ETV Bharat / bharat

ಪ್ರಚೋದನಕಾರಿ ಎಫ್​ಬಿ​ ಪೋಸ್ಟ್​ ಕೇಸ್.. ಎನ್​ಐಎಯಿಂದ ತಮಿಳುನಾಡಿನ ನಾಲ್ಕು ಸ್ಥಳಗಳ ಮೇಲೆ ದಾಳಿ - ಮೊಹಮ್ಮದ್​ ಇಕ್ಬಾಲ್

ವಿವಿಧ ಧಾರ್ಮಿಕ ಗುಂಪುಗಳ ನಡುವೆ ಕೋಮು ಅಸಮಾನತೆ ಉಂಟು ಮಾಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಮತ್ತು ಪ್ರಚೋದನೆ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್​ಐಎ) ನಾಲ್ಕು ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿದೆ.

NIA
NIA
author img

By

Published : May 16, 2021, 7:01 PM IST

ಚೆನ್ನೈ(ತಮಿಳುನಾಡು): ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್​ಐಎ) ಭಾನುವಾರ ತಮಿಳುನಾಡಿನ ನಾಲ್ಕು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದೆ. ಐಸಿಸ್​ ಸಿದ್ಧಾಂತ ಪ್ರತಿಪಾದಿಸುವ ಉಗ್ರಗಾಮಿ ಆರೋಪಿ ಮೊಹಮ್ಮದ್ ಇಕ್ಬಾಲ್ ಮತ್ತು ಹಿಜ್ಬ್​-ಉಟ್​​​-ತಹ್ರಿರ್(Hizb-Ut-Tahrir)​​ ಸಂಘಟನೆ ಫೇಸ್​ಬುಕ್​​​ ಪೋಸ್ಟ್​ಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ಇಸ್ಲಾಮಿಕ್​ ಸ್ಟೇಟ್​​ ಭಯೋತ್ಪಾಕದ ಗುಂಪು ಮತ್ತು ಉಗ್ರ ಸಂಘಟನೆ ​ಹಿಜ್ಬ್-ಉಟ್-ತಹ್ರಿರ್​ ಸಿದ್ಧಾಂತ ಪ್ರತಿಪಾದಿಸುವ ಫೇಸ್​ಬುಕ್​ ಪೋಸ್ಟ್​​​ಗೆ ಸಂಬಂಧಿಸಿದಂತೆ ಈ ಶೋಧ ಕಾರ್ಯ ನಡೆಸಲಾಗುತ್ತಿದ್ದು, ಮಧುರೈನ ನಾಲ್ಕು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆದಿದೆ.

ಇದನ್ನೂ ಓದಿ: ಭಾರತ, ಬ್ರಿಟನ್​​ನಲ್ಲಿ ಪತ್ತೆಯಾಗಿರುವ ಕೋವಿಡ್​ ವಿರುದ್ಧ ಕೋವ್ಯಾಕ್ಸಿನ್​ ಪರಿಣಾಮಕಾರಿ

