ETV Bharat / bharat

'ಎನ್‌ಕೌಂಟರ್ ಸ್ಪೆಷಲಿಸ್ಟ್​' ದಯಾ ನಾಯಕ್​​ ಅವರ ಮೊದಲ ಎನ್‌ಕೌಂಟರ್ ಯಾವುದು ಗೊತ್ತಾ?

author img

By

Published : Apr 20, 2023, 1:47 PM IST

ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದಿಂದ ಮುಂಬೈ ಪೊಲೀಸ್ ಪಡೆಗೆ ವರ್ಗಾವಣೆಯಾಗಿರುವ 'ಎನ್‌ಕೌಂಟರ್ ಸ್ಪೆಷಲಿಸ್ಟ್​' ಪೊಲೀಸ್ ಅಧಿಕಾರಿ ದಯಾ ನಾಯಕ್​​ ಹೆಸರು ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ.

details about first encounter of daya nayak in mumbai
ದಯಾ ನಾಯಕ್​​ ಅವರ ಮೊದಲ ಎನ್‌ಕೌಂಟರ್ ಯಾವುದು ಗೊತ್ತಾ?

ಮುಂಬೈ (ಮಹಾರಾಷ್ಟ್ರ): ಎನ್‌ಕೌಂಟರ್ ಸ್ಪೆಷಲಿಸ್ಟ್​ ಎಂದೇ ಖ್ಯಾತಿ ಪಡೆದ ಪೊಲೀಸ್ ಅಧಿಕಾರಿ ದಯಾ ನಾಯಕ್​​ ಅವರನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದಿಂದ ಮುಂಬೈ ಪೊಲೀಸ್ ಪಡೆಗೆ ವರ್ಗಾಯಿಸಲಾಗಿದೆ. ಇದುವರೆಗೆ 80ಕ್ಕೂ ಹೆಚ್ಚು ಕ್ರಿಮಿನಲ್​ಗಳನ್ನು ದಯಾ ನಾಯಕ್ ಎನ್​ಕೌಂಟರ್ ಮಾಡಿದ್ದು, ಈಗ ಪೊಲೀಸ್​ ಪಡೆಗೆ ವರ್ಗಾಯಿಸಿರುವುದರಿಂದ ದೇಶದ ವಾಣಿಜ್ಯ ರಾಜಧಾನಿಯ ಅಪರಾಧಿಗಳ ಎದೆ ನಡುಗುವಂತೆ ಮಾಡಿದೆ.

ರಾಜ್ಯ ಕೇಡರ್‌ನ 1995ರ ಬ್ಯಾಚ್ ಅಧಿಕಾರಿಯಾದ ದಯಾ ನಾಯಕ್​, ಎಂಪಿಎಸ್​ಸಿ ಪರೀಕ್ಷೆ ಬರೆದು ಉತ್ತೀರ್ಣರಾದ ನಂತರ ಪೊಲೀಸ್ ಪಡೆಗೆ ನೇಮಕವಾಗಿದ್ದರು. ನಂತರ ಪಶ್ಚಿಮ ಉಪನಗರದ ಜುಹು ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಬ್​ ಇನ್ಸ್‌ಪೆಕ್ಟರ್ ಆಗಿ ಮೊದಲ ಪೋಸ್ಟಿಂಗ್​ ಆಗಿತ್ತು. ಆಗ ಮುಂಬೈ ಅಪರಾಧ ವಿಭಾಗದಲ್ಲಿ ಪೊಲೀಸ್ ಅಧಿಕಾರಿ ಮತ್ತು ಎನ್‌ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್​ ಶರ್ಮಾ ಅವರೊಂದಿಗೆ ದಯಾ ನಾಯಕ್ ಕೆಲಸ ಮಾಡಿದರು.

