ETV Bharat / bharat

ಚಿನ್ನಮ್ಮನ ನಿರ್ಧಾರಕ್ಕೆ ತಲೆಕೆಳಗಾದ ತಮಿಳುನಾಡು ರಾಜಕೀಯ: ಇಲ್ಲಿದೆ ಶಶಿಕಲಾ ರಾಜಕೀಯ ಜೀವನ

ಬರೋಬ್ಬರಿ ನಾಲ್ಕು ವರ್ಷಗಳ ಜೈಲುವಾಸದ ಬಳಿಕ ತಮಿಳುನಾಡಿಗೆ ತೆರಳಿದ್ದ ಶಶಿಕಲಾ ನಟರಾಜನ್​ ಇದೀಗ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದು, ಅವರ ರಾಜಕೀಯ ಜೀವನದ ಪ್ರಮುಖ ಅಂಶಗಳು ಇಲ್ಲಿವೆ.

author img

By

Published : Mar 4, 2021, 1:25 AM IST

Sasikala profile
ಶಶಿಕಲಾ ರಾಜಕೀಯ ಜೀವನ

ಚೆನ್ನೈ: ತಮಿಳುನಾಡಿನಲ್ಲಿ ಅಮ್ಮನ ಸ್ಥಾನ ತುಂಬಬೇಕಿದ್ದ ಚಿನ್ನಮ್ಮ ಶಶಿಕಲಾ ತಮ್ಮ ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದಾರೆ. ತಮಿಳುನಾಡು ರಾಜಕೀಯದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದ್ದ ಇವರು ಅಚ್ಚರಿಯ ನಡೆ ಅಲ್ಲಿನ ಜನತೆಗೆ ನಿರಾಸೆಯನ್ನು ಉಂಟುಮಾಡಿದೆ. ಇವರ ಜೀವನದ ಪ್ರಮುಖ ಅಂಶಗಳು ಇಲ್ಲಿವೆ.

1954ರಲ್ಲಿ ಮನ್ನಾರ್​ಗುಡಿಯಲ್ಲಿ ವಿವೇಕಾನಂದಂ ಮತ್ತು ಕೃಷ್ಣವೇಣಿಯ ದಂಪತಿಗೆ ಶಶಿಕಲಾ ಜನಿಸಿದರು. ಇವರಿಗೆ ಸುಂದರವದನಂ, ಜಯರಾಮನ್, ವಿನೋದಗನ್ ಮತ್ತು ದಿವಾಹರನ್ ಎಂಬ ನಾಲ್ವರು ಸಹೋದರರು ಮತ್ತು ಒಬ್ಬ ಸಹೋದರಿ ವನಿತಾಮಣಿ ಇದ್ದು, ಶ್ರೀಮಂತರಲ್ಲದಿದ್ದರೂ ಪ್ರಭಾವಿಯಾದ ಕಲ್ಲಾರ್ ಸಮುದಾಯಕ್ಕೆ ಸೇರಿದವರಾಗಿದ್ದರು.

ಶಶಿಕಲಾ ಅವರ ಪತಿ ನಟರಾಜನ್ 70ರ ದಶಕದಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿದ್ದು, ಇವರಿಂದಲೇ ಶಶಿಕಲಾ ಜಯಲಲಿತಾ ಅವರೊಂದಿಗೆ ಸಂಪರ್ಕ ಸಾಧಿಸಲು ಕಾರಣವಾಗಿದ್ದು, ಎಐಎಡಿಎಂಕೆ ಪಕ್ಷದಲ್ಲಿ ಬೆಳೆಯಲು ಅವಕಾಶ ಸೃಷ್ಟಿಯಾಯಿತು.

