ETV Bharat / bharat

ಇಂದು ಅಲಹಾಬಾದ್​ ಕೋರ್ಟ್​ನಲ್ಲಿ ಜ್ಞಾನವಾಪಿ ಶೃಂಗಾರ ಗೌರಿ ಕೇಸ್​ ವಿಚಾರಣೆ - gyanvapi shringar gauri case

ಶೃಂಗಾರ ಗೌರಿ ಪ್ರಕರಣದಲ್ಲಿ ಮುಸ್ಲಿಮರ ಅರ್ಜಿಯನ್ನು ವಜಾ ಮಾಡಿ ಪೂಜೆಗೆ ಅವಕಾಶ ನೀಡಿದ ವಾರಾಣಸಿ ಕೋರ್ಟ್​ ಆದೇಶದ ಇದರ ವಿರುದ್ಧ ಮಸೀದಿ ಅಲಹಾಬಾದ್​ ಹೈಕೋರ್ಟ್​ ಮೆಟ್ಟಿಲೇರಿದೆ.

gyanvapi-shringar-gauri-case
ಜ್ಞಾನವಾಪಿ ಶೃಂಗಾರ ಗೌರಿ ಕೇಸ್​ ವಿಚಾರಣೆ
author img

By

Published : Dec 5, 2022, 1:44 PM IST

ಪ್ರಯಾಗರಾಜ್: ವಾರಾಣಸಿಯ ಜ್ಞಾನವಾಪಿ ಶೃಂಗಾರ್ ಗೌರಿ ಪ್ರಕರಣದಲ್ಲಿ ಪೂಜೆಗೆ ಅವಕಾಶ ನೀಡಿದ್ದನ್ನು ಪ್ರಶ್ನಿಸಿ ಮುಸ್ಲಿಂ ಪಕ್ಷಗಾರರು ಅಲಹಾಬಾದ್​ ಹೈಕೋರ್ಟ್​ ಮೆಟ್ಟಿಲೇರಿದ್ದು, ಇಂದು ವಿಚಾರಣೆ ನಡೆಯಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಾರಾಣಸಿ ಕೋರ್ಟ್​ನಲ್ಲಿ ವಿಚಾರಣೆ ನಡೆದು, ಮುಸ್ಲಿಮರ ಅರ್ಜಿ ವಜಾ ಮಾಡಿ ಪೂಜೆಗೆ ಅವಕಾಶ ನೀಡಿ ಆದೇಶಿಸಲಾಗಿತ್ತು. ಇದರ ವಿರುದ್ಧ ಮಸೀದಿ ಹೈಕೋರ್ಟ್​ ಮೆಟ್ಟಿಲೇರಿದೆ.

ನವೆಂಬರ್ 29, 30 ರಂದು ವಾರಾಣಸಿ ಕೋರ್ಟ್​ನಲ್ಲಿ ಶೃಂಗಾರ್​ ಗೌರಿ ಅರ್ಜಿಯ ವಿಚಾರಣೆ ನಡೆದಿತ್ತು. ನ್ಯಾಯಮೂರ್ತಿ ಜೆಜೆ ಮುನೀರ್ ಮುಸ್ಲಿಮರು ಅರ್ಜಿಯನ್ನು ವಜಾ ಮಾಡಿ, ಹಿಂದೂಗಳು ಸಲ್ಲಿಸಿದ ಅರ್ಜಿ ಪುರಸ್ಕರಿಸಿದ್ದರು. ಇದರ ಸಿಂಧುತ್ವ ಪ್ರಶ್ನಿಸಿ ಮಸೀದಿಯು ಅಲಹಾಬಾದ್ ಹೈಕೋರ್ಟ್‌ನಲ್ಲಿ ಮೇಲರ್ಜಿ ಸಲ್ಲಿಸಿದ್ದಾರೆ.

ವಾರಾಣಸಿ ಮಸೀದಿಯಲ್ಲಿ ಪತ್ತೆಯಾಗಿರುವ ಶಿವಲಿಂಗವನ್ನು ನಿಯಮಿತವಾಗಿ ಪೂಜಿಸುವುದಿಲ್ಲ. ವರ್ಷಕ್ಕೊಮ್ಮೆ ಮಾತ್ರ ಅಲ್ಲಿ ಪೂಜೆ ನಡೆಯುತ್ತಿತ್ತು. ಈಗ ನಿತ್ಯ ಪೂಜೆಗೆ ಅವಕಾಶ ಮಾಡಿಕೊಟ್ಟರೆ, ಧಾರ್ಮಿಕ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಂತಾಗುತ್ತದೆ ಎಂದು ಮುಸ್ಲಿಂ ಪಕ್ಷಗಾರರು ವಾದಿಸಿದ್ದಾರೆ.

ಮತ್ತೊಂದೆಡೆ, ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ಇಂದು ವಾರಣಾಸಿ ಜಿಲ್ಲಾ ನ್ಯಾಯಾಧೀಶ ಡಾ.ಅಜಯ್ ಕೃಷ್ಣ ವಿಶ್ವೇಶ್ ಅವರ ಪೀಠದಲ್ಲಿ ವಿಚಾರಣೆಗೆ ಬರಲಿದೆ. ಈ ಅರ್ಜಿಯ ಮೂಲಕ ಶೃಂಗಾರ ಗೌರಿ ಪ್ರಕರಣದ ಜತೆಗೆ ಜ್ಞಾನವಾಪಿಗೆ ಸಂಬಂಧಿಸಿದ ಇತರೆ 6 ಅರ್ಜಿಗಳ ವಿಚಾರಣೆ ನಡೆಯಲಿದೆ.

