ETV Bharat / bharat

Bihar Politics: ಅಮಿತ್ ಶಾ ಭೇಟಿಯಾದ ಜೀತನ್ ರಾಮ್​ ಮಾಂಜಿ!

author img

By

Published : Jul 1, 2021, 9:43 AM IST

ಸಭೆಯ ನಂತರ ಮಾತನಾಡಿದ ಮಾಂಜಿ, ಬಿಹಾರದ ರಾಜಕೀಯ, ನ್ಯಾಯಾಂಗ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಕುರಿತು ಚರ್ಚಿಸಲಾಗಿದೆ. ತಮ್ಮ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರಧಾನಮಂತ್ರಿಗೆ ಪತ್ರ ಬರೆದಿದ್ದೆವು. ಹಾಗಾಗಿ ಮೋದಿಯವರು ಸಭೆ ನಡೆಸುವಂತೆ ಬಿಜೆಪಿ ಮುಖಂಡರಿಗೆ ಸೂಚಿಸಿದ್ದರು ಎಂದು ಹೇಳಿದರು

ಜೀತನ್ ರಾಮ್​ ಮಾಂಝಿ
ಜೀತನ್ ರಾಮ್​ ಮಾಂಝಿ

ನವದೆಹಲಿ: ಬಿಹಾರದ ಮಾಜಿ ಸಿಎಂ, ಹಿಂದೂಸ್ತಾನಿ ಅವಮ್ ಮೋರ್ಚಾದ ಅಧ್ಯಕ್ಷ ಜೀತನ್ ರಾಮ್ ಮಾಂಜಿ ಹಾಗೂ ಅವರ ಪುತ್ರ, ಸಚಿವ ಸಂತೋಷ್ ಮಾಂಜಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಸುಮಾರು ಒಂದು ಗಂಟೆಗೂ ಅಧಿಕ ಕಾಲ ನಡೆದ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಬಿಹಾರ ಬಿಜೆಪಿ ಉಸ್ತುವಾರಿ ಭೂಪೇಂದ್ರ ಯಾದವ್ ಕೂಡ ಉಪಸ್ಥಿತರಿದ್ದರು.

ಸಭೆಯ ನಂತರ ಮಾತನಾಡಿದ ಮಾಂಜಿ, ಬಿಹಾರದ ರಾಜಕೀಯ, ನ್ಯಾಯಾಂಗ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಕುರಿತು ಚರ್ಚಿಸಲಾಗಿದೆ. ತಮ್ಮ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿತಿ ಪ್ರಧಾನಮಂತ್ರಿಗೆ ಪತ್ರ ಬರೆದಿದ್ದೆವು. ಹಾಗಾಗಿ ಮೋದಿಯವರು ಸಭೆ ನಡೆಸುವಂತೆ ಬಿಜೆಪಿ ಮುಖಂಡರಿಗೆ ಸೂಚಿಸಿದ್ದರು ಎಂದು ಹೇಳಿದರು.

ಮೂಲಗಳ ಪ್ರಕಾರ, ಬಿಹಾರದ ಎನ್‌ಡಿಎಯಲ್ಲಿ ಸಮನ್ವಯ ಸಮಿತಿ ರಚಿಸಬೇಕು. ಹಿಂದೂಸ್ತಾನಿ ಅವಮ್​ ಮೋರ್ಚಾ ಪಕ್ಷದಿಂದ ಮತ್ತೊಬ್ಬ ಶಾಸಕರನ್ನು ಸಚಿವರನ್ನಾಗಿ ಮಾಡಬೇಕು ಎಂದು ಮಾಂಜಿ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಮುಂಬರುವ ಯುಪಿ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಎನ್‌ಡಿಎಯಿಂದ ಕೆಲವು ಸ್ಥಾನಗಳನ್ನು ನೀಡಬೇಕು ಅಂತಾನೂ ಪಟ್ಟು ಹಿಡಿದಿದ್ದಾರೆ.

