ETV Bharat / bharat

ಪೇಟಿಎಂ ಖಾತೆಯನ್ನೇ ಹೊಂದಿಲ್ಲ: ಆದರೂ ಪೇಟಿಎಂ ಮೂಲಕವೇ 20 ಸಾವಿರ ರೂ. ಕಳೆದುಕೊಂಡ!

author img

By

Published : May 26, 2022, 4:03 PM IST

ತಮ್ಮ ಬ್ಯಾಂಕ್​ ಖಾತೆಯಲ್ಲಿ ಹಣ ಕಡಿತವಾದ ಬಗ್ಗೆ ಬ್ಯಾಂಕ್​ನವರನ್ನು ಸಂಪರ್ಕಿಸಿದಾಗ ಮೂರು ಬಾರಿ ಪೇಟಿಎಂ ಮೂಲಕ ಹಣವನ್ನು ಹಿಂಪಡೆಯಲಾಗಿದೆ ಎಂಬುದು ಬಯಲಿಗೆ ಬಂದಿದೆ.

Man loses Rs. 20,000 through Paytm
ಪೇಟಿಎಂ ಮೂಲಕ 20 ಸಾವಿರ ರೂ. ಕಳೆದುಕೊಂಡ!

ಮಲಪ್ಪುರಂ (ಕೇರಳ): ಪೇಟಿಎಂ ಖಾತೆಯನ್ನೇ ಹೊಂದಿರದ ವ್ಯಕ್ತಿಯ ಬ್ಯಾಂಕ್​ ಖಾತೆಯಿಂದ 20 ಸಾವಿರ ರೂ. ಕಡಿತವಾಗಿದೆ. ತನ್ನ ಬಳಿ ಪೇಟಿಎಂ ಖಾತೆ ಇಲ್ಲದೇ ಇದ್ದರೂ ಪೇಟಿಎಂ ಮೂಲಕ ಹಣ ವಿತ್​ಡ್ರಾ ಮಾಡಲಾಗಿದೆ ಎಂದು ತೋರಿಸಿದೆ. ಈ ವಿಚಿತ್ರ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಇಲ್ಲಿನ ವಾಣಿಯಂಬಲಂ ಬಳಿಯ ವಂಡೂರಿನ ನಿವಾಸಿ ಅನೀಸ್ ರೆಹಮಾನ್ 20 ಸಾವಿರ ರೂಪಾಯಿ ಕಳೆದುಕೊಂಡ ವ್ಯಕ್ತಿಯಾಗಿದ್ದು, ಇದೀಗ ಈ ಬಗ್ಗೆ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.

ಹಣ ಕಡಿತವಾಗಿದ್ದು ಹೇಗೆ?: ತಮ್ಮ ಖಾತೆಯಲ್ಲಿ ಹಣ ಕಡಿತವಾದ ಬಗ್ಗೆ ಅನೀಸ್ ಬ್ಯಾಂಕ್​ನವರನ್ನು ಸಂಪರ್ಕಿಸಿದ್ದಾರೆ. ಅಂತೆಯೇ, ಬ್ಯಾಂಕ್ ಅಧಿಕಾರಿಗಳು ಈತನ ಬ್ಯಾಂಕ್​​ ವಹಿವಾಟುಗಳನ್ನು ಪರಿಶೀಲಿಸಿದ್ದಾರೆ. ಆಗ ಮೂರು ಬಾರಿ ಪೇಟಿಎಂ ಮೂಲಕ ಹಣವನ್ನು ಹಿಂಪಡೆಯಲಾಗಿದೆ ಎಂಬುದಾಗಿ ಅನೀಸ್​ಗೆ ತಿಳಿಸಿದ್ದಾರೆ. ಆಗ ಅನೀಸ್ ನಾನು ಪೇಟಿಎಂ ಖಾತೆಯನ್ನೇ ಹೊಂದಿಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬ್ಯಾಂಕ್​ ಅಧಿಕಾರಿಗಳು ಈ ರೀತಿಯ ದೂರು ಮೊದಲ ಬಾರಿಗೆ ನಮ್ಮ ಬಳಿಗೆ ಬಂದಿದೆ. ಸಾಮಾನ್ಯವಾಗಿ ಯುಪಿಐ ಪಾವತಿ ಮತ್ತು ಅವರ ಸಮಸ್ಯೆಗಳನ್ನು ಬ್ಯಾಂಕ್‌ನ ಐಟಿ ವಿಭಾಗದಿಂದ ಪರಿಶೀಲಿಸಿ ಪರಿಹರಿಸಲಾಗುತ್ತದೆ. ತಾಂತ್ರಿಕ ಕಾರಣಗಳಿಂದ ಹಣ ಕಳೆದುಕೊಂಡರೆ ವಾರದೊಳಗೆ ಖಾತೆಗೆ ಮರು ಜಮೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಆದಾಗ್ಯೂ, ಈ ಪ್ರಕರಣದ ಸೈಬರ್ ಕಳ್ಳರ ಕೈವಾಡದಂತಿದೆ. ಈ ಬಗ್ಗೆ ಪೊಲೀಸ್ ಸಹ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಜೂನ್‌1 ರಿಂದ ಥರ್ಡ್‌ ಪಾರ್ಟಿ ಮೋಟಾರು ವಾಹನ ವಿಮಾ ಕಂತು ಹೆಚ್ಚಳ

