ETV Bharat / bharat

ತಂದೆಯ ಸಾವಿಗೆ ಸಿಗದ ವಿದ್ಯುತ್ ಇಲಾಖೆ ಪರಿಹಾರ; ಆತ್ಮಹತ್ಯೆಗೆ ಶರಣಾದ ಯುವಕ

author img

By

Published : Apr 13, 2022, 4:21 PM IST

ವಿದ್ಯುತ್ ಇಲಾಖೆಯಲ್ಲಿ ಕೆಲಸ ಮಾಡ್ತಿದ್ದ ವೇಳೆ ಸಾವನ್ನಪ್ಪಿದ್ದ ವ್ಯಕ್ತಿಯೋರ್ವನಿಗೆ ಆರ್ಥಿಕ ಸಹಾಯ ಸಿಗದ ಕಾರಣ ಆತನ ಮಗನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

19-yr-old orphan dies by suicide
19-yr-old orphan dies by suicide

ಝಾನ್ಸಿ(ಉತ್ತರ ಪ್ರದೇಶ): ವಿದ್ಯುತ್ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ಭರತ್ ಬಹದ್ದೂರ್​ ಆರು ವರ್ಷಗಳ ಹಿಂದೆ ಮೃತಪಟ್ಟಿದ್ದು, ಇದಾದ ಕೆಲ ದಿನಗಳಲ್ಲಿ ಈತನ ಹೆಂಡತಿ ಸಹ ಸಾವಿನ ಕದ ತಟ್ಟಿದ್ದಾಳೆ. ಹೀಗಾಗಿ, ಮೂವರು ಮಕ್ಕಳು ಅನಾಥವಾಗಿವೆ. ಆರು ವರ್ಷವಾದರೂ ವಿದ್ಯುತ್ ಇಲಾಖೆ ತಂದೆಯ ಸಾವಿಗೆ ಪರಿಹಾರ ನೀಡದ ಕಾರಣ, ಆರ್ಥಿಕ ಮುಗ್ಗಟ್ಟಿನಿಂದಾಗಿ 19 ವರ್ಷದ ಅನಾಥನೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ.

19-yr-old orphan dies by suicide

ಉತ್ತರ ಪ್ರದೇಶದ ಝಾನ್ಸಿಯಲ್ಲಿ ಈ ಘಟನೆ ನಡೆದಿದೆ. ವಿದ್ಯುತ್ ಇಲಾಖೆ ನಿರ್ಲಕ್ಷ್ಯಕ್ಕೆ ಅನಾಥ ಯುವಕನೋರ್ವ ಬಲಿಯಾಗಿದ್ದಾನೆ. ಮತನನ್ನು ಶನಿ(19) ಎಂದು ಗುರುತಿಸಲಾಗಿದೆ. ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭರತ್​, ವಿದ್ಯುತ್ ಅವಘಡದಿಂದ ಪ್ರಾಣ ಕಳೆದುಕೊಂಡಿದ್ದರು. ಈ ವೇಳೆ ಆರ್ಥಿಕ ಸಹಾಯ ಹಾಗೂ ಉದ್ಯೋಗದ ಭರವಸೆ ನೀಡಲಾಗಿತ್ತು. ಆದರೆ, ಸುಮಾರು ಆರು ವರ್ಷವಾದ್ರೂ ಯಾವುದೇ ರೀತಿಯ ಸಹಾಯ ಬಂದಿಲ್ಲ. ಹೀಗಾಗಿ, ಬೇರೆ ಹಾದಿ ಇಲ್ಲದ ಕಾರಣ ಶನಿ ಈ ನಿರ್ಧಾರ ಕೈಗೊಂಡಿದ್ದಾನೆ.

