ETV Bharat / bharat

ಕೋವಿಡ್ ಔಷಧಗಳನ್ನು ಅಗತ್ಯ ಸರಕಾಗಿ ತಕ್ಷಣ ಘೋಷಿಸಿ: ಕೇಂದ್ರ ಆರೋಗ್ಯ ಸಚಿವರಿಗೆ ಛತ್ತೀಸ್​​ಗಢ ಸಿಎಂ ಮನವಿ

author img

By

Published : Apr 29, 2021, 7:28 PM IST

ಛತ್ತೀಸ್​​ಗಢ ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್‌ಗೆ ಪತ್ರ ಬರೆದು ಕೋವಿಡ್ ಲಸಿಕೆ ಹಾಗೂ ಔಷಧಗಳನ್ನು ಅಗತ್ಯ ಸರಕುಗಳೆಂದು ಘೋಷಿಸುವಂತೆ ಮನವಿ ಮಾಡಿದ್ದಾರೆ.

ಕೇಂದ್ರ ಆರೋಗ್ಯ ಸಚಿವರಿಗೆ ಛತ್ತೀಸ್​​ಗಢ ಸಿಎಂ ಮನವಿ

ನವದೆಹಲಿ: ರೆಮ್​​​​ಡಿಸಿವಿರ್ ಇಂಜೆಕ್ಷನ್, ಐವರ್ಮೆಕ್ಟಿನ್ ಟ್ಯಾಬ್ಲೆಟ್‌ಗಳು, ಟೊಸಿಲಿಜುಮಾಬ್ ಇಂಜೆಕ್ಷನ್, ಫವಿಪಿರಾವೀರ್ ಕ್ಯಾಪ್ಸುಲ್, ಎನೋಕ್ಸಪರಿನ್ ಇಂಜೆಕ್ಷನ್ ಮತ್ತು ಡೆಕ್ಸಮೆಥಾಸೊನ್ ಟ್ಯಾಬ್ಲೆಟ್ ಅನ್ನು ಅಗತ್ಯ ಸರಕುಗಳೆಂದು ತಕ್ಷಣವೇ ಘೋಷಿಸಬೇಕೆಂದು ಛತ್ತೀಸ್​​ಗಢ ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್‌ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ರೆಮ್​​ಡಿಸಿವಿರ್ ಇಂಜೆಕ್ಷನ್, ಐವರ್ಮೆಕ್ಟಿನ್ ಮಾತ್ರೆಗಳು, ಟೊಸಿಲಿಜುಮಾಬ್ ಇಂಜೆಕ್ಷನ್, ಫವಿಪಿರಾವೀರ್ ಕ್ಯಾಪ್ಸುಲ್, ಎನೋಕ್ಸಪರಿನ್ ಇಂಜೆಕ್ಷನ್ ಮತ್ತು ಡೆಕ್ಸಮೆಥಾಸೊನ್ ಟ್ಯಾಬ್ಲೆಟ್​​ಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಬಾಗೆಲ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಬೇಡಿಕೆಯ ಹೆಚ್ಚಳವು ಈ ಔಷಧಗಳ ಸಂಗ್ರಹಣೆ ಮತ್ತು ಕಾಳಸಂತೆಯಲ್ಲಿ ಮಾರಾಟಕ್ಕೆ ಕಾರಣವಾಗಿದೆ ಎಂದಿದ್ದಾರೆ.

ಆಸ್ಪತ್ರೆಗಳಲ್ಲಿ ಈ ಔಷಧಗಳ ವಿತರಣೆ ಮತ್ತು ಬಳಕೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವ ಉದ್ದೇಶಕ್ಕಾಗಿ ವಿಶೇಷ ಕಾರ್ಯಪಡೆ ರಚಿಸಲಾಗಿದೆ. ಅಲ್ಲದೇ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸುವ ಕಾರ್ಯವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಆಪತ್ಭಾಂದವ ವ್ಯಾಕ್ಸಿನ್​: ಒಂದು ಡೋಸ್​ ಲಸಿಕೆ ಪಡೆದ್ರೆ ಸೋಂಕಿನ ವೇಗ ಅರ್ಧ ಕ್ಷೀಣ - ವರದಿ

ನವದೆಹಲಿ: ರೆಮ್​​​​ಡಿಸಿವಿರ್ ಇಂಜೆಕ್ಷನ್, ಐವರ್ಮೆಕ್ಟಿನ್ ಟ್ಯಾಬ್ಲೆಟ್‌ಗಳು, ಟೊಸಿಲಿಜುಮಾಬ್ ಇಂಜೆಕ್ಷನ್, ಫವಿಪಿರಾವೀರ್ ಕ್ಯಾಪ್ಸುಲ್, ಎನೋಕ್ಸಪರಿನ್ ಇಂಜೆಕ್ಷನ್ ಮತ್ತು ಡೆಕ್ಸಮೆಥಾಸೊನ್ ಟ್ಯಾಬ್ಲೆಟ್ ಅನ್ನು ಅಗತ್ಯ ಸರಕುಗಳೆಂದು ತಕ್ಷಣವೇ ಘೋಷಿಸಬೇಕೆಂದು ಛತ್ತೀಸ್​​ಗಢ ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್‌ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ರೆಮ್​​ಡಿಸಿವಿರ್ ಇಂಜೆಕ್ಷನ್, ಐವರ್ಮೆಕ್ಟಿನ್ ಮಾತ್ರೆಗಳು, ಟೊಸಿಲಿಜುಮಾಬ್ ಇಂಜೆಕ್ಷನ್, ಫವಿಪಿರಾವೀರ್ ಕ್ಯಾಪ್ಸುಲ್, ಎನೋಕ್ಸಪರಿನ್ ಇಂಜೆಕ್ಷನ್ ಮತ್ತು ಡೆಕ್ಸಮೆಥಾಸೊನ್ ಟ್ಯಾಬ್ಲೆಟ್​​ಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಬಾಗೆಲ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಬೇಡಿಕೆಯ ಹೆಚ್ಚಳವು ಈ ಔಷಧಗಳ ಸಂಗ್ರಹಣೆ ಮತ್ತು ಕಾಳಸಂತೆಯಲ್ಲಿ ಮಾರಾಟಕ್ಕೆ ಕಾರಣವಾಗಿದೆ ಎಂದಿದ್ದಾರೆ.

ಆಸ್ಪತ್ರೆಗಳಲ್ಲಿ ಈ ಔಷಧಗಳ ವಿತರಣೆ ಮತ್ತು ಬಳಕೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವ ಉದ್ದೇಶಕ್ಕಾಗಿ ವಿಶೇಷ ಕಾರ್ಯಪಡೆ ರಚಿಸಲಾಗಿದೆ. ಅಲ್ಲದೇ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸುವ ಕಾರ್ಯವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಆಪತ್ಭಾಂದವ ವ್ಯಾಕ್ಸಿನ್​: ಒಂದು ಡೋಸ್​ ಲಸಿಕೆ ಪಡೆದ್ರೆ ಸೋಂಕಿನ ವೇಗ ಅರ್ಧ ಕ್ಷೀಣ - ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.