ETV Bharat / bharat

ಮಲಗಿದ್ದ ಯೋಧರ ಮೇಲೆ ಲಾಂಚರ್​, ಬಂದೂಕುಗಳಿಂದ ನಕ್ಸಲರ​ ದಾಳಿ.. ನಾಲ್ವರಿಗೆ ಗಾಯ

author img

By

Published : Apr 18, 2022, 2:28 PM IST

ಛತ್ತೀಸ್‌ಗಢದ ಬಿಜಾಪುರದಲ್ಲಿ ಸುಮಾರು ಅರ್ಧಗಂಟೆಗಳ ಕಾಲ ನಡೆದ ನಕ್ಸಲ್ಸ್​ ಮತ್ತು ಯೋಧರ ಮಧ್ಯೆ ಗುಂಡಿನ ಚಕಮಕಿಯಲ್ಲಿ ಇಬ್ಬರು ಸಿಎಎಫ್ ಮತ್ತು ಇಬ್ಬರು ಜಿಲ್ಲಾ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.

Maosit attack on Darbha camp  Maoists fired at Darbha camp in Bijapur  Maoists fired at Darbha camp in Bijapur's Chhattisgarh  Chhattisgarh four jawan injured  darbha camp four jawan injured  ಛತ್ತೀಸ್​ಗಢದಲ್ಲಿ ಲಾಂಚರ್ ಮತ್ತು ಬಂದೂಕುಗಳಿಂದ ನಕ್ಸಲರ್​ ದಾಳಿ  ಬಿಜಾಪುರದಲ್ಲಿ ನಕ್ಸಲರ್​ ದಾಳಿಯಿಂದ ಯೋಧರಿಗೆ ಗಾಯ  ಮಲಗಿದ್ದ ಯೋಧರ ಮೇಲೆ ಮಾವೋವಾದಿಗಳಿಂದ ದಾಳಿ  ಬಿಜಾಪುರ ನಕ್ಸಲರ್​ ದಾಳಿ ಸುದ್ದಿ
ಮಲಗಿದ್ದ ಯೋಧರ ಮೇಲೆ ಲಾಂಚರ್​, ಬಂದೂಕುಗಳಿಂದ ನಕ್ಸಲರ್​ ದಾಳಿ

ಬಿಜಾಪುರ (ಛತ್ತೀಸ್‌ಗಢ): ನಿನ್ನೆ ತಡರಾತ್ರಿ ಕುಟ್ರು ಪೊಲೀಸ್ ಠಾಣಾ ವ್ಯಾಪ್ತಿಯ ದರ್ಭಾ ಶಿಬಿರದ ಮೇಲೆ ನಕ್ಸಲರು ದಾಳಿ ನಡೆಸಿದ್ದು, ದಾಳಿಯಲ್ಲಿ ನಾಲ್ವರು ಯೋಧರು ಗಾಯಗೊಂಡಿದ್ದಾರೆ. ಶಿಬಿರದ ಮೇಲೆ 10 ಕ್ಕೂ ಹೆಚ್ಚು BGL (ಬ್ಯಾರೆಲ್ ಗ್ರೆನೇಡ್ ಲಾಂಚರ್)ನಿಂದ ದಾಳಿ ಮಾಡಿದ್ದಾರೆ. ಅಷ್ಟೇ ಅಲ್ಲ, ಸುಮಾರು ಅರ್ಧ ಗಂಟೆಯವರೆಗೆ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಜವಾನರು ಗಾಯಗೊಂಡಿದ್ದಾರೆ.

