ETV Bharat / bharat

ಅಮಿತಾಬ್​ ಬಚ್ಚನ್​ ಬಂಗಲೆ ಸೇರಿ ಮುಂಬೈನ 4 ಕಡೆ ಬಾಂಬ್​ ಇರಿಸಿರುವ ಬಗ್ಗೆ ಬೆದರಿಕೆ ಕರೆ - ಅಮಿತಾಬ್ ಬಚ್ಚನ್ ಬಂಗಲೆ ಮೇಲೆ ಬಾಂಬ್​ ಬೆದರಿಕೆ ಕರೆ

ಶುಕ್ರವಾರ ರಾತ್ರಿ ರೈಲ್ವೆ ಇಲಾಖೆಗೆ ಅನಾಮಧೇಯ ಬೆದರಿಕೆ ಕರೆ ಬಂದಿದೆ. ವ್ಯಕ್ತಿಯೋರ್ವ ಕರೆ ಮಾಡಿ, ಸಿಎಸ್‌ಎಂಟಿ, ದಾದರ್, ಬೈಕುಲ್ಲಾ ಮತ್ತು ಬಾಲಿವುಡ್​ ಹಿರಿಯ ನಟ ಅಮಿತಾಬ್ ಬಚ್ಚನ್ ಅವರ ಬಂಗಲೆಗಳ ಬಳಿ ಬಾಂಬ್‌ ಇಡಲಾಗಿದೆ ಎಂದಿದ್ದಾನೆ.

mumbai-bomb-threat-call-near-csmt-amitabh-bachchan-bungalow
ಮುಂಬೈನ 4 ಕಡೆ ಬಾಂಬ್​ ಇರಿಸಿರುವ ಬಗ್ಗೆ ಬೆದರಿಕೆ ಕರೆ
author img

By

Published : Aug 7, 2021, 3:13 AM IST

Updated : Aug 7, 2021, 3:44 AM IST

ಮುಂಬೈ(ಮಹಾರಾಷ್ಟ್ರ): ಮುಂಬೈನ ನಾಲ್ಕು ಸ್ಥಳಗಳಲ್ಲಿ ಬಾಂಬ್‌ ಇರಿಸಲಾಗಿದೆ ಎಂದು ಅನಾಮಧೇಯ ದೂರವಾಣಿ ಕರೆ ಬಂದಿದೆ. ನಗರದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ದಾದರ್, ಬೈಕುಲ್ಲಾ ಮತ್ತು ಬಾಲಿವುಡ್​ ಹಿರಿಯ ನಟ ಅಮಿತಾಬ್ ಬಚ್ಚನ್ ಅವರ ಬಂಗಲೆ ಬಳಿ ಬಾಂಬ್ ಇಡಲಾಗಿದೆ ಎಂದು ಫೋನ್​ ಕರೆ ಮೂಲಕ ಶುಕ್ರವಾರ ರಾತ್ರಿ ಬೆದರಿಕೆಯೊಡ್ಡಲಾಗಿದೆ.

ರಾತ್ರಿ 9 ರ ಸುಮಾರಿಗೆ ರೈಲ್ವೆ ಇಲಾಖೆಗೆ ಅನಾಮಧೇಯ ಬೆದರಿಕೆ ಕರೆ ಬಂದಿದೆ. ವ್ಯಕ್ತಿಯೋರ್ವ ಕರೆ ಮಾಡಿ, ಸಿಎಸ್‌ಎಂಟಿ, ದಾದರ್, ಬೈಕುಲ್ಲಾ ಮತ್ತು ಅಮಿತಾಬ್ ಬಚ್ಚನ್ ಅವರ ಬಂಗಲೆಗಳ ಬಳಿ ಬಾಂಬ್‌ ಇಡಲಾಗಿದೆ ಎಂದಿದ್ದಾನೆ. ತಕ್ಷಣ ರೈಲ್ವೆ ಅಧಿಕಾರಿಗಳು ಈ ಬಗ್ಗೆ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮುಂಬೈ ಪೊಲೀಸರು ಮತ್ತು ಬಾಂಬ್ ಸ್ಕ್ವಾಡ್ ಜಾಗೃತವಾಗಿದ್ದು, ಈ ಎಲ್ಲ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿವೆ. ಸಿಎಸ್‌ಎಂಟಿ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಶೋಧ ಕಾರ್ಯ ನಡೆಸಲಾಗಿದೆ. ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ.

