ETV Bharat / bharat

ನೀಟ್ ಪರೀಕ್ಷೆಯಲ್ಲಿ ಯಶಸ್ವಿಯಾದ ಬುಡಕಟ್ಟು ವಿದ್ಯಾರ್ಥಿ.. ಈತ ಅನುಭವಿಸಿದ ಸಂಕಷ್ಟಗಳು ಹೇಗಿದ್ದವು ಗೊತ್ತಾ?

author img

By

Published : Feb 21, 2022, 8:47 PM IST

ತುಫೈಲ್ ಅಹ್ಮದ್ ಅವರು ಅಧ್ಯಯನಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಶ್ರೀನಗರದವರೆಗೆ ನಡೆದು ಹೋಗಿ ಇಂಟರ್​ನೆಟ್​ ಬಳಕೆ ಮಾಡಿಕೊಳ್ಳುತ್ತಿದ್ದೆ ಎಂದಿದ್ದಾರೆ.

Tufail Ahmed
ತುಫೈಲ್ ಅಹ್ಮದ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ತುಫೈಲ್ ಅಹ್ಮದ್ ಎಂಬ ಬುಡಕಟ್ಟು ಹುಡುಗ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET) 2022 ಯಲ್ಲಿ ತೇರ್ಗಡೆಯಾಗಿ ಎಲ್ಲರ ಗಮನ ಸೆಳೆದಿದ್ದಾನೆ. ಈ ಮೂಲಕ ಯಶಸ್ಸಿನ ಪತಾಕೆ ಹಾರಿಸಿ ಕುಟುಂಬ ಹಾಗೂ ಸಮಾಜ ಹೆಮ್ಮೆ ಪಡುವಂತೆ ಮಾಡಿದ್ದಾನೆ. ವಿಶೇಷವೆಂದರೆ ತುಫೈಲ್ ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಶ್ರೀನಗರದ ಮೊದಲ ಬುಡಕಟ್ಟು ಯುವಕ.

ತುಫೈಲ್ ಮಿಷನ್ ಸ್ಕೂಲ್ ನ್ಯೂ ಥೀದ್ ಹರ್ವಾನ್​ನಲ್ಲಿ ತಮ್ಮ 8ನೇ ತರಗತಿ ಹಾಗೂ 12 ನೇ ತರಗತಿಯನ್ನು ಶಾಲಿಮಾರ್‌ನ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮುಗಿಸಿದ್ದಾರೆ.

ಕಿಲೋಮೀಟರ್ ದೂರ ನಡೆದು ಶಾಲೆಗೆ ಹೋಗುತ್ತಿದ್ದರು: ಓದುವ ವಯಸ್ಸಿನಲ್ಲಿ ಹಲವು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದ ಅವರು, ಇಂಟರ್‌ನೆಟ್​ಗಾಗಿ ಮತ್ತು ಶಾಲೆಗೆ ಹೋಗಲು ಹಲವಾರು ಕಿಲೋಮೀಟರ್‌ಗಳನ್ನು ನಡೆಯಬೇಕಾಗಿತ್ತು ಎಂದು ತಾವು ಅನುಭವಿಸಿದ ಸಂಕಷ್ಟವನ್ನು ಹಂಚಿಕೊಂಡಿದ್ದಾನೆ.

ಶ್ರೀನಗರದವರೆಗೆ ನಡೆದು ಹೋಗುತ್ತಿದ್ದ ಅಹ್ಮದ್: ತುಫೈಲ್ ಅಹ್ಮದ್ ಅವರು ಅಧ್ಯಯನಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಶ್ರೀನಗರದವರೆಗೆ ನಡೆದು ಹೋಗಿ ಇಂಟರ್​ನೆಟ್​ ಬಳಕೆ ಮಾಡಿಕೊಳ್ಳುತ್ತಿದ್ದೆ ಎಂಬ ವಿಚಾರವನ್ನು ಈ ವೇಳೆ ಬಾಯ್ಬಿಟ್ಟಿದ್ದಾರೆ.

