ಲಖನೌ (ಉತ್ತರ ಪ್ರದೇಶ): ವಿವಾದಿತ ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ಮ ಲಖನೌ ಪೀಠ ಮುಂದೂಡಿದೆ.
ಲಖನೌ ಪೀಠದಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಪರಿಶೀಲನಾ ಅರ್ಜಿಯಲ್ಲಿ ಕೆಲವು ಡಾಕ್ಯೂಮೆಂಟರಿ ದೋಷಗಳಿದ್ದ ಕಾರಣ ಎರಡು ವಾರಗಳ ವರೆಗೆ ಅರ್ಜಿ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ.
ನ್ಯಾಯಮೂರ್ತಿ ರಾಕೇಶ್ ಶ್ರೀವಾಸ್ತವ ಅವರ ಏಕ ಸದಸ್ಯ ನ್ಯಾಯಪೀಠ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ.