ETV Bharat / bharat

ಅಯೋಧ್ಯೆಯ ರಾಮಮಂದಿರದಲ್ಲಿ ಚಂದ್ರಾಪುರದ 'ತೇಗ'ದ ಮರ ಬಳಕೆ

author img

By

Published : Mar 28, 2023, 1:29 PM IST

Updated : Mar 28, 2023, 1:56 PM IST

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಗುಣಮಟ್ಟದ ವಸ್ತುಗಳನ್ನು ಬಳಸಲಾಗುತ್ತಿದೆ. ದೇವಾಲಯದ ನಿರ್ಮಾಣಕ್ಕೆ ಬಳಸಲಾದ ಮರಳುಗಲ್ಲು ರಾಜಸ್ಥಾನದಿಂದ ಬಂದಿದ್ದರೆ, ವಿಗ್ರಹಗಳ ನಿರ್ಮಾಣಕ್ಕೆ ಶಾಲಿಗ್ರಾಮ ಶಿಲೆಗಳನ್ನು ನೇಪಾಳದಿಂದ ಆಮದು ಮಾಡಿಕೊಳ್ಳಲಾಗಿದೆ.

teak wood used in Ram temple in Ayodhya
ರಾಮಮಂದಿರದಲ್ಲಿ ಚಂದ್ರಾಪುರದ 'ತೇಗ'ದ ಮರ ಬಳಕೆ

ಚಂದ್ರಾಪುರ (ಮಹಾರಾಷ್ಟ್ರ): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಮಹಾರಾಷ್ಟ್ರದ ಚಂದ್ರಾಪುರದ ಕಾಡುಗಳಲ್ಲಿ ಬೆಳೆಯುವ ತೇಗದ ಮರವನ್ನು ಒದಗಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಭವ್ಯವಾದ ರಾಮಮಂದಿರ ಸಾವಿರ ವರ್ಷಗಳ ಕಾಲ ರಚನಾತ್ಮಕವಾಗಿ ಗಟ್ಟಿಮುಟ್ಟಾಗಿ ಉಳಿಯುವ ರೀತಿಯಲ್ಲಿ ನಿರ್ಮಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಚಂದ್ರಾಪುರ ಜಿಲ್ಲೆಯ ಅರಣ್ಯಗಳಿಂದ ತೇಗದ ಮರವನ್ನು ಮಹಾರಾಷ್ಟ್ರದ ಅರಣ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ (FDCM) ಮೂಲಕ ಒದಗಿಸಲಾಗುತ್ತಿದೆ. ಮೊದಲ ರವಾನೆ ಮಾರ್ಚ್ 29 ರಂದು ಭವ್ಯವಾದ ಶೋಭಾ ಯಾತ್ರೆ ಮೂಲಕ ಸಾಗಲಿದೆ.

ದೇವಸ್ಥಾನಕ್ಕೆ 1800 ಕ್ಯೂಬಿಕ್ ಮೀಟರ್ ಮರದ ಅಗತ್ಯವಿದೆ. ಮಹಾರಾಷ್ಟ್ರದ ಅರಣ್ಯ ಅಭಿವೃದ್ಧಿ ನಿಗಮ ಮರವನ್ನು ಪೂರೈಸಲು ಬೇಕಾದ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದೆ. ನಾಳೆ 1800 ಕ್ಯೂಬಿಕ್ ಮೀಟರ್ ಮರದ ಮೊದಲ ರವಾನೆಯು ಡಿಪೋದಿಂದ ಅಯೋಧ್ಯೆಗೆ ಹೊರಡಲಿದೆ. ಅಯೋಧ್ಯೆಗೆ ಹೋಗುವ ಮಾರ್ಗದಲ್ಲಿ ಅನೇಕ ಸ್ಥಳಗಳಲ್ಲಿ ಭಕ್ತರು ಪೂಜೆ ಸಲ್ಲಿಸುತ್ತಾರೆ ಎಂದು ಸಂಸ್ಕೃತಿ ಮತ್ತು ಅರಣ್ಯ ಸಚಿವ ಸುಧೀರ್ ಮುಂಗಂಟಿವಾರ್ ಹೇಳಿದ್ದಾರೆ.