ದಯಾ ನಾಯಕ್​ ಮೊದಲ ಎನ್​ಕೌಂಟರ್​​: 1996ರಲ್ಲಿ ಪ್ರದೀಪ್ ಶರ್ಮಾ ಜೊತೆ ಸೇರಿ ದಯಾ ನಾಯಕ್ ಭೂಗತ ಪಾತಕಿ ಬಬ್ಲು ಶ್ರೀವಾಸ್ತನ್​ ಗ್ಯಾಂಗ್​ನ ಇಬ್ಬರು ಗೂಂಡಾಗಳಿಗೆ ಗುಂಡಿಕ್ಕಿದ್ದರು. ಇದೇ ಅವರ ಮೊದಲ ಎನ್​ಕೌಂಟರ್​​ ಮತ್ತು ಅಲ್ಲಿಂದಲೇ ದಯಾ ನಾಯಕ್ ಎನ್‌ಕೌಂಟರ್ ಸ್ಪೆಷಲಿಸ್ಟ್​ ಆಗಿ ಹೆಸರು ಮಾಡಲು ಶುರು ಮಾಡಿದರು. ಅಲ್ಲದೇ, ಮುಂಬೈನಲ್ಲಿ ದರೋಡೆಕೋರ ಅಮರ್ ನಾಯ್ಕ್ ಬಳಿ ಕೆಲಸ ಮಾಡುತ್ತಿದ್ದ ಎಲ್​ಟಿಟಿಇಯ 3 ಸದಸ್ಯರನ್ನು ದಯಾ ನಾಯಕ್ ಎನ್​ಕೌಂಟರ್​ ಮಾಡಿದ್ದರು. ಜೊತೆಗೆ ದಯಾ ನಾಯಕ್ ಹೆಸರು ಕೇಳಿದ ತಕ್ಷಣ 90ರ ದಶಕದಲ್ಲಿ ಮುಂಬೈನ ದಾದಾ - ಭಾಯಿಯಂತಹ ಕ್ರಿಮಿನಲ್ ಲೋಕವೇ ನಡುಗುತ್ತಿತ್ತು ಎಂದು ಹಿರಿಯ ಪತ್ರಕರ್ತ ಘನಶ್ಯಾಮ್ ಭಡೇಕರ್ ತಿಳಿಸಿದ್ದಾರೆ.

ದಯಾ ನಾಯಕ್ ಹಲವಾರು ಭೂಗತ ಜಗತ್ತಿನ ಸಹಚರರನ್ನು ಮಟ್ಟ ಹಾಕಿದ್ದರು. ಸಾದಿಕ್ ಕಾಲಿಯಾ, ಶ್ರೀಕಾಂತ್ ಮಾಮಾ, ರಫೀಕ್ ದಿಬ್ಸ್​ವಾಲಾ, ಪರ್ವೇಜ್ ಸಿದ್ದಿಕಿ, ವಿನೋದ್ ಭಟ್ಕರ್ ಮತ್ತು ಸುಭಾಷ್ ಸೇರಿದಂತೆ ಹತ್ತಾರು ಗ್ಯಾಂಗ್‌ಸ್ಟರ್‌ಗಳು ಎನ್‌ಕೌಂಟರ್‌ ಮಾಡುವಲ್ಲಿ ದಯಾ ನಾಯಕ್​ ಯಶಸ್ವಿಯಾಗಿದ್ದರು. ಇದರಿಂದಾಗಿ ದಯಾ ನಾಯಕ್ ಮುಂಬೈನಲ್ಲಿ ಮಾತ್ರವಲ್ಲದೇ ದೇಶದಲ್ಲೇ ಎನ್‌ಕೌಂಟರ್ ಸ್ಪೆಷಲಿಸ್ಟ್ ಆಗಿಯೂ ಹೆಸರುವಾಸಿಯಾಗಿದ್ದಾರೆ. ಈಗ ಮುಂಬೈ ಪೊಲೀಸ್ ಪಡೆಗೆ ಅವರನ್ನು ವರ್ಗಾವಣೆ ಮಾಡಿರುವುದರಿಂದ ಕ್ರಿಮಿನಲ್​ಗಳಿಗೆ ಎಚ್ಚರಿಕೆ ಗಂಟೆಯಾಗಿದೆ ಎಂದು ಘನಶ್ಯಾಮ್ ಭಡೇಕರ್ ಅಭಿಪ್ರಾಯಪಟ್ಟರು.

ಪ್ರಸಿದ್ಧಿಯೊಂದಿಗೆ ವಿವಾದ: ಪೊಲೀಸ್​ ಇಲಾಖೆಯಲ್ಲಿ ಎನ್‌ಕೌಂಟರ್ ಸ್ಪೆಷಲಿಸ್ಟ್​ ಆಗಿ ಪ್ರಸಿದ್ಧಿ ಪಡೆಯುವುದೊಂದಿಗೆ ದಯಾ ನಾಯಕ್ ವಿವಾದಕ್ಕೂ ಒಳಗಾಗಿದ್ದರು. ಜೊತೆಗೆ ಅಕ್ರಮ ಆಸ್ತಿ ಸೇರಿದಂತೆ ಹಲವು ಆರೋಪಗಳು ಅವರ ವಿರುದ್ಧ ಕೇಳಿ ಬಂದಿದ್ದವು. ಅಷ್ಟೇ ಅಲ್ಲ, ಇಂತಹ ಆರೋಪಗಳು ಕೇಳಿ ಬಂದಾಗ ಅಮಾನತು ಕೂಡ ಆಗಿದ್ದರು.

