ETV Bharat / bharat

ಸಮುದಾಯಗಳಿಗೆ ಅಧಿಕಾರ ಹಂಚಿಕೆಯಿಂದ ಮಣಿಪುರದಲ್ಲಿ ಶಾಂತಿ ಸ್ಥಾಪನೆ ಸಾಧ್ಯ: ನೇತಾಜಿ ಸುಭಾಷ್ ಚಂದ್ರ ಬೋಸ್ ಮೊಮ್ಮಗ ಸುಗತ ಬೋಸ್

ಮಣಿಪುರದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ರಾಜ್ಯದ ಮೂರೂ ಸಮುದಾಯಗಳಿಗೆ ಅಧಿಕಾರದ ಹಂಚಿಕೆ ಮಾಡಬೇಕೆಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗ ಪ್ರೊಫೆಸರ್ ಸುಗತ ಬೋಸ್ ಹೇಳಿದ್ದಾರೆ.

author img

By ETV Bharat Karnataka Team

Published : Oct 1, 2023, 6:58 PM IST

Peace can be established in Manipur through sharing of power between communities Prof Sugata Bose
Peace can be established in Manipur through sharing of power between communities Prof Sugata Bose

ಕೋಲ್ಕತಾ : ಮಣಿಪುರದಲ್ಲಿನ ಪ್ರಸ್ತುತ ಪರಿಸ್ಥಿತಿಯು ಆತಂಕಕಾರಿಯಾಗಿದೆ ಎಂದು ಹೇಳಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗ ಪ್ರೊಫೆಸರ್ ಸುಗತ ಬೋಸ್, ರಾಜ್ಯದ ಮೂರು ಸಮುದಾಯಗಳ ಮಧ್ಯೆ ನ್ಯಾಯಯುತವಾಗಿ ಅಧಿಕಾರ ಹಂಚಿಕೆ ಮಾಡಬೇಕೆಂದು ಸಲಹೆ ನೀಡಿದ್ದಾರೆ. ಮೂರು ಸಮುದಾಯಗಳಾದ ಮೀಟಿಗಳು, ಕುಕಿಗಳು ಮತ್ತು ನಾಗಾಗಳನ್ನು ಒಂದೇ ವೇದಿಕೆಗೆ ತರಲು ಈ ಮಾರ್ಗ ಅನುಸರಿಸುವಂತೆ ಅವರು ತಿಳಿಸಿದ್ದಾರೆ.

ಈ ಹಿಂದೆ ಲೋಕಸಭಾ ಸಂಸದರಾಗಿದ್ದ ಬೋಸ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ಈ ಮೂರೂ ಸಮುದಾಯಗಳ ಸದಸ್ಯರು 1944 ರಲ್ಲಿ ನೇತಾಜಿ ಅವರ ಐಎನ್ಎಗೆ ಸೇರಿಕೊಂಡಿದ್ದರು ಮತ್ತು ಭಾರತಕ್ಕೆ ಪ್ರವೇಶಿಸುವ ಮೊದಲು ಬಿಷ್ಣುಪುರ ಮತ್ತು ಉಖ್ರುಲ್ ಜಿಲ್ಲೆಗಳ ಯುದ್ಧಭೂಮಿಗಳಲ್ಲಿ ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದ್ದರು ಎಂಬುದನ್ನು ಉಲ್ಲೇಖಿಸಿದರು.

ರಾಜ್ಯದ ಜನಸಂಖ್ಯೆಯ ಶೇಕಡಾ 53 ರಷ್ಟಿರುವ ಮೀಟಿಗಳು ಹೆಚ್ಚಾಗಿ ಇಂಫಾಲ್ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ. ಬುಡಕಟ್ಟು ಜನಾಂಗದವರಾದ ನಾಗಾಗಳು ಮತ್ತು ಕುಕಿಗಳು ಜನಸಂಖ್ಯೆಯ 40 ಪ್ರತಿಶತದಷ್ಟು ಇದ್ದು, ಅವರು ಇಂಫಾಲ್ ಸುತ್ತಮುತ್ತಲಿನ ಗುಡ್ಡಗಾಡು ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. ಅಲ್ಪಾವಧಿಯ ರಾಜಕೀಯ ಲಾಭಕ್ಕಾಗಿ ಮಣಿಪುರದ ಪರಿಸ್ಥಿತಿ ನಿಜವಾಗಿಯೂ ದುರಂತವಾಗಿದೆ. ಒಂದು ಸಮುದಾಯವನ್ನು ಮತ್ತೊಂದು ಸಮುದಾಯದ ವಿರುದ್ಧ ಎತ್ತಿ ಕಟ್ಟಲಾಗುತ್ತಿದೆ. ಈ ರಾಜಕೀಯ ಆಟ ನಿಲ್ಲಬೇಕು ಎಂದು ನೇತಾಜಿ ಅವರ ಮೊಮ್ಮಗ ಹೇಳಿದರು.