ಪೊಲೀಸರ ಪ್ರಕಾರ, ನಕ್ಸಲರ ಭದ್ರಕೋಟೆ ಎಂದು ಪರಿಗಣಿಸಲಾದ ಕುಟ್ರು ಪ್ರದೇಶದ ದರ್ಭಾದಲ್ಲಿ ಸಿಎಎಫ್ 4 ಬೆಟಾಲಿಯನ್ ಕಾರ್ಯಾಚರಣೆ ಶಿಬಿರವನ್ನು ಸ್ಥಾಪಿಸಿದೆ. ಮಧ್ಯರಾತ್ರಿಯ ನಂತರ ನಕ್ಸಲರು ಪೊಲೀಸ್ ಶಿಬಿರವನ್ನು ಸುತ್ತುವರೆದು ಗುಂಡಿನ ದಾಳಿ ನಡೆಸಿದರು ಎಂದು ಹೇಳಲಾಗುತ್ತಿದೆ. ಶಿಬಿರದ ಮೇಲೆ ಬಿಜಿಎಲ್​ನಿಂದ ದಾಳಿ ಮಾಡುವುದನ್ನು ಮುಂದುವರೆಸಿದರು. ಗುಂಡಿನ ಸದ್ದು ಕೇಳುತ್ತಿದ್ದಂತೆ ಮಲಗಿದ್ದ ಯೋಧರು ಸಹ ತಮ್ಮ ಬಂದೂಕುಗಳಿಂದ ಗುಂಡು ಹಾರಿಸಿ ಪ್ರತ್ಯುತ್ತರ ನೀಡಿದರು.

ಓದಿ: ಜಾರ್ಖಂಡ್​ನಲ್ಲಿ ಮೂವರು ಟಿಪಿಸಿ ಮಾವೋವಾದಿಗಳ ಹತ್ಯೆ

ಸುಮಾರು ಅರ್ಧಗಂಟೆ ಕಾಲ ಎರಡೂ ಕಡೆಯಿಂದ ಗುಂಡಿನ ಚಕಮಕಿ ಮುಂದುವರಿದಿದೆ. ಯೋಧರು ತಮ್ಮ ಮೇಲೆ ದಾಳಿ ನಡೆಸುತ್ತಿರುವುದನ್ನು ಮನಗಂಡ ಮಾವೋವಾದಿಗಳು ಕತ್ತಲೆಯ ಲಾಭ ಪಡೆದು ಕಾಡಿನತ್ತ ಪಲಾಯನ ಮಾಡಿದರು. ಗುಂಡಿನ ದಾಳಿಯಲ್ಲಿ ಇಬ್ಬರು ಸಿಎಎಫ್ ಮತ್ತು ಇಬ್ಬರು ಜಿಲ್ಲಾ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.

ಗುಂಡಿನ ದಾಳಿ ಬಳಿಕ ಆ ಪ್ರದೇಶದಲ್ಲಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ. ಇಬ್ಬರು ಯೋಧರನ್ನು ಹೆಲಿಕಾಪ್ಟರ್ ಮೂಲಕ ರಾಯ್‌ಪುರದ ರಾಮಕೃಷ್ಣ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ರಾಮಕೃಷ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೆಡ್ ಕಾನ್‌ಸ್ಟೆಬಲ್‌ಗಳಾದ ತುಕೇಶ್ವರ್ ಧ್ರುವ್ ಮತ್ತು ಜಿತೇಂದ್ರ ಮಂದಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಳಿದ ಇಬ್ಬರು ಯೋಧರಿಗೆ ಬಿಜಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬಿಜಾಪುರ (ಛತ್ತೀಸ್‌ಗಢ): ನಿನ್ನೆ ತಡರಾತ್ರಿ ಕುಟ್ರು ಪೊಲೀಸ್ ಠಾಣಾ ವ್ಯಾಪ್ತಿಯ ದರ್ಭಾ ಶಿಬಿರದ ಮೇಲೆ ನಕ್ಸಲರು ದಾಳಿ ನಡೆಸಿದ್ದು, ದಾಳಿಯಲ್ಲಿ ನಾಲ್ವರು ಯೋಧರು ಗಾಯಗೊಂಡಿದ್ದಾರೆ. ಶಿಬಿರದ ಮೇಲೆ 10 ಕ್ಕೂ ಹೆಚ್ಚು BGL (ಬ್ಯಾರೆಲ್ ಗ್ರೆನೇಡ್ ಲಾಂಚರ್)ನಿಂದ ದಾಳಿ ಮಾಡಿದ್ದಾರೆ. ಅಷ್ಟೇ ಅಲ್ಲ, ಸುಮಾರು ಅರ್ಧ ಗಂಟೆಯವರೆಗೆ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಜವಾನರು ಗಾಯಗೊಂಡಿದ್ದಾರೆ.

