ETV Bharat / bharat

ವಂದೇ ಭಾರತ್​ ರೈಲಿಗೆ ತಪ್ಪದ ವಿಘ್ನ... ಎಮ್ಮೆ ಹಿಂಡಿಗೆ ಡಿಕ್ಕಿ ಬಳಿಕ ಬೇರಿಂಗ್​ ಜಾಮ್​ - Vande Bharat train bearing jam

ವಂದೇ ಭಾರತ್​ ಹೈಸ್ಪೀಡ್​ ರೈಲು ಮತ್ತೆ ಸಮಸ್ಯೆಯಿಂದಾಗಿ ಸುದ್ದಿಗೆ ಬಂದಿದೆ. ಎಮ್ಮೆಗಳ ಹಿಂಡಿಗೆ ಗುದ್ದಿದ್ದ ರೈಲು ಈಗ ಬೇರಿಂಗ್​ ಜಾಮ್​ ಆಗಿ, ಪ್ರಯಾಣಿಕರನ್ನು ಬೇರೆ ರೈಲಿಗೆ ಕಳುಹಿಸಿದ ಘಟನೆ ನಡೆದಿದೆ.

lucknow-vande-bharat-out-with-flat-tyre
ವಂದೇ ಭಾರತ್​ ರೈಲಿಗೆ ತಪ್ಪದ ವಿಘ್ನ
author img

By

Published : Oct 9, 2022, 9:41 AM IST

ನವದೆಹಲಿ: ಹೊಸದಾಗಿ ಪ್ರಾರಂಭಿಸಲಾದ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್​ಗೆ ಒಂದಿಲ್ಲಾ ಒಂದು ವಿಘ್ನ ಕಾಡುತ್ತಿದೆ. ಮೊನ್ನೆಯಷ್ಟೇ ಎಮ್ಮೆಗಳಿಗೆ ಗುದ್ದಿ ಮುಂದಿನ ಭಾಗ ಕಳಚಿಕೊಂಡಿದ್ದು ದೊಡ್ಡ ಸುದ್ದಿಯಾಗಿದ್ದರೆ, ನಿನ್ನೆ ಬೇರಿಂಗ್​ ದೋಷ ಉಂಟಾಗಿ ಪ್ರಯಾಣಿಕರನ್ನು ಬೇರೆ ರೈಲಿಗೆ ಕಳುಹಿಸಿದ ಘಟನೆ ನಡೆದಿದೆ.

ಗಾಂಧಿನಗರ-ಮುಂಬೈ ಮಾರ್ಗವಾಗಿ ಚಲಿಸುತ್ತಿದ್ದ ವೇಳೆ ರೈಲು ಎಮ್ಮೆಗಳ ಹಿಂಡಿಗೆ ಗುದ್ದಿತ್ತು. ಘಟನೆಯಲ್ಲಿ ಮೂರು ಎಮ್ಮೆಗಳು ಮೃತಪಟ್ಟಿದ್ದಲ್ಲದೇ, ರೈಲಿನ ಮುಂಭಾಗ ಜಖಂ ಆಗಿತ್ತು. ಇದು ಮರೆಯುವ ಮುನ್ನವೇ ನವದೆಹಲಿ- ವಾರಣಾಸಿ ಮಾರ್ಗವಾಗಿ ರೈಲು ಸಂಚರಿಸುತ್ತಿದ್ದ ವೇಳೆ ಬೇರಿಂಗ್​ ಜಾಮ್​ ಆಗಿ ಸಮಸ್ಯೆ ಉಂಟಾಗಿದೆ. ಬಳಿಕ ಸರಿ ಮಾಡಿದರೂ ಫ್ಲಾಟ್​ ಟೈರ್ ಕಾರಣ ಪ್ರಯಾಣಿಕರನ್ನು ಇಳಿಸಿ ಶತಾಬ್ದಿ ರೈಲಿಗೆ ಕಳುಹಿಸಲಾಯಿತು.

ವಂದೇ ಭಾರತ್​​ ರೈಲು ಬೇರಿಂಗ್​ ಸಮಸ್ಯೆಗೀಡಾಗಿ ಪ್ರಯಾಣಿಕರಿಗೆ ತೊಂದರೆ ಉಂಟಾದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2 ದಿನಗಳ ಹಿಂದೆ ಗಾಂಧಿನಗರ-ಮುಂಬೈ ಮಾರ್ಗವಾಗಿ ರೈಲು ಸಂಚರಿಸುತ್ತಿದ್ದಾಗ ಗುಜರಾತ್‌ನ ಆನಂದ್ ನಿಲ್ದಾಣದ ಬಳಿ ಎಮ್ಮೆಗಳ ಹಿಂಡಿಗೆ ಡಿಕ್ಕಿ ಹೊಡೆದಿತ್ತು. ಇದರಿಂದ 3 ಎಮ್ಮೆಗಳ ಸಾವಿಗೆ ಕಾರಣವಾಗಿದ್ದಲ್ಲದೇ, ರೈಲಿನ ಮುಂಭಾಗಕ್ಕೆ ಹಾನಿಯಾಗಿತ್ತು. ಇದಕ್ಕೆ ಪರ- ವಿರೋಧಗಳು ಕೇಳಿ ಬಂದಿದ್ದವು.

