ETV Bharat / bharat

ಮಹಿಳೆಯರು ಟಾರ್ಗೆಟ್​ ಆಗುತ್ತಿದ್ದಾರೆ.. ಹಿಜಾಬ್​ ಪರ ಭುವನ ಸುಂದರಿ ಹರ್ನಾಜ್​ ಸಂಧು ಧ್ವನಿ..

ಮಹಿಳೆಯರು ತಾವು ಅಂದುಕೊಂಡಂತೆ ಬದುಕಲು ಬಿಡಿ. ಅವರಿಗೆ ಅವರದೇ ಆದ ಆಯ್ಕೆಗಳಿರುತ್ತವೆ. ಅದರಂತೆಯೇ ಜೀವನ ನಡೆಸಲು ಬಿಡಿ. ಅವಳನ್ನು ಹಾರಲು ಬಿಡಿ, ಅವರ ರೆಕ್ಕೆಯನ್ನು ಕತ್ತರಿಸಬೇಡಿ ಎಂದು ಹೇಳಿದ್ದಾರೆ. ಈ ಮೂಲಕ ಹಿಜಾಬ್​ ಧಾರಣೆ ತಪ್ಪಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ..

author img

By

Published : Mar 30, 2022, 3:36 PM IST

harnaaz-sandhu
ಹರ್ನಾಜ್​ ಸಂಧು

2021ರ ಭುವನ ಸುಂದರಿ ಸ್ಪರ್ಧೆ ವಿಜೇತೆ ಹರ್ನಾಜ್​ ಸಂಧು ಹಿಜಾಬ್​ ಧರಿಸುವುದು ಮಹಿಳೆಯರ ಹಕ್ಕು. ಅದರ ಮೇಲೆ ಹೇರಿಕೆ ಸಲ್ಲದು ಎಂದೇಳುವ ಮೂಲಕ ಹಿಜಾಬ್​ ಪರ ಧ್ವನಿ ಎತ್ತಿದ್ದಾರೆ. ಮಹಿಳೆಯರು ತಮ್ಮ ಇಷ್ಟದ ಜೀವನವನ್ನು ನಡೆಸಲು ಬಿಡಿ. ಅವರು ಹಾಕುವ ಬಟ್ಟೆಯ ಮೇಲೆ ಅವರನ್ನು ಅಳೆಯಬೇಡಿ. ಹಿಜಾಬ್​ ಧರಿಸಿದರೆ ಅವರನ್ನು ಯಾಕೆ ಟಾರ್ಗೆಟ್​ ಮಾಡ್ತೀರಾ? ಎಂದು ಭುವನ ಸುಂದರಿ ಸ್ಪರ್ಧೆ ವಿಜೇತೆ ಹರ್ನಾಜ್​ ಸಂಧು ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ಮಧ್ಯಪ್ರದೇಶದ ಶಾಲೆಯೊಂದರಲ್ಲಿ ವಿದ್ಯಾರ್ಥಿಯೊಬ್ಬಳು ಹಿಜಾಬ್​ ಧರಿಸಿ ನಮಾಜ್​ ಮಾಡುತ್ತಿದ್ದ ವಿಡಿಯೋವೊಂದು ವೈರಲ್​ ಆಗಿತ್ತು. ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಪತ್ರಕರ್ತರೊಬ್ಬರು ಹಿಜಾಬ್​ ಬಗ್ಗೆ ಪ್ರಶ್ನಿಸಿದಾಗ ಹರ್ನಾಜ್​ ಸಂಧು ಹಿಜಾಬ್​ ಪರ ಮಾತನಾಡಿದ್ದಾರೆ. ಹಿಜಾಬ್​ ವಿಷಯದಲ್ಲಿ ಮಹಿಳೆಯರನ್ನು ಟಾರ್ಗೆಟ್​ ಮಾಡಲಾಗಿದೆ.

ಮಹಿಳೆಯರು ತಾವು ಅಂದುಕೊಂಡಂತೆ ಬದುಕಲು ಬಿಡಿ. ಅವರಿಗೆ ಅವರದೇ ಆದ ಆಯ್ಕೆಗಳಿರುತ್ತವೆ. ಅದರಂತೆಯೇ ಜೀವನ ನಡೆಸಲು ಬಿಡಿ. ಅವಳನ್ನು ಹಾರಲು ಬಿಡಿ, ಅವರ ರೆಕ್ಕೆಯನ್ನು ಕತ್ತರಿಸಬೇಡಿ ಎಂದು ಹೇಳಿದ್ದಾರೆ. ಈ ಮೂಲಕ ಹಿಜಾಬ್​ ಧಾರಣೆ ತಪ್ಪಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಶಾಲಾ-ಕಾಲೇಜುಗಳಲ್ಲಿ ಹಿಜಾಬ್​ ಧರಿಸಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್‌ನ ತ್ರಿಸದಸ್ಯ ಪೀಠ ವಜಾಗೊಳಿಸಿ, ಹಿಜಾಬ್​ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಮತ್ತು ಶಾಲಾ-ಕಾಲೇಜುಗಳಲ್ಲಿ ಏಕರೂಪದ ಉಡುಗೆ ನಿಯಮವನ್ನು ಅನುಸರಿಸಬೇಕು ಎಂದು ತೀರ್ಪು ನೀಡಿದೆ. ಇದರ ವಿರುದ್ಧ ಸುಪ್ರೀಂಕೋರ್ಟ್​ ಮೆಟ್ಟಿಲೇರಲಾಗಿದೆ.