ರಾಜಕೀಯಕ್ಕೆ ಬರುವುದಕ್ಕೂ ಮೊದಲು ಶಶಿಕಲಾ ವಿಡಿಯೋ ಚಿತ್ರೀಕರಣದ ಸ್ಟುಡಿಯೋವನ್ನು ಇಟ್ಟಿದ್ದು, ಜಯಲಲಿತಾ ಭಾಗವಹಿಸುತ್ತಿದ್ದ ಮದುವೆಗಳ ಚಿತ್ರೀಕರಣ ಮಾಡುತ್ತಿದ್ದರು. ಇದರೊಂದಿಗೆ ಜಯಲಲಿತಾ ಆತ್ಮೀಯರ ಬಳಗದಲ್ಲಿ ಸೇರ್ಪಡೆಯಾದರು.

ಜಯಲಲಿತಾ ರಾಜಕೀಯ ಆರಂಭದ ದಿನಗಳಲ್ಲಿ ಶಶಿಕಲಾ ಅವರು ತಮ್ಮ ಕಲ್ಲಾರ್​​ ಸಮುದಾಯದ ಮುಖಾಂತರ ಅನುಕೂಲ ಮಾಡಿಕೊಟ್ಟರು. ಇವರಿಬ್ಬರ ನಡುವೆ ಗೆಳೆತನ ಗಟ್ಟಿಯಾಗುತ್ತಿದ್ದಂತೆ, ಜಯಲಲಿತಾ ಸರ್ಕಾರದ ಎಲ್ಲಾ ಹಂತಗಳಲ್ಲಿ ಇವರು ಪ್ರಭಾವ ಬೀರುವ ಮಟ್ಟಿಗೆ ಶಶಿಕಲಾ ಬೆಳೆದಿದ್ದರು.

1990ರಲ್ಲಿ ಶಶಿಕಲಾ ತಮ್ಮ ಪತಿ ನಟರಾಜನ್ ಅವರು ಜಯಲಲಿತಾ ಅವರ ಬಳಗದಿಂದ ಹೊರಬರುವಂತೆ ಹೇಳಿದರೂ, ಪತಿಯ ಮಾತನ್ನು ಧಿಕ್ಕರಿಸಿ, ಜಯಲಲಿತಾ ಅವರ ಜೊತೆಯಲ್ಲಿ ಇರುವ ನಿರ್ಧಾರವನ್ನು ಶಶಿಕಲಾ ಕೈಗೊಂಡಿದ್ದರು. ಪತಿಯಿಂದ ದೂರ ಉಳಿದು ಪೊಯೇಸ್ ಗಾರ್ಡನ್​ನ ವೇದ ನಿಲಯಂ ರೆಸಿಡೆನ್ಸಿಯಲ್ಲಿ ವಾಸವಿದ್ದರು.

2012ರಲ್ಲಿ ಜಯಲಲಿತಾ ತೆಗೆದುಕೊಂಡ ನಿರ್ಧಾರ ತಮಿಳುನಾಡನ್ನು ಬೆಚ್ಚಿ ಬೀಳಿಸಿತ್ತು. ಶಶಿಕಲಾ ಸೇರಿ ಸುಮಾರು 13 ಮಂದಿಯನ್ನು ಪಕ್ಷದಿಂದ ಹೊರಹಾಕಲಾಯಿತು. ಇದಾದ ಕೆಲವು ದಿನಗಳ ನಂತರ ಕ್ಷಮಾಪಣೆ ಪತ್ರ ಬರೆದುಕೊಡುವ ಮೂಲಕ ಶಶಿಕಲಾ ಮತ್ತೆ ಪಕ್ಷಕ್ಕೆ ಸೇರ್ಪಡೆಯಾದರು.

ಇದನ್ನೂ ಓದಿ: ಪ್ರೀತಿ ಮಾಡಿದ್ದೇ ತಪ್ಪಾಯ್ತು: ಮಗಳ ಕೊಲೆ ಮಾಡಿ, ರುಂಡದೊಂದಿಗೆ ಠಾಣೆಗೆ ಬಂದ ತಂದೆ!

