ETV Bharat / bharat

ಯುವತಿಗೆ ಮದುವೆ ಫಿಕ್ಸ್, ಆತ್ಮಹತ್ಯೆಗೆ ಯತ್ನಿಸಿ ಬದುಕಿಸಲು ಕಣ್ಣೀರು, ಒಂದೇ ದಿನ ಹಾರಿಹೋಯ್ತು ಇಬ್ಬರ ಪ್ರಾಣಪಕ್ಷಿ

author img

By

Published : Oct 25, 2021, 1:09 PM IST

ಪೋಷಕರು ಮಗಳಿಗೆ ಇಷ್ಟವಿಲ್ಲದ ಮದುವೆ ಮಾಡಲು ಮುಂದಾದ ಕಾರಣ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ.

Lovers committed suicide, Lovers committed suicide in Nalgonda, Nalgonda news, Nalgonda crime news, ಪ್ರೇಮಿಗಳು ಆತ್ಮಹತ್ಯೆಗೆ ಶರಣು, ನಲ್ಗೊಂಡದಲ್ಲಿ ಪ್ರೇಮಿಗಳು ಆತ್ಮಹತ್ಯೆಗೆ ಶರಣು, ನಲ್ಗೊಂಡ ಸುದ್ದಿ, ನಲ್ಗೊಂಡ ಅಪರಾಧ ಸುದ್ದಿ,
ಯುವತಿಗೆ ಮದುವೆ ಫಿಕ್ಸ್​... ಆತ್ಮಹತ್ಯೆಗೆ ಶರಣಾದ ಪ್ರೇಮ ಜೋಡಿ!

ನಲ್ಗೊಂಡ(ತೆಲಂಗಾಣ): ಅವರಿಬ್ಬರು ಒಬ್ಬರಿಗೊಬ್ಬರು ಪ್ರಾಣಕ್ಕಿಂತ ತುಸು ಹೆಚ್ಚೇ ಇಷ್ಟಪಡುತ್ತಿದ್ದರಂತೆ. ಆದ್ರೆ ತಮ್ಮ ಪ್ರೀತಿಯ ವಿಷಯವನ್ನು ಹಿರಿಯರಿಗೆ ತಿಳಿಸಲು ಹೆದರಿದ್ದಾರೆ. ಪರಸ್ಪರ ದೂರವಾಗಲೂ ಇಚ್ಛಿಸದ ಇಬ್ಬರು ಕೊನೆಗೆ ಅನ್ಯ ದಾರಿ ಕಾಣದೆ ವಿಷ ಸೇವಿಸಿ ಸಾವಿನ ಮನೆ ಸೇರಿದ್ದಾರೆ. ಈ ದುರಂತ ಘಟನೆ ತಿರುಮಲಗಿರಿ (ಸಾಗರ್​) ತಾಲೂಕಿನ ತೆಟ್ಟಕುಂಟ ಗ್ರಾಮದಲ್ಲಿ ನಡೆಯಿತು.

ಇಲ್ಲಿನ ನಿವಾಸಿ ಉಗ್ಗಿರಿ ನಾಗಯ್ಯ ಮತ್ತು ಸೈದಮ್ಮ ದಂಪತಿಗೆ ವೆಂಕಟೇಶ್ವರ್ಲು ಮತ್ತು ಸಂಧ್ಯಾ (20) ಎಂಬಿಬ್ಬರು ಮಕ್ಕಳಿದ್ದರು. ಪಿಯುಸಿ ವ್ಯಾಸಂಗ ಮುಗಿಸಿರುವ ಸಂಧ್ಯಾ ಕೃಷಿಯಲ್ಲಿ ತೊಡಗಿದ್ದರು. ಈಕೆಯ ಸಹೋದರ ವೆಂಕೆಟೇಶ್ವರ್ಲು ಕಳೆದ ವರ್ಷ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈತನ ಸ್ನೇಹಿತ ಮಟ್ಟಿಪಲ್ಲಿ ಕೊಂಡಲು (22) ಮನೆ ಇವರ ಕುಟುಂಬದ ಹತ್ತಿರವೇ ಇದ್ದು, ಸ್ನೇಹಿತನ ಸಾವಿನ ಬಳಿಕ ಸಂಧ್ಯಾ ಮನೆಗೆ ಸಹಾಯ ಮಾಡುತ್ತಿದ್ದನಂತೆ. ಈ ವೇಳೆಯಲ್ಲಿ ಸಂಧ್ಯಾ ಮತ್ತು ಕೊಂಡಲು ನಡುವೆ ಪ್ರೀತಿ ಬೆಳೆದಿದೆ.

