ETV Bharat / bharat

ಆಪರೇಷನ್​ ಕಮಲ ಆರೋಪ: 22ಕ್ಕೆ ತುರ್ತು ಅಧಿವೇಶನ ಕರೆದ ಪಂಜಾಬ್​ ಸಿಎಂ, ವಿಶ್ವಾಸಮತ ಯಾಚನೆ

author img

By

Published : Sep 19, 2022, 3:53 PM IST

ಪಂಜಾಬ್​ ಆಪ್​ ಸರ್ಕಾರವನ್ನು ಕೆಡವಲು ಬಿಜೆಪಿ ತಂತ್ರ ರೂಪಿಸುತ್ತಿದೆ ಎಂಬ ಆರೋಪ ಮಾಡಿರುವ ಸಿಎಂ ಭಗವಂತ್​ ಸಿಂಗ್​ ಮಾನ್​ ಅವರು ಇದೇ 22 ರಂದು ತುರ್ತು ವಿಶೇಷ ಅಧಿವೇಶನ ಕರೆದಿದ್ದು, ವಿಶ್ವಾಸಮತ ಯಾಚನೆ ಮಾಡಲಿದ್ದಾರೆ.

operation-lotus
ಆಪರೇಷನ್​ ಕಮಲ ಆರೋಪ

ಚಂಡೀಗಢ: ಪಂಜಾಬ್​ ಆಪ್​ ಸರ್ಕಾರವನ್ನು ಕೆಡವಲು ಬಿಜೆಪಿ ಯತ್ನಿಸುತ್ತಿದೆ. ಇದಕ್ಕಾಗಿ ಆಪ್​ ಶಾಸಕರನ್ನು ಖರೀದಿ ಮಾಡಲು ಮುಂದಾಗಿದೆ ಎಂಬ ಆರೋಪದ ಮಧ್ಯೆಯೇ ಮುಖ್ಯಮಂತ್ರಿ ಭಗವಂತ್​ ಮಾನ್​ ಸರ್ಕಾರ ಸೆಪ್ಟೆಂಬರ್​ 22 ರಂದು ವಿಧಾನಮಂಡಲ ವಿಶೇಷ ಅಧಿವೇಶನ ಕರೆದಿದ್ದು, ವಿಶ್ವಾಸಮತ ಯಾಚನೆ ಮಾಡಲಿದ್ದಾರೆ.

ವಿಧಾನಮಂಡಲದ ವಿಶೇಷ ಅಧಿವೇಶನವು ಸೆಪ್ಟೆಂಬರ್ 22 ರಂದು ನಡೆಯಲಿದೆ. ಆಪ್​ ಸರ್ಕಾರ ವಿಶ್ವಾಸಮತ ಯಾಚನೆ ಮಾಡಲಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಟ್ವೀಟ್​ ಮಾಡಿದ್ದಾರೆ.

ಪಂಜಾಬ್​ ಆಪ್​ ಸರ್ಕಾರವನ್ನು ಕೆಡವಲು ಬಿಜೆಪಿ ತಂತ್ರ ರೂಪಿಸುತ್ತಿದ್ದು, ಅದರ ಭಾಗವಾಗಿ ನಮ್ಮ ಶಾಸಕರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದೆ. ಹಣದ ಆಮಿಷವೊಡ್ಡಿ ಪಂಜಾಬ್​ ಜನರು ಮೆಚ್ಚಿ ರಚಿಸಿರುವ ನೆಚ್ಚಿನ ಸರ್ಕಾರವನ್ನು ಬೀಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಸಿಎಂ ಭಗವಂತ್ ಮಾನ್ ಆರೋಪಿಸಿದ್ದಾರೆ.

ಜನ ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ಜನರ ಈ ನಂಬಿಕೆಯನ್ನು ನಾವು ಮತ್ತು ನಮ್ಮ ಶಾಸಕರು ಉಳಿಸಿಕೊಳ್ಳುತ್ತೇವೆ. ಹೀಗಾಗಿ ಸೆ.22ರಂದು ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಲಾಗಿದೆ. ಈ ವೇಳೆ, ವಿಶ್ವಾಸಮತ ಯಾಚನೆ ಮಾಡಲಾಗುತ್ತದೆ. ಇದರಲ್ಲಿ ಗೆದ್ದು ನಮ್ಮ ಶಕ್ತಿ ತೋರಿಸಲಾಗುವುದು ಎಂದು ಹೇಳಿದರು.

