ಕಡಪ (ಆಂಧ್ರಪ್ರದೇಶ): ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ (depression over Bay of Bengal) ಪರಿಣಾಮ ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡಿನಲ್ಲಿ ಭಾರಿ ಮಳೆಯಾಗುತ್ತಿದೆ. ಆಂಧ್ರದಲ್ಲಂತೂ ಪ್ರವಾಹ ಪರಿಸ್ಥಿತಿ (Flood in Andhra Pradesh) ಉಂಟಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಇಲ್ಲಿಯವರೆಗೆ ಮಳೆ ಸಂಬಂಧಿತ ಅವಘಡಗಳಿಗೆ 20 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 100ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿರುವ ಶಂಕೆ ಇದೆ.
ಪ್ರವಾಹ, ಭೂಕುಸಿತ ಸೇರಿದಂತೆ ವರುಣನ ಅವಾಂತರದಲ್ಲಿ ಬಲಿಯಾದವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರವನ್ನು ಸಿಎಂ ಜಗನ್ ಮೋಹನ್ ರೆಡ್ಡಿ (CM Jagan Mohan Reddy announces ex gratia) ಘೋಷಿಸಿದ್ದಾರೆ.
-
As rains lash Chittoor district of Andhra Pradesh, buildings get affected. Flash floods reported in temple town Tirupati and Kadapa. #AndhraPradeshRains pic.twitter.com/wtHfDTAIXh
— Nikhila Henry (@NikhilaHenry) November 19, 2021 " class="align-text-top noRightClick twitterSection" data="
">As rains lash Chittoor district of Andhra Pradesh, buildings get affected. Flash floods reported in temple town Tirupati and Kadapa. #AndhraPradeshRains pic.twitter.com/wtHfDTAIXh
— Nikhila Henry (@NikhilaHenry) November 19, 2021As rains lash Chittoor district of Andhra Pradesh, buildings get affected. Flash floods reported in temple town Tirupati and Kadapa. #AndhraPradeshRains pic.twitter.com/wtHfDTAIXh
— Nikhila Henry (@NikhilaHenry) November 19, 2021
ಚಿತ್ತೂರು, ಕಡಪ ಮತ್ತು ನೆಲ್ಲೂರು ಜಿಲ್ಲೆಗಳಲ್ಲಿ ಮನೆಗಳು, ರಸ್ತೆಗಳು, ಕಟ್ಟಡಗಳಿಗೆ ಅಪಾರ ಪ್ರಮಾಣದ ಹಾನಿಯಾಗಿದೆ. ಕೆಲವೆಡೆ ರಸ್ತೆ, ಸೇತುವೆಗಳು ಸಂಪೂರ್ಣ ಕೊಚ್ಚಿ ಹೋಗಿದ್ದು, ಜನರು ಮಧ್ಯದಾರಿಯಲ್ಲಿ ಸಿಲುಕಿ ಸಂಪರ್ಕ ಕಳೆದುಕೊಂಡಿದ್ದಾರೆ. ವೆಂಕಟೇಶ್ವರನ ಆವಾಸಸ್ಥಾನವಾದ ತಿರುಮಲವಂತೂ ಪ್ರವಾಹ-ಭೂಕುಸಿತ ಎರಡಕ್ಕೂ ತುತ್ತಾಗಿದೆ. ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ನೀರು ನುಗ್ಗಿದ್ದು, ಒಳಗಿದ್ದ ಭಕ್ತರು ಆತಂಕಕ್ಕೆ ಒಳಗಾಗಿದ್ದಾರೆ.
ಪರಿಸ್ಥಿತಿ ಅಪಾಯಕಾರಿಯಾರುವುದರಿಂದ ಎರಡು ದಿನಗಳ ಕಾಲ ತಿರುಮಲದ ಎರಡು ಘಾಟ್ಗಳನ್ನು (ghats in Tirumala closed) ಸಿಎಂ ಜಗನ್ ಆದೇಶದ ಮೇರೆಗೆ ತಿರುಪತಿಯ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿಯಾದ ತಿರುಮಲ ತಿರುಪತಿ ದೇವಸ್ಥಾನಂ (TTD) ಮುಚ್ಚಿದೆ. ಇದರಿಂದಾಗಿ ಕಪಿಲತೀರ್ಥ-ತಿರುಮಲ ಬೈಪಾಸ್ ರಸ್ತೆಯಲ್ಲಿ ನೂರಾರು ವಾಹನಗಳು ಸಿಲುಕಿವೆ. ಭಕ್ತರು ತಿರುಮಲಕ್ಕೆ ಬರಬಾರದು ಎಂದು ಟಿಟಿಡಿ ಸೂಚಿಸಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರಿ ಮಳೆ: ಕಟ್ಟಡ ಕುಸಿತ, ಜನಜೀವನ ಅಸ್ತವ್ಯಸ್ತ
ನಿನ್ನೆ ಚಿತ್ತೂರು ಜಿಲ್ಲೆಯ ಬಲಿಜೆಪಲ್ಲಿ ಹಳ್ಳದ ಪ್ರವಾಹದಲ್ಲಿ ಬಂಗಾರುಪಳ್ಳಂ ಮಂಡಲದ ನಾಲ್ವರು ಮಹಿಳೆಯರು ಕೊಚ್ಚಿ ಹೋಗಿದ್ದರು. ಅವರಲ್ಲಿ ಒಬ್ಬರ ಶವ ಇಂದು ಬೆಳಗ್ಗೆ ಪತ್ತೆಯಾಗಿದೆ. ಇನ್ನೂ ಮೂವರು ಮಹಿಳೆಯರ ಮೃತದೇಹಕ್ಕಾಗಿ ಶೋಧ ನಡೆಸಲಾಗುತ್ತಿದೆ.
-
Situation looks bad in #Tirupathi#flooding even inside the darshan queue chamber that leads to the temple @ Tirumala.#Rains#Andhrapradeshrains pic.twitter.com/Gg2gOEsDbI
— Sanjeevee sadagopan (@sanjusadagopan) November 18, 2021 " class="align-text-top noRightClick twitterSection" data="
">Situation looks bad in #Tirupathi#flooding even inside the darshan queue chamber that leads to the temple @ Tirumala.#Rains#Andhrapradeshrains pic.twitter.com/Gg2gOEsDbI
— Sanjeevee sadagopan (@sanjusadagopan) November 18, 2021Situation looks bad in #Tirupathi#flooding even inside the darshan queue chamber that leads to the temple @ Tirumala.#Rains#Andhrapradeshrains pic.twitter.com/Gg2gOEsDbI
— Sanjeevee sadagopan (@sanjusadagopan) November 18, 2021
ಪ್ರವಾಹಪೀಡಿತ ಜಿಲ್ಲೆಗಳಿಗೆ ಅಧಿಕಾರಿಗಳನ್ನು, ರಕ್ಷಣಾ ತಂಡಗಳನ್ನು ಕಳುಹಿಸಿಕೊಡಲಾಗಿದೆ. ನೋಡ ನೋಡುತ್ತಲೇ ಕಟ್ಟಡವೊಂದು ಕುಸಿದು ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.