ETV Bharat / bharat

ಮುಖ್ತಾರ್ ಅನ್ಸಾರಿ, ಸಹಚರನಿಗೆ 10 ವರ್ಷ ಜೈಲು ಶಿಕ್ಷೆ: ಎಂಪಿ ಎಂಎಲ್​ಎ ಕೋರ್ಟ್ ತೀರ್ಪು

ಮಾಫಿಯಾ ಮುಖ್ತಾರ್ ಅನ್ಸಾರಿ ಮತ್ತು ಆತನ ಸಹಚರ ಭೀಮ್ ಸಿಂಗ್ ದೋಷಿ ಎಂದು ಗಾಜಿಪುರದ ಎಂಪಿ ಎಂಎಲ್​ಎ ಕೋರ್ಟ್ ಗುರುವಾರ ತೀರ್ಪು ನೀಡಿದೆ. 1996 ರಲ್ಲಿ, ಸದರ್ ಕೊತ್ವಾಲಿಯಲ್ಲಿ ಮುಖ್ತಾರ್ ಅನ್ಸಾರಿ ಮತ್ತು ಅವರ ಸಹಚರ ಭೀಮ್ ಸಿಂಗ್ ವಿರುದ್ಧ ದರೋಡೆಕೋರ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯ ಇಬ್ಬರಿಗೂ ತಲಾ 10ಶಿಕ್ಷೆ ವಿಧಿಸಿ, ತೀರ್ಪು ನೀಡಿದೆ.

author img

By

Published : Dec 15, 2022, 7:36 PM IST

ಮುಖ್ತಾರ್ ಅನ್ಸಾರಿ
ಮುಖ್ತಾರ್ ಅನ್ಸಾರಿ

ಗಾಜಿಪುರ (ಉತ್ತರ ಪ್ರದೇಶ): ರಾಜಕಾರಣಿ ಮುಖ್ತಾರ್​ ಅನ್ಸಾರಿ ಮತ್ತು ಆತನ ಸಹಚರ ಭೀಮ್​ ಸಿಂಗ್​​ಗೆ ಸಂಸದ ಶಾಸಕ ನ್ಯಾಯಾಲಯ ಗುರುವಾರ 10 ವರ್ಷ ಜೈಲು ಶಿಕ್ಷೆ ಹಾಗೂ ತಲಾ 5 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ನೀಡಿದೆ. 2005 ರಿಂದ ಮುಖ್ತಾರ್ ಜೈಲಿನಲ್ಲಿದ್ದರು.

ಅನ್ಸಾರಿ ವಿರುದ್ಧ ದರೋಡೆಕೋರ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಇದು ಸುಮಾರು 26 ವರ್ಷಗಳ ಹಿಂದಿನ ಕೇಸ್​ ಆಗಿದೆ. ಸಂಸದ ಶಾಸಕ ನ್ಯಾಯಾಲಯದ ನ್ಯಾಯಾಧೀಶ ದುರ್ಗೇಶ್ ಅವರು ಈ ಪ್ರಕರಣದಲ್ಲಿ ಮುಖ್ತಾರ್ ಮತ್ತು ಅವರ ಸಹಾಯಕರನ್ನು ತಪ್ಪಿತಸ್ಥರು ಎಂದು ಪರಿಗಣಿಸಿದ್ದಾರೆ ಎಂದು ಪ್ರಾಸಿಕ್ಯೂಷನ್ ಮೂಲಗಳು ತಿಳಿಸಿವೆ.

ಏನಿದು ಪ್ರಕರಣ?: ಆಗಸ್ಟ್ 3, 1991 ರಂದು ಮಾಜಿ ಶಾಸಕ ಅಜಯ್ ರೈ ಅವರ ಸಹೋದರ ಅವಧೇಶ್ ರೈ ಅವರನ್ನು ವಾರಣಾಸಿಯ ಲಾಹುರಾಬೀರ್ ಪ್ರದೇಶದಲ್ಲಿ ಮುಖ್ತಾರ್ ಮತ್ತು ಅವರ ಸಹಾಯಕರು ಗುಂಡಿಕ್ಕಿ ಕೊಂದಿದ್ದರು. ಈ ಪ್ರಕರಣದ ತನಿಖೆಯ ಸಮಯದಲ್ಲಿ ಪೊಲೀಸರು ಮುಖ್ತಾರ್ ವಿರುದ್ಧ ದರೋಡೆಕೋರ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಅವರ ಸಹಾಯಕನ ವಿರುದ್ಧ 1996 ರಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಮುಖ್ತಾರ್ ಅನ್ಸಾರಿ ಪ್ರಾಣಕ್ಕೆ ಅಪಾಯವಿದೆ: ಸಹೋದರ ಅಫ್ಜಲ್ ಅನ್ಸಾರಿ

ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವಾಗ ಮುಖ್ತಾರ್ ಅವರ ಸಹಾಯಕ ಭೀಮ್ ಸಿಂಗ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಮುಖ್ತಾರ್​​ ಜಾರಿ ನಿರ್ದೇಶನಾಲಯದ (ಇಡಿ) ವಶದಲ್ಲಿರುವ ಕಾರಣ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಾಜರಾಗಿದ್ದರು ಎಂದು ಪ್ರಾಸಿಕ್ಯೂಷನ್ ಮೂಲಗಳು ತಿಳಿಸಿವೆ.