ವೇಳಾಪಟ್ಟಿ ಹೀಗಿದೆ..: ಮೊದಲ ರವಾನೆ ಮಾ.29 ರಂದು ಎಫ್‌ಡಿಸಿಎಂ ಡಿಪೋದಿಂದ ಅಯೋಧ್ಯೆಗೆ ಹೊರಡಲಿದೆ. ಕಳಿಸಿದ ಮರದ ಬೆಲೆ 1.32 ಕೋಟಿ ರೂ ಎನ್ನಲಾಗಿದೆ. ಮೊದಲು ಚಂದ್ರಾಪುರದ ಮಾತಾ ಮಹಾಕಾಳಿ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಹೊರಡಲಿದೆ. ಮಾರ್ಗಮಧ್ಯೆ ಹಲವೆಡೆ ಮರದ ಪೂಜೆ ನಡೆಯಲಿದೆ. ಮಧ್ಯಾಹ್ನ 3.30ಕ್ಕೆ ಬಲ್ಲಾರಾಪುರದ ಅಲ್ಲಪಲ್ಲಿ ರಸ್ತೆಯಲ್ಲಿ ಅರಣ್ಯ ಪ್ರವೇಶ ದ್ವಾರದಿಂದ ಮೆರವಣಿಗೆ ಆರಂಭವಾಗಲಿದೆ. ಈ ಮೆರವಣಿಗೆಯು ಸಂಜೆ 6 ಗಂಟೆಗೆ ಮಾತಾ ಕಾಳಿ ಮಂದಿರಕ್ಕೆ ತಲುಪಲಿದ್ದು, ಅಲ್ಲಿ ಸರ್ವಧರ್ಮದ ಆರಾಧನೆ ಮತ್ತು ಅದ್ಧೂರಿ ಸಮಾರಂಭವನ್ನು ಆಯೋಜಿಸಲಾಗಿದೆ. ರಾತ್ರಿ 9 ಗಂಟೆಗೆ ಚಂದ್ರಾಪುರದ ಚಂದಾ ಕ್ಲಬ್‌ನಲ್ಲಿ ರಾಮ್ ಗೀತ್ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಮತ್ತು ಅಲ್ಲಿ ಖ್ಯಾತ ಗಾಯಕ ಕೈಲಾಶ್ ಖೇರ್ ಕಾರ್ಯಕ್ರಮ ನೀಡುತ್ತಾರೆ. ಈ ಕಾರ್ಯಕ್ರಮಕ್ಕೆ ಹಲವು ಗಣ್ಯರನ್ನು ಆಹ್ವಾನಿಸಲಾಗುತ್ತಿದೆ. ಮಹಾರಾಷ್ಟ್ರ ಸರ್ಕಾರ ಅಯೋಧ್ಯೆಗೆ ಮರವನ್ನು ಅತ್ಯಂತ ಕಡಿಮೆ ದರದಲ್ಲಿ ನೀಡಲಿದೆ ಎಂದು ಮುಂಗಂಟಿವಾರ್ ಹೇಳಿದ್ದಾರೆ.

ರಾಮಮಂದಿರವನ್ನು ನಿರ್ಮಿಸುವ ಉದ್ದೇಶಕ್ಕಾಗಿ ರಚಿಸಲಾದ ಶ್ರೀ ರಾಮಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್, ದೇವಾಲಯದ ಕರಕುಶಲತೆ ಬಗ್ಗೆ ಹೆಚ್ಚು ಗಮನ ನೀಡುತ್ತಿದೆ. ಮಂದಿರ ನಿರ್ಮಾಣಕ್ಕೆ ಗುಣಮಟ್ಟದ ವಸ್ತುಗಳನ್ನು ಬಳಸಲಾಗುತ್ತಿದೆ. ದೇವಾಲಯದ ನಿರ್ಮಾಣಕ್ಕೆ ಬಳಸಲಾದ ಮರಳುಗಲ್ಲು ರಾಜಸ್ಥಾನದಿಂದ ಬಂದಿದ್ದರೆ, ವಿಗ್ರಹಗಳ ನಿರ್ಮಾಣಕ್ಕೆ ಶಾಲಿಗ್ರಾಮ ಶಿಲೆಗಳನ್ನು ನೇಪಾಳದಿಂದ ಆಮದು ಮಾಡಿಕೊಳ್ಳಲಾಗಿದೆ.

