ETV Bharat / bharat

ಭಾರಿ ಮಳೆ: ಕನ್ನಡ್​ ಘಾಟ್​ನಲ್ಲಿ ಭೂ ಕುಸಿತ, ಸಂಚಾರ ಬಂದ್​..

author img

By

Published : Aug 31, 2021, 3:58 PM IST

ಸೋಮವಾರ ರಾತ್ರಿಯಿಂದ ಮರಾಠವಾಡ ಮತ್ತು ಮಹಾರಾಷ್ಟ್ರದ ಉತ್ತರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಈ ಪ್ರದೇಶಗಳಲ್ಲಿ ತಡರಾತ್ರಿ ತೀವ್ರ ಮಳೆಯಾಗಿದ್ದು, ನದಿಗಳು ಮತ್ತು ಕೊಳಗಳು ತುಂಬಿ ಹರಿಯುತ್ತಿವೆ.

due-to-torrential-rains-many-vehicles-got-stuck-in-kannad-ghat
ಕನ್ನಡ್​ ಘಾಟ್​ನಲ್ಲಿ ಭೂ ಕುಸಿತ,

ಮಹಾರಾಷ್ಟ್ರ(ಜಲಗಾಂವ್): ಇಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಔರಂಗಾಬಾದ್‌ನ ಕನ್ನಡ್​ ಘಾಟ್‌ನಲ್ಲಿ ಭೂಕುಸಿತ ಸಂಭವಿಸಿದೆ. ಪರಿಣಾಮ ಔರಂಗಾಬಾದ್‌ನಿಂದ ಚಾಲಿಸ್‌ಗಾಂವ್ ಧುಲೆಯವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ.

ಕನ್ನಡ್​ ಘಾಟ್​ನಲ್ಲಿ ಭೂ ಕುಸಿತ, ಸಂಚಾರ ಬಂದ್​

ಭೂಕುಸಿತದಿಂದಾಗಿ ಅನೇಕ ವಾಹನಗಳು ರಸ್ತೆ ಮಧ್ಯೆ ಸಿಲುಕಿಕೊಂಡಿವೆ. ಘಟನೆಯಲ್ಲಿ ಕೆಲವು ವಾಹನಗಳು ಹಾನಿಗೊಳಗಾಗಿದ್ದರೂ, ಇಲ್ಲಿಯವರೆಗೆ ಯಾವುದೇ ಸಾವು ಸಂಭವಿಸಿಲ್ಲ ಎಂದು ಹೆದ್ದಾರಿ ಪೊಲೀಸರು ತಿಳಿಸಿದ್ದಾರೆ. ಇದೀಗ ರಸ್ತೆಯನ್ನು ತೆರವುಗೊಳಿಸುತ್ತಿದ್ದಾರೆ.

due-to-torrential-rains-many-vehicles-got-stuck-in-kannad-ghat
ಕನ್ನಡ್​ ಘಾಟ್​ನಲ್ಲಿ ಭೂ ಕುಸಿತ, ಸಂಚಾರ ಬಂದ್

ಸೋಮವಾರ ರಾತ್ರಿಯಿಂದ ಮರಾಠವಾಡ ಮತ್ತು ಮಹಾರಾಷ್ಟ್ರದ ಉತ್ತರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಈ ಪ್ರದೇಶಗಳಲ್ಲಿ ತಡರಾತ್ರಿ ತೀವ್ರ ಮಳೆಯಾಗಿದ್ದು, ನದಿಗಳು ಮತ್ತು ಕೊಳಗಳು ತುಂಬಿ ಹರಿಯುತ್ತಿವೆ. ನಿರಂತರ ಮಳೆಯಿಂದಾಗಿ ಪರಿಹಾರ ಕಾರ್ಯ ನಿಧಾನವಾಗಲಿದೆ. ಅಲ್ಲದೇ, ಸಾರ್ವಜನಿಕರು ಪ್ರವಾಸವನ್ನು ಯೋಜಿಸಿದ್ದರೆ ತಾತ್ಕಾಲಿಕವಾಗಿ ಮುಂದೂಡುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

ಓದಿ: ಸುಪ್ರೀಂಕೋರ್ಟ್‌ನ 9 ನೂತನ ನ್ಯಾಯಮೂರ್ತಿಗಳಿಂದ ಪ್ರತಿಜ್ಞಾವಿಧಿ ಸ್ವೀಕಾರ

ಮಹಾರಾಷ್ಟ್ರ(ಜಲಗಾಂವ್): ಇಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಔರಂಗಾಬಾದ್‌ನ ಕನ್ನಡ್​ ಘಾಟ್‌ನಲ್ಲಿ ಭೂಕುಸಿತ ಸಂಭವಿಸಿದೆ. ಪರಿಣಾಮ ಔರಂಗಾಬಾದ್‌ನಿಂದ ಚಾಲಿಸ್‌ಗಾಂವ್ ಧುಲೆಯವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ.

ಕನ್ನಡ್​ ಘಾಟ್​ನಲ್ಲಿ ಭೂ ಕುಸಿತ, ಸಂಚಾರ ಬಂದ್​

ಭೂಕುಸಿತದಿಂದಾಗಿ ಅನೇಕ ವಾಹನಗಳು ರಸ್ತೆ ಮಧ್ಯೆ ಸಿಲುಕಿಕೊಂಡಿವೆ. ಘಟನೆಯಲ್ಲಿ ಕೆಲವು ವಾಹನಗಳು ಹಾನಿಗೊಳಗಾಗಿದ್ದರೂ, ಇಲ್ಲಿಯವರೆಗೆ ಯಾವುದೇ ಸಾವು ಸಂಭವಿಸಿಲ್ಲ ಎಂದು ಹೆದ್ದಾರಿ ಪೊಲೀಸರು ತಿಳಿಸಿದ್ದಾರೆ. ಇದೀಗ ರಸ್ತೆಯನ್ನು ತೆರವುಗೊಳಿಸುತ್ತಿದ್ದಾರೆ.

due-to-torrential-rains-many-vehicles-got-stuck-in-kannad-ghat
ಕನ್ನಡ್​ ಘಾಟ್​ನಲ್ಲಿ ಭೂ ಕುಸಿತ, ಸಂಚಾರ ಬಂದ್

ಸೋಮವಾರ ರಾತ್ರಿಯಿಂದ ಮರಾಠವಾಡ ಮತ್ತು ಮಹಾರಾಷ್ಟ್ರದ ಉತ್ತರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಈ ಪ್ರದೇಶಗಳಲ್ಲಿ ತಡರಾತ್ರಿ ತೀವ್ರ ಮಳೆಯಾಗಿದ್ದು, ನದಿಗಳು ಮತ್ತು ಕೊಳಗಳು ತುಂಬಿ ಹರಿಯುತ್ತಿವೆ. ನಿರಂತರ ಮಳೆಯಿಂದಾಗಿ ಪರಿಹಾರ ಕಾರ್ಯ ನಿಧಾನವಾಗಲಿದೆ. ಅಲ್ಲದೇ, ಸಾರ್ವಜನಿಕರು ಪ್ರವಾಸವನ್ನು ಯೋಜಿಸಿದ್ದರೆ ತಾತ್ಕಾಲಿಕವಾಗಿ ಮುಂದೂಡುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

ಓದಿ: ಸುಪ್ರೀಂಕೋರ್ಟ್‌ನ 9 ನೂತನ ನ್ಯಾಯಮೂರ್ತಿಗಳಿಂದ ಪ್ರತಿಜ್ಞಾವಿಧಿ ಸ್ವೀಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.