ETV Bharat / bharat

ಸಚಿನ್‌ ಪೈಲಟ್‌ ಹೆಸರಿನಲ್ಲಿ 16 ಲಕ್ಷ ರೂ. ವಂಚನೆ: ಪ್ರಕರಣ ದಾಖಲು

author img

By

Published : Jan 24, 2022, 7:49 AM IST

2018ರಲ್ಲಿ ಸಚಿನ್ ಪೈಲಟ್ ರಾಜಸ್ಥಾನದ ಉಪಮುಖ್ಯಮಂತ್ರಿಯಾಗಿದ್ದಾಗಿನಿಂದ ನನಗೆ ಪರಿಚಯವಿದೆ. ನಿಮಗೆ ಯುಕೆಪಿಎಸ್‌ಸಿಯಲ್ಲಿ ಉದ್ಯೋಗ ಕೊಡಿಸುತ್ತೇನೆ ಎಂದು ನಂಬಿಸಿ ವ್ಯಕ್ತಿಯೋರ್ವ16 ಲಕ್ಷ ರೂಪಾಯಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ವಂಚನೆ
ವಂಚನೆ

ಧೋಲ್ಪುರ್: ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಹೆಸರು ಬಳಸಿಕೊಂಡು ಉದ್ಯೋಗ ಕೊಡಿಸುವುದಾಗಿ ನಂಬಿಸಿ16 ಲಕ್ಷ ರೂಪಾಯಿ ವಂಚಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಠಾಕೂರ್ ದಾಸ್ ವಂಚನೆಗೊಳಗಾದ ವ್ಯಕ್ತಿ. ಸಂದ್‌ಪುರ ಗ್ರಾಮದ ನಿವಾಸಿ ವಿನೋದ್‌ಕುಮಾರ್‌ ಎಂಬಾತ ಕಾಲೇಜು ಉಪನ್ಯಾಸಕರ ಹುದ್ದೆ ಕೊಡಿಸುವುದಾಗಿ ನಂಬಿಸಿ, 16 ಲಕ್ಷ ರೂ.ಪಡೆದು ವಂಚಿಸಿ, ತಲೆಮರೆಸಿಕೊಂಡಿದ್ದಾನೆ ಎಂದು ಸಂತ್ರಸ್ತ ಆರೋಪಿಸಿದ್ದಾನೆ.

ಠಾಕೂರ್ ದಾಸ್ ಅವರ ಅಳಿಯ ಅನಿಲ್ ಕುಮಾರ್ ಗೋಯೆಲ್ ಅವರಿಗೆ ಉತ್ತರಾಖಂಡದ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆ ಕೊಡಿಸುವುದಾಗಿ ನಂಬಿಸಿ, ಆರೋಪಿ 18 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾನೆ. ಇದನ್ನು ನಂಬಿದ ಠಾಕೂರದಾಸ್, ವಿನೋದಕುಮಾರ್​ಗೆ 16 ಲಕ್ಷ ರೂ. ನೀಡಿದ್ದು, ಕೆಲಸ ಸಿಕ್ಕ ಬಳಿಕ 2 ಲಕ್ಷ ರೂ. ನೀಡುವುದಾಗಿ ತಿಳಿಸಿದ್ದಾನೆ.

2018ರಲ್ಲಿ ಸಚಿನ್ ಪೈಲಟ್ ರಾಜಸ್ಥಾನದ ಉಪಮುಖ್ಯಮಂತ್ರಿಯಾಗಿದ್ದಾಗಿನಿಂದ ನನಗೆ ಪರಿಚಯವಿದೆ. ಸಚಿನ್ ಪೈಲಟ್ ಉತ್ತರಾಖಂಡದ ಯುಕೆಪಿಎಸ್‌ಸಿ ಅಧ್ಯಕ್ಷರ ಆಪ್ತ ಸಹಾಯಕರಿಗೆ ಕರೆ ಮಾಡಿ ತಾವು ಸೂಚಿಸಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಹೇಳಿದ್ದರು. ಈಗ ಮತ್ತೊಮ್ಮೆ ಮಾತನಾಡಿ ನಿಮಗೂ ಸಹ ಕೆಲಸ ಕೊಡಿಸುತ್ತೇನೆ ಎಂದು ವಿನೋದಕುಮಾರ್ ಪುಸಲಾಯಿಸಿರುವುದಾಗಿ ವಂಚನೆಗೊಳಗಾದವರು ತಿಳಿಸಿದ್ದಾರೆ.

ದೂರು ಪ್ರತಿ
ದೂರು ಪ್ರತಿ

ನವೆಂಬರ್ 19 ರ 2020 ರಂದು ಅನಿಲ್ ಕುಮಾರ್ ಗೋಯೆಲ್ ಸಂದರ್ಶನ ನಡೆಸಲಾಯಿತು. ನಂತರ ಡಿಸೆಂಬರ್ 2020 ರಂದು UKPSC ಫಲಿತಾಂಶ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಅನಿಲ್ ಹೆಸರಿಲ್ಲ. ಕೂಡಲೇ ಠಾಕೂರ್ ದಾಸ್, ವಿನೋದ್ ಕುಮಾರ್​ಗೆ ಕರೆ ಮಾಡಿ ವಿಚಾರಿಸಿದಾಗ ವಂಚಿಸಿರುವುದು ಬೆಳಕಿಗೆ ಬಂದಿದೆ.

