ETV Bharat / bharat

ದೇಶದ ಪುನಶ್ಚೇತನಕ್ಕಾಗಿ ಈ ಬಜೆಟ್.. ಜನಸಾಮಾನ್ಯರೇ ಇಲ್ಲಿ ಬಂಡವಾಳಶಾಹಿಗಳು: ಸೀತಾರಾಮನ್​

author img

By

Published : Feb 13, 2021, 12:05 PM IST

ಈ ಬಾರಿಯ ಬಜೆಟ್​ ಹಾಗೂ ಕೇಂದ್ರ ಸರ್ಕಾರವು ಬಂಡವಾಳಶಾಹಿಗಳ ಪರವಾಗಿದೆ ಎಂದು ಆರೋಪಿಸಿರುವ ಪ್ರತಿಪಕ್ಷಗಳ ನಾಯಕರಿಗೆ ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್​​ ಉತ್ತರ ನೀಡಿದ್ದಾರೆ. ಇತ್ತೀಚೆಗೆ ಮಂಡಿಸಿರುವ ಬಜೆಟ್​ ದೇಶದ ಪುನಶ್ಚೇತನಕ್ಕಾಗಿ, ಇಲ್ಲಿ ಜನಸಾಮಾನ್ಯರೇ ಬಂಡವಾಳಶಾಹಿಗಳು ಎಂದು ಅವರು ಹೇಳಿದ್ದಾರೆ.

Nirmala Sitharaman
ಸೀತಾರಾಮನ್​

ನವದೆಹಲಿ: ಭಾರತವು ಆತ್ಮನಿರ್ಭರವಾಗಲು ಈ ಬಜೆಟ್​ ವೇದಿಕೆ ಕಲ್ಪಿಸಿದೆ. ದೇಶದ ಪುನಶ್ಚೇತನಕ್ಕಾಗಿ ಬಜೆಟ್ ಮಂಡಿಸಲಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​​ ಹೇಳಿದ್ದಾರೆ.

2021-22ನೇ ಸಾಲಿನ ಬಜೆಟ್​ ಆಯವ್ಯಯದ ಬಗ್ಗೆ ಇಂದಿನ ಲೋಕಸಭಾ ಕಲಾಪದಲ್ಲಿ ಮಾತನಾಡುತ್ತಿರುವ ಅವರು, ಈ ಬಾರಿಯ ಬಜೆಟ್​ ಹಾಗೂ ಕೇಂದ್ರ ಸರ್ಕಾರವು ಬಂಡವಾಳಶಾಹಿಗಳ ಪರವಾಗಿದೆ ಎಂದು ಆರೋಪಿಸಿರುವ ಪ್ರತಿಪಕ್ಷಗಳ ನಾಯಕರಿಗೆ ಉತ್ತರ ನೀಡಿದ್ದಾರೆ.

ನಮ್ಮ ಬಂಡವಾಳಶಾಹಿಗಳು ಯಾರು? ಜನಸಾಮಾನ್ಯರೇ ಇಲ್ಲಿ ಬಂಡವಾಳಶಾಹಿಗಳು. ಅವರು ಬಹುಶಃ ಜನರಿಂದ ತಿರಸ್ಕರಿಸಲ್ಪಟ್ಟಿರುವ ಹಾಗೂ ಓಪನ್​ ಟೆಂಡರ್‌, ಜಾಗತಿಕ ಟೆಂಡರ್​ಗಳಿಗೆ ಆಹ್ವಾನ ನೀಡದ ಪಕ್ಷದ ನೆರಳಿನಲ್ಲಿ ಅಡಗಿದ್ದಾರೆ. ಪಿಎಂ ಸ್ವಾನಿಧಿ ಯೋಜನೆಯ ಲಾಭ ಬಂಡವಾಳಶಾಹಿಗಳಿಗೆ ತಲುಪುವುದಿಲ್ಲ. ಸಾಮಾನ್ಯ ಜನರಿಗೆ ತಲುಪುತ್ತದೆ ಎಂದು ಕಾಂಗ್ರೆಸ್​ಗೆ ಸೀತಾರಾಮನ್​ ಟಾಂಗ್​ ನೀಡಿದರು.

ಇದನ್ನೂ ಓದಿ: ಕೊರೊನಾ ನಡುವೆಯೂ ಸರ್ಕಾರ ಆರ್ಥಿಕ ಸುಧಾರಣೆಗೆ ಕ್ರಮ ಕೈಗೊಂಡಿದೆ: ನಿರ್ಮಲಾ ಸೀತಾರಾಮನ್​​

ಆರೋಗ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ನಾನು ಬಜೆಟ್​ ಭಾಷಣದಲ್ಲಿ ಹೇಳಿದ್ದೆ. ಇದು ಅನಾರೋಗ್ಯ ತಡೆಗಟ್ಟುವುದನ್ನು ಸೂಚಿಸುತ್ತದೆ. ಯೋಗಕ್ಷೇಮವನ್ನೂ ಸಹ ಸೂಚಿಸುತ್ತದೆ ಎಂದು ಇದೇ ವೇಳೆ ಸಚಿವರು ಹೇಳಿದರು.

