ETV Bharat / bharat

ಜ.26ರಂದು ದೇಶಭಕ್ತರು-ದೇಶದ್ರೋಹಿ ಯಾರೆಂದು ತಿಳಿಯುತ್ತೆ.. ತಿರಂಗಾದೊಂದಿಗೆ ಸಂಘರ್ಷ ಜೋರಾಗುತ್ತೆ..

author img

By

Published : Dec 30, 2020, 8:13 AM IST

ನಮ್ಮ ಈ ಹೋರಾಟವು ದೀರ್ಘಕಾಲ ಉಳಿಯುತ್ತದೆ ಮತ್ತು ಕೇಂದ್ರ ಸರ್ಕಾರದೊಂದಿಗೆ ಇಂದು ನಡೆಯಲಿರುವ ಮಾತುಕತೆಯಲ್ಲಿ ನಮ್ಮ ಬೇಡಿಕೆಗಳನ್ನು ನಾವು ಪುನರಾವರ್ತಿಸುತ್ತೇವೆ ಎಂದು ರಾಕೇಶ್ ಟಿಕಾಯತ್​ ಪುನರುಚ್ಚರಿಸಿದ್ದಾರೆ..

etv bharat exclusive talk with rakesh tikait on farmers movement
ರೈತ ಚಳವಳಿ

ನವದೆಹಲಿ : ಕೇಂದ್ರದ ಮೂರು ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುಂತೆ ಒತ್ತಾಯಿಸಿ ಅನ್ನದಾತರು ಗಾಜಿಪುರ ಗಡಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ 35ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಕೇಂದ್ರ ಸರ್ಕಾರ ರೈತರ ಜೊತೆ ಮತ್ತೆ ಮಾತುಕತೆಗೆ ಮುಂದಾಗಿದೆ.

ಇದೀಗ, ಯುಪಿ ಗೇಟ್‌ನಲ್ಲಿ ರೈತರ ಆಂದೋಲನವನ್ನು ಮುನ್ನಡೆಸುತ್ತಿರುವ ರಾಕೇಶ್ ಟಿಕಾಯತ್ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ​ಇವರು 1988ರಲ್ಲಿ ತಮ್ಮ ತಂದೆ ಮಹೇಂದ್ರ ಸಿಂಗ್ ಟಿಕಾಯತ್​ ನೇತೃತ್ವದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಆಗ ಸರ್ಕಾರ ರೈತರ ಬೇಡಿಕೆಗಳಿಗೆ ತಲೆಬಾಗಬೇಕಾಯಿತು.

ಈ ಹಿನ್ನೆಲೆ ಇಂದು ಕೇಂದ್ರದ ಜೊತೆ ನಡೆಯಲಿರೋ 7ನೇ ಸುತ್ತಿನ ಮಾತುಕತೆ ಪಂದ್ಯದಲ್ಲಿ ಕೂಡ ನಾವೇ ಗೆಲ್ಲಲಿದ್ದೇವೆ ಎಂದು ರಾಕೇಶ್ ಟಿಕಾಯತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಂದೆಯವರ ಹೋರಾಟದ ಸಮಯದಲ್ಲಿ ಅಂದಿನ ಸರ್ಕಾರವು ರೈತರಿಗೆ ಸ್ಪಂದಿಸುತ್ತಿತ್ತು. ಆದರೆ, ಇಂದಿನ ಸರ್ಕಾರವು ರೈತರಿಗೆ ತೊಂದರೆ ನೀಡುತ್ತಿದೆ ಎಂದು ಅವರು ಹೇಳಿದರು.

ರೈತ ಮುಖಂಡ ರಾಕೇಶ್‌ ಟಿಕಾಯತ್ ಜತೆಗೆ ಈಟಿವಿ ಭಾರತ ಸಂದರ್ಶನ..

ನಮ್ಮ ಈ ಹೋರಾಟವು ದೀರ್ಘಕಾಲ ಉಳಿಯುತ್ತದೆ ಮತ್ತು ಕೇಂದ್ರ ಸರ್ಕಾರದೊಂದಿಗೆ ಇಂದು ನಡೆಯಲಿರುವ ಮಾತುಕತೆಯಲ್ಲಿ ನಮ್ಮ ಬೇಡಿಕೆಗಳನ್ನು ನಾವು ಪುನರಾವರ್ತಿಸುತ್ತೇವೆ ಎಂದು ರಾಕೇಶ್ ಟಿಕಾಯತ್​ ಹೇಳಿದರು.

ಇಂದು ನಮ್ಮ ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಳ್ಳದಿದ್ದರೆ, ಜನವರಿ 26ರಂದು ನಾವು ಟ್ರ್ಯಾಕ್ಟರ್ ಮೇಲೆ ತ್ರಿವರ್ಣ ಧ್ವಜ ಹಾರಿಸುತ್ತೇವೆ ಎಂದು ರಾಕೇಶ್ ಹೇಳಿದರು. ಜನವರಿ 26ರಂದು ಯಾರು ದೇಶಭಕ್ತರು ಮತ್ತು ದೇಶದ್ರೋಹಿ ಯಾರು ಎಂದು ತಿಳಿಯುತ್ತದೆ ಎಂದು ಇದೇ ವೇಳೆ ಹೇಳಿದ್ರು.

