಗಳು (ಜೆಸಿಒ) ಮೊದಲ ಬಾರಿಗೆ ಭಾಗವಹಿಸಲಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದಿನಿಂದ ಪ್ರಾರಂಭವಾದ ಮೂರು ದಿನಗಳ ಜಂಟಿ ಕಮಾಂಡರ್‌ಗಳ ಸಮಾವೇಶದಲ್ಲಿ ಸೈನಿಕರು ಮತ್ತು ಜೆಸಿಒಗಳು ಮಾನವ ಸಂಪನ್ಮೂಲ ಸಮಸ್ಯೆಗಳಿಗೆ ಸಂಬಂಧಿತ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನರವಣೆ, ಏರ್ ಚೀಫ್ ಮಾರ್ಷಲ್ ಆರ್ ಕೆ ಎಸ್ ಭದೌರಿಯಾ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಮತ್ತು ರಕ್ಷಣಾ ಸಚಿವಾಲಯ ಮತ್ತು ಸಶಸ್ತ್ರ ಪಡೆಗಳ ಹಿರಿಯ ಅಧಿಕಾರಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: 'ನಾರದ'ನಂತೆ ವರ್ತಿಸುವುದನ್ನ ಬಿಟ್ಟು ಬಿಡಿ: ಅಮೆಜಾನ್​ ಸಿಇಒಗೆ ಭಾರತದ FMCG ಒಕ್ಕೂಟ ಪತ್ರ

ಸಮ್ಮೇಳನದ ಕೊನೆಯ ದಿನದಂದು ಪ್ರಧಾನಿ ತಮ್ಮ ಭಾಷಣ ಮಾಡುವ ನಿರೀಕ್ಷೆಯಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಭಾಗವಹಿಸಲಿದ್ದಾರೆ. ಪೂರ್ವ ಲಡಾಖ್‌ನಲ್ಲಿ ಸೈನ್ಯ ನಿಯೋಜಿಸುವ ಕುರಿತು ಭಾರತ ಮತ್ತು ಚೀನಾ ಮಾತುಕತೆ ನಡೆಸುತ್ತಿರುವ ವೇಳೆ ಕೆವಾಡಿಯಾದಲ್ಲಿ ಉನ್ನತ ಮಿಲಿಟರಿ ಸಭೆ ನಡೆಯುತ್ತಿದೆ.

ಪ್ಯಾಂಗೊಂಗ್ ಸರೋವರ ಪ್ರದೇಶದಲ್ಲಿ ಹಿಂಸಾತ್ಮಕ ಘರ್ಷಣೆಯ ನಂತರ ಕಳೆದ ವರ್ಷ ಮೇ 5ರಂದು ಭಾರತೀಯ ಮತ್ತು ಚೀನಾ ನಡುವಿನ ಗಡಿರೇಖೆಯಲ್ಲಿ ಬಿಕ್ಕಟ್ಟು ಉಂಟಾಗಿತ್ತು. ಉಭಯ ರಾಷ್ಟ್ರಗಳು ಸೈನಿಕರು ಮತ್ತು ಮಿಲಿಟರಿ ಪಟೆಗಳ ನಿಯೋಜನೆ ಮಾಡಿದವು. ನೆರೆಹೊರೆಯವರ ನಡುವೆ ಹಲವು ಸುತ್ತಿನ ಮಾತುಕತೆ ನಡೆದಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.