ದೇವಸ್ಥಾನ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು ಡೆಹ್ರಾಡೂನ್‌ನಲ್ಲಿರುವ ಅರಣ್ಯ ಸಂಶೋಧನಾ ಸಂಸ್ಥೆಯನ್ನು ದೇವಾಲಯದ ನಿರ್ಮಾಣಕ್ಕೆ ಉತ್ತಮ ಗುಣಮಟ್ಟದ ಮರವನ್ನು ಎಲ್ಲಿಂದ ಪಡೆಯಬಹುದು ಎಂದು ಕೇಳಿದ್ದರು. ಸಂಶೋಧನೆಯ ನಂತರ, ಸಂಸ್ಥೆಯು ಚಂದ್ರಾಪುರದಲ್ಲಿ ದೊರೆತ ಮರವು ಭಾರತದಲ್ಲಿ ಉತ್ತಮ ಗುಣಮಟ್ಟದ್ದಾಗಿದೆ ಎಂದು ಹೇಳಿದೆ. ಬಳಿಕ ಎಂಜಿನಿಯರ್‌ಗಳು ಮತ್ತು ಎಲ್ &ಟಿಯ ಅಧಿಕಾರಿಗಳು ಚಂದ್ರಾಪುರದ ಬಲ್ಲಾರ್‌ಶಾ ಡಿಪೋದಲ್ಲಿ ಇರಿಸಲಾದ ತೇಗದ ಮರದ ಗುಣಮಟ್ಟವನ್ನು ಪರಿಶೀಲಿಸಿದರು. ನಂತರ, ರಾಮಮಂದಿರ ನಿರ್ಮಾಣಕ್ಕೆ ಅಗತ್ಯವಿರುವ ಮರವನ್ನು ಮಹಾರಾಷ್ಟ್ರದ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತದಿಂದ ಪೂರೈಸುವ ನಿರ್ಧಾರ ಕೈಗೊಳ್ಳಲಾಯಿತು.

ಮುಖ್ಯದ್ವಾರ ವಿನ್ಯಾಸಕ್ಕೆ ಬಳಕೆ: "ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ತೇಗದ ಮರವನ್ನು ದೇವಾಲಯದ ಮುಖ್ಯ ದ್ವಾರವನ್ನು ವಿನ್ಯಾಸಗೊಳಿಸಲು ಬಳಸಲಾಗುತ್ತದೆ. ದೇವಾಲಯವನ್ನು ಅಲಂಕರಿಸಲು ಸೊಗಸಾದ ಕೆತ್ತನೆಯನ್ನು ಬಳಸಲು ಮರದ ಅಗತ್ಯವಿದೆ. ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದವರು ಮುಖ್ಯದ್ವಾರ ಮತ್ತು ಇತರ ನಿರ್ಮಾಣಗಳಿಗೆ ಹೆಚ್ಚು ಹೆಚ್ಚು ಮರವನ್ನು ಬಳಸಬೇಕು" ಎಂದು ದೇವಾಲಯದ ನಿರ್ಮಾಣ ಸಮಿತಿಯ ಮುಖ್ಯಸ್ಥ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ.

ಮಹಾರಾಷ್ಟ್ರದ ಚಂದ್ರಾಪುರ ಮತ್ತು ಗಡ್ಚಿರೋಲಿ ಪ್ರದೇಶಗಳು ದಟ್ಟವಾದ ಕಾಡುಗಳನ್ನು ಹೊಂದಿದ್ದು ಅಲ್ಲಿ ತೇಗದ ಮರಗಳು ಹೇರಳವಾಗಿ ಕಂಡು ಬರುತ್ತವೆ. ದೆಹಲಿಯ ನೂತನ ಸಂಸತ್ ಭವನ ನಿರ್ಮಾಣಕ್ಕೂ ಚಂದ್ರಾಪುರದ ತೇಗದ ಮರವನ್ನೇ ಬಳಸಲಾಗುತ್ತಿದೆ. ಈ ಮರ ಹೊಸ ಸಂಸತ್ ಭವನದ ಅಂದವನ್ನು ಹೆಚ್ಚಿಸಲಿದೆ. ಇದು ವಿದರ್ಭದ ಅರಣ್ಯದಲ್ಲಿ ಲಭ್ಯವಿರುವ ಉತ್ತಮ ಗುಣಮಟ್ಟದ ಮರವಾಗಿದೆ. ಮರವನ್ನು ಕಾಡಿನ ವರವೆಂದು" ಪರಿಗಣಿಸಲಾಗಿದೆ.