ಕಳೆದ ವರ್ಷ ಡಿಸೆಂಬರ್​ನಲ್ಲಿ ಬಂಧಿಸಲ್ಪಟ್ಟ ಮಧುರೈ ನಿವಾಸಿ ಮೊಹಮ್ಮದ್​ ಇಕ್ಬಾಲ್​​ ಕೆಲ ಪೋಸ್ಟ್​ಗಳನ್ನು​ ಫೇಸ್​ಬುಕ್​​ನಲ್ಲಿ ಅಪ್​ಲೋಡ್​ ಮಾಡಿದ್ದ ಎಂದು ಎನ್​ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸೋಷಿಯಲ್​ ಮೀಡಿಯಾ ಪೋಸ್ಟ್​​ಗಳಲ್ಲಿ ಉಗ್ರಗಾಮಿ ಇಕ್ಬಾಲ್​, ಐಸಿಸಿ ಉಗ್ರರ ಸಿದ್ಧಾಂತ ಪ್ರತಿಪಾದಿಸಿ ದುಷ್ಕೃತ್ಯಗಳಿಗೆ ಪ್ರಚೋದನೆ ನೀಡುತ್ತಿದ್ದ ಎಂದು ಪ್ರಧಾನ ತನಿಖಾ ಸಂಸ್ಥೆಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಥೂಂಗಾ ವಿಗಿಂಲ್​ ರೆಂಡು(Thoonga Vizhigal Rendu) ಎಂಬ ಹೆಸರಿನ ಫೇಸ್​ಬುಕ್​ನಲ್ಲಿ ಪೋಸ್ಟ್​​ ಹರಿದಾಡಿದ್ದು, ಇದರಲ್ಲಿ ಒಂದು ನಿರ್ದಿಷ್ಟ ಸಮುದಾಯವನ್ನು ಅಪಮಾನ ಮಾಡಲಾಗಿದೆ. ವಿವಿಧ ಧಾರ್ಮಿಕ ಗುಂಪುಗಳ ನಡುವೆ ಕೋಮು ಅಸಮಾನತೆ ಉಂಟು ಮಾಡುವಂತೆ ಪೋಸ್ಟ್​​ ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಲಾಗಿದೆ. ಮಧುರೈನ ಕಾಜಿಮಾರ್​​​ ಸ್ಟ್ರೀಟ್​, ಕೆ.ಪುದೂರ್​, ಪೆಥನಿಯಪುರಂ ಮತ್ತು ಮೆಹಬೂಬ್​ ಪಲಯಂನಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ.

ಕಾರ್ಯಾಚರಣೆ ವೇಳೆ ಲ್ಯಾಪ್​ಟಾಪ್​, ಹಾರ್ಡ್​​ ಡಿಸ್ಕ್​, ಮೊಬೈಲ್​ ಫೋನ್​, ಮೆಮೊರಿ ಕಾರ್ಡ್​​, ಸಿಮ್​, ಪೆನ್​ ಡ್ರೈವ್​​ ಸೇರಿದಂತೆ ಅನೇಕ ಪುಸ್ತಕ, ಕರಪತ್ರ ಹಾಗೂ ದಾಖಲೆ ಸಹಿತ 16 ಡಿಜಿಟಲ್​ ಸಾಧನ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಪ್ರಕರಣದಲ್ಲಿ ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚೆನ್ನೈ(ತಮಿಳುನಾಡು): ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್​ಐಎ) ಭಾನುವಾರ ತಮಿಳುನಾಡಿನ ನಾಲ್ಕು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದೆ. ಐಸಿಸ್​ ಸಿದ್ಧಾಂತ ಪ್ರತಿಪಾದಿಸುವ ಉಗ್ರಗಾಮಿ ಆರೋಪಿ ಮೊಹಮ್ಮದ್ ಇಕ್ಬಾಲ್ ಮತ್ತು ಹಿಜ್ಬ್​-ಉಟ್​​​-ತಹ್ರಿರ್(Hizb-Ut-Tahrir)​​ ಸಂಘಟನೆ ಫೇಸ್​ಬುಕ್​​​ ಪೋಸ್ಟ್​ಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ಇಸ್ಲಾಮಿಕ್​ ಸ್ಟೇಟ್​​ ಭಯೋತ್ಪಾಕದ ಗುಂಪು ಮತ್ತು ಉಗ್ರ ಸಂಘಟನೆ ​ಹಿಜ್ಬ್-ಉಟ್-ತಹ್ರಿರ್​ ಸಿದ್ಧಾಂತ ಪ್ರತಿಪಾದಿಸುವ ಫೇಸ್​ಬುಕ್​ ಪೋಸ್ಟ್​​​ಗೆ ಸಂಬಂಧಿಸಿದಂತೆ ಈ ಶೋಧ ಕಾರ್ಯ ನಡೆಸಲಾಗುತ್ತಿದ್ದು, ಮಧುರೈನ ನಾಲ್ಕು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆದಿದೆ.