ಇವರಿಬ್ಬರ ಪ್ರೀತಿ ಅರಿಯದ ಸಂಧ್ಯಾ ಪೋಷಕರು ಮಗಳಿಗೆ ಹತ್ತಿರ ಸಂಬಂಧಿಕರ ಯುವಕನೊಂದಿಗೆ ನಿಶ್ಚಿತಾರ್ಥ ಮುಗಿಸಿದ್ದಾರೆ. ಮದುವೆ ದಿನಾಂಕ ನಿಶ್ಚಿಯಿಸಲು ಸಂಧ್ಯಾ ಹಾಗು ಕೊಂಡಲು ಪೋಷಕರು ಹೊರಗಡೆ ತೆರಳಿದ್ದಾರೆ. ಇದರಿಂದ ಚಿಂತೆಗೀಡಾದ ಸಂಧ್ಯಾ ತಮ್ಮ ಪ್ರೀತಿ ವಿಷಯವನ್ನು ಹಿರಿಯರಿಗೆ ಹೇಳಲು ಹೆದರಿದ್ದಾರೆ. ಹೀಗಾಗಿ ಇಬ್ಬರು ಒಟ್ಟಾಗಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಅಲ್ಲೇ ಕಿಟನಾಶಕ ಔಷಧಿ ಸೇವಿಸಿದ್ದಾರೆ.

ವಿಷ ಸೇವಿಸಿದ ಬಳಿಕ ಸಂಧ್ಯಾ ಮತ್ತು ಕೊಂಡಲು ತಮ್ಮ-ತಮ್ಮ ಮನೆಗೆ ತೆರಳಿದ್ದಾರೆ. ಸಂಧ್ಯಾ ಅಸ್ವಸ್ಥಳಾಗಿದ್ದನ್ನು ಗಮನಿಸಿದ ಆಕೆಯ ಅಜ್ಜಿ ಅಕ್ಕ-ಪಕ್ಕದವರನ್ನು ಸಹಾಯಕ್ಕಾಗಿ ಕರೆದಿದ್ದಾರೆ. ಬಳಿಕ ಕೊಂಡಲು ನಾವಿಬ್ಬರು ವಿಷ ಸೇವಿಸಿದ್ದು, ನಮ್ಮನ್ನು ಬದುಕಿಸಿ ಎಂದು ಬೇಡಿಕೊಂಡಿದ್ದಾನೆ. ಕೂಡಲೇ ಸ್ಥಳೀಯರು ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕೊಂಡಲ ಸ್ಥಿತಿ ಚಿಂತಾಜನಕವಾಗಿರುವುದರಿಂದ ಆತನ ಪೋಷಕರು ನಲ್ಗೊಂಡದಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಸಂಧ್ಯಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದ್ರೆ ಶನಿವಾರ ರಾತ್ರಿ ಇಬ್ಬರಿಗೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ನಲ್ಗೊಂಡ(ತೆಲಂಗಾಣ): ಅವರಿಬ್ಬರು ಒಬ್ಬರಿಗೊಬ್ಬರು ಪ್ರಾಣಕ್ಕಿಂತ ತುಸು ಹೆಚ್ಚೇ ಇಷ್ಟಪಡುತ್ತಿದ್ದರಂತೆ. ಆದ್ರೆ ತಮ್ಮ ಪ್ರೀತಿಯ ವಿಷಯವನ್ನು ಹಿರಿಯರಿಗೆ ತಿಳಿಸಲು ಹೆದರಿದ್ದಾರೆ. ಪರಸ್ಪರ ದೂರವಾಗಲೂ ಇಚ್ಛಿಸದ ಇಬ್ಬರು ಕೊನೆಗೆ ಅನ್ಯ ದಾರಿ ಕಾಣದೆ ವಿಷ ಸೇವಿಸಿ ಸಾವಿನ ಮನೆ ಸೇರಿದ್ದಾರೆ. ಈ ದುರಂತ ಘಟನೆ ತಿರುಮಲಗಿರಿ (ಸಾಗರ್​) ತಾಲೂಕಿನ ತೆಟ್ಟಕುಂಟ ಗ್ರಾಮದಲ್ಲಿ ನಡೆಯಿತು.