ಕಳೆದ ಐದು ತಿಂಗಳುಗಳಿಂದ ಮೀಟಿ ಮತ್ತು ಕುಕಿ ಸಮುದಾಯಗಳು ಪರಸ್ಪರರ ವಿರುದ್ಧ ದಂಗೆ ನಡೆಸಿವೆ. ಇದರ ಪರಿಣಾಮವಾಗಿ 175 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ ಮತ್ತು ತಾತ್ಕಾಲಿಕ ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಅರಣ್ಯ ಭೂಮಿಯಲ್ಲಿ ತಲೆಯೆತ್ತಿದ ಗ್ರಾಮಗಳನ್ನು ನೆಲಸಮಗೊಳಿಸುವುದು ಮತ್ತು ಮೀಟಿಗಳಿಗೆ ಪರಿಶಿಷ್ಟ ಪಂಗಡದ ಸ್ಥಾನಮಾನದ ಬೇಡಿಕೆಗಳ ಬಗ್ಗೆ ಕೇಂದ್ರಕ್ಕೆ ಶಿಫಾರಸು ಕಳುಹಿಸುವಂತೆ ರಾಜ್ಯ ಸರ್ಕಾರಕ್ಕೆ ಇಂಫಾಲ್ ಹೈಕೋರ್ಟ್ ಆದೇಶ ನೀಡಿದ್ದು ಆರಂಭಿಕ ಅಸಮಾಧಾನಗಳಿಗೆ ಕಾರಣವಾಗಿವೆ. ಇದರ ಜೊತೆಗೆ ಜನಾಂಗೀಯ ಹಿಂಸಾಚಾರ ಮತ್ತು ಎರಡೂ ಸಮುದಾಯಗಳು ಮಾದಕವಸ್ತು ವ್ಯಾಪಾರದಲ್ಲಿ ತೊಡಗಿವೆ ಪರಸ್ಪರ ಆರೋಪಗಳಿಂದ ಸಮಸ್ಯೆಗಳು ಮತ್ತಷ್ಟು ಜಟಿಲಗೊಂಡಿವೆ ಎಂದು ಬೋಸ್​ ತಿಳಿಸಿದರು.

ಕೇಂದ್ರದಲ್ಲಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಈಶಾನ್ಯದ ಉಳಿದ ಭಾಗಗಳೊಂದಿಗೆ ಮಣಿಪುರಕ್ಕೂ ಧ್ವನಿ ನೀಡಬೇಕು ಎಂದು ಬೋಸ್ ಹೇಳಿದರು. ಇಂಫಾಲ್​ ಹೋರಾಟದಲ್ಲಿ ಕುಕಿ, ಮೀಟಿ ಮತ್ತು ನಾಗಾ ಸಮುದಾಯಗಳ ಹೆಚ್ಚಿನ ಸಂಖ್ಯೆಯ ಮಣಿಪುರಿ ಯುವಕರು ಐಎನ್ಎಗೆ ಸೇರಿದ್ದರು ಎಂದು ಅವರು ನೆನಪಿಸಿಕೊಂಡರು. ಈ ಸ್ವಯಂಸೇವಕ ಸೈನಿಕರಲ್ಲಿ 15 ಮಣಿಪುರಿ ಯುವಕರು ಮತ್ತು ಇಬ್ಬರು ಮಹಿಳೆಯರು ರಂಗೂನ್​ ಅನ್ನು ಮರಳಿ ಪಡೆಯುವ ಹೋರಾಟದಲ್ಲಿ ಐಎನ್ಎ ಪಡೆಗಳೊಂದಿಗೆ ಸೇರಿ ಬ್ರಿಟಿಷರಿಂದ ದೌರ್ಜನ್ಯ ಅನುಭವಿಸಿದ್ದರು ಎಂದು ಅವರು ಹೇಳಿದರು.