ಓದಿ: ಪನ್ನೀರ್​ ಬದಲು ಚಿಕನ್​ ಬರ್ಗರ್​​; ಫುಡ್​ ಡೆಲಿವರಿ ಕಂಪನಿಗೆ ದಂಡ ವಿಧಿಸಿದ ಗ್ರಾಹಕ ಆಯೋಗ

ಪ್ರಯಾಗರಾಜ್: ವಾರಾಣಸಿಯ ಜ್ಞಾನವಾಪಿ ಶೃಂಗಾರ್ ಗೌರಿ ಪ್ರಕರಣದಲ್ಲಿ ಪೂಜೆಗೆ ಅವಕಾಶ ನೀಡಿದ್ದನ್ನು ಪ್ರಶ್ನಿಸಿ ಮುಸ್ಲಿಂ ಪಕ್ಷಗಾರರು ಅಲಹಾಬಾದ್​ ಹೈಕೋರ್ಟ್​ ಮೆಟ್ಟಿಲೇರಿದ್ದು, ಇಂದು ವಿಚಾರಣೆ ನಡೆಯಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಾರಾಣಸಿ ಕೋರ್ಟ್​ನಲ್ಲಿ ವಿಚಾರಣೆ ನಡೆದು, ಮುಸ್ಲಿಮರ ಅರ್ಜಿ ವಜಾ ಮಾಡಿ ಪೂಜೆಗೆ ಅವಕಾಶ ನೀಡಿ ಆದೇಶಿಸಲಾಗಿತ್ತು. ಇದರ ವಿರುದ್ಧ ಮಸೀದಿ ಹೈಕೋರ್ಟ್​ ಮೆಟ್ಟಿಲೇರಿದೆ.

ನವೆಂಬರ್ 29, 30 ರಂದು ವಾರಾಣಸಿ ಕೋರ್ಟ್​ನಲ್ಲಿ ಶೃಂಗಾರ್​ ಗೌರಿ ಅರ್ಜಿಯ ವಿಚಾರಣೆ ನಡೆದಿತ್ತು. ನ್ಯಾಯಮೂರ್ತಿ ಜೆಜೆ ಮುನೀರ್ ಮುಸ್ಲಿಮರು ಅರ್ಜಿಯನ್ನು ವಜಾ ಮಾಡಿ, ಹಿಂದೂಗಳು ಸಲ್ಲಿಸಿದ ಅರ್ಜಿ ಪುರಸ್ಕರಿಸಿದ್ದರು. ಇದರ ಸಿಂಧುತ್ವ ಪ್ರಶ್ನಿಸಿ ಮಸೀದಿಯು ಅಲಹಾಬಾದ್ ಹೈಕೋರ್ಟ್‌ನಲ್ಲಿ ಮೇಲರ್ಜಿ ಸಲ್ಲಿಸಿದ್ದಾರೆ.

ವಾರಾಣಸಿ ಮಸೀದಿಯಲ್ಲಿ ಪತ್ತೆಯಾಗಿರುವ ಶಿವಲಿಂಗವನ್ನು ನಿಯಮಿತವಾಗಿ ಪೂಜಿಸುವುದಿಲ್ಲ. ವರ್ಷಕ್ಕೊಮ್ಮೆ ಮಾತ್ರ ಅಲ್ಲಿ ಪೂಜೆ ನಡೆಯುತ್ತಿತ್ತು. ಈಗ ನಿತ್ಯ ಪೂಜೆಗೆ ಅವಕಾಶ ಮಾಡಿಕೊಟ್ಟರೆ, ಧಾರ್ಮಿಕ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಂತಾಗುತ್ತದೆ ಎಂದು ಮುಸ್ಲಿಂ ಪಕ್ಷಗಾರರು ವಾದಿಸಿದ್ದಾರೆ.

ಮತ್ತೊಂದೆಡೆ, ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ಇಂದು ವಾರಣಾಸಿ ಜಿಲ್ಲಾ ನ್ಯಾಯಾಧೀಶ ಡಾ.ಅಜಯ್ ಕೃಷ್ಣ ವಿಶ್ವೇಶ್ ಅವರ ಪೀಠದಲ್ಲಿ ವಿಚಾರಣೆಗೆ ಬರಲಿದೆ. ಈ ಅರ್ಜಿಯ ಮೂಲಕ ಶೃಂಗಾರ ಗೌರಿ ಪ್ರಕರಣದ ಜತೆಗೆ ಜ್ಞಾನವಾಪಿಗೆ ಸಂಬಂಧಿಸಿದ ಇತರೆ 6 ಅರ್ಜಿಗಳ ವಿಚಾರಣೆ ನಡೆಯಲಿದೆ.

ಓದಿ: ಪನ್ನೀರ್​ ಬದಲು ಚಿಕನ್​ ಬರ್ಗರ್​​; ಫುಡ್​ ಡೆಲಿವರಿ ಕಂಪನಿಗೆ ದಂಡ ವಿಧಿಸಿದ ಗ್ರಾಹಕ ಆಯೋಗ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.