ಇಲ್ಲಿನ ನಿವಾಸಿ ಉಗ್ಗಿರಿ ನಾಗಯ್ಯ ಮತ್ತು ಸೈದಮ್ಮ ದಂಪತಿಗೆ ವೆಂಕಟೇಶ್ವರ್ಲು ಮತ್ತು ಸಂಧ್ಯಾ (20) ಎಂಬಿಬ್ಬರು ಮಕ್ಕಳಿದ್ದರು. ಪಿಯುಸಿ ವ್ಯಾಸಂಗ ಮುಗಿಸಿರುವ ಸಂಧ್ಯಾ ಕೃಷಿಯಲ್ಲಿ ತೊಡಗಿದ್ದರು. ಈಕೆಯ ಸಹೋದರ ವೆಂಕೆಟೇಶ್ವರ್ಲು ಕಳೆದ ವರ್ಷ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈತನ ಸ್ನೇಹಿತ ಮಟ್ಟಿಪಲ್ಲಿ ಕೊಂಡಲು (22) ಮನೆ ಇವರ ಕುಟುಂಬದ ಹತ್ತಿರವೇ ಇದ್ದು, ಸ್ನೇಹಿತನ ಸಾವಿನ ಬಳಿಕ ಸಂಧ್ಯಾ ಮನೆಗೆ ಸಹಾಯ ಮಾಡುತ್ತಿದ್ದನಂತೆ. ಈ ವೇಳೆಯಲ್ಲಿ ಸಂಧ್ಯಾ ಮತ್ತು ಕೊಂಡಲು ನಡುವೆ ಪ್ರೀತಿ ಬೆಳೆದಿದೆ.

ಇವರಿಬ್ಬರ ಪ್ರೀತಿ ಅರಿಯದ ಸಂಧ್ಯಾ ಪೋಷಕರು ಮಗಳಿಗೆ ಹತ್ತಿರ ಸಂಬಂಧಿಕರ ಯುವಕನೊಂದಿಗೆ ನಿಶ್ಚಿತಾರ್ಥ ಮುಗಿಸಿದ್ದಾರೆ. ಮದುವೆ ದಿನಾಂಕ ನಿಶ್ಚಿಯಿಸಲು ಸಂಧ್ಯಾ ಹಾಗು ಕೊಂಡಲು ಪೋಷಕರು ಹೊರಗಡೆ ತೆರಳಿದ್ದಾರೆ. ಇದರಿಂದ ಚಿಂತೆಗೀಡಾದ ಸಂಧ್ಯಾ ತಮ್ಮ ಪ್ರೀತಿ ವಿಷಯವನ್ನು ಹಿರಿಯರಿಗೆ ಹೇಳಲು ಹೆದರಿದ್ದಾರೆ. ಹೀಗಾಗಿ ಇಬ್ಬರು ಒಟ್ಟಾಗಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಅಲ್ಲೇ ಕಿಟನಾಶಕ ಔಷಧಿ ಸೇವಿಸಿದ್ದಾರೆ.

ವಿಷ ಸೇವಿಸಿದ ಬಳಿಕ ಸಂಧ್ಯಾ ಮತ್ತು ಕೊಂಡಲು ತಮ್ಮ-ತಮ್ಮ ಮನೆಗೆ ತೆರಳಿದ್ದಾರೆ. ಸಂಧ್ಯಾ ಅಸ್ವಸ್ಥಳಾಗಿದ್ದನ್ನು ಗಮನಿಸಿದ ಆಕೆಯ ಅಜ್ಜಿ ಅಕ್ಕ-ಪಕ್ಕದವರನ್ನು ಸಹಾಯಕ್ಕಾಗಿ ಕರೆದಿದ್ದಾರೆ. ಬಳಿಕ ಕೊಂಡಲು ನಾವಿಬ್ಬರು ವಿಷ ಸೇವಿಸಿದ್ದು, ನಮ್ಮನ್ನು ಬದುಕಿಸಿ ಎಂದು ಬೇಡಿಕೊಂಡಿದ್ದಾನೆ. ಕೂಡಲೇ ಸ್ಥಳೀಯರು ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕೊಂಡಲ ಸ್ಥಿತಿ ಚಿಂತಾಜನಕವಾಗಿರುವುದರಿಂದ ಆತನ ಪೋಷಕರು ನಲ್ಗೊಂಡದಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಸಂಧ್ಯಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದ್ರೆ ಶನಿವಾರ ರಾತ್ರಿ ಇಬ್ಬರಿಗೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.