ಓದಿ: 'ಶರ್ಮಾಜಿ ನಮ್ಕೀನ್' ವಿಶೇಷ ಪ್ರದರ್ಶನದಲ್ಲಿ ಭಾಗಿಯಾದ ಬಾಲಿವುಡ್ ಸೆಲೆಬ್ರಿಟಿಗಳು

2021ರ ಭುವನ ಸುಂದರಿ ಸ್ಪರ್ಧೆ ವಿಜೇತೆ ಹರ್ನಾಜ್​ ಸಂಧು ಹಿಜಾಬ್​ ಧರಿಸುವುದು ಮಹಿಳೆಯರ ಹಕ್ಕು. ಅದರ ಮೇಲೆ ಹೇರಿಕೆ ಸಲ್ಲದು ಎಂದೇಳುವ ಮೂಲಕ ಹಿಜಾಬ್​ ಪರ ಧ್ವನಿ ಎತ್ತಿದ್ದಾರೆ. ಮಹಿಳೆಯರು ತಮ್ಮ ಇಷ್ಟದ ಜೀವನವನ್ನು ನಡೆಸಲು ಬಿಡಿ. ಅವರು ಹಾಕುವ ಬಟ್ಟೆಯ ಮೇಲೆ ಅವರನ್ನು ಅಳೆಯಬೇಡಿ. ಹಿಜಾಬ್​ ಧರಿಸಿದರೆ ಅವರನ್ನು ಯಾಕೆ ಟಾರ್ಗೆಟ್​ ಮಾಡ್ತೀರಾ? ಎಂದು ಭುವನ ಸುಂದರಿ ಸ್ಪರ್ಧೆ ವಿಜೇತೆ ಹರ್ನಾಜ್​ ಸಂಧು ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ಮಧ್ಯಪ್ರದೇಶದ ಶಾಲೆಯೊಂದರಲ್ಲಿ ವಿದ್ಯಾರ್ಥಿಯೊಬ್ಬಳು ಹಿಜಾಬ್​ ಧರಿಸಿ ನಮಾಜ್​ ಮಾಡುತ್ತಿದ್ದ ವಿಡಿಯೋವೊಂದು ವೈರಲ್​ ಆಗಿತ್ತು. ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಪತ್ರಕರ್ತರೊಬ್ಬರು ಹಿಜಾಬ್​ ಬಗ್ಗೆ ಪ್ರಶ್ನಿಸಿದಾಗ ಹರ್ನಾಜ್​ ಸಂಧು ಹಿಜಾಬ್​ ಪರ ಮಾತನಾಡಿದ್ದಾರೆ. ಹಿಜಾಬ್​ ವಿಷಯದಲ್ಲಿ ಮಹಿಳೆಯರನ್ನು ಟಾರ್ಗೆಟ್​ ಮಾಡಲಾಗಿದೆ.

ಮಹಿಳೆಯರು ತಾವು ಅಂದುಕೊಂಡಂತೆ ಬದುಕಲು ಬಿಡಿ. ಅವರಿಗೆ ಅವರದೇ ಆದ ಆಯ್ಕೆಗಳಿರುತ್ತವೆ. ಅದರಂತೆಯೇ ಜೀವನ ನಡೆಸಲು ಬಿಡಿ. ಅವಳನ್ನು ಹಾರಲು ಬಿಡಿ, ಅವರ ರೆಕ್ಕೆಯನ್ನು ಕತ್ತರಿಸಬೇಡಿ ಎಂದು ಹೇಳಿದ್ದಾರೆ. ಈ ಮೂಲಕ ಹಿಜಾಬ್​ ಧಾರಣೆ ತಪ್ಪಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಶಾಲಾ-ಕಾಲೇಜುಗಳಲ್ಲಿ ಹಿಜಾಬ್​ ಧರಿಸಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್‌ನ ತ್ರಿಸದಸ್ಯ ಪೀಠ ವಜಾಗೊಳಿಸಿ, ಹಿಜಾಬ್​ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಮತ್ತು ಶಾಲಾ-ಕಾಲೇಜುಗಳಲ್ಲಿ ಏಕರೂಪದ ಉಡುಗೆ ನಿಯಮವನ್ನು ಅನುಸರಿಸಬೇಕು ಎಂದು ತೀರ್ಪು ನೀಡಿದೆ. ಇದರ ವಿರುದ್ಧ ಸುಪ್ರೀಂಕೋರ್ಟ್​ ಮೆಟ್ಟಿಲೇರಲಾಗಿದೆ.

ಓದಿ: 'ಶರ್ಮಾಜಿ ನಮ್ಕೀನ್' ವಿಶೇಷ ಪ್ರದರ್ಶನದಲ್ಲಿ ಭಾಗಿಯಾದ ಬಾಲಿವುಡ್ ಸೆಲೆಬ್ರಿಟಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.