ETV Bharat / bharat

ಕೇರಳ ನರ್ಸ್​ಗೆ ಯೆಮೆನ್​ನಲ್ಲಿ ಮರಣದಂಡನೆ: ವಿನಾಯಿತಿ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್

author img

By ETV Bharat Karnataka Team

Published : Nov 16, 2023, 11:05 PM IST

ಕೊಲೆ ಕೇಸಲ್ಲಿ ಕೇರಳದ ನರ್ಸ್​ ಯೆಮೆನ್​ನಲ್ಲಿ ಮರಣದಂಡನೆಗೆ ಗುರಿಯಾಗಿದ್ದಾರೆ. ಆಕೆಯ ಭೇಟಿಗಾಗಿ ಅವಕಾಶ ಮಾಡಿಕೊಡಬೇಕು ಎಂದು ಕುಟುಂಬಸ್ಥರು ಕೋರಿದ್ದಾರೆ.

ಕೇರಳ ನರ್ಸ್​ಗೆ ಮರಣದಂಡನೆ
ಕೇರಳ ನರ್ಸ್​ಗೆ ಮರಣದಂಡನೆ

ಪಾಲಕ್ಕಾಡ್ (ಕೇರಳ): ವ್ಯಕ್ತಿಯೊಬ್ಬರ ಕೊಲೆ ಪ್ರಕರಣದಲ್ಲಿ ಯೆಮೆನ್​ನಲ್ಲಿ ಮರಣದಂಡನೆಗೆ ಗುರಿಯಾಗಿರುವ ಕೇರಳದ ನರ್ಸ್​ಗೆ ವಿನಾಯಿತಿ ನೀಡಲು ಅಲ್ಲಿನ ಸುಪ್ರೀಂಕೋರ್ಟ್​ ನಿರಾಕರಿಸಿದೆ. ಇದಕ್ಕಾಗಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ. ಆಕೆಯ ಕುಟುಂಬಸ್ಥರು ಮುಂದಿನ ಕ್ರಮಕ್ಕೆ ಕೇಂದ್ರ ಸರ್ಕಾರದ ನೆರವು ಕೋರಿದ್ದಾರೆ. ಅಲ್ಲದೇ ಕೊನೆಯಲ್ಲಿ ಆಕೆಯನ್ನು ಕಾಣಲು ಅವಕಾಶ ಮಾಡಿಕೊಡಬೇಕು ಎಂದು ಸರ್ಕಾರವನ್ನು ಕೋರಲಾಗಿದೆ. ಯೆಮೆನ್​ ಸರ್ಕಾರದ ಈ ಬಗ್ಗೆ ಚರ್ಚಿಸಲು ಮನವಿ ಮಾಡಿದೆ.

ಪ್ರಕರಣದ ಹಿನ್ನೆಲೆ: ಕೇರಳ ನರ್ಸ್​ ನಿಮಿಷಾ ಪ್ರಿಯಾ ಮತ್ತು ಅವರ ಕುಟುಂಬ ಹಲವು ವರ್ಷಗಳಿಂದ ಯೆಮೆನ್‌ನಲ್ಲಿದ್ದರು. ಬಳಿಕ ಕೆಲ ವರ್ಷಗಳ ಹಿಂದೆ ಪತಿ ಮತ್ತು ಮಗಳು ಭಾರತಕ್ಕೆ ಮರಳಿದ್ದರು. ಕೆಲವು ಕೆಲಸ ಕಾರಣ ನಿಮಿಷಾ ಅವರು ಅಲ್ಲಿಯೇ ಉಳಿದುಕೊಂಡಿದ್ದರು. 2015 ರಲ್ಲಿ ಯೆಮನ್​ ಪ್ರಜೆ ತಲಾಲ್ ಮೆಹಾದಿ ಅವರೊಂದಿಗೆ ಕ್ಲಿನಿಕ್ ಅನ್ನು ಪ್ರಾರಂಭಿಸಿದ್ದರು. ಬಳಿಕ ಕೆಲ ವ್ಯತ್ಯಾಸದಿಂದಾಗಿ ಪಾಲುದಾರಿಕೆ ತೊರೆದಿದ್ದರು.