ತಾಯಿ ಅವಿದ್ಯಾವಂತಳಾಗಿದ್ದರೂ ಓದಲು ಪ್ರೇರೇಪಿಸುತ್ತಾಳೆ: ಬುಡಕಟ್ಟು ಜನಾಂಗದವರ ಮಟ್ಟಿಗೆ ಮೂಲ ಸೌಕರ್ಯ ಪಡೆಯುವುದು ದೊಡ್ಡ ಸಮಸ್ಯೆ. ಇದಕ್ಕೆ ನಿದರ್ಶನ ಎಂಬಂತೆ ಶ್ರೀನಗರದ ಮುಲ್ನಾರ್ ಹರ್ವಾನ್ ಪ್ರದೇಶದ ಜನರು ವಿದ್ಯುತ್ ಮತ್ತು ಇಂಟರ್​ನೆಟ್​ ಸಂಪರ್ಕದ ಸಮಸ್ಯೆಯನ್ನು ಈಗಲೂ ಎದುರಿಸುತ್ತಿದ್ದಾರೆ ಎಂದು ಅಹಮದ್ ಹೇಳುತ್ತಾರೆ.

ನನ್ನ ಓದಿನ ಪ್ರಯಾಣದಲ್ಲಿ ನನ್ನ ಸಹೋದರ ಮತ್ತು ತಾಯಿ ನನ್ನನ್ನು ಎಲ್ಲ ರೀತಿಯಲ್ಲಿ ಪ್ರೋತ್ಸಾಹಿಸಿದರು. ಕುಟುಂಬ ಸಂಪೂರ್ಣ ಬೆಂಬಲ ನೀಡಿದೆ. ನನಗೆ ಯಾವಾಗಲೂ ಅಧ್ಯಯನ ಮಾಡಲು ಪ್ರೇರೇಪಿಸಿದ್ದಾರೆ ಎಂದು ತಿಳಿಸಿದ್ದಾರೆ.

ಕುಟುಂಬ ಮತ್ತು ಸಮುದಾಯಕ್ಕೆ ಹೆಮ್ಮೆ ತಂದಿದೆ: ನಾವು ತುಂಬಾ ಸಂತೋಷವಾಗಿದ್ದೇವೆ. ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದರೂ ನಾವು ನೀಟ್‌ನಲ್ಲಿ ಯಶಸ್ಸು ಸಾಧಿಸಿರುವುದು ಕುಟುಂಬದ ಸದಸ್ಯರ ಬೆಂಬಲದಿಂದ ಎಂದು ಹೇಳಿಕೊಂಡಿದ್ದಾರೆ.

ಓದಿ: ಆಶಿಶ್ ಮಿಶ್ರಾಗೆ ಜಾಮೀನು: ಸುಪ್ರೀಂಕೋರ್ಟ್​ ಮೊರೆ ಹೋದ ರೈತರ ಕುಟುಂಬಸ್ಥರು


ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ತುಫೈಲ್ ಅಹ್ಮದ್ ಎಂಬ ಬುಡಕಟ್ಟು ಹುಡುಗ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET) 2022 ಯಲ್ಲಿ ತೇರ್ಗಡೆಯಾಗಿ ಎಲ್ಲರ ಗಮನ ಸೆಳೆದಿದ್ದಾನೆ. ಈ ಮೂಲಕ ಯಶಸ್ಸಿನ ಪತಾಕೆ ಹಾರಿಸಿ ಕುಟುಂಬ ಹಾಗೂ ಸಮಾಜ ಹೆಮ್ಮೆ ಪಡುವಂತೆ ಮಾಡಿದ್ದಾನೆ. ವಿಶೇಷವೆಂದರೆ ತುಫೈಲ್ ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಶ್ರೀನಗರದ ಮೊದಲ ಬುಡಕಟ್ಟು ಯುವಕ.

ತುಫೈಲ್ ಮಿಷನ್ ಸ್ಕೂಲ್ ನ್ಯೂ ಥೀದ್ ಹರ್ವಾನ್​ನಲ್ಲಿ ತಮ್ಮ 8ನೇ ತರಗತಿ ಹಾಗೂ 12 ನೇ ತರಗತಿಯನ್ನು ಶಾಲಿಮಾರ್‌ನ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮುಗಿಸಿದ್ದಾರೆ.

