ETV Bharat / bharat

ಸಂಸತ್​ನಲ್ಲಿ ಸಂಸದ ಜಾಧವ್​ ಮಾತು... ಕಲಬುರಗಿಗೆ ಈ ಗಿಫ್ಟ್​ ನೀಡುವಂತೆ ಹಕ್ಕೋತ್ತಾಯ!

author img

By

Published : Mar 23, 2021, 12:56 AM IST

ಪ್ರಧಾನಮಂತ್ರಿ ಜನವಿಕಾಸ್​ ಕಾರ್ಯಕ್ರಮದಡಿ ಕಲಬುರಗಿಯನ್ನು ಸೇರಿಸುವಂತೆ ಸಂಸದ ಉಮೇಶ್​ ಜಾಧವ್​ ಸಂಸತ್​​ನಲ್ಲಿ ಹಕ್ಕೋತ್ತಾಯ ಸಲ್ಲಿಕೆ ಮಾಡಿದ್ದಾರೆ.

MP Umesh Jadhav
MP Umesh Jadhav

ನವದೆಹಲಿ/ಕಲಬುರಗಿ: 2011ರ ಜನಗಣತಿಯ ಪ್ರಕಾರ ಕಲಬುರಗಿಯ ನಗರದ ಜನಸಂಖ್ಯೆ 533,587 ಆಗಿದ್ದು, ಪ್ರಸ್ತುತ ಜನಸಂಖ್ಯೆಯು 6.5 ಲಕ್ಷಕ್ಕಿಂತ ಹೆಚ್ಚಿದೆ. ಹೀಗಾಗಿ ಎಂಸಿಎಗಾಗಿ ಪ್ರಧಾನಮಂತ್ರಿ ಜನವಿಕಾಸ್​ ಕಾರ್ಯಕ್ರಮ(ಪಿಎಂಜೆವಿಕೆ) ಅಡಿಯಲ್ಲಿ ಕಲಬುರಗಿ ಸಿಟಿ ಕಾರ್ಪೋರೇಶನ್​ ಸೇರ್ಪಡೆ ಕುರಿತು ಸಂಸತ್ತಿನಲ್ಲಿ ಉಮೇಶ್ ಜಾಧವ್ ಧ್ವನಿ ಎತ್ತಿದರು.

ಸದನದಲ್ಲಿ ಉಮೇಶ್ ಜಾಧವ್ ಮಾತು

ಸೋಮವಾರ ಸಂಸತ್ತಿನಲ್ಲಿ ಮಾತನಾಡಿದ ಕಲಬುರಗಿ ಬಿಜೆಪಿ ಸಂಸದ ಉಮೇಶ್ ಜಾಧವ್​, ಅಲ್ಪಸಂಖ್ಯಾತರ ಸಂಖ್ಯೆ ಹೆಚ್ಚಿರುವ ಕಲಬುರಗಿ ಮಹಾನಗರ ಪಾಲಿಕೆಯನ್ನು ಪ್ರಧಾನಮಂತ್ರಿ ಜನವಿಕಾಸ್ ಕಾರ್ಯಕ್ರಮದ ಅಲ್ಪಸಂಖ್ಯಾತ ಕೇಂದ್ರಿಕೃತ ಪ್ರದೇಶ ಅಡಿಗೆ ಸೇರಿಸುವಂತೆ ಹಕ್ಕೋತ್ತಾಯ ಮಾಡಿದ್ದಾರೆ.

ಇದನ್ನೂ ಓದಿ: ಕೋರ್ಟ್​​ನಿಂದ ತಡೆಯಾಜ್ಞೆ ತಂದಿರುವ ಆರು ಸಚಿವರು ರಾಜೀನಾಮೆ ನೀಡಲಿ: ಸಿದ್ದರಾಮಯ್ಯ ಆಗ್ರಹ

ಪ್ರಸ್ತುತ ಜನಸಂಖ್ಯೆ ಅಂದಾಜು 6.5 ಲಕ್ಷಕ್ಕಿಂತ ಹೆಚ್ಚು ಜನ ನಗರದಲ್ಲಿ ವಾಸವಿದ್ದಾರೆ. ಇದರಲ್ಲಿ ಶೇ.39% ರಷ್ಟು ಜನ ಸಂಖ್ಯೆ ಅಲ್ಪಸಂಖ್ಯಾತರಿದ್ದಾರೆ‌. ಪ್ರಧಾನಮಂತ್ರಿ ಜನ ವಿಕಾಸ್ ಕಾರ್ಯಕ್ರಮದಡಿ ಎಂಸಿಎಗಾಗಿ ಪ್ರಧಾನಮಂತ್ರಿ ಜನವಿಕಾಸ್​ ಕಾರ್ಯಕ್ರಮ(ಪಿಎಂಜೆವಿಕೆ) ಅಡಿಯಲ್ಲಿ ಸೇರಿಸಲು ಶೇ. 25% ರಷ್ಟು ಅಲ್ಪಸಂಖ್ಯಾತರು ಇರಬೇಕು. ಆದರೆ ಕಲಬುರಗಿಯಲ್ಲಿ ನಿಗದಿತ ಮಾನದಂಡಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಶೇ 39% ರಷ್ಟು ಅಲ್ಪಸಂಖ್ಯಾತರಿದ್ದಾರೆ ಎಂದರು.

