ETV Bharat / bharat

ಕೇಂದ್ರ ವಿಸ್ಟಾ ಯೋಜನೆ: ಪಾರಂಪರಿಕ, ಸಾಂಸ್ಕೃತಿಕ, ಐತಿಹಾಸಿಕ ಕಟ್ಟಡಗಳ ಮಾರ್ಪಾಡಿಲ್ಲ - ಕೇಂದ್ರದ ಭರವಸೆ

ಕೇಂದ್ರ ವಿಸ್ಟಾ ಯೋಜನೆಯಡಿ ಯಾವುದೇ ಪಾರಂಪರಿಕ, ಸಾಂಸ್ಕೃತಿಕ, ಐತಿಹಾಸಿಕ ಕಟ್ಟಡಗಳನ್ನು ಮುಟ್ಟಲಾಗುವುದಿಲ್ಲ ಅವು, ಹಾಗೆಯೇ ಇರುತ್ತವೆ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ.

author img

By

Published : May 31, 2021, 5:22 PM IST

vista
vista

ನವದೆಹಲಿ: ಕೇಂದ್ರ ವಿಸ್ಟಾ ಯೋಜನೆಯಡಿ ನಿರ್ಮಾಣ ಕಾರ್ಯಗಳಲ್ಲಿ ಯಾವುದೇ ಪಾರಂಪರಿಕ, ಸಾಂಸ್ಕೃತಿಕ, ಐತಿಹಾಸಿಕ ಕಟ್ಟಡಗಳನ್ನು ಮುಟ್ಟಲಾಗುವುದಿಲ್ಲ ಅವು, ಹಾಗೆಯೇ ಇರುತ್ತವೆ ಎಂದು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ಹೇಳಿದ್ದಾರೆ.

ದೆಹಲಿ ಹೈಕೋರ್ಟ್‌ನ ತೀರ್ಪಿನ ನಂತರ ಇಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಸಚಿವರು, ಸೆಂಟ್ರಲ್​ ವಿಸ್ಟಾ ಮತ್ತು ಸೆಂಟ್ರಲ್​ ಅವೆನ್ಯೂ ಎರಡೂ ವಿಭಿನ್ನ ಯೋಜನೆಗಳು ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು. ಕೇಂದ್ರ ವೀಸ್ತಾ ಯೋಜನೆಯಡಿ ಹೊಸ ಸಂಸತ್ತು, ಪ್ರಧಾನಿ ಮತ್ತು ಉಪ ರಾಷ್ಟ್ರಪತಿ, ಕೇಂದ್ರ ಕಾರ್ಯದರ್ಶಿಗಳ ಕಟ್ಟಡ ನಿರ್ಮಾಣ ಕಾರ್ಯವಿದೆ. ಈ ಯೋಜನೆಯ ಒಟ್ಟು ವೆಚ್ಚ 1,300 ಕೋಟಿ ರೂ.

ಹೊಸ ಕಟ್ಟಡಗಳಲ್ಲಿ ಕನಿಷ್ಠ 16 ಸಾವಿರ ಕಾರುಗಳಿಗೆ ಪಾರ್ಕಿಂಗ್​ ವ್ಯವಸ್ಥೆ ಇರಲಿದೆ. ಹಾಗೂ ಮುಖ್ಯ ರಸ್ತೆಗಳಲ್ಲಿ ಸಂಚಾರ ಸುಗಮವನ್ನು ಖಚಿತಪಡಿಸುತ್ತದೆ ಎಂದು ಈಗಾಗಲೇ ಲೋಕೋಪಯೋಗಿ ಇಲಾಖೆ ತಿಳಿಸಿದೆ ಎಂದು ಅವರು ಹೇಳಿದ್ರು.

ಗಣರಾಜ್ಯೋತ್ಸವ ಆಚರಣೆ ನಡೆಸುವ ರಾಜ್‌ಪಥ್​ನ ಎರಡೂ ಬದಿಗಳನ್ನು ಒಳಗೊಂಡಿರುವ ಸೆಂಟ್ರಲ್ ವಿಸ್ಟಾ ಅವೆನ್ಯೂದಲ್ಲಿ ನಿರ್ಮಾಣ ಕಾರ್ಯಗಳನ್ನು ಸ್ಥಗಿತಗೊಳಿಸುವ ಮನವಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ವಜಾಗೊಳಿಸಿದ ನಂತರ ಪುರಿ ಈ ಘೋಷಣೆ ಮಾಡಿದ್ದಾರೆ. ಮನವಿಯು ಪ್ರೇರಿತ ಅರ್ಜಿಯಾಗಿದ್ದು, ಯೋಜನೆಯು ರಾಷ್ಟ್ರೀಯ ಮಹತ್ವದ್ದಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ:ಸೆಂಟ್ರಲ್​ ವಿಸ್ತಾ ಕಾಮಗಾರಿ ರದ್ದತಿ ಕೋರಿದ್ದ ಅರ್ಜಿದಾರನಿಗೆ 1 ಲಕ್ಷ ರೂ. ದಂಡ