ಕಿಲೋಮೀಟರ್ ದೂರ ನಡೆದು ಶಾಲೆಗೆ ಹೋಗುತ್ತಿದ್ದರು: ಓದುವ ವಯಸ್ಸಿನಲ್ಲಿ ಹಲವು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದ ಅವರು, ಇಂಟರ್‌ನೆಟ್​ಗಾಗಿ ಮತ್ತು ಶಾಲೆಗೆ ಹೋಗಲು ಹಲವಾರು ಕಿಲೋಮೀಟರ್‌ಗಳನ್ನು ನಡೆಯಬೇಕಾಗಿತ್ತು ಎಂದು ತಾವು ಅನುಭವಿಸಿದ ಸಂಕಷ್ಟವನ್ನು ಹಂಚಿಕೊಂಡಿದ್ದಾನೆ.

ಶ್ರೀನಗರದವರೆಗೆ ನಡೆದು ಹೋಗುತ್ತಿದ್ದ ಅಹ್ಮದ್: ತುಫೈಲ್ ಅಹ್ಮದ್ ಅವರು ಅಧ್ಯಯನಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಶ್ರೀನಗರದವರೆಗೆ ನಡೆದು ಹೋಗಿ ಇಂಟರ್​ನೆಟ್​ ಬಳಕೆ ಮಾಡಿಕೊಳ್ಳುತ್ತಿದ್ದೆ ಎಂಬ ವಿಚಾರವನ್ನು ಈ ವೇಳೆ ಬಾಯ್ಬಿಟ್ಟಿದ್ದಾರೆ.

ತಾಯಿ ಅವಿದ್ಯಾವಂತಳಾಗಿದ್ದರೂ ಓದಲು ಪ್ರೇರೇಪಿಸುತ್ತಾಳೆ: ಬುಡಕಟ್ಟು ಜನಾಂಗದವರ ಮಟ್ಟಿಗೆ ಮೂಲ ಸೌಕರ್ಯ ಪಡೆಯುವುದು ದೊಡ್ಡ ಸಮಸ್ಯೆ. ಇದಕ್ಕೆ ನಿದರ್ಶನ ಎಂಬಂತೆ ಶ್ರೀನಗರದ ಮುಲ್ನಾರ್ ಹರ್ವಾನ್ ಪ್ರದೇಶದ ಜನರು ವಿದ್ಯುತ್ ಮತ್ತು ಇಂಟರ್​ನೆಟ್​ ಸಂಪರ್ಕದ ಸಮಸ್ಯೆಯನ್ನು ಈಗಲೂ ಎದುರಿಸುತ್ತಿದ್ದಾರೆ ಎಂದು ಅಹಮದ್ ಹೇಳುತ್ತಾರೆ.

ನನ್ನ ಓದಿನ ಪ್ರಯಾಣದಲ್ಲಿ ನನ್ನ ಸಹೋದರ ಮತ್ತು ತಾಯಿ ನನ್ನನ್ನು ಎಲ್ಲ ರೀತಿಯಲ್ಲಿ ಪ್ರೋತ್ಸಾಹಿಸಿದರು. ಕುಟುಂಬ ಸಂಪೂರ್ಣ ಬೆಂಬಲ ನೀಡಿದೆ. ನನಗೆ ಯಾವಾಗಲೂ ಅಧ್ಯಯನ ಮಾಡಲು ಪ್ರೇರೇಪಿಸಿದ್ದಾರೆ ಎಂದು ತಿಳಿಸಿದ್ದಾರೆ.

ಕುಟುಂಬ ಮತ್ತು ಸಮುದಾಯಕ್ಕೆ ಹೆಮ್ಮೆ ತಂದಿದೆ: ನಾವು ತುಂಬಾ ಸಂತೋಷವಾಗಿದ್ದೇವೆ. ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದರೂ ನಾವು ನೀಟ್‌ನಲ್ಲಿ ಯಶಸ್ಸು ಸಾಧಿಸಿರುವುದು ಕುಟುಂಬದ ಸದಸ್ಯರ ಬೆಂಬಲದಿಂದ ಎಂದು ಹೇಳಿಕೊಂಡಿದ್ದಾರೆ.

ಓದಿ: ಆಶಿಶ್ ಮಿಶ್ರಾಗೆ ಜಾಮೀನು: ಸುಪ್ರೀಂಕೋರ್ಟ್​ ಮೊರೆ ಹೋದ ರೈತರ ಕುಟುಂಬಸ್ಥರು


ETV Bharat Logo

Copyright © 2024 Ushodaya Enterprises Pvt. Ltd., All Rights Reserved.