ಇದನ್ನೂ ಓದಿ:ಬಲವಂತದ, ಮೋಸದ ಮತಾಂತರಕ್ಕೆ ಶಾಶ್ವತ ನಿಷೇಧವಿರಬೇಕು : ಪ್ರಹ್ಲಾದ್ ಸಿಂಗ್ ಪಟೇಲ್

ನವದೆಹಲಿ : ಕೇಂದ್ರದ ಮೂರು ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುಂತೆ ಒತ್ತಾಯಿಸಿ ಅನ್ನದಾತರು ಗಾಜಿಪುರ ಗಡಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ 35ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಕೇಂದ್ರ ಸರ್ಕಾರ ರೈತರ ಜೊತೆ ಮತ್ತೆ ಮಾತುಕತೆಗೆ ಮುಂದಾಗಿದೆ.

ಇದೀಗ, ಯುಪಿ ಗೇಟ್‌ನಲ್ಲಿ ರೈತರ ಆಂದೋಲನವನ್ನು ಮುನ್ನಡೆಸುತ್ತಿರುವ ರಾಕೇಶ್ ಟಿಕಾಯತ್ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ​ಇವರು 1988ರಲ್ಲಿ ತಮ್ಮ ತಂದೆ ಮಹೇಂದ್ರ ಸಿಂಗ್ ಟಿಕಾಯತ್​ ನೇತೃತ್ವದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಆಗ ಸರ್ಕಾರ ರೈತರ ಬೇಡಿಕೆಗಳಿಗೆ ತಲೆಬಾಗಬೇಕಾಯಿತು.

ಈ ಹಿನ್ನೆಲೆ ಇಂದು ಕೇಂದ್ರದ ಜೊತೆ ನಡೆಯಲಿರೋ 7ನೇ ಸುತ್ತಿನ ಮಾತುಕತೆ ಪಂದ್ಯದಲ್ಲಿ ಕೂಡ ನಾವೇ ಗೆಲ್ಲಲಿದ್ದೇವೆ ಎಂದು ರಾಕೇಶ್ ಟಿಕಾಯತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಂದೆಯವರ ಹೋರಾಟದ ಸಮಯದಲ್ಲಿ ಅಂದಿನ ಸರ್ಕಾರವು ರೈತರಿಗೆ ಸ್ಪಂದಿಸುತ್ತಿತ್ತು. ಆದರೆ, ಇಂದಿನ ಸರ್ಕಾರವು ರೈತರಿಗೆ ತೊಂದರೆ ನೀಡುತ್ತಿದೆ ಎಂದು ಅವರು ಹೇಳಿದರು.

ರೈತ ಮುಖಂಡ ರಾಕೇಶ್‌ ಟಿಕಾಯತ್ ಜತೆಗೆ ಈಟಿವಿ ಭಾರತ ಸಂದರ್ಶನ..

ನಮ್ಮ ಈ ಹೋರಾಟವು ದೀರ್ಘಕಾಲ ಉಳಿಯುತ್ತದೆ ಮತ್ತು ಕೇಂದ್ರ ಸರ್ಕಾರದೊಂದಿಗೆ ಇಂದು ನಡೆಯಲಿರುವ ಮಾತುಕತೆಯಲ್ಲಿ ನಮ್ಮ ಬೇಡಿಕೆಗಳನ್ನು ನಾವು ಪುನರಾವರ್ತಿಸುತ್ತೇವೆ ಎಂದು ರಾಕೇಶ್ ಟಿಕಾಯತ್​ ಹೇಳಿದರು.

ಇಂದು ನಮ್ಮ ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಳ್ಳದಿದ್ದರೆ, ಜನವರಿ 26ರಂದು ನಾವು ಟ್ರ್ಯಾಕ್ಟರ್ ಮೇಲೆ ತ್ರಿವರ್ಣ ಧ್ವಜ ಹಾರಿಸುತ್ತೇವೆ ಎಂದು ರಾಕೇಶ್ ಹೇಳಿದರು. ಜನವರಿ 26ರಂದು ಯಾರು ದೇಶಭಕ್ತರು ಮತ್ತು ದೇಶದ್ರೋಹಿ ಯಾರು ಎಂದು ತಿಳಿಯುತ್ತದೆ ಎಂದು ಇದೇ ವೇಳೆ ಹೇಳಿದ್ರು.

ಇದನ್ನೂ ಓದಿ:ಬಲವಂತದ, ಮೋಸದ ಮತಾಂತರಕ್ಕೆ ಶಾಶ್ವತ ನಿಷೇಧವಿರಬೇಕು : ಪ್ರಹ್ಲಾದ್ ಸಿಂಗ್ ಪಟೇಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.