ನವದೆಹಲಿ: ಕೇಂದ್ರ ವಿಸ್ಟಾ ಯೋಜನೆಯಡಿ ನಿರ್ಮಾಣ ಕಾರ್ಯಗಳಲ್ಲಿ ಯಾವುದೇ ಪಾರಂಪರಿಕ, ಸಾಂಸ್ಕೃತಿಕ, ಐತಿಹಾಸಿಕ ಕಟ್ಟಡಗಳನ್ನು ಮುಟ್ಟಲಾಗುವುದಿಲ್ಲ ಅವು, ಹಾಗೆಯೇ ಇರುತ್ತವೆ ಎಂದು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ಹೇಳಿದ್ದಾರೆ.

ದೆಹಲಿ ಹೈಕೋರ್ಟ್‌ನ ತೀರ್ಪಿನ ನಂತರ ಇಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಸಚಿವರು, ಸೆಂಟ್ರಲ್​ ವಿಸ್ಟಾ ಮತ್ತು ಸೆಂಟ್ರಲ್​ ಅವೆನ್ಯೂ ಎರಡೂ ವಿಭಿನ್ನ ಯೋಜನೆಗಳು ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು. ಕೇಂದ್ರ ವೀಸ್ತಾ ಯೋಜನೆಯಡಿ ಹೊಸ ಸಂಸತ್ತು, ಪ್ರಧಾನಿ ಮತ್ತು ಉಪ ರಾಷ್ಟ್ರಪತಿ, ಕೇಂದ್ರ ಕಾರ್ಯದರ್ಶಿಗಳ ಕಟ್ಟಡ ನಿರ್ಮಾಣ ಕಾರ್ಯವಿದೆ. ಈ ಯೋಜನೆಯ ಒಟ್ಟು ವೆಚ್ಚ 1,300 ಕೋಟಿ ರೂ.

ಹೊಸ ಕಟ್ಟಡಗಳಲ್ಲಿ ಕನಿಷ್ಠ 16 ಸಾವಿರ ಕಾರುಗಳಿಗೆ ಪಾರ್ಕಿಂಗ್​ ವ್ಯವಸ್ಥೆ ಇರಲಿದೆ. ಹಾಗೂ ಮುಖ್ಯ ರಸ್ತೆಗಳಲ್ಲಿ ಸಂಚಾರ ಸುಗಮವನ್ನು ಖಚಿತಪಡಿಸುತ್ತದೆ ಎಂದು ಈಗಾಗಲೇ ಲೋಕೋಪಯೋಗಿ ಇಲಾಖೆ ತಿಳಿಸಿದೆ ಎಂದು ಅವರು ಹೇಳಿದ್ರು.

ಗಣರಾಜ್ಯೋತ್ಸವ ಆಚರಣೆ ನಡೆಸುವ ರಾಜ್‌ಪಥ್​ನ ಎರಡೂ ಬದಿಗಳನ್ನು ಒಳಗೊಂಡಿರುವ ಸೆಂಟ್ರಲ್ ವಿಸ್ಟಾ ಅವೆನ್ಯೂದಲ್ಲಿ ನಿರ್ಮಾಣ ಕಾರ್ಯಗಳನ್ನು ಸ್ಥಗಿತಗೊಳಿಸುವ ಮನವಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ವಜಾಗೊಳಿಸಿದ ನಂತರ ಪುರಿ ಈ ಘೋಷಣೆ ಮಾಡಿದ್ದಾರೆ. ಮನವಿಯು ಪ್ರೇರಿತ ಅರ್ಜಿಯಾಗಿದ್ದು, ಯೋಜನೆಯು ರಾಷ್ಟ್ರೀಯ ಮಹತ್ವದ್ದಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ:ಸೆಂಟ್ರಲ್​ ವಿಸ್ತಾ ಕಾಮಗಾರಿ ರದ್ದತಿ ಕೋರಿದ್ದ ಅರ್ಜಿದಾರನಿಗೆ 1 ಲಕ್ಷ ರೂ. ದಂಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.