ಇದನ್ನೂ ಓದಿ: ಪ್ರಿಯಕರನೊಂದಿಗೆ ಇರಲು ಮೂರು ವರ್ಷದ ಮಗನ ಕೊಲೆಗೈದ ತಾಯಿ

ಇದೀಗ ಸಹೋದರಿ ಮತ್ತು ಸಹೋದರ ಮಾತ್ರ ಉಳಿದುಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಸಕಾಲದಲ್ಲಿ ನನ್ನ ಸಹೋದರನಿಗೆ ಸಹಾಯ ಮಾಡಿದ್ರೆ, ಆತನ ಜೀವ ಉಳಿಯುತ್ತಿತ್ತು ಎಂದು ಸಹೋದರಿ ರೋಶನಿ ಹೇಳಿಕೊಂಡಿದ್ದಾಳೆ.

ಝಾನ್ಸಿ(ಉತ್ತರ ಪ್ರದೇಶ): ವಿದ್ಯುತ್ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ಭರತ್ ಬಹದ್ದೂರ್​ ಆರು ವರ್ಷಗಳ ಹಿಂದೆ ಮೃತಪಟ್ಟಿದ್ದು, ಇದಾದ ಕೆಲ ದಿನಗಳಲ್ಲಿ ಈತನ ಹೆಂಡತಿ ಸಹ ಸಾವಿನ ಕದ ತಟ್ಟಿದ್ದಾಳೆ. ಹೀಗಾಗಿ, ಮೂವರು ಮಕ್ಕಳು ಅನಾಥವಾಗಿವೆ. ಆರು ವರ್ಷವಾದರೂ ವಿದ್ಯುತ್ ಇಲಾಖೆ ತಂದೆಯ ಸಾವಿಗೆ ಪರಿಹಾರ ನೀಡದ ಕಾರಣ, ಆರ್ಥಿಕ ಮುಗ್ಗಟ್ಟಿನಿಂದಾಗಿ 19 ವರ್ಷದ ಅನಾಥನೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ.

19-yr-old orphan dies by suicide

ಉತ್ತರ ಪ್ರದೇಶದ ಝಾನ್ಸಿಯಲ್ಲಿ ಈ ಘಟನೆ ನಡೆದಿದೆ. ವಿದ್ಯುತ್ ಇಲಾಖೆ ನಿರ್ಲಕ್ಷ್ಯಕ್ಕೆ ಅನಾಥ ಯುವಕನೋರ್ವ ಬಲಿಯಾಗಿದ್ದಾನೆ. ಮತನನ್ನು ಶನಿ(19) ಎಂದು ಗುರುತಿಸಲಾಗಿದೆ. ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭರತ್​, ವಿದ್ಯುತ್ ಅವಘಡದಿಂದ ಪ್ರಾಣ ಕಳೆದುಕೊಂಡಿದ್ದರು. ಈ ವೇಳೆ ಆರ್ಥಿಕ ಸಹಾಯ ಹಾಗೂ ಉದ್ಯೋಗದ ಭರವಸೆ ನೀಡಲಾಗಿತ್ತು. ಆದರೆ, ಸುಮಾರು ಆರು ವರ್ಷವಾದ್ರೂ ಯಾವುದೇ ರೀತಿಯ ಸಹಾಯ ಬಂದಿಲ್ಲ. ಹೀಗಾಗಿ, ಬೇರೆ ಹಾದಿ ಇಲ್ಲದ ಕಾರಣ ಶನಿ ಈ ನಿರ್ಧಾರ ಕೈಗೊಂಡಿದ್ದಾನೆ.

ಇದನ್ನೂ ಓದಿ: ಪ್ರಿಯಕರನೊಂದಿಗೆ ಇರಲು ಮೂರು ವರ್ಷದ ಮಗನ ಕೊಲೆಗೈದ ತಾಯಿ

ಇದೀಗ ಸಹೋದರಿ ಮತ್ತು ಸಹೋದರ ಮಾತ್ರ ಉಳಿದುಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಸಕಾಲದಲ್ಲಿ ನನ್ನ ಸಹೋದರನಿಗೆ ಸಹಾಯ ಮಾಡಿದ್ರೆ, ಆತನ ಜೀವ ಉಳಿಯುತ್ತಿತ್ತು ಎಂದು ಸಹೋದರಿ ರೋಶನಿ ಹೇಳಿಕೊಂಡಿದ್ದಾಳೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.