2016ರ ಡಿಸೆಂಬರ್​ನಲ್ಲಿ ಜಯಲಲಿತಾ ಮರಣ ಹೊಂದುವ ಕೆಲವು ವಾರಗಳ ಮೊದಲೇ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಲಾ ಆಯ್ಕೆಯಾಗಿದ್ದರು. ಇದಾದ ನಂತರ ಅಕ್ರಮ ಆಸ್ತಿ ಹೊಂದಿದ ಆರೋಪದಲ್ಲಿ 2017ರ ಫೆಬ್ರವರಿಯಲ್ಲಿ ಇವರ ವಿರುದ್ಧ ದೂರು ದಾಖಲಾಗಿ, ವಿಚಾರಣೆ ನಡೆಯಿತು.

ಈ ವೇಳೆ ಎಐಎಡಿಎಂ ಪಕ್ಷದ ಹೊಣೆಯನ್ನು ತನ್ನ ಸಂಬಂಧಿಯಾದ ಟಿಟಿವಿ ದಿನಕರನ್​ಗೆ ನೀಡಿದ ಶಶಿಕಲಾ, ಎಐಎಡಿಎಂಕೆ ಪಕ್ಷದ ಉಪ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದರು. ಇದರ ಜೊತೆಗೆ ಎಡಪ್ಪಾಡಿ ಪಳನಿಸ್ವಾಮಿ ಸಿಎಂ ಆಗಲು ಬೆಂಬಲ ನೀಡಿದರು.

ಕೆಲವು ದಿನಗಳ ನಂತರ ಎಐಎಡಿಎಂಕೆ ಪಕ್ಷದ ಎಡಪ್ಪಾಡಿ ಪಳನಿಸ್ವಾಮಿ ಬಣ ಮತ್ತು ಪನ್ನೀರ್​ಸೆಲ್ವಂ ಬಣಗಳು ಒಂದಾಗಿ ಶಶಿಕಲಾ ಮತ್ತು ಆಕೆಯ ಸಂಬಂಧಿ ಟಿಟಿವಿ ದಿನಕರನ್ ಅವರನ್ನು ಪಕ್ಷದಿಂದ ಉಚ್ಚಾಟನೆಗೊಳಿಸಿದರು.

ಅಕ್ರಮ ಆಸ್ತಿ ಪ್ರಕರಣದಲ್ಲಿ ಅಪರಾಧ ಸಾಬೀತಾಗಿದ್ದು, ಸುಮಾರು 4 ವರ್ಷಗಳ ಕಾಲ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಶಶಿಕಲಾ ಜೈಲುವಾಸ ಅನುಭವಿಸಿದ್ದು, ಅವರ ಜೈಲುವಾಸ 27 ಜನವರಿ 2021ಕ್ಕೆ ಅಂತ್ಯವಾಗಿತ್ತು.

ಚೆನ್ನೈ: ತಮಿಳುನಾಡಿನಲ್ಲಿ ಅಮ್ಮನ ಸ್ಥಾನ ತುಂಬಬೇಕಿದ್ದ ಚಿನ್ನಮ್ಮ ಶಶಿಕಲಾ ತಮ್ಮ ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದಾರೆ. ತಮಿಳುನಾಡು ರಾಜಕೀಯದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದ್ದ ಇವರು ಅಚ್ಚರಿಯ ನಡೆ ಅಲ್ಲಿನ ಜನತೆಗೆ ನಿರಾಸೆಯನ್ನು ಉಂಟುಮಾಡಿದೆ. ಇವರ ಜೀವನದ ಪ್ರಮುಖ ಅಂಶಗಳು ಇಲ್ಲಿವೆ.

1954ರಲ್ಲಿ ಮನ್ನಾರ್​ಗುಡಿಯಲ್ಲಿ ವಿವೇಕಾನಂದಂ ಮತ್ತು ಕೃಷ್ಣವೇಣಿಯ ದಂಪತಿಗೆ ಶಶಿಕಲಾ ಜನಿಸಿದರು. ಇವರಿಗೆ ಸುಂದರವದನಂ, ಜಯರಾಮನ್, ವಿನೋದಗನ್ ಮತ್ತು ದಿವಾಹರನ್ ಎಂಬ ನಾಲ್ವರು ಸಹೋದರರು ಮತ್ತು ಒಬ್ಬ ಸಹೋದರಿ ವನಿತಾಮಣಿ ಇದ್ದು, ಶ್ರೀಮಂತರಲ್ಲದಿದ್ದರೂ ಪ್ರಭಾವಿಯಾದ ಕಲ್ಲಾರ್ ಸಮುದಾಯಕ್ಕೆ ಸೇರಿದವರಾಗಿದ್ದರು.

