ETV Bharat / bharat

ಗುಜರಾತ್​ನಲ್ಲಿ ಅಕ್ರಮ ಮಸೀದಿ ಕಟ್ಟಡ ತೆರವು.. ಭುಗಿಲೆದ್ದ ಪ್ರತಿಭಟನೆ, ಐವರು ಪೊಲೀಸರಿಗೆ ಗಾಯ - ಈಟಿವಿ ಭಾರತ ಕನ್ನಡ ನ್ಯೂಸ್​

ಗುಜರಾತ್​ನ ಪೋರಬಂದರಿನಲ್ಲಿ ಅಕ್ರಮವಾಗಿ ಕಟ್ಟಲಾಗಿತ್ತು ಎನ್ನಲಾದ ಮಸೀದಿ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಮುಸ್ಲಿಂ ಸಮುದಾಯ ಅಡ್ಡಿಪಡಿಸಿದೆ. ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಹಿಂಸಾತ್ಮಕ ಪ್ರತಿಭಟನೆ ನಡೆಸಿದ 27 ಜನರನ್ನು ಬಂಧಿಸಿ ಜೈಲಿಗಟ್ಟಲಾಗಿದೆ.

Muslim religious place demolition case
ಅಕ್ರಮ ಮಸೀದಿ ಕಟ್ಟಡ ತೆರವು
author img

By

Published : Oct 8, 2022, 8:36 AM IST

ಪೋರಬಂದರ್(ಗುಜರಾತ್)​: ಇಲ್ಲಿನ ಪ್ರದೇಶದಲ್ಲಿ ಅಕ್ರಮವಾಗಿ ಕಟ್ಟಲಾಗಿತ್ತು ಎನ್ನಲಾದ ಮಸೀದಿಯನ್ನು ಸರ್ಕಾರ ತೆರವು ಮಾಡಿದೆ. ಇದನ್ನು ವಿರೋಧಿಸಿ ಮುಸ್ಲಿಂ ಸಮುದಾಯ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಘಟನೆಯಲ್ಲಿ ಐವರು ಪೊಲೀಸರು ಗಾಯಗೊಂಡಿದ್ದು, 27 ಜನರನ್ನು ಬಂಧಿಸಲಾಗಿದೆ.

ಫೋರಬಂದರ್​ನ ವಿವಿಧೆಡೆ ಅಕ್ರಮವಾಗಿ ಕಟ್ಟಲಾದ 8 ಮಸೀದಿಗಳಿಗೆ ಸ್ಥಳೀಯ ಆಡಳಿತ ತೆರವಿಗೆ ನೋಟಿಸ್​ ನೀಡಿದೆ. ಉತ್ತರ ನೀಡದಿದ್ದಾಗ ಅಕ್ಟೋಬರ್ 3 ರಿಂದಲೇ ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ.

ಕಡಲತೀರದಲ್ಲಿ ಕಟ್ಟಲಾದ ಮಸೀದಿ ಕಟ್ಟಡಗಳ ತೆರವು ವಿರೋಧಿಸಿ ಮುಸ್ಲಿಮರು ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದಾರೆ. ತೆರವು ಮಾಡುತ್ತಿರುವ ಕಟ್ಟಡಗಳ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಅಶ್ರುವಾಯು ಸಿಡಿಸಿ ತಡೆದಿದ್ದಾರೆ.

ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಇದರಲ್ಲಿ ಐವರು ಸಿಬ್ಬಂದಿ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 125 ಜನರ ಮೇಲೆ ಪ್ರಕರಣ ದಾಖಲಾಗಿದೆ. 27 ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಮಸೀದಿ ಕಟ್ಟಡ ತೆರವಿನಿಂದ ಪೋರಬಂದರ್​ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ. ಅಕ್ರಮವಾಗಿ ನಿರ್ಮಿಸಲಾದ ಮಸೀದಿ ಕಟ್ಟಡವನ್ನು ತೆರವು ಮಾಡುವ ವೇಳೆ ಮುಸ್ಲಿಮರು ಗುಂಪು ಕಟ್ಟಿಕೊಂಡು ತಡೆಯಲು ಯತ್ನಿಸಿದರು. ಚಾದರ್​ ಮೆರವಣಿಗೆ ನಡೆಸಿ ಪ್ರತಿರೋಧವೊಡ್ಡಿದರು. ನಿಯಮಪಾಲನೆಯ ತಿಳುವಳಿಕೆ ನೀಡಿದರೂ, ಲೆಕ್ಕಿಸದೇ ಮುನ್ನುಗ್ಗಿದಾಗ ಮೂರು ಬಾರಿ ಅಶ್ರುವಾಯು ಸಿಡಿಸಿ ಪ್ರತಿಭಟನೆ ತಡೆಯಬೇಕಾಯಿತು ಎಂದು ಪೊಲೀಸರು ತಿಳಿಸಿದರು.