ರಾಮ್ ವಿಲಾಸ್ ಪಾಸ್ವಾನ್ ಮರಣದ ನಂತರ, ಎನ್‌ಡಿಎಯಲ್ಲಿ ಜೀತನ್ ರಾಮ್ ಮಾಂಜಿ ಸ್ಥಾನಮಾನ ಹೆಚ್ಚಾಗಿದೆ. ಲೋಕ ಜನಶಕ್ತಿ ಪಕ್ಷವು ತನ್ನ ರಾಜಕೀಯ ಮಹತ್ವವನ್ನು ಕಳೆದುಕೊಂಡಿದ್ದು, ಚಿರಾಗ್ ಪಾಸ್ವಾನ್​ ಎನ್​ಡಿಎಯಲ್ಲಿ ಮುಂದುವರಿಯುತ್ತಾರೋ, ಇಲ್ಲವೋ ಎಂಬ ಬಗ್ಗೆ ಅನುಮಾನವಿದೆ.

ಬಿಹಾರದಲ್ಲಿ ಜೀತನ್ ಪ್ರಮುಖ ದಲಿತ ನಾಯಕನಾಗಿರುವುದರಿಂದ ಬಿಜೆಪಿ ಅವರನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಅಲ್ಲದೆ, ಮಾಂಜಿ, ಪ್ರತಿಪಕ್ಷದ ನಾಯಕ ತೇಜಸ್ವಿ ಯಾದವ್ ಜತೆ ಸಂಪರ್ಕದಲ್ಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಇಂಥ ಸಂದರ್ಭದಲ್ಲಿ ಜೀತನ್​ ಮೈತ್ರಿಯಿಂದ ಹೊರ ಹೋಗದಂತೆ ಬಿಜೆಪಿ ಕಾಪಿಟ್ಟುಕೊಳ್ಳಲಿದೆ.

ಇದನ್ನೂ ಓದಿ:ಗಾಜಿಪುರ ಗಡಿಯಲ್ಲಿ ಬಿಜೆಪಿ ಕಾರ್ಯಕರ್ತರು - ರೈತರ ಮಧ್ಯೆ ಗಲಭೆ: 200 ಮಂದಿ ವಿರುದ್ಧ ಕೇಸ್​!

ಜೆಡಿಯು - ಬಿಜೆಪಿ ಮೈತ್ರಿಕೂಟಕ್ಕೆ ಬಿಹಾರದಲ್ಲಿ ಬಹುಮತವಿಲ್ಲ ಹಾಗಾಗಿ ಅಲ್ಲಿನ ಇತರ ಪಕ್ಷಗಳು ಎನ್​ಡಿಎ ಮೈತ್ರಿಕೂಟವನ್ನು ಬೆಂಬಲಿಸಿವೆ. ಜೀತನ್​ ಅವರನ್ನು ಕೇಂದ್ರದ ಸಚಿವರನ್ನಾಗಿ ಮಾಡಬಹುದೆಂಬ ಮಾತುಗಳು ಕೂಡಾ ಕೇಳಿ ಬರುತ್ತಿವೆ.

ನವದೆಹಲಿ: ಬಿಹಾರದ ಮಾಜಿ ಸಿಎಂ, ಹಿಂದೂಸ್ತಾನಿ ಅವಮ್ ಮೋರ್ಚಾದ ಅಧ್ಯಕ್ಷ ಜೀತನ್ ರಾಮ್ ಮಾಂಜಿ ಹಾಗೂ ಅವರ ಪುತ್ರ, ಸಚಿವ ಸಂತೋಷ್ ಮಾಂಜಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಸುಮಾರು ಒಂದು ಗಂಟೆಗೂ ಅಧಿಕ ಕಾಲ ನಡೆದ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಬಿಹಾರ ಬಿಜೆಪಿ ಉಸ್ತುವಾರಿ ಭೂಪೇಂದ್ರ ಯಾದವ್ ಕೂಡ ಉಪಸ್ಥಿತರಿದ್ದರು.

ಸಭೆಯ ನಂತರ ಮಾತನಾಡಿದ ಮಾಂಜಿ, ಬಿಹಾರದ ರಾಜಕೀಯ, ನ್ಯಾಯಾಂಗ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಕುರಿತು ಚರ್ಚಿಸಲಾಗಿದೆ. ತಮ್ಮ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿತಿ ಪ್ರಧಾನಮಂತ್ರಿಗೆ ಪತ್ರ ಬರೆದಿದ್ದೆವು. ಹಾಗಾಗಿ ಮೋದಿಯವರು ಸಭೆ ನಡೆಸುವಂತೆ ಬಿಜೆಪಿ ಮುಖಂಡರಿಗೆ ಸೂಚಿಸಿದ್ದರು ಎಂದು ಹೇಳಿದರು.