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ - ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮತ್ತು ನಿರ್ವಹಣೆಗಾಗಿ ಸ್ಥಾಪಿಸಲಾದ ಟ್ರಸ್ಟ್ ಮಹಾರಾಷ್ಟ್ರದ ಅರಣ್ಯ ಸಚಿವ ಸುಧೀರ್ ಮುಂಗಂಟಿವಾರ್ ಅವರಿಗೆ ತೇಗದ ಮರವನ್ನು ಒದಗಿಸಿದ್ದಕ್ಕಾಗಿ ಪತ್ರ ಬರೆದು ಧನ್ಯವಾದ ತಿಳಿಸಿದ್ದಾರೆ.

ಪ್ರಪಂಚದಾದ್ಯಂತ ಬೇಡಿಕೆ: ಪರಿಸರವಾದಿ ಸುರೇಶ್ ಚೋಪಾನೆ ಅವರ ಪ್ರಕಾರ "ಭಾರತದ ಚಂದ್ರಾಪುರ-ಆಲಪಲ್ಲಿ ಕಾಡುಗಳಲ್ಲಿ ಕಂಡು ಬರುವ ತೇಗದ ಮರವನ್ನು ಬರ್ಮಾದ ತೇಗದ ಮರದ ನಂತರ ವಿಶ್ವದ ಎರಡನೇ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಈ ಮರ ನೂರಾರು ವರ್ಷಗಳವರೆಗೆ ಬಾಳಿಕೆ ಬರುತ್ತದೆ ಮತ್ತು ತೀವ್ರ ಶಾಖ ಮತ್ತು ಶೀತವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಹಿಮ ಅಥವಾ ಮಳೆಯಲ್ಲೂ ತೇಗದ ಮರವನ್ನು ವರ್ಷಪೂರ್ತಿ ಹೊರಾಂಗಣದಲ್ಲಿ ಬಿಡಬಹುದು. ಇದರ ರಕ್ಷಣಾತ್ಮಕ ತೈಲಗಳು ತೇವಾಂಶಕ್ಕೆ ನಿರೋಧಕವಾಗಿಸುತ್ತದೆ. ಇದು ಕೊಳೆಯುವಿಕೆ ಅಥವಾ ವಿಭಜನೆಯಿಂದ ತಡೆಯುತ್ತದೆ. ಮಹಾರಾಷ್ಟ್ರದ ಮರಕ್ಕೆ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಹೆಚ್ಚಿನ ಬೇಡಿಕೆಯಿದೆ".

ಇದನ್ನೂ ಓದಿ: ಕುಶಿನಗರ ಪ್ರವೇಶಿಸಿದ ಶಾಲಿಗ್ರಾಮ ಬಂಡೆಗಳು: 32 ಪುರೋಹಿತರಿಂದ ವಿಶೇಷ ಪೂಜೆ

ಚಂದ್ರಾಪುರ (ಮಹಾರಾಷ್ಟ್ರ): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಮಹಾರಾಷ್ಟ್ರದ ಚಂದ್ರಾಪುರದ ಕಾಡುಗಳಲ್ಲಿ ಬೆಳೆಯುವ ತೇಗದ ಮರವನ್ನು ಒದಗಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಭವ್ಯವಾದ ರಾಮಮಂದಿರ ಸಾವಿರ ವರ್ಷಗಳ ಕಾಲ ರಚನಾತ್ಮಕವಾಗಿ ಗಟ್ಟಿಮುಟ್ಟಾಗಿ ಉಳಿಯುವ ರೀತಿಯಲ್ಲಿ ನಿರ್ಮಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಚಂದ್ರಾಪುರ ಜಿಲ್ಲೆಯ ಅರಣ್ಯಗಳಿಂದ ತೇಗದ ಮರವನ್ನು ಮಹಾರಾಷ್ಟ್ರದ ಅರಣ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ (FDCM) ಮೂಲಕ ಒದಗಿಸಲಾಗುತ್ತಿದೆ. ಮೊದಲ ರವಾನೆ ಮಾರ್ಚ್ 29 ರಂದು ಭವ್ಯವಾದ ಶೋಭಾ ಯಾತ್ರೆ ಮೂಲಕ ಸಾಗಲಿದೆ.