ಮಲಪ್ಪುರಂ (ಕೇರಳ): ಪೇಟಿಎಂ ಖಾತೆಯನ್ನೇ ಹೊಂದಿರದ ವ್ಯಕ್ತಿಯ ಬ್ಯಾಂಕ್​ ಖಾತೆಯಿಂದ 20 ಸಾವಿರ ರೂ. ಕಡಿತವಾಗಿದೆ. ತನ್ನ ಬಳಿ ಪೇಟಿಎಂ ಖಾತೆ ಇಲ್ಲದೇ ಇದ್ದರೂ ಪೇಟಿಎಂ ಮೂಲಕ ಹಣ ವಿತ್​ಡ್ರಾ ಮಾಡಲಾಗಿದೆ ಎಂದು ತೋರಿಸಿದೆ. ಈ ವಿಚಿತ್ರ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಇಲ್ಲಿನ ವಾಣಿಯಂಬಲಂ ಬಳಿಯ ವಂಡೂರಿನ ನಿವಾಸಿ ಅನೀಸ್ ರೆಹಮಾನ್ 20 ಸಾವಿರ ರೂಪಾಯಿ ಕಳೆದುಕೊಂಡ ವ್ಯಕ್ತಿಯಾಗಿದ್ದು, ಇದೀಗ ಈ ಬಗ್ಗೆ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.

ಹಣ ಕಡಿತವಾಗಿದ್ದು ಹೇಗೆ?: ತಮ್ಮ ಖಾತೆಯಲ್ಲಿ ಹಣ ಕಡಿತವಾದ ಬಗ್ಗೆ ಅನೀಸ್ ಬ್ಯಾಂಕ್​ನವರನ್ನು ಸಂಪರ್ಕಿಸಿದ್ದಾರೆ. ಅಂತೆಯೇ, ಬ್ಯಾಂಕ್ ಅಧಿಕಾರಿಗಳು ಈತನ ಬ್ಯಾಂಕ್​​ ವಹಿವಾಟುಗಳನ್ನು ಪರಿಶೀಲಿಸಿದ್ದಾರೆ. ಆಗ ಮೂರು ಬಾರಿ ಪೇಟಿಎಂ ಮೂಲಕ ಹಣವನ್ನು ಹಿಂಪಡೆಯಲಾಗಿದೆ ಎಂಬುದಾಗಿ ಅನೀಸ್​ಗೆ ತಿಳಿಸಿದ್ದಾರೆ. ಆಗ ಅನೀಸ್ ನಾನು ಪೇಟಿಎಂ ಖಾತೆಯನ್ನೇ ಹೊಂದಿಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬ್ಯಾಂಕ್​ ಅಧಿಕಾರಿಗಳು ಈ ರೀತಿಯ ದೂರು ಮೊದಲ ಬಾರಿಗೆ ನಮ್ಮ ಬಳಿಗೆ ಬಂದಿದೆ. ಸಾಮಾನ್ಯವಾಗಿ ಯುಪಿಐ ಪಾವತಿ ಮತ್ತು ಅವರ ಸಮಸ್ಯೆಗಳನ್ನು ಬ್ಯಾಂಕ್‌ನ ಐಟಿ ವಿಭಾಗದಿಂದ ಪರಿಶೀಲಿಸಿ ಪರಿಹರಿಸಲಾಗುತ್ತದೆ. ತಾಂತ್ರಿಕ ಕಾರಣಗಳಿಂದ ಹಣ ಕಳೆದುಕೊಂಡರೆ ವಾರದೊಳಗೆ ಖಾತೆಗೆ ಮರು ಜಮೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಆದಾಗ್ಯೂ, ಈ ಪ್ರಕರಣದ ಸೈಬರ್ ಕಳ್ಳರ ಕೈವಾಡದಂತಿದೆ. ಈ ಬಗ್ಗೆ ಪೊಲೀಸ್ ಸಹ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಜೂನ್‌1 ರಿಂದ ಥರ್ಡ್‌ ಪಾರ್ಟಿ ಮೋಟಾರು ವಾಹನ ವಿಮಾ ಕಂತು ಹೆಚ್ಚಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.