ಮುಂಬೈ(ಮಹಾರಾಷ್ಟ್ರ): ಮುಂಬೈನಲ್ಲಿ ಜೋಡಿ ಕೊಲೆ ಪ್ರಕರಣ ನಡೆದಿರುವುದಾಗಿ ಬೆಳಕಿಗೆ ಬಂದಿದ್ದು, ಕಟ್ಟಿಕೊಂಡ ಹೆಂಡತಿ ಮತ್ತು ಮಗಳನ್ನ ನೋಡಿಕೊಳ್ಳಲಾಗದೇ ಪತಿ ಕೊಲೆ ಮಾಡಿದ್ದಾನೆ.
ಮುಂಬೈನ ಅಂಧೇರಿಯ ಶೇರ್-ಎ-ಪಂಜಾಬ್ ಕಾಲೋನಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಮೇಘವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿರಿ: 100 ವರ್ಷ ಕಳೆದ್ರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ, ಸಂಸತ್ನಲ್ಲಿ ಪ್ರಧಾನಿ ಮೋದಿ ಲೇವಡಿ
ಆರೋಪಿ ಪುರುಷೋತ್ತಮ್ ಸಿಂಗ್(89) ತನ್ನ ಪತ್ನಿ ಜಸ್ಟೀರ್ ಕೌರ್(81) ಹಾಗೂ ವಿಶೇಷ ಚೇತನ ಪುತ್ರಿ ಕಮಲಜಿತ್ ಕೌರ್ ಕತ್ತು ಸೀಳಿ ಕೊಲೆ ಮಾಡಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಜಸ್ಟೀರ್ ಕೌರ್ ಕಳೆದ 10 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಮಗಳು ವಿಶೇಷ ಚೇತನಳಾಗಿದ್ದಳು. ಇವರಿಬ್ಬರನ್ನೂ ನೋಡಿಕೊಳ್ಳಲು ಬೇಸತ್ತು ಈ ರೀತಿಯಾಗಿ ನಡೆದುಕೊಂಡಿದ್ದಾಗಿ ತಿಳಿದು ಬಂದಿದೆ.