ಇದಾದ ಬಳಿಕ ಭಾರತಕ್ಕೆ ಹಿಂದಿರುಗಲು ಪ್ರಿಯಾ ಅವರಿಗೆ ಬೇಕಾಗಿದ್ದ ಪಾಸ್​ಪೋರ್ಟ್​ ಮತ್ತು ವೀಸಾವನ್ನು ಮೆಹಾದಿ ಅವರು ತಮ್ಮಲ್ಲಿ ಒತ್ತೆಯಿಟ್ಟುಕೊಂಡಿದ್ದರು. ಹೀಗಾಗಿ ಅವರು ದೇಶಕ್ಕೆ ಮರಳಲು ಸಾಧ್ಯವಾಗಿರಲಿಲ್ಲ. ತಲಾಲ್ ಮೆಹಾದಿಯಿಂದ ದಾಖಲೆಗಳನ್ನು ಹಿಂಪಡೆಯುವ ಪ್ರಯತ್ನದಲ್ಲಿ ನರ್ಸ್​, 2017 ರಲ್ಲಿ ನಿದ್ರಾ ಚುಚ್ಚುಮದ್ದನ್ನು ಆತನಿಗೆ ಚುಚ್ಚಿದ್ದಳು. ದುರಾದೃಷ್ಟವಶಾತ್​ ಆತ ಸಾವನ್ನಪ್ಪಿದ್ದ. ಬಳಿಕ ಯಾರಿಗೂ ಗೊತ್ತಾಗದಂತೆ ಮೃತ ದೇಹವನ್ನು ವಿಲೇವಾರಿ ಮಾಡಲು ಪ್ರಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಳು.

ಬಂಧಿಸಿದ ಪೊಲೀಸರು ಜೈಲಿಗಟ್ಟಿದ್ದರು. ಇದಾದ ಬಳಿಕ ವಿಚಾರಣೆಯಲ್ಲಿ ಅಲ್ಲಿನ ಸುಪ್ರೀಂಕೋರ್ಟ್​ ನರ್ಸ್​ ಪ್ರಿಯಾಗೆ ಕೊಲೆ ಆರೋಪದಲ್ಲಿ ಮರಣದಂಡನೆ ವಿಧಿಸಿತ್ತು. ಇದರ ವಿರುದ್ಧ ಪ್ರಿಯಾ ಅವರು ಅರ್ಜಿ ಸಲ್ಲಿಸಿದ್ದರು.ಕಳೆದ 6 ವರ್ಷಗಳಿಂದ ಅವರು ಯೆಮೆನ್ ಜೈಲಿನಲ್ಲಿದ್ದಾರೆ. ಮರಣದಂಡನೆಯಿಂದ ವಿನಾಯಿತಿ ನೀಡಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಅಲ್ಲಿನ ಸುಪ್ರೀಂಕೋರ್ಟ್​ ನಿರಾಕರಿಸಿದೆ. ನರ್ಸ್​ ಪರ ವಕೀಲರು ಕನಿಷ್ಟ ಅವರ ಕುಟುಂಬದ ಭೇಟಿಗೆ ಅವಕಾಶ ನೀಡಲು ಕೋರ್ಟ್​ಗೆ ಮನವಿ ಮಾಡಿದ್ದಾರೆ.

ಕೇಂದ್ರದ ನೆರವು ಕೋರಿದ ಕುಟುಂಬ: ನರ್ಸ್​ ಮರಣದಂಡನೆ ವಿನಾಯಿತಿ ತಿರಸ್ಕರಿಸಿದ್ದು ಭೇಟಿಗೆ ಅವಕಾಶ ಮಾಡಿಸಿಕೊಡಿ ಎಂದು ಕುಟುಂಬಸ್ಥರು ಕೇಂದ್ರ ಸರ್ಕಾರದ ನೆರವು ಕೋರಿದ್ದಾರೆ. ಈ ಬಗ್ಗೆ ದೆಹಲಿ ಹೈಕೋರ್ಟ್ ಕೂಡ ಅರ್ಜಿದಾರರ ಬೇಡಿಕೆಯ ಬಗ್ಗೆ ವಾರದೊಳಗೆ ನಿರ್ಧಾರ ತೆಗೆದುಕೊಳ್ಳುವಂತೆ ಕೇಂದ್ರಕ್ಕೆ ಸೂಚಿಸಿದೆ.

ಸುಪ್ರೀಂಕೋರ್ಟ್​ ಅರ್ಜಿಯನ್ನು ನಿರಾಕರಿಸಿದ್ದು ಆಘಾತವಾಗಿದೆ ಎಂದು ನರ್ಸ್​ ಪ್ರಿಯಾ ಅವರ ತಾಯಿ ಹೇಳಿದ್ದಾರೆ. ಮಗಳನ್ನು ನೋಡಲು ಅವಕಾಶ ಮಾಡಿಕೊಡಬೇಕು. ಯೆಮೆನ್ ಅಧ್ಯಕ್ಷರು ಮಾತ್ರ ಮರಣದಂಡನೆಗೆ ಕ್ಷಮೆ ನೀಡುವ ಕೊನೆಯ ಅವಕಾಶವಿದೆ. ಈ ಬಗ್ಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು. ಈ ಹಿಂದೆ ಸಾವಿಗೀಡಾದ ಮೆಹಾದಿ ಕುಟುಂಬ ಪರಿಹಾರ ನೀಡಿದಲ್ಲಿ ಕೇಸ್​ ವಾಪಸ್​ ಪಡೆಯುವುದಾಗಿ ತಿಳಿಸಿತ್ತು. ಇದರ ನಂತರ ಅದನ್ನೂ ತಿರಸ್ಕರಿಸಿದೆ.

ಇದನ್ನೂ ಓದಿ: ವಾರ್ಷಿಕ ಮಂಡಲ ಮಕರವಿಳಕ್ಕು ಯಾತ್ರೆ: ಭಕ್ತರಿಗೆ ಬಾಗಿಲು ತೆರೆದ ಶಬರಿಮಲೆ ದೇವಾಲಯ

ಪಾಲಕ್ಕಾಡ್ (ಕೇರಳ): ವ್ಯಕ್ತಿಯೊಬ್ಬರ ಕೊಲೆ ಪ್ರಕರಣದಲ್ಲಿ ಯೆಮೆನ್​ನಲ್ಲಿ ಮರಣದಂಡನೆಗೆ ಗುರಿಯಾಗಿರುವ ಕೇರಳದ ನರ್ಸ್​ಗೆ ವಿನಾಯಿತಿ ನೀಡಲು ಅಲ್ಲಿನ ಸುಪ್ರೀಂಕೋರ್ಟ್​ ನಿರಾಕರಿಸಿದೆ. ಇದಕ್ಕಾಗಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ. ಆಕೆಯ ಕುಟುಂಬಸ್ಥರು ಮುಂದಿನ ಕ್ರಮಕ್ಕೆ ಕೇಂದ್ರ ಸರ್ಕಾರದ ನೆರವು ಕೋರಿದ್ದಾರೆ. ಅಲ್ಲದೇ ಕೊನೆಯಲ್ಲಿ ಆಕೆಯನ್ನು ಕಾಣಲು ಅವಕಾಶ ಮಾಡಿಕೊಡಬೇಕು ಎಂದು ಸರ್ಕಾರವನ್ನು ಕೋರಲಾಗಿದೆ. ಯೆಮೆನ್​ ಸರ್ಕಾರದ ಈ ಬಗ್ಗೆ ಚರ್ಚಿಸಲು ಮನವಿ ಮಾಡಿದೆ.