ಪಂಜಾಬ್​ ಸಚಿವರಿಂದ ಆರೋಪ: ಇದಕ್ಕೂ ಮೊದಲು ಆಪ್​ ಶಾಸಕರನ್ನು ಬಿಜೆಪಿ ಖರೀದಿಗೆ ಮುಂದಾಗಿದೆ ಎಂದು ಎಎಪಿ ನಾಯಕ ಮತ್ತು ಪಂಜಾಬ್ ಹಣಕಾಸು ಸಚಿವ ಹರ್ಪಾಲ್ ಚೀಮಾ ಕೂಡ ಆರೋಪ ಮಾಡಿದ್ದರು. ಎಎಪಿಯ 10 ಶಾಸಕರನ್ನು ಕುದುರೆ ವ್ಯಾಪಾರ ಮಾಡಲು ಅವರನ್ನು ಸಂಪರ್ಕಿಸಲಾಗಿದೆ.

ಆಪ್​ ಸರ್ಕಾರ ಉರುಳಿಸಲು 1,375 ಕೋಟಿ ರೂಪಾಯಿ ಆಫರ್​ ನೀಡಲಾಗಿದೆ. ಪ್ರತಿ ಶಾಸಕರಿಗೆ 25 ಕೋಟಿ ರೂ. ಆಫರ್​ ನೀಡಲಾಗಿದೆ. ಬಿಜೆಪಿ ಈ ಹಿಂದೆ ಗೋವಾ, ಕರ್ನಾಟಕ, ಮಹಾರಾಷ್ಟ್ರ ಮತ್ತು ಅರುಣಾಚಲ ಪ್ರದೇಶದಲ್ಲಿ ಇದೇ ರೀತಿ ಮಾಡಿದೆ. ಈಗ ಪಂಜಾಬ್‌ನಲ್ಲಿಯೂ ಸರ್ಕಾರವನ್ನು ಕಿತ್ತೊಗೆಯಲು ಪ್ಲಾನ್​ ಮಾಡಿದೆ ಎಂದು ಗಂಭೀರ ಆರೋಪ ಮಾಡಿದ್ದರು.

ದೆಹಲಿಯಲ್ಲೂ ಕೇಳಿ ಬಂದಿದ್ದ ಆರೋಪ: ಈ ಮೊದಲು ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಅವರು ಕೂಡ ತಮ್ಮ ಸರ್ಕಾರವನ್ನು ಭಗ್ನ ಮಾಡಲು ಬಿಜೆಪಿ ದೆಹಲಿ ಆಪ್​ ಶಾಸಕರನ್ನು ಸಂಪರ್ಕಿಸಿ ಹಣದ ಆಮಿಷ ಒಡ್ಡಿದೆ ಎಂದು ಆರೋಪಿಸಿ, ತುರ್ತು ಅಧಿವೇಶನ ಕರೆದು ವಿಶ್ವಾಸಮತ ಯಾಚನೆ ಮಾಡಿ ಗೆದ್ದಿದ್ದರು.

ಓದಿ: ಸರ್ಕಾರ ಕೆಡವಲು ಬಿಜೆಪಿಯಿಂದ ₹1375 ಕೋಟಿ ಆಫರ್​: ಪಂಜಾಬ್​ ಸಚಿವ ಗಂಭೀರ ಆರೋಪ

ಚಂಡೀಗಢ: ಪಂಜಾಬ್​ ಆಪ್​ ಸರ್ಕಾರವನ್ನು ಕೆಡವಲು ಬಿಜೆಪಿ ಯತ್ನಿಸುತ್ತಿದೆ. ಇದಕ್ಕಾಗಿ ಆಪ್​ ಶಾಸಕರನ್ನು ಖರೀದಿ ಮಾಡಲು ಮುಂದಾಗಿದೆ ಎಂಬ ಆರೋಪದ ಮಧ್ಯೆಯೇ ಮುಖ್ಯಮಂತ್ರಿ ಭಗವಂತ್​ ಮಾನ್​ ಸರ್ಕಾರ ಸೆಪ್ಟೆಂಬರ್​ 22 ರಂದು ವಿಧಾನಮಂಡಲ ವಿಶೇಷ ಅಧಿವೇಶನ ಕರೆದಿದ್ದು, ವಿಶ್ವಾಸಮತ ಯಾಚನೆ ಮಾಡಲಿದ್ದಾರೆ.

ವಿಧಾನಮಂಡಲದ ವಿಶೇಷ ಅಧಿವೇಶನವು ಸೆಪ್ಟೆಂಬರ್ 22 ರಂದು ನಡೆಯಲಿದೆ. ಆಪ್​ ಸರ್ಕಾರ ವಿಶ್ವಾಸಮತ ಯಾಚನೆ ಮಾಡಲಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಟ್ವೀಟ್​ ಮಾಡಿದ್ದಾರೆ.

