ETV Bharat / bharat

ಬ್ಯಾಂಕ್​ನಿಂದ 1.94 ಕೋಟಿ ದರೋಡೆ.. ಆರೋಪಿಗಳ ಹೆಡೆಮುರಿ ಕಟ್ಟಿದ ಖಾಕಿ!

ತೆಲಂಗಾಣ ಸಹಕಾರಿ ಬ್ಯಾಂಕ್​ನಲ್ಲಿ 1.94 ಕೋಟಿ ರೂಪಾಯಿ ದರೋಡೆ ಮಾಡಿದ್ದ ಗ್ಯಾಂಗ್​ ಅನ್ನು ಪೊಲೀಸರು ಬಂಧಿಸಿದ್ದಾರೆ. ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಖಾಕಿ ಬಲೆ ಬೀಸಿದೆ.

author img

By

Published : Jul 29, 2021, 7:42 AM IST

ಆರೋಪಿಗಳ ಹೆಡೆಮುರಿ ಕಟ್ಟಿದ ಖಾಕಿ
ಆರೋಪಿಗಳ ಹೆಡೆಮುರಿ ಕಟ್ಟಿದ ಖಾಕಿ

ಹೈದರಾಬಾದ್​: ಇಲ್ಲಿನ ಕೋಟಿಯಲ್ಲಿರುವ ತೆಲಂಗಾಣ ಸಹಕಾರಿ ಬ್ಯಾಂಕಿನಲ್ಲಿ 1.94 ಕೋಟಿ ರೂಪಾಯಿ ದರೋಡೆ ಹಿಂದಿನ ಖದೀಮನನ್ನು ಪೊಲೀಸರು ಗುರುತಿಸಿದ್ದಾರೆ. ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಹೈದರಾಬಾದ್​ಗೆ ಬಂದಿದ್ದ ನೈಜೀರಿಯಾದ ವಿಲ್ಸನ್​​ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬ್ಯಾಂಕ್​ನಲ್ಲಿ ಸರ್ವರ್ ಡೌನ್​ ಆಗಿದೆ ಎಂದು ತಿಳಿದ ಆರೋಪಿ ವಿಲ್ಸನ್, ತನ್ನ ಬುದ್ಧಿವಂತಿಕೆಯಿಂದ ಹಣ ದೋಚಿದ್ದಾನೆ ಎನ್ನಲಾಗಿದೆ.

ಇತ್ತೀಚೆಗೆ ತೆಲಂಗಾಣದಲ್ಲಿ ನೈಜೀರಿಯಾ ಪ್ರಜೆಗಳ ಹಾವಳಿ ಹೆಚ್ಚಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ಬಹುತೇಕ ಅಪರಾಧ ಕೃತ್ಯಗಳಲ್ಲಿ ಇವರೇ ಭಾಗಿಯಾಗಿರುತ್ತಾರೆ ಎನ್ನಲಾಗಿದೆ. ಈ ಹಿಂದೆ ಕೇವಲ ಡ್ರಗ್ಸ್​ ಜಾಲದಲ್ಲಿ ಮಾತ್ರ ನೈಜೀರಿಯನ್ನರ ಹೆಸರು ಕೇಳಿ ಬರುತ್ತಿತ್ತು. ಆದರೆ, ಈಗ ಎಲ್ಲಾ ಕ್ಷೇತ್ರಗಳಲ್ಲಿಯೂ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದಾರೆ. ಆಮಿಷವೊಡ್ಡಿ ಜನರನ್ನು ಆಕರ್ಷಿಸಿ, ಹಣ ದರೋಡೆ ಮಾಡುತ್ತಾರೆ.

ವಿಲ್ಸನ್​ ವಿದ್ಯಾಭ್ಯಾಸಕ್ಕಾಗಿ ಹೈದರಾಬಾದ್​ನಲ್ಲಿರುವ ಕೋಟಿಗೆ ಬಂದಿದ್ದ. ಈ ವೇಳೆ, ಬ್ಯಾಂಕ್​ನ ಸರ್ವರ್ ಡೌನ್ ಆಗಿರೋದನ್ನು ಖಚಿತಪಡಿಸಿಕೊಂಡು, ಮೂವರ ತಂಡ ರಚಿಸಿದ. ಆ ಮೂಲಕ ಒಬ್ಬರಿಂದ ಮತ್ತೊಬ್ಬರ ಅಕೌಂಟ್​ಗೆ ಹಣ ವರ್ಗಾವಣೆ ಮಾಡಿದ್ರು.