ಪೊಲೀಸರ ಪ್ರಕಾರ, ನಕ್ಸಲರ ಭದ್ರಕೋಟೆ ಎಂದು ಪರಿಗಣಿಸಲಾದ ಕುಟ್ರು ಪ್ರದೇಶದ ದರ್ಭಾದಲ್ಲಿ ಸಿಎಎಫ್ 4 ಬೆಟಾಲಿಯನ್ ಕಾರ್ಯಾಚರಣೆ ಶಿಬಿರವನ್ನು ಸ್ಥಾಪಿಸಿದೆ. ಮಧ್ಯರಾತ್ರಿಯ ನಂತರ ನಕ್ಸಲರು ಪೊಲೀಸ್ ಶಿಬಿರವನ್ನು ಸುತ್ತುವರೆದು ಗುಂಡಿನ ದಾಳಿ ನಡೆಸಿದರು ಎಂದು ಹೇಳಲಾಗುತ್ತಿದೆ. ಶಿಬಿರದ ಮೇಲೆ ಬಿಜಿಎಲ್​ನಿಂದ ದಾಳಿ ಮಾಡುವುದನ್ನು ಮುಂದುವರೆಸಿದರು. ಗುಂಡಿನ ಸದ್ದು ಕೇಳುತ್ತಿದ್ದಂತೆ ಮಲಗಿದ್ದ ಯೋಧರು ಸಹ ತಮ್ಮ ಬಂದೂಕುಗಳಿಂದ ಗುಂಡು ಹಾರಿಸಿ ಪ್ರತ್ಯುತ್ತರ ನೀಡಿದರು.

ಓದಿ: ಜಾರ್ಖಂಡ್​ನಲ್ಲಿ ಮೂವರು ಟಿಪಿಸಿ ಮಾವೋವಾದಿಗಳ ಹತ್ಯೆ

ಸುಮಾರು ಅರ್ಧಗಂಟೆ ಕಾಲ ಎರಡೂ ಕಡೆಯಿಂದ ಗುಂಡಿನ ಚಕಮಕಿ ಮುಂದುವರಿದಿದೆ. ಯೋಧರು ತಮ್ಮ ಮೇಲೆ ದಾಳಿ ನಡೆಸುತ್ತಿರುವುದನ್ನು ಮನಗಂಡ ಮಾವೋವಾದಿಗಳು ಕತ್ತಲೆಯ ಲಾಭ ಪಡೆದು ಕಾಡಿನತ್ತ ಪಲಾಯನ ಮಾಡಿದರು. ಗುಂಡಿನ ದಾಳಿಯಲ್ಲಿ ಇಬ್ಬರು ಸಿಎಎಫ್ ಮತ್ತು ಇಬ್ಬರು ಜಿಲ್ಲಾ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.

ಗುಂಡಿನ ದಾಳಿ ಬಳಿಕ ಆ ಪ್ರದೇಶದಲ್ಲಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ. ಇಬ್ಬರು ಯೋಧರನ್ನು ಹೆಲಿಕಾಪ್ಟರ್ ಮೂಲಕ ರಾಯ್‌ಪುರದ ರಾಮಕೃಷ್ಣ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ರಾಮಕೃಷ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೆಡ್ ಕಾನ್‌ಸ್ಟೆಬಲ್‌ಗಳಾದ ತುಕೇಶ್ವರ್ ಧ್ರುವ್ ಮತ್ತು ಜಿತೇಂದ್ರ ಮಂದಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಳಿದ ಇಬ್ಬರು ಯೋಧರಿಗೆ ಬಿಜಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.