ETV Bharat / bharat

ಎಲ್ಲರೂ ನೋಡು ನೋಡುತ್ತಿದ್ದಂತೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ 19ರ ಯುವಕ.. ದೃಶ್ಯ ಸೆರೆ!

ಛತ್ತೀಸ್‌ಗಢದಲ್ಲಿ ಇತ್ತೀಚೆಗೆ ನಡೆದ ಆತ್ಮಹತ್ಯೆ ಲೈವ್ ವಿಡಿಯೋವೊಂದು ವೈರಲ್ ಆಗ್ತಿದೆ. ಈ ವಿಡಿಯೋ ನೋಡಿದ ನಂತರ ನೆಟ್ಟಿಗರು ಭಯಭೀತರಾಗಿದ್ದಾರೆ. ಯುವಕನೊಬ್ಬ ರೈಲಿಗೆ ತಲೆಕೊಟ್ಟು ಕ್ಷಣಾರ್ಧದಲ್ಲಿ ಮೃತಪಟ್ಟ ಘಟನೆ ಬಾಲೋದ್​ ಜಿಲ್ಲೆಯಲ್ಲಿ ನಡೆದಿದೆ.

author img

By

Published : Jun 22, 2022, 8:48 AM IST

Updated : Jun 23, 2022, 3:22 PM IST

balod suicide live video  live video of suicide in chhattisgarh  Live video of suicide of man on railway track in Balod  Balod suicide live video  Suicide on Gundardehi railway track  ಛತ್ತೀಸ್​ಗಢದಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಯುವಕ  ಬಾಲೋದ್​ನಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಯುವಕ  ಛತ್ತೀಸ್​ಗಢದಲ್ಲಿ ಯುವಕ ಆತ್ಮಹತ್ಯೆ ಲೈವ್​ ವಿಡಿಯೋ ವೈರಲ್​ ಛತ್ತೀಸ್​ಗಢ ಅಪರಾಧ ಸುದ್ದಿ
ಮೊಬೈಲ್​ನಲ್ಲಿ ದೃಶ್ಯ ಸೆರೆ

ಬಾಲೋದ್ (ಛತ್ತೀಸ್‌ಗಢ): ಯುವಕನೊಬ್ಬ ಎದುರಿನಿಂದ ಬರುತ್ತಿದ್ದ ರೈಲಿಗೆ ತಲೆಕೊಟ್ಟು ಪ್ರಾಣ ಬಿಟ್ಟಿದ್ದು, ಈ ಆತ್ಮಹತ್ಯೆಯ ವಿಡಿಯೋ ಹೆಚ್ಚು ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರ ಭಯಭೀತರಾಗುತ್ತಿದ್ದಾರೆ. ಈ ವಿಡಿಯೋ ಜಿಲ್ಲೆಯ ಗುಂಡರದೇಹಿ ಗ್ರಾಮದಾಗಿದೆ ಎಂದು ಹೇಳಲಾಗುತ್ತಿದೆ.

ಈ ವಿಡಿಯೋದಲ್ಲಿ ಗ್ರಾಮದ ರೈಲ್ವೇ ಗೇಟ್​ನಲ್ಲಿ ನಡೆದಿದೆ. ರೈಲು ಬರುತ್ತಿದ್ದ ಸಲುವಾಗಿ ರಸ್ತೆ ಮಧ್ಯೆಯ ಗೇಟ್​ ಹಾಕಲಾಗಿತ್ತು. ರೈಲು ಬರುತ್ತಿದ್ದನ್ನು ಗಮನಿಸಿದ ಯುವಕ ನೇರ ಹಳಿಯ ಮೇಲೆ ಮಲಗಿದ್ದಾನೆ. ನೋಡು ನೋಡುತ್ತಿದ್ದಂತೆ ರೈಲು ಆತನ ಮೇಲೆ ಹರಿದು ಹೋಗಿದೆ. ಕ್ಷಣಾರ್ಧದಲ್ಲಿ ಯುವಕನ ಪ್ರಾಣ ಪಕ್ಷಿ ಹಾರಿ ಹೋಗಿದೆ.

ಓದಿ: Photos| ದೇಶವ್ಯಾಪಿ 'ಅಗ್ನಿಪಥ್'ಗೆ ವಿರೋಧ; ಹಲವೆಡೆ ಸರ್ವನಾಶ.. ರಣರಂಗವಾದ ರೈಲು ನಿಲ್ದಾಣಗಳು!

ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಯುವಕನ ದೇಹ ತುಂಡಾಗಿದೆ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ತುಂಡು - ತುಂಡಾಗಿ ಬಿದ್ದಿದ್ದ ಯುವಕನ ಮೃತದೇಹವನ್ನು ಸಂಗ್ರಹಿಸಿ ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಆತ್ಮಹತ್ಯೆ ಮಾಡಿಕೊಂಡ ಯುವಕನ ವಯಸ್ಸು 19 ವರ್ಷವಾಗಿದ್ದು, ಆನಂದ ನಿಶಾದ್ ಎಂದು ಗುರುತಿಸಲಾಗಿದೆ.