ಪಿಎಂಜೆವಿಕೆ ಅಡಿಯ ಎಂಸಿಎನಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಸೇರಿಸಿದರೆ ಶಿಕ್ಷಣ, ಆರೋಗ್ಯ ಮತ್ತು ಕೌಶಲ್ಯ ಅಭಿವೃದ್ಧಿ ಹೆಚ್ಚಲಿದೆ. ಅಲ್ಪಸಂಖ್ಯಾತ ಸಮುದಾಯಗಳು, ಇತರೆ ಸಮುದಾಯಗಳ ಸಾಮಾಜಿಕ-ಆರ್ಥಿಕ ಮತ್ತು ಜೀವನ ಪರಿಸ್ಥಿತಿ ಸುಧಾರಿಸಲು ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ ಎಂದಿದ್ದಾರೆ.

ನವದೆಹಲಿ/ಕಲಬುರಗಿ: 2011ರ ಜನಗಣತಿಯ ಪ್ರಕಾರ ಕಲಬುರಗಿಯ ನಗರದ ಜನಸಂಖ್ಯೆ 533,587 ಆಗಿದ್ದು, ಪ್ರಸ್ತುತ ಜನಸಂಖ್ಯೆಯು 6.5 ಲಕ್ಷಕ್ಕಿಂತ ಹೆಚ್ಚಿದೆ. ಹೀಗಾಗಿ ಎಂಸಿಎಗಾಗಿ ಪ್ರಧಾನಮಂತ್ರಿ ಜನವಿಕಾಸ್​ ಕಾರ್ಯಕ್ರಮ(ಪಿಎಂಜೆವಿಕೆ) ಅಡಿಯಲ್ಲಿ ಕಲಬುರಗಿ ಸಿಟಿ ಕಾರ್ಪೋರೇಶನ್​ ಸೇರ್ಪಡೆ ಕುರಿತು ಸಂಸತ್ತಿನಲ್ಲಿ ಉಮೇಶ್ ಜಾಧವ್ ಧ್ವನಿ ಎತ್ತಿದರು.

ಸದನದಲ್ಲಿ ಉಮೇಶ್ ಜಾಧವ್ ಮಾತು

ಸೋಮವಾರ ಸಂಸತ್ತಿನಲ್ಲಿ ಮಾತನಾಡಿದ ಕಲಬುರಗಿ ಬಿಜೆಪಿ ಸಂಸದ ಉಮೇಶ್ ಜಾಧವ್​, ಅಲ್ಪಸಂಖ್ಯಾತರ ಸಂಖ್ಯೆ ಹೆಚ್ಚಿರುವ ಕಲಬುರಗಿ ಮಹಾನಗರ ಪಾಲಿಕೆಯನ್ನು ಪ್ರಧಾನಮಂತ್ರಿ ಜನವಿಕಾಸ್ ಕಾರ್ಯಕ್ರಮದ ಅಲ್ಪಸಂಖ್ಯಾತ ಕೇಂದ್ರಿಕೃತ ಪ್ರದೇಶ ಅಡಿಗೆ ಸೇರಿಸುವಂತೆ ಹಕ್ಕೋತ್ತಾಯ ಮಾಡಿದ್ದಾರೆ.

ಇದನ್ನೂ ಓದಿ: ಕೋರ್ಟ್​​ನಿಂದ ತಡೆಯಾಜ್ಞೆ ತಂದಿರುವ ಆರು ಸಚಿವರು ರಾಜೀನಾಮೆ ನೀಡಲಿ: ಸಿದ್ದರಾಮಯ್ಯ ಆಗ್ರಹ

ಪ್ರಸ್ತುತ ಜನಸಂಖ್ಯೆ ಅಂದಾಜು 6.5 ಲಕ್ಷಕ್ಕಿಂತ ಹೆಚ್ಚು ಜನ ನಗರದಲ್ಲಿ ವಾಸವಿದ್ದಾರೆ. ಇದರಲ್ಲಿ ಶೇ.39% ರಷ್ಟು ಜನ ಸಂಖ್ಯೆ ಅಲ್ಪಸಂಖ್ಯಾತರಿದ್ದಾರೆ‌. ಪ್ರಧಾನಮಂತ್ರಿ ಜನ ವಿಕಾಸ್ ಕಾರ್ಯಕ್ರಮದಡಿ ಎಂಸಿಎಗಾಗಿ ಪ್ರಧಾನಮಂತ್ರಿ ಜನವಿಕಾಸ್​ ಕಾರ್ಯಕ್ರಮ(ಪಿಎಂಜೆವಿಕೆ) ಅಡಿಯಲ್ಲಿ ಸೇರಿಸಲು ಶೇ. 25% ರಷ್ಟು ಅಲ್ಪಸಂಖ್ಯಾತರು ಇರಬೇಕು. ಆದರೆ ಕಲಬುರಗಿಯಲ್ಲಿ ನಿಗದಿತ ಮಾನದಂಡಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಶೇ 39% ರಷ್ಟು ಅಲ್ಪಸಂಖ್ಯಾತರಿದ್ದಾರೆ ಎಂದರು.

ಪಿಎಂಜೆವಿಕೆ ಅಡಿಯ ಎಂಸಿಎನಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಸೇರಿಸಿದರೆ ಶಿಕ್ಷಣ, ಆರೋಗ್ಯ ಮತ್ತು ಕೌಶಲ್ಯ ಅಭಿವೃದ್ಧಿ ಹೆಚ್ಚಲಿದೆ. ಅಲ್ಪಸಂಖ್ಯಾತ ಸಮುದಾಯಗಳು, ಇತರೆ ಸಮುದಾಯಗಳ ಸಾಮಾಜಿಕ-ಆರ್ಥಿಕ ಮತ್ತು ಜೀವನ ಪರಿಸ್ಥಿತಿ ಸುಧಾರಿಸಲು ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.