ಘಟನೆ ಹಿನ್ನೆಲೆ

ಜುಲೈ 7 ರಂದು ಯುವತಿ ಖಾತೆಗೆ ನೆಟ್​​​ ಬ್ಯಾಂಕಿಂಗ್ ಮೂಲಕ 1.94 ಕೋಟಿ ರೂಪಾಯಿ ಜಮಾ ಮಾಡಿದ್ರು. ಬಳಿಕ ಆ ಹಣವನ್ನು ಜುಲೈ 12 ರಂದು ಹರಿಯಾಣ, ಉತ್ತರ ಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕರ್ನಾಟಕ ಸೇರಿ 102 ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ರು. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಸೈಬರ್ ಠಾಣೆಗೆ ದೂರು ನೀಡಿದ್ರು. ಪೊಲೀಸರು ತನಿಖೆ ಕೈಗೊಂಡು ಯಾಸಿನ್ ಭಾಷಾ ಮತ್ತು ಮೊಹಮ್ಮದ್ ರಫಿ ಅವರನ್ನು ಬಂಧಿಸಿದ್ದಾರೆ. ಯುವತಿಗಾಗಿ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಹೈದರಾಬಾದ್​: ಇಲ್ಲಿನ ಕೋಟಿಯಲ್ಲಿರುವ ತೆಲಂಗಾಣ ಸಹಕಾರಿ ಬ್ಯಾಂಕಿನಲ್ಲಿ 1.94 ಕೋಟಿ ರೂಪಾಯಿ ದರೋಡೆ ಹಿಂದಿನ ಖದೀಮನನ್ನು ಪೊಲೀಸರು ಗುರುತಿಸಿದ್ದಾರೆ. ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಹೈದರಾಬಾದ್​ಗೆ ಬಂದಿದ್ದ ನೈಜೀರಿಯಾದ ವಿಲ್ಸನ್​​ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬ್ಯಾಂಕ್​ನಲ್ಲಿ ಸರ್ವರ್ ಡೌನ್​ ಆಗಿದೆ ಎಂದು ತಿಳಿದ ಆರೋಪಿ ವಿಲ್ಸನ್, ತನ್ನ ಬುದ್ಧಿವಂತಿಕೆಯಿಂದ ಹಣ ದೋಚಿದ್ದಾನೆ ಎನ್ನಲಾಗಿದೆ.

ಇತ್ತೀಚೆಗೆ ತೆಲಂಗಾಣದಲ್ಲಿ ನೈಜೀರಿಯಾ ಪ್ರಜೆಗಳ ಹಾವಳಿ ಹೆಚ್ಚಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ಬಹುತೇಕ ಅಪರಾಧ ಕೃತ್ಯಗಳಲ್ಲಿ ಇವರೇ ಭಾಗಿಯಾಗಿರುತ್ತಾರೆ ಎನ್ನಲಾಗಿದೆ. ಈ ಹಿಂದೆ ಕೇವಲ ಡ್ರಗ್ಸ್​ ಜಾಲದಲ್ಲಿ ಮಾತ್ರ ನೈಜೀರಿಯನ್ನರ ಹೆಸರು ಕೇಳಿ ಬರುತ್ತಿತ್ತು. ಆದರೆ, ಈಗ ಎಲ್ಲಾ ಕ್ಷೇತ್ರಗಳಲ್ಲಿಯೂ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದಾರೆ. ಆಮಿಷವೊಡ್ಡಿ ಜನರನ್ನು ಆಕರ್ಷಿಸಿ, ಹಣ ದರೋಡೆ ಮಾಡುತ್ತಾರೆ.

ವಿಲ್ಸನ್​ ವಿದ್ಯಾಭ್ಯಾಸಕ್ಕಾಗಿ ಹೈದರಾಬಾದ್​ನಲ್ಲಿರುವ ಕೋಟಿಗೆ ಬಂದಿದ್ದ. ಈ ವೇಳೆ, ಬ್ಯಾಂಕ್​ನ ಸರ್ವರ್ ಡೌನ್ ಆಗಿರೋದನ್ನು ಖಚಿತಪಡಿಸಿಕೊಂಡು, ಮೂವರ ತಂಡ ರಚಿಸಿದ. ಆ ಮೂಲಕ ಒಬ್ಬರಿಂದ ಮತ್ತೊಬ್ಬರ ಅಕೌಂಟ್​ಗೆ ಹಣ ವರ್ಗಾವಣೆ ಮಾಡಿದ್ರು.

ಘಟನೆ ಹಿನ್ನೆಲೆ

ಜುಲೈ 7 ರಂದು ಯುವತಿ ಖಾತೆಗೆ ನೆಟ್​​​ ಬ್ಯಾಂಕಿಂಗ್ ಮೂಲಕ 1.94 ಕೋಟಿ ರೂಪಾಯಿ ಜಮಾ ಮಾಡಿದ್ರು. ಬಳಿಕ ಆ ಹಣವನ್ನು ಜುಲೈ 12 ರಂದು ಹರಿಯಾಣ, ಉತ್ತರ ಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕರ್ನಾಟಕ ಸೇರಿ 102 ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ರು. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಸೈಬರ್ ಠಾಣೆಗೆ ದೂರು ನೀಡಿದ್ರು. ಪೊಲೀಸರು ತನಿಖೆ ಕೈಗೊಂಡು ಯಾಸಿನ್ ಭಾಷಾ ಮತ್ತು ಮೊಹಮ್ಮದ್ ರಫಿ ಅವರನ್ನು ಬಂಧಿಸಿದ್ದಾರೆ. ಯುವತಿಗಾಗಿ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.