ಓದಿ: ಧಗಧಗನೆ ಉರಿದ ಖಾಸಗಿ ಬಸ್​.. ಮಕ್ಕಳು ಸೇರಿ 14 ಮಂದಿ ಸಜೀವ ದಹನ

ಪೋರಬಂದರ್(ಗುಜರಾತ್)​: ಇಲ್ಲಿನ ಪ್ರದೇಶದಲ್ಲಿ ಅಕ್ರಮವಾಗಿ ಕಟ್ಟಲಾಗಿತ್ತು ಎನ್ನಲಾದ ಮಸೀದಿಯನ್ನು ಸರ್ಕಾರ ತೆರವು ಮಾಡಿದೆ. ಇದನ್ನು ವಿರೋಧಿಸಿ ಮುಸ್ಲಿಂ ಸಮುದಾಯ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಘಟನೆಯಲ್ಲಿ ಐವರು ಪೊಲೀಸರು ಗಾಯಗೊಂಡಿದ್ದು, 27 ಜನರನ್ನು ಬಂಧಿಸಲಾಗಿದೆ.

ಫೋರಬಂದರ್​ನ ವಿವಿಧೆಡೆ ಅಕ್ರಮವಾಗಿ ಕಟ್ಟಲಾದ 8 ಮಸೀದಿಗಳಿಗೆ ಸ್ಥಳೀಯ ಆಡಳಿತ ತೆರವಿಗೆ ನೋಟಿಸ್​ ನೀಡಿದೆ. ಉತ್ತರ ನೀಡದಿದ್ದಾಗ ಅಕ್ಟೋಬರ್ 3 ರಿಂದಲೇ ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ.

ಕಡಲತೀರದಲ್ಲಿ ಕಟ್ಟಲಾದ ಮಸೀದಿ ಕಟ್ಟಡಗಳ ತೆರವು ವಿರೋಧಿಸಿ ಮುಸ್ಲಿಮರು ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದಾರೆ. ತೆರವು ಮಾಡುತ್ತಿರುವ ಕಟ್ಟಡಗಳ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಅಶ್ರುವಾಯು ಸಿಡಿಸಿ ತಡೆದಿದ್ದಾರೆ.

ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಇದರಲ್ಲಿ ಐವರು ಸಿಬ್ಬಂದಿ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 125 ಜನರ ಮೇಲೆ ಪ್ರಕರಣ ದಾಖಲಾಗಿದೆ. 27 ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಮಸೀದಿ ಕಟ್ಟಡ ತೆರವಿನಿಂದ ಪೋರಬಂದರ್​ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ. ಅಕ್ರಮವಾಗಿ ನಿರ್ಮಿಸಲಾದ ಮಸೀದಿ ಕಟ್ಟಡವನ್ನು ತೆರವು ಮಾಡುವ ವೇಳೆ ಮುಸ್ಲಿಮರು ಗುಂಪು ಕಟ್ಟಿಕೊಂಡು ತಡೆಯಲು ಯತ್ನಿಸಿದರು. ಚಾದರ್​ ಮೆರವಣಿಗೆ ನಡೆಸಿ ಪ್ರತಿರೋಧವೊಡ್ಡಿದರು. ನಿಯಮಪಾಲನೆಯ ತಿಳುವಳಿಕೆ ನೀಡಿದರೂ, ಲೆಕ್ಕಿಸದೇ ಮುನ್ನುಗ್ಗಿದಾಗ ಮೂರು ಬಾರಿ ಅಶ್ರುವಾಯು ಸಿಡಿಸಿ ಪ್ರತಿಭಟನೆ ತಡೆಯಬೇಕಾಯಿತು ಎಂದು ಪೊಲೀಸರು ತಿಳಿಸಿದರು.

ಓದಿ: ಧಗಧಗನೆ ಉರಿದ ಖಾಸಗಿ ಬಸ್​.. ಮಕ್ಕಳು ಸೇರಿ 14 ಮಂದಿ ಸಜೀವ ದಹನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.