ಇದನ್ನೂ ಓದಿ : ಫಿಟ್ನೆಸ್​ ಚಾಲೆಂಜ್​ನಲ್ಲಿ ಯಶಸ್ವಿಯಾದ ಅಂಕಿತ್​ರೊಂದಿಗೆ ಪ್ರಧಾನಿ ಮೋದಿ ಸ್ವಚ್ಛತಾ ಅಭಿಯಾನ

ಕೋಲ್ಕತಾ : ಮಣಿಪುರದಲ್ಲಿನ ಪ್ರಸ್ತುತ ಪರಿಸ್ಥಿತಿಯು ಆತಂಕಕಾರಿಯಾಗಿದೆ ಎಂದು ಹೇಳಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗ ಪ್ರೊಫೆಸರ್ ಸುಗತ ಬೋಸ್, ರಾಜ್ಯದ ಮೂರು ಸಮುದಾಯಗಳ ಮಧ್ಯೆ ನ್ಯಾಯಯುತವಾಗಿ ಅಧಿಕಾರ ಹಂಚಿಕೆ ಮಾಡಬೇಕೆಂದು ಸಲಹೆ ನೀಡಿದ್ದಾರೆ. ಮೂರು ಸಮುದಾಯಗಳಾದ ಮೀಟಿಗಳು, ಕುಕಿಗಳು ಮತ್ತು ನಾಗಾಗಳನ್ನು ಒಂದೇ ವೇದಿಕೆಗೆ ತರಲು ಈ ಮಾರ್ಗ ಅನುಸರಿಸುವಂತೆ ಅವರು ತಿಳಿಸಿದ್ದಾರೆ.

ಈ ಹಿಂದೆ ಲೋಕಸಭಾ ಸಂಸದರಾಗಿದ್ದ ಬೋಸ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ಈ ಮೂರೂ ಸಮುದಾಯಗಳ ಸದಸ್ಯರು 1944 ರಲ್ಲಿ ನೇತಾಜಿ ಅವರ ಐಎನ್ಎಗೆ ಸೇರಿಕೊಂಡಿದ್ದರು ಮತ್ತು ಭಾರತಕ್ಕೆ ಪ್ರವೇಶಿಸುವ ಮೊದಲು ಬಿಷ್ಣುಪುರ ಮತ್ತು ಉಖ್ರುಲ್ ಜಿಲ್ಲೆಗಳ ಯುದ್ಧಭೂಮಿಗಳಲ್ಲಿ ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದ್ದರು ಎಂಬುದನ್ನು ಉಲ್ಲೇಖಿಸಿದರು.

ರಾಜ್ಯದ ಜನಸಂಖ್ಯೆಯ ಶೇಕಡಾ 53 ರಷ್ಟಿರುವ ಮೀಟಿಗಳು ಹೆಚ್ಚಾಗಿ ಇಂಫಾಲ್ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ. ಬುಡಕಟ್ಟು ಜನಾಂಗದವರಾದ ನಾಗಾಗಳು ಮತ್ತು ಕುಕಿಗಳು ಜನಸಂಖ್ಯೆಯ 40 ಪ್ರತಿಶತದಷ್ಟು ಇದ್ದು, ಅವರು ಇಂಫಾಲ್ ಸುತ್ತಮುತ್ತಲಿನ ಗುಡ್ಡಗಾಡು ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. ಅಲ್ಪಾವಧಿಯ ರಾಜಕೀಯ ಲಾಭಕ್ಕಾಗಿ ಮಣಿಪುರದ ಪರಿಸ್ಥಿತಿ ನಿಜವಾಗಿಯೂ ದುರಂತವಾಗಿದೆ. ಒಂದು ಸಮುದಾಯವನ್ನು ಮತ್ತೊಂದು ಸಮುದಾಯದ ವಿರುದ್ಧ ಎತ್ತಿ ಕಟ್ಟಲಾಗುತ್ತಿದೆ. ಈ ರಾಜಕೀಯ ಆಟ ನಿಲ್ಲಬೇಕು ಎಂದು ನೇತಾಜಿ ಅವರ ಮೊಮ್ಮಗ ಹೇಳಿದರು.