ಓದಿ: ಕಾಂಗ್ರೆಸ್​ನ ಬುಡಕಟ್ಟು ಸಮುದಾಯದ ಶಾಸಕನ ಮೇಲೆ ಹಲ್ಲೆ: ರಾತ್ರೋರಾತ್ರಿ ಬೆಂಬಲಿಗರಿಂದ ಭಾರೀ ಪ್ರತಿಭಟನೆ

ನವದೆಹಲಿ: ಹೊಸದಾಗಿ ಪ್ರಾರಂಭಿಸಲಾದ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್​ಗೆ ಒಂದಿಲ್ಲಾ ಒಂದು ವಿಘ್ನ ಕಾಡುತ್ತಿದೆ. ಮೊನ್ನೆಯಷ್ಟೇ ಎಮ್ಮೆಗಳಿಗೆ ಗುದ್ದಿ ಮುಂದಿನ ಭಾಗ ಕಳಚಿಕೊಂಡಿದ್ದು ದೊಡ್ಡ ಸುದ್ದಿಯಾಗಿದ್ದರೆ, ನಿನ್ನೆ ಬೇರಿಂಗ್​ ದೋಷ ಉಂಟಾಗಿ ಪ್ರಯಾಣಿಕರನ್ನು ಬೇರೆ ರೈಲಿಗೆ ಕಳುಹಿಸಿದ ಘಟನೆ ನಡೆದಿದೆ.

ಗಾಂಧಿನಗರ-ಮುಂಬೈ ಮಾರ್ಗವಾಗಿ ಚಲಿಸುತ್ತಿದ್ದ ವೇಳೆ ರೈಲು ಎಮ್ಮೆಗಳ ಹಿಂಡಿಗೆ ಗುದ್ದಿತ್ತು. ಘಟನೆಯಲ್ಲಿ ಮೂರು ಎಮ್ಮೆಗಳು ಮೃತಪಟ್ಟಿದ್ದಲ್ಲದೇ, ರೈಲಿನ ಮುಂಭಾಗ ಜಖಂ ಆಗಿತ್ತು. ಇದು ಮರೆಯುವ ಮುನ್ನವೇ ನವದೆಹಲಿ- ವಾರಣಾಸಿ ಮಾರ್ಗವಾಗಿ ರೈಲು ಸಂಚರಿಸುತ್ತಿದ್ದ ವೇಳೆ ಬೇರಿಂಗ್​ ಜಾಮ್​ ಆಗಿ ಸಮಸ್ಯೆ ಉಂಟಾಗಿದೆ. ಬಳಿಕ ಸರಿ ಮಾಡಿದರೂ ಫ್ಲಾಟ್​ ಟೈರ್ ಕಾರಣ ಪ್ರಯಾಣಿಕರನ್ನು ಇಳಿಸಿ ಶತಾಬ್ದಿ ರೈಲಿಗೆ ಕಳುಹಿಸಲಾಯಿತು.

ವಂದೇ ಭಾರತ್​​ ರೈಲು ಬೇರಿಂಗ್​ ಸಮಸ್ಯೆಗೀಡಾಗಿ ಪ್ರಯಾಣಿಕರಿಗೆ ತೊಂದರೆ ಉಂಟಾದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2 ದಿನಗಳ ಹಿಂದೆ ಗಾಂಧಿನಗರ-ಮುಂಬೈ ಮಾರ್ಗವಾಗಿ ರೈಲು ಸಂಚರಿಸುತ್ತಿದ್ದಾಗ ಗುಜರಾತ್‌ನ ಆನಂದ್ ನಿಲ್ದಾಣದ ಬಳಿ ಎಮ್ಮೆಗಳ ಹಿಂಡಿಗೆ ಡಿಕ್ಕಿ ಹೊಡೆದಿತ್ತು. ಇದರಿಂದ 3 ಎಮ್ಮೆಗಳ ಸಾವಿಗೆ ಕಾರಣವಾಗಿದ್ದಲ್ಲದೇ, ರೈಲಿನ ಮುಂಭಾಗಕ್ಕೆ ಹಾನಿಯಾಗಿತ್ತು. ಇದಕ್ಕೆ ಪರ- ವಿರೋಧಗಳು ಕೇಳಿ ಬಂದಿದ್ದವು.

ಓದಿ: ಕಾಂಗ್ರೆಸ್​ನ ಬುಡಕಟ್ಟು ಸಮುದಾಯದ ಶಾಸಕನ ಮೇಲೆ ಹಲ್ಲೆ: ರಾತ್ರೋರಾತ್ರಿ ಬೆಂಬಲಿಗರಿಂದ ಭಾರೀ ಪ್ರತಿಭಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.