ಪ್ರಕರಣದ ಹಿನ್ನೆಲೆ: ಕೇರಳ ನರ್ಸ್​ ನಿಮಿಷಾ ಪ್ರಿಯಾ ಮತ್ತು ಅವರ ಕುಟುಂಬ ಹಲವು ವರ್ಷಗಳಿಂದ ಯೆಮೆನ್‌ನಲ್ಲಿದ್ದರು. ಬಳಿಕ ಕೆಲ ವರ್ಷಗಳ ಹಿಂದೆ ಪತಿ ಮತ್ತು ಮಗಳು ಭಾರತಕ್ಕೆ ಮರಳಿದ್ದರು. ಕೆಲವು ಕೆಲಸ ಕಾರಣ ನಿಮಿಷಾ ಅವರು ಅಲ್ಲಿಯೇ ಉಳಿದುಕೊಂಡಿದ್ದರು. 2015 ರಲ್ಲಿ ಯೆಮನ್​ ಪ್ರಜೆ ತಲಾಲ್ ಮೆಹಾದಿ ಅವರೊಂದಿಗೆ ಕ್ಲಿನಿಕ್ ಅನ್ನು ಪ್ರಾರಂಭಿಸಿದ್ದರು. ಬಳಿಕ ಕೆಲ ವ್ಯತ್ಯಾಸದಿಂದಾಗಿ ಪಾಲುದಾರಿಕೆ ತೊರೆದಿದ್ದರು.

ಇದಾದ ಬಳಿಕ ಭಾರತಕ್ಕೆ ಹಿಂದಿರುಗಲು ಪ್ರಿಯಾ ಅವರಿಗೆ ಬೇಕಾಗಿದ್ದ ಪಾಸ್​ಪೋರ್ಟ್​ ಮತ್ತು ವೀಸಾವನ್ನು ಮೆಹಾದಿ ಅವರು ತಮ್ಮಲ್ಲಿ ಒತ್ತೆಯಿಟ್ಟುಕೊಂಡಿದ್ದರು. ಹೀಗಾಗಿ ಅವರು ದೇಶಕ್ಕೆ ಮರಳಲು ಸಾಧ್ಯವಾಗಿರಲಿಲ್ಲ. ತಲಾಲ್ ಮೆಹಾದಿಯಿಂದ ದಾಖಲೆಗಳನ್ನು ಹಿಂಪಡೆಯುವ ಪ್ರಯತ್ನದಲ್ಲಿ ನರ್ಸ್​, 2017 ರಲ್ಲಿ ನಿದ್ರಾ ಚುಚ್ಚುಮದ್ದನ್ನು ಆತನಿಗೆ ಚುಚ್ಚಿದ್ದಳು. ದುರಾದೃಷ್ಟವಶಾತ್​ ಆತ ಸಾವನ್ನಪ್ಪಿದ್ದ. ಬಳಿಕ ಯಾರಿಗೂ ಗೊತ್ತಾಗದಂತೆ ಮೃತ ದೇಹವನ್ನು ವಿಲೇವಾರಿ ಮಾಡಲು ಪ್ರಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಳು.