ಇದನ್ನೂ ಓದಿ: ಭಾರತ, ಬ್ರಿಟನ್​​ನಲ್ಲಿ ಪತ್ತೆಯಾಗಿರುವ ಕೋವಿಡ್​ ವಿರುದ್ಧ ಕೋವ್ಯಾಕ್ಸಿನ್​ ಪರಿಣಾಮಕಾರಿ

ಕಳೆದ ವರ್ಷ ಡಿಸೆಂಬರ್​ನಲ್ಲಿ ಬಂಧಿಸಲ್ಪಟ್ಟ ಮಧುರೈ ನಿವಾಸಿ ಮೊಹಮ್ಮದ್​ ಇಕ್ಬಾಲ್​​ ಕೆಲ ಪೋಸ್ಟ್​ಗಳನ್ನು​ ಫೇಸ್​ಬುಕ್​​ನಲ್ಲಿ ಅಪ್​ಲೋಡ್​ ಮಾಡಿದ್ದ ಎಂದು ಎನ್​ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸೋಷಿಯಲ್​ ಮೀಡಿಯಾ ಪೋಸ್ಟ್​​ಗಳಲ್ಲಿ ಉಗ್ರಗಾಮಿ ಇಕ್ಬಾಲ್​, ಐಸಿಸಿ ಉಗ್ರರ ಸಿದ್ಧಾಂತ ಪ್ರತಿಪಾದಿಸಿ ದುಷ್ಕೃತ್ಯಗಳಿಗೆ ಪ್ರಚೋದನೆ ನೀಡುತ್ತಿದ್ದ ಎಂದು ಪ್ರಧಾನ ತನಿಖಾ ಸಂಸ್ಥೆಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಥೂಂಗಾ ವಿಗಿಂಲ್​ ರೆಂಡು(Thoonga Vizhigal Rendu) ಎಂಬ ಹೆಸರಿನ ಫೇಸ್​ಬುಕ್​ನಲ್ಲಿ ಪೋಸ್ಟ್​​ ಹರಿದಾಡಿದ್ದು, ಇದರಲ್ಲಿ ಒಂದು ನಿರ್ದಿಷ್ಟ ಸಮುದಾಯವನ್ನು ಅಪಮಾನ ಮಾಡಲಾಗಿದೆ. ವಿವಿಧ ಧಾರ್ಮಿಕ ಗುಂಪುಗಳ ನಡುವೆ ಕೋಮು ಅಸಮಾನತೆ ಉಂಟು ಮಾಡುವಂತೆ ಪೋಸ್ಟ್​​ ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಲಾಗಿದೆ. ಮಧುರೈನ ಕಾಜಿಮಾರ್​​​ ಸ್ಟ್ರೀಟ್​, ಕೆ.ಪುದೂರ್​, ಪೆಥನಿಯಪುರಂ ಮತ್ತು ಮೆಹಬೂಬ್​ ಪಲಯಂನಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ.

ಕಾರ್ಯಾಚರಣೆ ವೇಳೆ ಲ್ಯಾಪ್​ಟಾಪ್​, ಹಾರ್ಡ್​​ ಡಿಸ್ಕ್​, ಮೊಬೈಲ್​ ಫೋನ್​, ಮೆಮೊರಿ ಕಾರ್ಡ್​​, ಸಿಮ್​, ಪೆನ್​ ಡ್ರೈವ್​​ ಸೇರಿದಂತೆ ಅನೇಕ ಪುಸ್ತಕ, ಕರಪತ್ರ ಹಾಗೂ ದಾಖಲೆ ಸಹಿತ 16 ಡಿಜಿಟಲ್​ ಸಾಧನ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಪ್ರಕರಣದಲ್ಲಿ ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.