ದೇವಸ್ಥಾನಕ್ಕೆ 1800 ಕ್ಯೂಬಿಕ್ ಮೀಟರ್ ಮರದ ಅಗತ್ಯವಿದೆ. ಮಹಾರಾಷ್ಟ್ರದ ಅರಣ್ಯ ಅಭಿವೃದ್ಧಿ ನಿಗಮ ಮರವನ್ನು ಪೂರೈಸಲು ಬೇಕಾದ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದೆ. ನಾಳೆ 1800 ಕ್ಯೂಬಿಕ್ ಮೀಟರ್ ಮರದ ಮೊದಲ ರವಾನೆಯು ಡಿಪೋದಿಂದ ಅಯೋಧ್ಯೆಗೆ ಹೊರಡಲಿದೆ. ಅಯೋಧ್ಯೆಗೆ ಹೋಗುವ ಮಾರ್ಗದಲ್ಲಿ ಅನೇಕ ಸ್ಥಳಗಳಲ್ಲಿ ಭಕ್ತರು ಪೂಜೆ ಸಲ್ಲಿಸುತ್ತಾರೆ ಎಂದು ಸಂಸ್ಕೃತಿ ಮತ್ತು ಅರಣ್ಯ ಸಚಿವ ಸುಧೀರ್ ಮುಂಗಂಟಿವಾರ್ ಹೇಳಿದ್ದಾರೆ.

ವೇಳಾಪಟ್ಟಿ ಹೀಗಿದೆ..: ಮೊದಲ ರವಾನೆ ಮಾ.29 ರಂದು ಎಫ್‌ಡಿಸಿಎಂ ಡಿಪೋದಿಂದ ಅಯೋಧ್ಯೆಗೆ ಹೊರಡಲಿದೆ. ಕಳಿಸಿದ ಮರದ ಬೆಲೆ 1.32 ಕೋಟಿ ರೂ ಎನ್ನಲಾಗಿದೆ. ಮೊದಲು ಚಂದ್ರಾಪುರದ ಮಾತಾ ಮಹಾಕಾಳಿ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಹೊರಡಲಿದೆ. ಮಾರ್ಗಮಧ್ಯೆ ಹಲವೆಡೆ ಮರದ ಪೂಜೆ ನಡೆಯಲಿದೆ. ಮಧ್ಯಾಹ್ನ 3.30ಕ್ಕೆ ಬಲ್ಲಾರಾಪುರದ ಅಲ್ಲಪಲ್ಲಿ ರಸ್ತೆಯಲ್ಲಿ ಅರಣ್ಯ ಪ್ರವೇಶ ದ್ವಾರದಿಂದ ಮೆರವಣಿಗೆ ಆರಂಭವಾಗಲಿದೆ. ಈ ಮೆರವಣಿಗೆಯು ಸಂಜೆ 6 ಗಂಟೆಗೆ ಮಾತಾ ಕಾಳಿ ಮಂದಿರಕ್ಕೆ ತಲುಪಲಿದ್ದು, ಅಲ್ಲಿ ಸರ್ವಧರ್ಮದ ಆರಾಧನೆ ಮತ್ತು ಅದ್ಧೂರಿ ಸಮಾರಂಭವನ್ನು ಆಯೋಜಿಸಲಾಗಿದೆ. ರಾತ್ರಿ 9 ಗಂಟೆಗೆ ಚಂದ್ರಾಪುರದ ಚಂದಾ ಕ್ಲಬ್‌ನಲ್ಲಿ ರಾಮ್ ಗೀತ್ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಮತ್ತು ಅಲ್ಲಿ ಖ್ಯಾತ ಗಾಯಕ ಕೈಲಾಶ್ ಖೇರ್ ಕಾರ್ಯಕ್ರಮ ನೀಡುತ್ತಾರೆ. ಈ ಕಾರ್ಯಕ್ರಮಕ್ಕೆ ಹಲವು ಗಣ್ಯರನ್ನು ಆಹ್ವಾನಿಸಲಾಗುತ್ತಿದೆ. ಮಹಾರಾಷ್ಟ್ರ ಸರ್ಕಾರ ಅಯೋಧ್ಯೆಗೆ ಮರವನ್ನು ಅತ್ಯಂತ ಕಡಿಮೆ ದರದಲ್ಲಿ ನೀಡಲಿದೆ ಎಂದು ಮುಂಗಂಟಿವಾರ್ ಹೇಳಿದ್ದಾರೆ.