ನ್ಯಾಯಾಲಯದ ತೀರ್ಪಿನ ನಂತರ, ಹೆಚ್ಚುವರಿ ಜಿಲ್ಲಾ ಸರ್ಕಾರಿ ವಕೀಲ (ಕ್ರಿಮಿನಲ್) ನೀರಜ್ ಕುಮಾರ್ ಶ್ರೀವಾಸ್ತವ ಮಾತನಾಡಿ, ದಂಡದ ಮೊತ್ತವನ್ನು ಪಾವತಿಸಲು ವಿಫಲವಾದರೆ, ಒಂದು ವರ್ಷದವರೆಗೆ ಜೈಲು ಶಿಕ್ಷೆಯ ಅವಧಿಯನ್ನು ಹೆಚ್ಚಿಸಲಾಗುವುದು ಎಂದಿದ್ದಾರೆ.

ಗಾಜಿಪುರ (ಉತ್ತರ ಪ್ರದೇಶ): ರಾಜಕಾರಣಿ ಮುಖ್ತಾರ್​ ಅನ್ಸಾರಿ ಮತ್ತು ಆತನ ಸಹಚರ ಭೀಮ್​ ಸಿಂಗ್​​ಗೆ ಸಂಸದ ಶಾಸಕ ನ್ಯಾಯಾಲಯ ಗುರುವಾರ 10 ವರ್ಷ ಜೈಲು ಶಿಕ್ಷೆ ಹಾಗೂ ತಲಾ 5 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ನೀಡಿದೆ. 2005 ರಿಂದ ಮುಖ್ತಾರ್ ಜೈಲಿನಲ್ಲಿದ್ದರು.

ಅನ್ಸಾರಿ ವಿರುದ್ಧ ದರೋಡೆಕೋರ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಇದು ಸುಮಾರು 26 ವರ್ಷಗಳ ಹಿಂದಿನ ಕೇಸ್​ ಆಗಿದೆ. ಸಂಸದ ಶಾಸಕ ನ್ಯಾಯಾಲಯದ ನ್ಯಾಯಾಧೀಶ ದುರ್ಗೇಶ್ ಅವರು ಈ ಪ್ರಕರಣದಲ್ಲಿ ಮುಖ್ತಾರ್ ಮತ್ತು ಅವರ ಸಹಾಯಕರನ್ನು ತಪ್ಪಿತಸ್ಥರು ಎಂದು ಪರಿಗಣಿಸಿದ್ದಾರೆ ಎಂದು ಪ್ರಾಸಿಕ್ಯೂಷನ್ ಮೂಲಗಳು ತಿಳಿಸಿವೆ.

ಏನಿದು ಪ್ರಕರಣ?: ಆಗಸ್ಟ್ 3, 1991 ರಂದು ಮಾಜಿ ಶಾಸಕ ಅಜಯ್ ರೈ ಅವರ ಸಹೋದರ ಅವಧೇಶ್ ರೈ ಅವರನ್ನು ವಾರಣಾಸಿಯ ಲಾಹುರಾಬೀರ್ ಪ್ರದೇಶದಲ್ಲಿ ಮುಖ್ತಾರ್ ಮತ್ತು ಅವರ ಸಹಾಯಕರು ಗುಂಡಿಕ್ಕಿ ಕೊಂದಿದ್ದರು. ಈ ಪ್ರಕರಣದ ತನಿಖೆಯ ಸಮಯದಲ್ಲಿ ಪೊಲೀಸರು ಮುಖ್ತಾರ್ ವಿರುದ್ಧ ದರೋಡೆಕೋರ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಅವರ ಸಹಾಯಕನ ವಿರುದ್ಧ 1996 ರಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಮುಖ್ತಾರ್ ಅನ್ಸಾರಿ ಪ್ರಾಣಕ್ಕೆ ಅಪಾಯವಿದೆ: ಸಹೋದರ ಅಫ್ಜಲ್ ಅನ್ಸಾರಿ

ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವಾಗ ಮುಖ್ತಾರ್ ಅವರ ಸಹಾಯಕ ಭೀಮ್ ಸಿಂಗ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಮುಖ್ತಾರ್​​ ಜಾರಿ ನಿರ್ದೇಶನಾಲಯದ (ಇಡಿ) ವಶದಲ್ಲಿರುವ ಕಾರಣ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಾಜರಾಗಿದ್ದರು ಎಂದು ಪ್ರಾಸಿಕ್ಯೂಷನ್ ಮೂಲಗಳು ತಿಳಿಸಿವೆ.

ನ್ಯಾಯಾಲಯದ ತೀರ್ಪಿನ ನಂತರ, ಹೆಚ್ಚುವರಿ ಜಿಲ್ಲಾ ಸರ್ಕಾರಿ ವಕೀಲ (ಕ್ರಿಮಿನಲ್) ನೀರಜ್ ಕುಮಾರ್ ಶ್ರೀವಾಸ್ತವ ಮಾತನಾಡಿ, ದಂಡದ ಮೊತ್ತವನ್ನು ಪಾವತಿಸಲು ವಿಫಲವಾದರೆ, ಒಂದು ವರ್ಷದವರೆಗೆ ಜೈಲು ಶಿಕ್ಷೆಯ ಅವಧಿಯನ್ನು ಹೆಚ್ಚಿಸಲಾಗುವುದು ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.