ಅಷ್ಟೇ ಅಲ್ಲದೆ ಆರೋಪಿ, ಠಾಕೂರ್ ದಾಸ್​ಗೆ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದು, ಕುರಿತು ಪ್ರಕರಣ ದಾಖಲಿಸಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಸಹ ಹಾಕಿದ್ದಾನೆ ಎನ್ನಲಾಗಿದೆ.

ಈ ಕುರಿತು ಮೊಹಲ್ಲಾ ಬ್ಯಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 420,406,506 ರ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಧೋಲ್ಪುರ್: ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಹೆಸರು ಬಳಸಿಕೊಂಡು ಉದ್ಯೋಗ ಕೊಡಿಸುವುದಾಗಿ ನಂಬಿಸಿ16 ಲಕ್ಷ ರೂಪಾಯಿ ವಂಚಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಠಾಕೂರ್ ದಾಸ್ ವಂಚನೆಗೊಳಗಾದ ವ್ಯಕ್ತಿ. ಸಂದ್‌ಪುರ ಗ್ರಾಮದ ನಿವಾಸಿ ವಿನೋದ್‌ಕುಮಾರ್‌ ಎಂಬಾತ ಕಾಲೇಜು ಉಪನ್ಯಾಸಕರ ಹುದ್ದೆ ಕೊಡಿಸುವುದಾಗಿ ನಂಬಿಸಿ, 16 ಲಕ್ಷ ರೂ.ಪಡೆದು ವಂಚಿಸಿ, ತಲೆಮರೆಸಿಕೊಂಡಿದ್ದಾನೆ ಎಂದು ಸಂತ್ರಸ್ತ ಆರೋಪಿಸಿದ್ದಾನೆ.

ಠಾಕೂರ್ ದಾಸ್ ಅವರ ಅಳಿಯ ಅನಿಲ್ ಕುಮಾರ್ ಗೋಯೆಲ್ ಅವರಿಗೆ ಉತ್ತರಾಖಂಡದ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆ ಕೊಡಿಸುವುದಾಗಿ ನಂಬಿಸಿ, ಆರೋಪಿ 18 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾನೆ. ಇದನ್ನು ನಂಬಿದ ಠಾಕೂರದಾಸ್, ವಿನೋದಕುಮಾರ್​ಗೆ 16 ಲಕ್ಷ ರೂ. ನೀಡಿದ್ದು, ಕೆಲಸ ಸಿಕ್ಕ ಬಳಿಕ 2 ಲಕ್ಷ ರೂ. ನೀಡುವುದಾಗಿ ತಿಳಿಸಿದ್ದಾನೆ.

2018ರಲ್ಲಿ ಸಚಿನ್ ಪೈಲಟ್ ರಾಜಸ್ಥಾನದ ಉಪಮುಖ್ಯಮಂತ್ರಿಯಾಗಿದ್ದಾಗಿನಿಂದ ನನಗೆ ಪರಿಚಯವಿದೆ. ಸಚಿನ್ ಪೈಲಟ್ ಉತ್ತರಾಖಂಡದ ಯುಕೆಪಿಎಸ್‌ಸಿ ಅಧ್ಯಕ್ಷರ ಆಪ್ತ ಸಹಾಯಕರಿಗೆ ಕರೆ ಮಾಡಿ ತಾವು ಸೂಚಿಸಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಹೇಳಿದ್ದರು. ಈಗ ಮತ್ತೊಮ್ಮೆ ಮಾತನಾಡಿ ನಿಮಗೂ ಸಹ ಕೆಲಸ ಕೊಡಿಸುತ್ತೇನೆ ಎಂದು ವಿನೋದಕುಮಾರ್ ಪುಸಲಾಯಿಸಿರುವುದಾಗಿ ವಂಚನೆಗೊಳಗಾದವರು ತಿಳಿಸಿದ್ದಾರೆ.

ದೂರು ಪ್ರತಿ
ದೂರು ಪ್ರತಿ

ನವೆಂಬರ್ 19 ರ 2020 ರಂದು ಅನಿಲ್ ಕುಮಾರ್ ಗೋಯೆಲ್ ಸಂದರ್ಶನ ನಡೆಸಲಾಯಿತು. ನಂತರ ಡಿಸೆಂಬರ್ 2020 ರಂದು UKPSC ಫಲಿತಾಂಶ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಅನಿಲ್ ಹೆಸರಿಲ್ಲ. ಕೂಡಲೇ ಠಾಕೂರ್ ದಾಸ್, ವಿನೋದ್ ಕುಮಾರ್​ಗೆ ಕರೆ ಮಾಡಿ ವಿಚಾರಿಸಿದಾಗ ವಂಚಿಸಿರುವುದು ಬೆಳಕಿಗೆ ಬಂದಿದೆ.

ಅಷ್ಟೇ ಅಲ್ಲದೆ ಆರೋಪಿ, ಠಾಕೂರ್ ದಾಸ್​ಗೆ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದು, ಕುರಿತು ಪ್ರಕರಣ ದಾಖಲಿಸಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಸಹ ಹಾಕಿದ್ದಾನೆ ಎನ್ನಲಾಗಿದೆ.

ಈ ಕುರಿತು ಮೊಹಲ್ಲಾ ಬ್ಯಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 420,406,506 ರ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.