ರಾಮಮಂದಿರವನ್ನು ನಿರ್ಮಿಸುವ ಉದ್ದೇಶಕ್ಕಾಗಿ ರಚಿಸಲಾದ ಶ್ರೀ ರಾಮಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್, ದೇವಾಲಯದ ಕರಕುಶಲತೆ ಬಗ್ಗೆ ಹೆಚ್ಚು ಗಮನ ನೀಡುತ್ತಿದೆ. ಮಂದಿರ ನಿರ್ಮಾಣಕ್ಕೆ ಗುಣಮಟ್ಟದ ವಸ್ತುಗಳನ್ನು ಬಳಸಲಾಗುತ್ತಿದೆ. ದೇವಾಲಯದ ನಿರ್ಮಾಣಕ್ಕೆ ಬಳಸಲಾದ ಮರಳುಗಲ್ಲು ರಾಜಸ್ಥಾನದಿಂದ ಬಂದಿದ್ದರೆ, ವಿಗ್ರಹಗಳ ನಿರ್ಮಾಣಕ್ಕೆ ಶಾಲಿಗ್ರಾಮ ಶಿಲೆಗಳನ್ನು ನೇಪಾಳದಿಂದ ಆಮದು ಮಾಡಿಕೊಳ್ಳಲಾಗಿದೆ.

ದೇವಸ್ಥಾನ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು ಡೆಹ್ರಾಡೂನ್‌ನಲ್ಲಿರುವ ಅರಣ್ಯ ಸಂಶೋಧನಾ ಸಂಸ್ಥೆಯನ್ನು ದೇವಾಲಯದ ನಿರ್ಮಾಣಕ್ಕೆ ಉತ್ತಮ ಗುಣಮಟ್ಟದ ಮರವನ್ನು ಎಲ್ಲಿಂದ ಪಡೆಯಬಹುದು ಎಂದು ಕೇಳಿದ್ದರು. ಸಂಶೋಧನೆಯ ನಂತರ, ಸಂಸ್ಥೆಯು ಚಂದ್ರಾಪುರದಲ್ಲಿ ದೊರೆತ ಮರವು ಭಾರತದಲ್ಲಿ ಉತ್ತಮ ಗುಣಮಟ್ಟದ್ದಾಗಿದೆ ಎಂದು ಹೇಳಿದೆ. ಬಳಿಕ ಎಂಜಿನಿಯರ್‌ಗಳು ಮತ್ತು ಎಲ್ &ಟಿಯ ಅಧಿಕಾರಿಗಳು ಚಂದ್ರಾಪುರದ ಬಲ್ಲಾರ್‌ಶಾ ಡಿಪೋದಲ್ಲಿ ಇರಿಸಲಾದ ತೇಗದ ಮರದ ಗುಣಮಟ್ಟವನ್ನು ಪರಿಶೀಲಿಸಿದರು. ನಂತರ, ರಾಮಮಂದಿರ ನಿರ್ಮಾಣಕ್ಕೆ ಅಗತ್ಯವಿರುವ ಮರವನ್ನು ಮಹಾರಾಷ್ಟ್ರದ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತದಿಂದ ಪೂರೈಸುವ ನಿರ್ಧಾರ ಕೈಗೊಳ್ಳಲಾಯಿತು.

ಮುಖ್ಯದ್ವಾರ ವಿನ್ಯಾಸಕ್ಕೆ ಬಳಕೆ: "ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ತೇಗದ ಮರವನ್ನು ದೇವಾಲಯದ ಮುಖ್ಯ ದ್ವಾರವನ್ನು ವಿನ್ಯಾಸಗೊಳಿಸಲು ಬಳಸಲಾಗುತ್ತದೆ. ದೇವಾಲಯವನ್ನು ಅಲಂಕರಿಸಲು ಸೊಗಸಾದ ಕೆತ್ತನೆಯನ್ನು ಬಳಸಲು ಮರದ ಅಗತ್ಯವಿದೆ. ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದವರು ಮುಖ್ಯದ್ವಾರ ಮತ್ತು ಇತರ ನಿರ್ಮಾಣಗಳಿಗೆ ಹೆಚ್ಚು ಹೆಚ್ಚು ಮರವನ್ನು ಬಳಸಬೇಕು" ಎಂದು ದೇವಾಲಯದ ನಿರ್ಮಾಣ ಸಮಿತಿಯ ಮುಖ್ಯಸ್ಥ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ.

