ETV Bharat / bharat

ಸೋನಿಯಾ ಗಾಂಧಿ ಸೂಚನೆ ಬೆನ್ನಲ್ಲೇ ಪಂಜಾಬ್​-ಮಣಿಪುರ ಕಾಂಗ್ರೆಸ್​ ಅಧ್ಯಕ್ಷರ ರಾಜೀನಾಮೆ ಸಲ್ಲಿಕೆ

author img

By

Published : Mar 16, 2022, 7:30 PM IST

ಮಣಿಪುರ ಚುನಾವಣೆಯ ಸೋಲಿನ ನೈತಿಕ ಹೊಣೆ ಹೊತ್ತು ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಲೋಕೇನ್ ತಮ್ಮ ರಾಜೀನಾಮೆ ಪತ್ರವನ್ನೂ ಸೋನಿಯಾಗೆ ರವಾನಿಸಿದ್ದಾರೆ. ಈ ಇಬ್ಬರೂ ಚುನಾವಣೆಯಲ್ಲಿ ನಿಂತು ಸ್ವತಃ ಸೋಲನ್ನೂ ಕಂಡಿದ್ದಾರೆ..

navjot singh sidhu and loken singh
navjot singh sidhu and loken singh

ನವದೆಹಲಿ : ಇತ್ತೀಚಿಗೆ ಚುನಾವಣೆ ಮುಗಿದ ಪಂಚ ರಾಜ್ಯಗಳ ಪ್ರದೇಶ ಕಾಂಗ್ರೆಸ್​ ಅಧ್ಯಕ್ಷರು ರಾಜೀನಾಮೆ ನೀಡಿ ಎಂದು ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೂಚಿಸಿದ ಬೆನ್ನಲ್ಲೇ ಪಂಜಾಬ್​ ಕಾಂಗ್ರೆಸ್​ ಅಧ್ಯಕ್ಷ ನವಜೋತ್​ ಸಿಂಗ್​ ಸಿಧು ಮತ್ತು ಮಣಿಪುರ ಕಾಂಗ್ರೆಸ್​ ಅಧ್ಯಕ್ಷ ಲೋಕೇನ್​ ಸಿಂಗ್​ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಉತ್ತರಪ್ರದೇಶ, ಪಂಜಾಬ್​, ಉತ್ತರಾಖಂಡ್​, ಗೋವಾ ಮತ್ತು ಮಣಿಪುರ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ. ಪಂಜಾಬ್​ನಲ್ಲಿ ಅಧಿಕಾರವನ್ನೇ ಕಳೆದುಕೊಂಡಿರುವ ಕಾಂಗ್ರೆಸ್​ ಉತ್ತರಪ್ರದೇಶದಲ್ಲಿ ಕೇವಲ ಎರಡು, ಗೋವಾದಲ್ಲಿ 11, ಉತ್ತರಾಖಂಡ್​ನಲ್ಲಿ 19 ಹಾಗೂ ಮಣಿಪುರದಲ್ಲಿ 5 ಸ್ಥಾನಗಳನ್ನು ಮಾತ್ರ ಪಡೆದಿದೆ. ಹೀಗಾಗಿ, ಮಂಗಳವಾರ ಸೋನಿಯಾ ಗಾಂಧಿ ಐದು ರಾಜ್ಯಗಳ ಕಾಂಗ್ರೆಸ್​​ ಅಧ್ಯಕ್ಷರಿಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದರು.

ಅಂತಯೇ, ಬುಧವಾರ ಪಂಜಾಬ್​ ಕಾಂಗ್ರೆಸ್​ ಅಧ್ಯಕ್ಷ ನವಜೋತ್​ ಸಿಂಗ್​ ಸಿಧು ರಾಜೀನಾಮೆ ಪತ್ರವನ್ನು ಸೋನಿಯಾ ಗಾಂಧಿಗೆ ರವಾನಿಸಿದ್ದಾರೆ. ಅದೇ ರೀತಿಯಾಗಿ ಮಣಿಪುರದ ಅಧ್ಯಕ್ಷ ಲೋಕೇನ್​ ಸಿಂಗ್​ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.

ಮಣಿಪುರ ಚುನಾವಣೆಯ ಸೋಲಿನ ನೈತಿಕ ಹೊಣೆ ಹೊತ್ತು ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಲೋಕೇನ್ ತಮ್ಮ ರಾಜೀನಾಮೆ ಪತ್ರವನ್ನೂ ಸೋನಿಯಾಗೆ ರವಾನಿಸಿದ್ದಾರೆ. ಈ ಇಬ್ಬರೂ ಚುನಾವಣೆಯಲ್ಲಿ ನಿಂತು ಸ್ವತಃ ಸೋಲನ್ನೂ ಕಂಡಿದ್ದಾರೆ.

ಇತ್ತ, ಪಂಜಾಬ್​ನ ನವಜೋತ್​ ಸಿಂಗ್​ ಸಿಧು ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಸೋನಿಯಾ ಗಾಂಧಿ ತಮ್ಮ ಪಕ್ಷದ ಕಚೇರಿಯಲ್ಲಿ ಪಂಜಾಬ್​ ಸಂಸದರ ಸಭೆಯನ್ನೂ ನಡೆಸಿ, ಚರ್ಚಿಸಿದ್ದಾರೆ. ಇನ್ನು, ಚುನಾವಣೆಯ ಬಳಿಕ ಕಾರ್ಯಕಾರಣಿ ಸಮಿತಿಯ ಸಭೆ ಮಾಡಿ ಸೋಲಿನ ಆತ್ಮಾವಲೋಕನವನ್ನೂ ಕಾಂಗ್ರೆಸ್​ ಮಾಡಿತ್ತು.