ಕಳೆದ ಐದು ತಿಂಗಳುಗಳಿಂದ ಮೀಟಿ ಮತ್ತು ಕುಕಿ ಸಮುದಾಯಗಳು ಪರಸ್ಪರರ ವಿರುದ್ಧ ದಂಗೆ ನಡೆಸಿವೆ. ಇದರ ಪರಿಣಾಮವಾಗಿ 175 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ ಮತ್ತು ತಾತ್ಕಾಲಿಕ ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಅರಣ್ಯ ಭೂಮಿಯಲ್ಲಿ ತಲೆಯೆತ್ತಿದ ಗ್ರಾಮಗಳನ್ನು ನೆಲಸಮಗೊಳಿಸುವುದು ಮತ್ತು ಮೀಟಿಗಳಿಗೆ ಪರಿಶಿಷ್ಟ ಪಂಗಡದ ಸ್ಥಾನಮಾನದ ಬೇಡಿಕೆಗಳ ಬಗ್ಗೆ ಕೇಂದ್ರಕ್ಕೆ ಶಿಫಾರಸು ಕಳುಹಿಸುವಂತೆ ರಾಜ್ಯ ಸರ್ಕಾರಕ್ಕೆ ಇಂಫಾಲ್ ಹೈಕೋರ್ಟ್ ಆದೇಶ ನೀಡಿದ್ದು ಆರಂಭಿಕ ಅಸಮಾಧಾನಗಳಿಗೆ ಕಾರಣವಾಗಿವೆ. ಇದರ ಜೊತೆಗೆ ಜನಾಂಗೀಯ ಹಿಂಸಾಚಾರ ಮತ್ತು ಎರಡೂ ಸಮುದಾಯಗಳು ಮಾದಕವಸ್ತು ವ್ಯಾಪಾರದಲ್ಲಿ ತೊಡಗಿವೆ ಪರಸ್ಪರ ಆರೋಪಗಳಿಂದ ಸಮಸ್ಯೆಗಳು ಮತ್ತಷ್ಟು ಜಟಿಲಗೊಂಡಿವೆ ಎಂದು ಬೋಸ್​ ತಿಳಿಸಿದರು.

ಕೇಂದ್ರದಲ್ಲಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಈಶಾನ್ಯದ ಉಳಿದ ಭಾಗಗಳೊಂದಿಗೆ ಮಣಿಪುರಕ್ಕೂ ಧ್ವನಿ ನೀಡಬೇಕು ಎಂದು ಬೋಸ್ ಹೇಳಿದರು. ಇಂಫಾಲ್​ ಹೋರಾಟದಲ್ಲಿ ಕುಕಿ, ಮೀಟಿ ಮತ್ತು ನಾಗಾ ಸಮುದಾಯಗಳ ಹೆಚ್ಚಿನ ಸಂಖ್ಯೆಯ ಮಣಿಪುರಿ ಯುವಕರು ಐಎನ್ಎಗೆ ಸೇರಿದ್ದರು ಎಂದು ಅವರು ನೆನಪಿಸಿಕೊಂಡರು. ಈ ಸ್ವಯಂಸೇವಕ ಸೈನಿಕರಲ್ಲಿ 15 ಮಣಿಪುರಿ ಯುವಕರು ಮತ್ತು ಇಬ್ಬರು ಮಹಿಳೆಯರು ರಂಗೂನ್​ ಅನ್ನು ಮರಳಿ ಪಡೆಯುವ ಹೋರಾಟದಲ್ಲಿ ಐಎನ್ಎ ಪಡೆಗಳೊಂದಿಗೆ ಸೇರಿ ಬ್ರಿಟಿಷರಿಂದ ದೌರ್ಜನ್ಯ ಅನುಭವಿಸಿದ್ದರು ಎಂದು ಅವರು ಹೇಳಿದರು.

ಇದನ್ನೂ ಓದಿ : ಫಿಟ್ನೆಸ್​ ಚಾಲೆಂಜ್​ನಲ್ಲಿ ಯಶಸ್ವಿಯಾದ ಅಂಕಿತ್​ರೊಂದಿಗೆ ಪ್ರಧಾನಿ ಮೋದಿ ಸ್ವಚ್ಛತಾ ಅಭಿಯಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.