ಮಹಾರಾಷ್ಟ್ರದ ಚಂದ್ರಾಪುರ ಮತ್ತು ಗಡ್ಚಿರೋಲಿ ಪ್ರದೇಶಗಳು ದಟ್ಟವಾದ ಕಾಡುಗಳನ್ನು ಹೊಂದಿದ್ದು ಅಲ್ಲಿ ತೇಗದ ಮರಗಳು ಹೇರಳವಾಗಿ ಕಂಡು ಬರುತ್ತವೆ. ದೆಹಲಿಯ ನೂತನ ಸಂಸತ್ ಭವನ ನಿರ್ಮಾಣಕ್ಕೂ ಚಂದ್ರಾಪುರದ ತೇಗದ ಮರವನ್ನೇ ಬಳಸಲಾಗುತ್ತಿದೆ. ಈ ಮರ ಹೊಸ ಸಂಸತ್ ಭವನದ ಅಂದವನ್ನು ಹೆಚ್ಚಿಸಲಿದೆ. ಇದು ವಿದರ್ಭದ ಅರಣ್ಯದಲ್ಲಿ ಲಭ್ಯವಿರುವ ಉತ್ತಮ ಗುಣಮಟ್ಟದ ಮರವಾಗಿದೆ. ಮರವನ್ನು ಕಾಡಿನ ವರವೆಂದು" ಪರಿಗಣಿಸಲಾಗಿದೆ.

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ - ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮತ್ತು ನಿರ್ವಹಣೆಗಾಗಿ ಸ್ಥಾಪಿಸಲಾದ ಟ್ರಸ್ಟ್ ಮಹಾರಾಷ್ಟ್ರದ ಅರಣ್ಯ ಸಚಿವ ಸುಧೀರ್ ಮುಂಗಂಟಿವಾರ್ ಅವರಿಗೆ ತೇಗದ ಮರವನ್ನು ಒದಗಿಸಿದ್ದಕ್ಕಾಗಿ ಪತ್ರ ಬರೆದು ಧನ್ಯವಾದ ತಿಳಿಸಿದ್ದಾರೆ.

ಪ್ರಪಂಚದಾದ್ಯಂತ ಬೇಡಿಕೆ: ಪರಿಸರವಾದಿ ಸುರೇಶ್ ಚೋಪಾನೆ ಅವರ ಪ್ರಕಾರ "ಭಾರತದ ಚಂದ್ರಾಪುರ-ಆಲಪಲ್ಲಿ ಕಾಡುಗಳಲ್ಲಿ ಕಂಡು ಬರುವ ತೇಗದ ಮರವನ್ನು ಬರ್ಮಾದ ತೇಗದ ಮರದ ನಂತರ ವಿಶ್ವದ ಎರಡನೇ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಈ ಮರ ನೂರಾರು ವರ್ಷಗಳವರೆಗೆ ಬಾಳಿಕೆ ಬರುತ್ತದೆ ಮತ್ತು ತೀವ್ರ ಶಾಖ ಮತ್ತು ಶೀತವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಹಿಮ ಅಥವಾ ಮಳೆಯಲ್ಲೂ ತೇಗದ ಮರವನ್ನು ವರ್ಷಪೂರ್ತಿ ಹೊರಾಂಗಣದಲ್ಲಿ ಬಿಡಬಹುದು. ಇದರ ರಕ್ಷಣಾತ್ಮಕ ತೈಲಗಳು ತೇವಾಂಶಕ್ಕೆ ನಿರೋಧಕವಾಗಿಸುತ್ತದೆ. ಇದು ಕೊಳೆಯುವಿಕೆ ಅಥವಾ ವಿಭಜನೆಯಿಂದ ತಡೆಯುತ್ತದೆ. ಮಹಾರಾಷ್ಟ್ರದ ಮರಕ್ಕೆ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಹೆಚ್ಚಿನ ಬೇಡಿಕೆಯಿದೆ".

ಇದನ್ನೂ ಓದಿ: ಕುಶಿನಗರ ಪ್ರವೇಶಿಸಿದ ಶಾಲಿಗ್ರಾಮ ಬಂಡೆಗಳು: 32 ಪುರೋಹಿತರಿಂದ ವಿಶೇಷ ಪೂಜೆ

Last Updated : Mar 28, 2023, 1:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.