ಇದನ್ನೂ ಓದಿ: ಕಾಂಗ್ರೆಸ್​ನಲ್ಲಿ ಮತ್ತೆ ಕಿಡಿ ಹೊತ್ತಿಸಿದ ಕಪಿಲ್​ ಸಿಬಲ್​ ಹೇಳಿಕೆ: ಹಿರಿಯ ನಾಯಕನ ವಿರುದ್ಧ ಮುಗಿಬಿದ್ದ ಪಕ್ಷ ನಿಷ್ಠರು

ನವದೆಹಲಿ : ಇತ್ತೀಚಿಗೆ ಚುನಾವಣೆ ಮುಗಿದ ಪಂಚ ರಾಜ್ಯಗಳ ಪ್ರದೇಶ ಕಾಂಗ್ರೆಸ್​ ಅಧ್ಯಕ್ಷರು ರಾಜೀನಾಮೆ ನೀಡಿ ಎಂದು ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೂಚಿಸಿದ ಬೆನ್ನಲ್ಲೇ ಪಂಜಾಬ್​ ಕಾಂಗ್ರೆಸ್​ ಅಧ್ಯಕ್ಷ ನವಜೋತ್​ ಸಿಂಗ್​ ಸಿಧು ಮತ್ತು ಮಣಿಪುರ ಕಾಂಗ್ರೆಸ್​ ಅಧ್ಯಕ್ಷ ಲೋಕೇನ್​ ಸಿಂಗ್​ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಉತ್ತರಪ್ರದೇಶ, ಪಂಜಾಬ್​, ಉತ್ತರಾಖಂಡ್​, ಗೋವಾ ಮತ್ತು ಮಣಿಪುರ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ. ಪಂಜಾಬ್​ನಲ್ಲಿ ಅಧಿಕಾರವನ್ನೇ ಕಳೆದುಕೊಂಡಿರುವ ಕಾಂಗ್ರೆಸ್​ ಉತ್ತರಪ್ರದೇಶದಲ್ಲಿ ಕೇವಲ ಎರಡು, ಗೋವಾದಲ್ಲಿ 11, ಉತ್ತರಾಖಂಡ್​ನಲ್ಲಿ 19 ಹಾಗೂ ಮಣಿಪುರದಲ್ಲಿ 5 ಸ್ಥಾನಗಳನ್ನು ಮಾತ್ರ ಪಡೆದಿದೆ. ಹೀಗಾಗಿ, ಮಂಗಳವಾರ ಸೋನಿಯಾ ಗಾಂಧಿ ಐದು ರಾಜ್ಯಗಳ ಕಾಂಗ್ರೆಸ್​​ ಅಧ್ಯಕ್ಷರಿಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದರು.

ಅಂತಯೇ, ಬುಧವಾರ ಪಂಜಾಬ್​ ಕಾಂಗ್ರೆಸ್​ ಅಧ್ಯಕ್ಷ ನವಜೋತ್​ ಸಿಂಗ್​ ಸಿಧು ರಾಜೀನಾಮೆ ಪತ್ರವನ್ನು ಸೋನಿಯಾ ಗಾಂಧಿಗೆ ರವಾನಿಸಿದ್ದಾರೆ. ಅದೇ ರೀತಿಯಾಗಿ ಮಣಿಪುರದ ಅಧ್ಯಕ್ಷ ಲೋಕೇನ್​ ಸಿಂಗ್​ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.

ಮಣಿಪುರ ಚುನಾವಣೆಯ ಸೋಲಿನ ನೈತಿಕ ಹೊಣೆ ಹೊತ್ತು ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಲೋಕೇನ್ ತಮ್ಮ ರಾಜೀನಾಮೆ ಪತ್ರವನ್ನೂ ಸೋನಿಯಾಗೆ ರವಾನಿಸಿದ್ದಾರೆ. ಈ ಇಬ್ಬರೂ ಚುನಾವಣೆಯಲ್ಲಿ ನಿಂತು ಸ್ವತಃ ಸೋಲನ್ನೂ ಕಂಡಿದ್ದಾರೆ.

ಇತ್ತ, ಪಂಜಾಬ್​ನ ನವಜೋತ್​ ಸಿಂಗ್​ ಸಿಧು ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಸೋನಿಯಾ ಗಾಂಧಿ ತಮ್ಮ ಪಕ್ಷದ ಕಚೇರಿಯಲ್ಲಿ ಪಂಜಾಬ್​ ಸಂಸದರ ಸಭೆಯನ್ನೂ ನಡೆಸಿ, ಚರ್ಚಿಸಿದ್ದಾರೆ. ಇನ್ನು, ಚುನಾವಣೆಯ ಬಳಿಕ ಕಾರ್ಯಕಾರಣಿ ಸಮಿತಿಯ ಸಭೆ ಮಾಡಿ ಸೋಲಿನ ಆತ್ಮಾವಲೋಕನವನ್ನೂ ಕಾಂಗ್ರೆಸ್​ ಮಾಡಿತ್ತು.

ಇದನ್ನೂ ಓದಿ: ಕಾಂಗ್ರೆಸ್​ನಲ್ಲಿ ಮತ್ತೆ ಕಿಡಿ ಹೊತ್ತಿಸಿದ ಕಪಿಲ್​ ಸಿಬಲ್​ ಹೇಳಿಕೆ: ಹಿರಿಯ ನಾಯಕನ ವಿರುದ್ಧ ಮುಗಿಬಿದ್ದ ಪಕ್ಷ ನಿಷ್ಠರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.