ಅಲ್ಲದೆ, ಕರೆ ಬಂದ ಸಂಖ್ಯೆಗೆ ಮರಳಿ ಫೋನ್​ ಮಾಡಿದರೆ, 'ನನ್ನಲ್ಲಿರುವ ಮಾಹಿತಿಯನ್ನು ನಾನು ನಿಮಗೆ ನೀಡಿದ್ದೇನೆ. ಈಗ ನನ್ನನ್ನು ತೊಂದರೆ ನೀಡಬೇಡಿ' ಎಂದು ವ್ಯಕ್ತಿ ಹೇಳಿದ್ದಾನೆ. ತದನಂತರ ಫೋನ್ ಸ್ವಿಚ್ ಆಫ್ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಂಬ್​ ಕರೆಯಿಂದ ರೈಲ್ವೆ ನಿಲ್ದಾಣದಲ್ಲಿ ಭೀತಿ ಉಂಟಾಗಿತ್ತು. ನಿಲ್ದಾಣದಲ್ಲಿನ ಶೌಚಾಲಯ, ಕ್ಯಾಟರಿಂಗ್ ಸ್ಟಾಪ್​​, ಟಿಕೆಟ್ ಕೌಂಟರ್​ ಸೇರಿದಂತೆ ಎಲ್ಲೆಡೆ ಪರಿಶೀಲಿಸಲಾಗುತ್ತಿದೆ. ರೈಲ್ವೆ ಸೇವೆಯ ಮೇಲೆ ಪರಿಣಾಮ ಬೀರಿಲ್ಲ ಮತ್ತು ಸಮಯಕ್ಕೆ ಸರಿಯಾಗಿ ರೈಲುಗಳು ಸಂಚರಿಸುತ್ತಿವೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮುಂಬೈ(ಮಹಾರಾಷ್ಟ್ರ): ಮುಂಬೈನ ನಾಲ್ಕು ಸ್ಥಳಗಳಲ್ಲಿ ಬಾಂಬ್‌ ಇರಿಸಲಾಗಿದೆ ಎಂದು ಅನಾಮಧೇಯ ದೂರವಾಣಿ ಕರೆ ಬಂದಿದೆ. ನಗರದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ದಾದರ್, ಬೈಕುಲ್ಲಾ ಮತ್ತು ಬಾಲಿವುಡ್​ ಹಿರಿಯ ನಟ ಅಮಿತಾಬ್ ಬಚ್ಚನ್ ಅವರ ಬಂಗಲೆ ಬಳಿ ಬಾಂಬ್ ಇಡಲಾಗಿದೆ ಎಂದು ಫೋನ್​ ಕರೆ ಮೂಲಕ ಶುಕ್ರವಾರ ರಾತ್ರಿ ಬೆದರಿಕೆಯೊಡ್ಡಲಾಗಿದೆ.

ರಾತ್ರಿ 9 ರ ಸುಮಾರಿಗೆ ರೈಲ್ವೆ ಇಲಾಖೆಗೆ ಅನಾಮಧೇಯ ಬೆದರಿಕೆ ಕರೆ ಬಂದಿದೆ. ವ್ಯಕ್ತಿಯೋರ್ವ ಕರೆ ಮಾಡಿ, ಸಿಎಸ್‌ಎಂಟಿ, ದಾದರ್, ಬೈಕುಲ್ಲಾ ಮತ್ತು ಅಮಿತಾಬ್ ಬಚ್ಚನ್ ಅವರ ಬಂಗಲೆಗಳ ಬಳಿ ಬಾಂಬ್‌ ಇಡಲಾಗಿದೆ ಎಂದಿದ್ದಾನೆ. ತಕ್ಷಣ ರೈಲ್ವೆ ಅಧಿಕಾರಿಗಳು ಈ ಬಗ್ಗೆ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮುಂಬೈ ಪೊಲೀಸರು ಮತ್ತು ಬಾಂಬ್ ಸ್ಕ್ವಾಡ್ ಜಾಗೃತವಾಗಿದ್ದು, ಈ ಎಲ್ಲ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿವೆ. ಸಿಎಸ್‌ಎಂಟಿ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಶೋಧ ಕಾರ್ಯ ನಡೆಸಲಾಗಿದೆ. ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ.

ಅಲ್ಲದೆ, ಕರೆ ಬಂದ ಸಂಖ್ಯೆಗೆ ಮರಳಿ ಫೋನ್​ ಮಾಡಿದರೆ, 'ನನ್ನಲ್ಲಿರುವ ಮಾಹಿತಿಯನ್ನು ನಾನು ನಿಮಗೆ ನೀಡಿದ್ದೇನೆ. ಈಗ ನನ್ನನ್ನು ತೊಂದರೆ ನೀಡಬೇಡಿ' ಎಂದು ವ್ಯಕ್ತಿ ಹೇಳಿದ್ದಾನೆ. ತದನಂತರ ಫೋನ್ ಸ್ವಿಚ್ ಆಫ್ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಂಬ್​ ಕರೆಯಿಂದ ರೈಲ್ವೆ ನಿಲ್ದಾಣದಲ್ಲಿ ಭೀತಿ ಉಂಟಾಗಿತ್ತು. ನಿಲ್ದಾಣದಲ್ಲಿನ ಶೌಚಾಲಯ, ಕ್ಯಾಟರಿಂಗ್ ಸ್ಟಾಪ್​​, ಟಿಕೆಟ್ ಕೌಂಟರ್​ ಸೇರಿದಂತೆ ಎಲ್ಲೆಡೆ ಪರಿಶೀಲಿಸಲಾಗುತ್ತಿದೆ. ರೈಲ್ವೆ ಸೇವೆಯ ಮೇಲೆ ಪರಿಣಾಮ ಬೀರಿಲ್ಲ ಮತ್ತು ಸಮಯಕ್ಕೆ ಸರಿಯಾಗಿ ರೈಲುಗಳು ಸಂಚರಿಸುತ್ತಿವೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Last Updated : Aug 7, 2021, 3:44 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.