ಪಂಜಾಬ್​ ಆಪ್​ ಸರ್ಕಾರವನ್ನು ಕೆಡವಲು ಬಿಜೆಪಿ ತಂತ್ರ ರೂಪಿಸುತ್ತಿದ್ದು, ಅದರ ಭಾಗವಾಗಿ ನಮ್ಮ ಶಾಸಕರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದೆ. ಹಣದ ಆಮಿಷವೊಡ್ಡಿ ಪಂಜಾಬ್​ ಜನರು ಮೆಚ್ಚಿ ರಚಿಸಿರುವ ನೆಚ್ಚಿನ ಸರ್ಕಾರವನ್ನು ಬೀಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಸಿಎಂ ಭಗವಂತ್ ಮಾನ್ ಆರೋಪಿಸಿದ್ದಾರೆ.

ಜನ ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ಜನರ ಈ ನಂಬಿಕೆಯನ್ನು ನಾವು ಮತ್ತು ನಮ್ಮ ಶಾಸಕರು ಉಳಿಸಿಕೊಳ್ಳುತ್ತೇವೆ. ಹೀಗಾಗಿ ಸೆ.22ರಂದು ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಲಾಗಿದೆ. ಈ ವೇಳೆ, ವಿಶ್ವಾಸಮತ ಯಾಚನೆ ಮಾಡಲಾಗುತ್ತದೆ. ಇದರಲ್ಲಿ ಗೆದ್ದು ನಮ್ಮ ಶಕ್ತಿ ತೋರಿಸಲಾಗುವುದು ಎಂದು ಹೇಳಿದರು.

ಪಂಜಾಬ್​ ಸಚಿವರಿಂದ ಆರೋಪ: ಇದಕ್ಕೂ ಮೊದಲು ಆಪ್​ ಶಾಸಕರನ್ನು ಬಿಜೆಪಿ ಖರೀದಿಗೆ ಮುಂದಾಗಿದೆ ಎಂದು ಎಎಪಿ ನಾಯಕ ಮತ್ತು ಪಂಜಾಬ್ ಹಣಕಾಸು ಸಚಿವ ಹರ್ಪಾಲ್ ಚೀಮಾ ಕೂಡ ಆರೋಪ ಮಾಡಿದ್ದರು. ಎಎಪಿಯ 10 ಶಾಸಕರನ್ನು ಕುದುರೆ ವ್ಯಾಪಾರ ಮಾಡಲು ಅವರನ್ನು ಸಂಪರ್ಕಿಸಲಾಗಿದೆ.

ಆಪ್​ ಸರ್ಕಾರ ಉರುಳಿಸಲು 1,375 ಕೋಟಿ ರೂಪಾಯಿ ಆಫರ್​ ನೀಡಲಾಗಿದೆ. ಪ್ರತಿ ಶಾಸಕರಿಗೆ 25 ಕೋಟಿ ರೂ. ಆಫರ್​ ನೀಡಲಾಗಿದೆ. ಬಿಜೆಪಿ ಈ ಹಿಂದೆ ಗೋವಾ, ಕರ್ನಾಟಕ, ಮಹಾರಾಷ್ಟ್ರ ಮತ್ತು ಅರುಣಾಚಲ ಪ್ರದೇಶದಲ್ಲಿ ಇದೇ ರೀತಿ ಮಾಡಿದೆ. ಈಗ ಪಂಜಾಬ್‌ನಲ್ಲಿಯೂ ಸರ್ಕಾರವನ್ನು ಕಿತ್ತೊಗೆಯಲು ಪ್ಲಾನ್​ ಮಾಡಿದೆ ಎಂದು ಗಂಭೀರ ಆರೋಪ ಮಾಡಿದ್ದರು.

ದೆಹಲಿಯಲ್ಲೂ ಕೇಳಿ ಬಂದಿದ್ದ ಆರೋಪ: ಈ ಮೊದಲು ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಅವರು ಕೂಡ ತಮ್ಮ ಸರ್ಕಾರವನ್ನು ಭಗ್ನ ಮಾಡಲು ಬಿಜೆಪಿ ದೆಹಲಿ ಆಪ್​ ಶಾಸಕರನ್ನು ಸಂಪರ್ಕಿಸಿ ಹಣದ ಆಮಿಷ ಒಡ್ಡಿದೆ ಎಂದು ಆರೋಪಿಸಿ, ತುರ್ತು ಅಧಿವೇಶನ ಕರೆದು ವಿಶ್ವಾಸಮತ ಯಾಚನೆ ಮಾಡಿ ಗೆದ್ದಿದ್ದರು.

ಓದಿ: ಸರ್ಕಾರ ಕೆಡವಲು ಬಿಜೆಪಿಯಿಂದ ₹1375 ಕೋಟಿ ಆಫರ್​: ಪಂಜಾಬ್​ ಸಚಿವ ಗಂಭೀರ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.