ಯುವಕ ಗುಂಡರದೇಹಿಯ ಬಾಗ್ಮಾರಾ ನಿವಾಸಿ ಎನ್ನಲಾಗ್ತಿದೆ. ಘಟನೆ ನಡೆದ ಸಂದರ್ಭದಲ್ಲಿ ಬೈಕ್​ ಸವಾರನೊಬ್ಬ ಆಕಸ್ಮಿಕವಾಗಿ ವಿಡಿಯೋ ಮಾಡಿದ್ದಾರೆ. ಆ ವಿಡಿಯೋದಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಳ್ಳುವ ದೃಶ್ಯ ಸೆರೆಯಾಗಿದೆ. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆತ್ಮಹತ್ಯೆ ಕಾರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಾಲೋದ್ (ಛತ್ತೀಸ್‌ಗಢ): ಯುವಕನೊಬ್ಬ ಎದುರಿನಿಂದ ಬರುತ್ತಿದ್ದ ರೈಲಿಗೆ ತಲೆಕೊಟ್ಟು ಪ್ರಾಣ ಬಿಟ್ಟಿದ್ದು, ಈ ಆತ್ಮಹತ್ಯೆಯ ವಿಡಿಯೋ ಹೆಚ್ಚು ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರ ಭಯಭೀತರಾಗುತ್ತಿದ್ದಾರೆ. ಈ ವಿಡಿಯೋ ಜಿಲ್ಲೆಯ ಗುಂಡರದೇಹಿ ಗ್ರಾಮದಾಗಿದೆ ಎಂದು ಹೇಳಲಾಗುತ್ತಿದೆ.

ಈ ವಿಡಿಯೋದಲ್ಲಿ ಗ್ರಾಮದ ರೈಲ್ವೇ ಗೇಟ್​ನಲ್ಲಿ ನಡೆದಿದೆ. ರೈಲು ಬರುತ್ತಿದ್ದ ಸಲುವಾಗಿ ರಸ್ತೆ ಮಧ್ಯೆಯ ಗೇಟ್​ ಹಾಕಲಾಗಿತ್ತು. ರೈಲು ಬರುತ್ತಿದ್ದನ್ನು ಗಮನಿಸಿದ ಯುವಕ ನೇರ ಹಳಿಯ ಮೇಲೆ ಮಲಗಿದ್ದಾನೆ. ನೋಡು ನೋಡುತ್ತಿದ್ದಂತೆ ರೈಲು ಆತನ ಮೇಲೆ ಹರಿದು ಹೋಗಿದೆ. ಕ್ಷಣಾರ್ಧದಲ್ಲಿ ಯುವಕನ ಪ್ರಾಣ ಪಕ್ಷಿ ಹಾರಿ ಹೋಗಿದೆ.

ಓದಿ: Photos| ದೇಶವ್ಯಾಪಿ 'ಅಗ್ನಿಪಥ್'ಗೆ ವಿರೋಧ; ಹಲವೆಡೆ ಸರ್ವನಾಶ.. ರಣರಂಗವಾದ ರೈಲು ನಿಲ್ದಾಣಗಳು!

ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಯುವಕನ ದೇಹ ತುಂಡಾಗಿದೆ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ತುಂಡು - ತುಂಡಾಗಿ ಬಿದ್ದಿದ್ದ ಯುವಕನ ಮೃತದೇಹವನ್ನು ಸಂಗ್ರಹಿಸಿ ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಆತ್ಮಹತ್ಯೆ ಮಾಡಿಕೊಂಡ ಯುವಕನ ವಯಸ್ಸು 19 ವರ್ಷವಾಗಿದ್ದು, ಆನಂದ ನಿಶಾದ್ ಎಂದು ಗುರುತಿಸಲಾಗಿದೆ.

ಯುವಕ ಗುಂಡರದೇಹಿಯ ಬಾಗ್ಮಾರಾ ನಿವಾಸಿ ಎನ್ನಲಾಗ್ತಿದೆ. ಘಟನೆ ನಡೆದ ಸಂದರ್ಭದಲ್ಲಿ ಬೈಕ್​ ಸವಾರನೊಬ್ಬ ಆಕಸ್ಮಿಕವಾಗಿ ವಿಡಿಯೋ ಮಾಡಿದ್ದಾರೆ. ಆ ವಿಡಿಯೋದಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಳ್ಳುವ ದೃಶ್ಯ ಸೆರೆಯಾಗಿದೆ. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆತ್ಮಹತ್ಯೆ ಕಾರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Last Updated : Jun 23, 2022, 3:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.