ಬಂಧಿಸಿದ ಪೊಲೀಸರು ಜೈಲಿಗಟ್ಟಿದ್ದರು. ಇದಾದ ಬಳಿಕ ವಿಚಾರಣೆಯಲ್ಲಿ ಅಲ್ಲಿನ ಸುಪ್ರೀಂಕೋರ್ಟ್​ ನರ್ಸ್​ ಪ್ರಿಯಾಗೆ ಕೊಲೆ ಆರೋಪದಲ್ಲಿ ಮರಣದಂಡನೆ ವಿಧಿಸಿತ್ತು. ಇದರ ವಿರುದ್ಧ ಪ್ರಿಯಾ ಅವರು ಅರ್ಜಿ ಸಲ್ಲಿಸಿದ್ದರು.ಕಳೆದ 6 ವರ್ಷಗಳಿಂದ ಅವರು ಯೆಮೆನ್ ಜೈಲಿನಲ್ಲಿದ್ದಾರೆ. ಮರಣದಂಡನೆಯಿಂದ ವಿನಾಯಿತಿ ನೀಡಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಅಲ್ಲಿನ ಸುಪ್ರೀಂಕೋರ್ಟ್​ ನಿರಾಕರಿಸಿದೆ. ನರ್ಸ್​ ಪರ ವಕೀಲರು ಕನಿಷ್ಟ ಅವರ ಕುಟುಂಬದ ಭೇಟಿಗೆ ಅವಕಾಶ ನೀಡಲು ಕೋರ್ಟ್​ಗೆ ಮನವಿ ಮಾಡಿದ್ದಾರೆ.

ಕೇಂದ್ರದ ನೆರವು ಕೋರಿದ ಕುಟುಂಬ: ನರ್ಸ್​ ಮರಣದಂಡನೆ ವಿನಾಯಿತಿ ತಿರಸ್ಕರಿಸಿದ್ದು ಭೇಟಿಗೆ ಅವಕಾಶ ಮಾಡಿಸಿಕೊಡಿ ಎಂದು ಕುಟುಂಬಸ್ಥರು ಕೇಂದ್ರ ಸರ್ಕಾರದ ನೆರವು ಕೋರಿದ್ದಾರೆ. ಈ ಬಗ್ಗೆ ದೆಹಲಿ ಹೈಕೋರ್ಟ್ ಕೂಡ ಅರ್ಜಿದಾರರ ಬೇಡಿಕೆಯ ಬಗ್ಗೆ ವಾರದೊಳಗೆ ನಿರ್ಧಾರ ತೆಗೆದುಕೊಳ್ಳುವಂತೆ ಕೇಂದ್ರಕ್ಕೆ ಸೂಚಿಸಿದೆ.

ಸುಪ್ರೀಂಕೋರ್ಟ್​ ಅರ್ಜಿಯನ್ನು ನಿರಾಕರಿಸಿದ್ದು ಆಘಾತವಾಗಿದೆ ಎಂದು ನರ್ಸ್​ ಪ್ರಿಯಾ ಅವರ ತಾಯಿ ಹೇಳಿದ್ದಾರೆ. ಮಗಳನ್ನು ನೋಡಲು ಅವಕಾಶ ಮಾಡಿಕೊಡಬೇಕು. ಯೆಮೆನ್ ಅಧ್ಯಕ್ಷರು ಮಾತ್ರ ಮರಣದಂಡನೆಗೆ ಕ್ಷಮೆ ನೀಡುವ ಕೊನೆಯ ಅವಕಾಶವಿದೆ. ಈ ಬಗ್ಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು. ಈ ಹಿಂದೆ ಸಾವಿಗೀಡಾದ ಮೆಹಾದಿ ಕುಟುಂಬ ಪರಿಹಾರ ನೀಡಿದಲ್ಲಿ ಕೇಸ್​ ವಾಪಸ್​ ಪಡೆಯುವುದಾಗಿ ತಿಳಿಸಿತ್ತು. ಇದರ ನಂತರ ಅದನ್ನೂ ತಿರಸ್ಕರಿಸಿದೆ.

ಇದನ್ನೂ ಓದಿ: ವಾರ್ಷಿಕ ಮಂಡಲ ಮಕರವಿಳಕ್ಕು ಯಾತ್ರೆ: ಭಕ್ತರಿಗೆ ಬಾಗಿಲು ತೆರೆದ ಶಬರಿಮಲೆ ದೇವಾಲಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.