ರಕ್ಷಣಾ, ಆರೋಗ್ಯ ಸೇರಿದಂತೆ ವಿವಿಧ ವಲಯಗಳಿಗೆ ಈ ಬಾರಿಯ ಬಜೆಟ್​ನಲ್ಲಿ ನೀಡಿರುವ ಅನುದಾನದ ಕುರಿತ ಪ್ರತಿಪಕ್ಷಗಳ ಪ್ರಶ್ನೆಗಳಿಗೆ ನಿರ್ಮಲಾ ಸೀತಾರಾಮನ್​​ ಉತ್ತರಿಸಿದ್ದಾರೆ.

ನವದೆಹಲಿ: ಭಾರತವು ಆತ್ಮನಿರ್ಭರವಾಗಲು ಈ ಬಜೆಟ್​ ವೇದಿಕೆ ಕಲ್ಪಿಸಿದೆ. ದೇಶದ ಪುನಶ್ಚೇತನಕ್ಕಾಗಿ ಬಜೆಟ್ ಮಂಡಿಸಲಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​​ ಹೇಳಿದ್ದಾರೆ.

2021-22ನೇ ಸಾಲಿನ ಬಜೆಟ್​ ಆಯವ್ಯಯದ ಬಗ್ಗೆ ಇಂದಿನ ಲೋಕಸಭಾ ಕಲಾಪದಲ್ಲಿ ಮಾತನಾಡುತ್ತಿರುವ ಅವರು, ಈ ಬಾರಿಯ ಬಜೆಟ್​ ಹಾಗೂ ಕೇಂದ್ರ ಸರ್ಕಾರವು ಬಂಡವಾಳಶಾಹಿಗಳ ಪರವಾಗಿದೆ ಎಂದು ಆರೋಪಿಸಿರುವ ಪ್ರತಿಪಕ್ಷಗಳ ನಾಯಕರಿಗೆ ಉತ್ತರ ನೀಡಿದ್ದಾರೆ.

ನಮ್ಮ ಬಂಡವಾಳಶಾಹಿಗಳು ಯಾರು? ಜನಸಾಮಾನ್ಯರೇ ಇಲ್ಲಿ ಬಂಡವಾಳಶಾಹಿಗಳು. ಅವರು ಬಹುಶಃ ಜನರಿಂದ ತಿರಸ್ಕರಿಸಲ್ಪಟ್ಟಿರುವ ಹಾಗೂ ಓಪನ್​ ಟೆಂಡರ್‌, ಜಾಗತಿಕ ಟೆಂಡರ್​ಗಳಿಗೆ ಆಹ್ವಾನ ನೀಡದ ಪಕ್ಷದ ನೆರಳಿನಲ್ಲಿ ಅಡಗಿದ್ದಾರೆ. ಪಿಎಂ ಸ್ವಾನಿಧಿ ಯೋಜನೆಯ ಲಾಭ ಬಂಡವಾಳಶಾಹಿಗಳಿಗೆ ತಲುಪುವುದಿಲ್ಲ. ಸಾಮಾನ್ಯ ಜನರಿಗೆ ತಲುಪುತ್ತದೆ ಎಂದು ಕಾಂಗ್ರೆಸ್​ಗೆ ಸೀತಾರಾಮನ್​ ಟಾಂಗ್​ ನೀಡಿದರು.

ಇದನ್ನೂ ಓದಿ: ಕೊರೊನಾ ನಡುವೆಯೂ ಸರ್ಕಾರ ಆರ್ಥಿಕ ಸುಧಾರಣೆಗೆ ಕ್ರಮ ಕೈಗೊಂಡಿದೆ: ನಿರ್ಮಲಾ ಸೀತಾರಾಮನ್​​

ಆರೋಗ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ನಾನು ಬಜೆಟ್​ ಭಾಷಣದಲ್ಲಿ ಹೇಳಿದ್ದೆ. ಇದು ಅನಾರೋಗ್ಯ ತಡೆಗಟ್ಟುವುದನ್ನು ಸೂಚಿಸುತ್ತದೆ. ಯೋಗಕ್ಷೇಮವನ್ನೂ ಸಹ ಸೂಚಿಸುತ್ತದೆ ಎಂದು ಇದೇ ವೇಳೆ ಸಚಿವರು ಹೇಳಿದರು.

ರಕ್ಷಣಾ, ಆರೋಗ್ಯ ಸೇರಿದಂತೆ ವಿವಿಧ ವಲಯಗಳಿಗೆ ಈ ಬಾರಿಯ ಬಜೆಟ್​ನಲ್ಲಿ ನೀಡಿರುವ ಅನುದಾನದ ಕುರಿತ ಪ್ರತಿಪಕ್ಷಗಳ ಪ್ರಶ್ನೆಗಳಿಗೆ ನಿರ್ಮಲಾ ಸೀತಾರಾಮನ್​​ ಉತ್ತರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.