ETV Bharat / bharat

ಕೇರಳದ ಕಿರಿಯ ಮೇಯರ್​ಗೆ ಕರೆ ಮಾಡಿ ಶುಭ ಕೋರಿದ ನಟ ಮೋಹನ್​ ಲಾಲ್

author img

By

Published : Dec 27, 2020, 3:24 PM IST

ಆರ್ಯ ರಾಜೇಂದ್ರನ್​ ಕಾಲೇಜು ವಿದ್ಯಾರ್ಥಿನಿ. ಈಗ ಈಕೆಯ ಹೆಸರು ದೇಶವ್ಯಾಪಿ ಪಸರಿಸಿದೆ. ಅತಿ ಸಣ್ಣ ವಯಸ್ಸಿನಲ್ಲಿಯೇ ಈ ಯುವತಿ ಕೇರಳ ರಾಜಧಾನಿ ತಿರುವನಂತಪುರಂನ ಮೇಯರ್ ಪಟ್ಟ ಅಲಂಕರಿಸಿರುವುದು ಇದಕ್ಕೆ ಕಾರಣ. ತನ್ನೂರಿನ ಕಿರಿಯ ಮೇಯರ್​ಗೆ ಕೇರಳದ ಜನಪ್ರಿಯ ನಟ ಮೋಹನ್​ ಲಾಲ್ ಕರೆ ಮಾಡಿ ಶುಭ ಕೋರಿದರು.

Mohanlal
Mohanlal

ತಿರುವನಂತಪುರಂ (ಕೇರಳ): ಮಲಯಾಳಂನ ಸೂಪರ್​ಸ್ಟಾರ್​ ಮೋಹನ್ ಲಾಲ್ ಅವರು ತಮ್ಮ ಊರಿನಿಂದ ನೇಮಕಗೊಂಡ ರಾಜ್ಯದ ಅತಿ ಕಿರಿಯ ಮೇಯರ್ ಆರ್ಯ ರಾಜೇಂದ್ರನ್ ಅವರಿಗೆ ಕರೆ ಮಾಡಿ ಶುಭ ಹಾರೈಸಿದ್ದಾರೆ.

ನಟ ಮೋಹನ್​ ಲಾಲ್ ಮತ್ತು ಆರ್ಯ ರಾಜೇಂದ್ರನ್ ಫೋನ್ ಸಂಭಾಷಣೆ

ಆರ್ಯ ತನ್ನ ನಾಯಕತ್ವದಲ್ಲಿ ತಿರುವನಂತಪುರಂ ನಗರವನ್ನು ಉತ್ತಮ ಮತ್ತು ಸುಂದರವಾಗಿಸಬೇಕು. ಮುಂದಿನ ಬಾರಿ ಅವರು ತಿರುವನಂತಪುರಂಗೆ ಬಂದಾಗ ಆಕೆಯನ್ನು ಭೇಟಿಯಾಗುವುದಾಗಿ ಮೋಹನ್‌ಲಾಲ್ ತಿಳಿಸಿದ್ದಾರೆ.

ಓದಿ: 21 ವರ್ಷದ ಯುವತಿ ಆರ್ಯ ರಾಜೇಂದ್ರನ್ ತಿರುವನಂತಪುರಂ ಮೇಯರ್​ ಆಗಿ ಆಯ್ಕೆ!

ಕಾಲೇಜು ವಿದ್ಯಾರ್ಥಿನಿಯಾಗಿರುವ ಆರ್ಯ ರಾಜೇಂದ್ರನ್​ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಡಳಿತಾರೂಢ ಎಲ್​ಡಿಎಫ್​ನಿಂದ ಸ್ಪರ್ಧಿಸಿ 549 ಮತಗಳ ಅಂತರದಿಂದ ಜಯಶಾಲಿಯಾಗಿದ್ದರು. ಪ್ರಸ್ತುತ ಇವರು ತಿರುವನಂತಪುರಂನ ಆಲ್‌ ಸೇಂಟ್ಸ್ ಕಾಲೇಜಿನಲ್ಲಿ ಎರಡನೇ ವರ್ಷದ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಾರೆ.

ತಿರುವನಂತಪುರಂ (ಕೇರಳ): ಮಲಯಾಳಂನ ಸೂಪರ್​ಸ್ಟಾರ್​ ಮೋಹನ್ ಲಾಲ್ ಅವರು ತಮ್ಮ ಊರಿನಿಂದ ನೇಮಕಗೊಂಡ ರಾಜ್ಯದ ಅತಿ ಕಿರಿಯ ಮೇಯರ್ ಆರ್ಯ ರಾಜೇಂದ್ರನ್ ಅವರಿಗೆ ಕರೆ ಮಾಡಿ ಶುಭ ಹಾರೈಸಿದ್ದಾರೆ.

ನಟ ಮೋಹನ್​ ಲಾಲ್ ಮತ್ತು ಆರ್ಯ ರಾಜೇಂದ್ರನ್ ಫೋನ್ ಸಂಭಾಷಣೆ

ಆರ್ಯ ತನ್ನ ನಾಯಕತ್ವದಲ್ಲಿ ತಿರುವನಂತಪುರಂ ನಗರವನ್ನು ಉತ್ತಮ ಮತ್ತು ಸುಂದರವಾಗಿಸಬೇಕು. ಮುಂದಿನ ಬಾರಿ ಅವರು ತಿರುವನಂತಪುರಂಗೆ ಬಂದಾಗ ಆಕೆಯನ್ನು ಭೇಟಿಯಾಗುವುದಾಗಿ ಮೋಹನ್‌ಲಾಲ್ ತಿಳಿಸಿದ್ದಾರೆ.

ಓದಿ: 21 ವರ್ಷದ ಯುವತಿ ಆರ್ಯ ರಾಜೇಂದ್ರನ್ ತಿರುವನಂತಪುರಂ ಮೇಯರ್​ ಆಗಿ ಆಯ್ಕೆ!

ಕಾಲೇಜು ವಿದ್ಯಾರ್ಥಿನಿಯಾಗಿರುವ ಆರ್ಯ ರಾಜೇಂದ್ರನ್​ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಡಳಿತಾರೂಢ ಎಲ್​ಡಿಎಫ್​ನಿಂದ ಸ್ಪರ್ಧಿಸಿ 549 ಮತಗಳ ಅಂತರದಿಂದ ಜಯಶಾಲಿಯಾಗಿದ್ದರು. ಪ್ರಸ್ತುತ ಇವರು ತಿರುವನಂತಪುರಂನ ಆಲ್‌ ಸೇಂಟ್ಸ್ ಕಾಲೇಜಿನಲ್ಲಿ ಎರಡನೇ ವರ್ಷದ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.