ಶಶಿಕಲಾ ಅವರ ಪತಿ ನಟರಾಜನ್ 70ರ ದಶಕದಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿದ್ದು, ಇವರಿಂದಲೇ ಶಶಿಕಲಾ ಜಯಲಲಿತಾ ಅವರೊಂದಿಗೆ ಸಂಪರ್ಕ ಸಾಧಿಸಲು ಕಾರಣವಾಗಿದ್ದು, ಎಐಎಡಿಎಂಕೆ ಪಕ್ಷದಲ್ಲಿ ಬೆಳೆಯಲು ಅವಕಾಶ ಸೃಷ್ಟಿಯಾಯಿತು.

ರಾಜಕೀಯಕ್ಕೆ ಬರುವುದಕ್ಕೂ ಮೊದಲು ಶಶಿಕಲಾ ವಿಡಿಯೋ ಚಿತ್ರೀಕರಣದ ಸ್ಟುಡಿಯೋವನ್ನು ಇಟ್ಟಿದ್ದು, ಜಯಲಲಿತಾ ಭಾಗವಹಿಸುತ್ತಿದ್ದ ಮದುವೆಗಳ ಚಿತ್ರೀಕರಣ ಮಾಡುತ್ತಿದ್ದರು. ಇದರೊಂದಿಗೆ ಜಯಲಲಿತಾ ಆತ್ಮೀಯರ ಬಳಗದಲ್ಲಿ ಸೇರ್ಪಡೆಯಾದರು.

ಜಯಲಲಿತಾ ರಾಜಕೀಯ ಆರಂಭದ ದಿನಗಳಲ್ಲಿ ಶಶಿಕಲಾ ಅವರು ತಮ್ಮ ಕಲ್ಲಾರ್​​ ಸಮುದಾಯದ ಮುಖಾಂತರ ಅನುಕೂಲ ಮಾಡಿಕೊಟ್ಟರು. ಇವರಿಬ್ಬರ ನಡುವೆ ಗೆಳೆತನ ಗಟ್ಟಿಯಾಗುತ್ತಿದ್ದಂತೆ, ಜಯಲಲಿತಾ ಸರ್ಕಾರದ ಎಲ್ಲಾ ಹಂತಗಳಲ್ಲಿ ಇವರು ಪ್ರಭಾವ ಬೀರುವ ಮಟ್ಟಿಗೆ ಶಶಿಕಲಾ ಬೆಳೆದಿದ್ದರು.

1990ರಲ್ಲಿ ಶಶಿಕಲಾ ತಮ್ಮ ಪತಿ ನಟರಾಜನ್ ಅವರು ಜಯಲಲಿತಾ ಅವರ ಬಳಗದಿಂದ ಹೊರಬರುವಂತೆ ಹೇಳಿದರೂ, ಪತಿಯ ಮಾತನ್ನು ಧಿಕ್ಕರಿಸಿ, ಜಯಲಲಿತಾ ಅವರ ಜೊತೆಯಲ್ಲಿ ಇರುವ ನಿರ್ಧಾರವನ್ನು ಶಶಿಕಲಾ ಕೈಗೊಂಡಿದ್ದರು. ಪತಿಯಿಂದ ದೂರ ಉಳಿದು ಪೊಯೇಸ್ ಗಾರ್ಡನ್​ನ ವೇದ ನಿಲಯಂ ರೆಸಿಡೆನ್ಸಿಯಲ್ಲಿ ವಾಸವಿದ್ದರು.