ಮೂಲಗಳ ಪ್ರಕಾರ, ಬಿಹಾರದ ಎನ್‌ಡಿಎಯಲ್ಲಿ ಸಮನ್ವಯ ಸಮಿತಿ ರಚಿಸಬೇಕು. ಹಿಂದೂಸ್ತಾನಿ ಅವಮ್​ ಮೋರ್ಚಾ ಪಕ್ಷದಿಂದ ಮತ್ತೊಬ್ಬ ಶಾಸಕರನ್ನು ಸಚಿವರನ್ನಾಗಿ ಮಾಡಬೇಕು ಎಂದು ಮಾಂಜಿ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಮುಂಬರುವ ಯುಪಿ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಎನ್‌ಡಿಎಯಿಂದ ಕೆಲವು ಸ್ಥಾನಗಳನ್ನು ನೀಡಬೇಕು ಅಂತಾನೂ ಪಟ್ಟು ಹಿಡಿದಿದ್ದಾರೆ.

ರಾಮ್ ವಿಲಾಸ್ ಪಾಸ್ವಾನ್ ಮರಣದ ನಂತರ, ಎನ್‌ಡಿಎಯಲ್ಲಿ ಜೀತನ್ ರಾಮ್ ಮಾಂಜಿ ಸ್ಥಾನಮಾನ ಹೆಚ್ಚಾಗಿದೆ. ಲೋಕ ಜನಶಕ್ತಿ ಪಕ್ಷವು ತನ್ನ ರಾಜಕೀಯ ಮಹತ್ವವನ್ನು ಕಳೆದುಕೊಂಡಿದ್ದು, ಚಿರಾಗ್ ಪಾಸ್ವಾನ್​ ಎನ್​ಡಿಎಯಲ್ಲಿ ಮುಂದುವರಿಯುತ್ತಾರೋ, ಇಲ್ಲವೋ ಎಂಬ ಬಗ್ಗೆ ಅನುಮಾನವಿದೆ.

ಬಿಹಾರದಲ್ಲಿ ಜೀತನ್ ಪ್ರಮುಖ ದಲಿತ ನಾಯಕನಾಗಿರುವುದರಿಂದ ಬಿಜೆಪಿ ಅವರನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಅಲ್ಲದೆ, ಮಾಂಜಿ, ಪ್ರತಿಪಕ್ಷದ ನಾಯಕ ತೇಜಸ್ವಿ ಯಾದವ್ ಜತೆ ಸಂಪರ್ಕದಲ್ಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಇಂಥ ಸಂದರ್ಭದಲ್ಲಿ ಜೀತನ್​ ಮೈತ್ರಿಯಿಂದ ಹೊರ ಹೋಗದಂತೆ ಬಿಜೆಪಿ ಕಾಪಿಟ್ಟುಕೊಳ್ಳಲಿದೆ.

ಇದನ್ನೂ ಓದಿ:ಗಾಜಿಪುರ ಗಡಿಯಲ್ಲಿ ಬಿಜೆಪಿ ಕಾರ್ಯಕರ್ತರು - ರೈತರ ಮಧ್ಯೆ ಗಲಭೆ: 200 ಮಂದಿ ವಿರುದ್ಧ ಕೇಸ್​!

ಜೆಡಿಯು - ಬಿಜೆಪಿ ಮೈತ್ರಿಕೂಟಕ್ಕೆ ಬಿಹಾರದಲ್ಲಿ ಬಹುಮತವಿಲ್ಲ ಹಾಗಾಗಿ ಅಲ್ಲಿನ ಇತರ ಪಕ್ಷಗಳು ಎನ್​ಡಿಎ ಮೈತ್ರಿಕೂಟವನ್ನು ಬೆಂಬಲಿಸಿವೆ. ಜೀತನ್​ ಅವರನ್ನು ಕೇಂದ್ರದ ಸಚಿವರನ್ನಾಗಿ ಮಾಡಬಹುದೆಂಬ ಮಾತುಗಳು ಕೂಡಾ ಕೇಳಿ ಬರುತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.