2012ರಲ್ಲಿ ಜಯಲಲಿತಾ ತೆಗೆದುಕೊಂಡ ನಿರ್ಧಾರ ತಮಿಳುನಾಡನ್ನು ಬೆಚ್ಚಿ ಬೀಳಿಸಿತ್ತು. ಶಶಿಕಲಾ ಸೇರಿ ಸುಮಾರು 13 ಮಂದಿಯನ್ನು ಪಕ್ಷದಿಂದ ಹೊರಹಾಕಲಾಯಿತು. ಇದಾದ ಕೆಲವು ದಿನಗಳ ನಂತರ ಕ್ಷಮಾಪಣೆ ಪತ್ರ ಬರೆದುಕೊಡುವ ಮೂಲಕ ಶಶಿಕಲಾ ಮತ್ತೆ ಪಕ್ಷಕ್ಕೆ ಸೇರ್ಪಡೆಯಾದರು.

ಇದನ್ನೂ ಓದಿ: ಪ್ರೀತಿ ಮಾಡಿದ್ದೇ ತಪ್ಪಾಯ್ತು: ಮಗಳ ಕೊಲೆ ಮಾಡಿ, ರುಂಡದೊಂದಿಗೆ ಠಾಣೆಗೆ ಬಂದ ತಂದೆ!

2016ರ ಡಿಸೆಂಬರ್​ನಲ್ಲಿ ಜಯಲಲಿತಾ ಮರಣ ಹೊಂದುವ ಕೆಲವು ವಾರಗಳ ಮೊದಲೇ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಲಾ ಆಯ್ಕೆಯಾಗಿದ್ದರು. ಇದಾದ ನಂತರ ಅಕ್ರಮ ಆಸ್ತಿ ಹೊಂದಿದ ಆರೋಪದಲ್ಲಿ 2017ರ ಫೆಬ್ರವರಿಯಲ್ಲಿ ಇವರ ವಿರುದ್ಧ ದೂರು ದಾಖಲಾಗಿ, ವಿಚಾರಣೆ ನಡೆಯಿತು.

ಈ ವೇಳೆ ಎಐಎಡಿಎಂ ಪಕ್ಷದ ಹೊಣೆಯನ್ನು ತನ್ನ ಸಂಬಂಧಿಯಾದ ಟಿಟಿವಿ ದಿನಕರನ್​ಗೆ ನೀಡಿದ ಶಶಿಕಲಾ, ಎಐಎಡಿಎಂಕೆ ಪಕ್ಷದ ಉಪ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದರು. ಇದರ ಜೊತೆಗೆ ಎಡಪ್ಪಾಡಿ ಪಳನಿಸ್ವಾಮಿ ಸಿಎಂ ಆಗಲು ಬೆಂಬಲ ನೀಡಿದರು.

ಕೆಲವು ದಿನಗಳ ನಂತರ ಎಐಎಡಿಎಂಕೆ ಪಕ್ಷದ ಎಡಪ್ಪಾಡಿ ಪಳನಿಸ್ವಾಮಿ ಬಣ ಮತ್ತು ಪನ್ನೀರ್​ಸೆಲ್ವಂ ಬಣಗಳು ಒಂದಾಗಿ ಶಶಿಕಲಾ ಮತ್ತು ಆಕೆಯ ಸಂಬಂಧಿ ಟಿಟಿವಿ ದಿನಕರನ್ ಅವರನ್ನು ಪಕ್ಷದಿಂದ ಉಚ್ಚಾಟನೆಗೊಳಿಸಿದರು.

ಅಕ್ರಮ ಆಸ್ತಿ ಪ್ರಕರಣದಲ್ಲಿ ಅಪರಾಧ ಸಾಬೀತಾಗಿದ್ದು, ಸುಮಾರು 4 ವರ್ಷಗಳ ಕಾಲ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಶಶಿಕಲಾ ಜೈಲುವಾಸ ಅನುಭವಿಸಿದ್ದು, ಅವರ ಜೈಲುವಾಸ 27 ಜನವರಿ 2021ಕ್ಕೆ ಅಂತ್ಯವಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.