ದಯಾ ನಾಯಕ್ ಕುರಿತ ಚಲನಚಿತ್ರಗಳು: ಈ ಪೊಲೀಸ್​ ಅಧಿಕಾರಿ ದಯಾ ನಾಯಕ್ ಜೀವನದ ಕುರಿತು ಬಾಲಿವುಡ್‌ನಲ್ಲಿ ಹಲವಾರು ಚಲನಚಿತ್ರಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ 'ಅಬ್ ತಕ್ ಛಪ್ಪನ್' ಮತ್ತು 'ದಯಾ ನಾಯಕ್ ಲೈಸೆನ್ಸ್ ಟು ಕಿಲ್' ಎಂಬ ಚಿತ್ರಗಳು ಪ್ರಮುಖವಾದವು.

ಇದನ್ನೂ ಓದಿ: ಛೋಟಾ ರಾಜನ್‌ ಆಪ್ತನನ್ನು ಭಾರತಕ್ಕೆ ಕರೆತಂದ ತನಿಖಾ ಸಂಸ್ಥೆಗಳು

ಮುಂಬೈ (ಮಹಾರಾಷ್ಟ್ರ): ಎನ್‌ಕೌಂಟರ್ ಸ್ಪೆಷಲಿಸ್ಟ್​ ಎಂದೇ ಖ್ಯಾತಿ ಪಡೆದ ಪೊಲೀಸ್ ಅಧಿಕಾರಿ ದಯಾ ನಾಯಕ್​​ ಅವರನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದಿಂದ ಮುಂಬೈ ಪೊಲೀಸ್ ಪಡೆಗೆ ವರ್ಗಾಯಿಸಲಾಗಿದೆ. ಇದುವರೆಗೆ 80ಕ್ಕೂ ಹೆಚ್ಚು ಕ್ರಿಮಿನಲ್​ಗಳನ್ನು ದಯಾ ನಾಯಕ್ ಎನ್​ಕೌಂಟರ್ ಮಾಡಿದ್ದು, ಈಗ ಪೊಲೀಸ್​ ಪಡೆಗೆ ವರ್ಗಾಯಿಸಿರುವುದರಿಂದ ದೇಶದ ವಾಣಿಜ್ಯ ರಾಜಧಾನಿಯ ಅಪರಾಧಿಗಳ ಎದೆ ನಡುಗುವಂತೆ ಮಾಡಿದೆ.

ರಾಜ್ಯ ಕೇಡರ್‌ನ 1995ರ ಬ್ಯಾಚ್ ಅಧಿಕಾರಿಯಾದ ದಯಾ ನಾಯಕ್​, ಎಂಪಿಎಸ್​ಸಿ ಪರೀಕ್ಷೆ ಬರೆದು ಉತ್ತೀರ್ಣರಾದ ನಂತರ ಪೊಲೀಸ್ ಪಡೆಗೆ ನೇಮಕವಾಗಿದ್ದರು. ನಂತರ ಪಶ್ಚಿಮ ಉಪನಗರದ ಜುಹು ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಬ್​ ಇನ್ಸ್‌ಪೆಕ್ಟರ್ ಆಗಿ ಮೊದಲ ಪೋಸ್ಟಿಂಗ್​ ಆಗಿತ್ತು. ಆಗ ಮುಂಬೈ ಅಪರಾಧ ವಿಭಾಗದಲ್ಲಿ ಪೊಲೀಸ್ ಅಧಿಕಾರಿ ಮತ್ತು ಎನ್‌ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್​ ಶರ್ಮಾ ಅವರೊಂದಿಗೆ ದಯಾ ನಾಯಕ್ ಕೆಲಸ ಮಾಡಿದರು.

ದಯಾ ನಾಯಕ್​ ಮೊದಲ ಎನ್​ಕೌಂಟರ್​​: 1996ರಲ್ಲಿ ಪ್ರದೀಪ್ ಶರ್ಮಾ ಜೊತೆ ಸೇರಿ ದಯಾ ನಾಯಕ್ ಭೂಗತ ಪಾತಕಿ ಬಬ್ಲು ಶ್ರೀವಾಸ್ತನ್​ ಗ್ಯಾಂಗ್​ನ ಇಬ್ಬರು ಗೂಂಡಾಗಳಿಗೆ ಗುಂಡಿಕ್ಕಿದ್ದರು. ಇದೇ ಅವರ ಮೊದಲ ಎನ್​ಕೌಂಟರ್​​ ಮತ್ತು ಅಲ್ಲಿಂದಲೇ ದಯಾ ನಾಯಕ್ ಎನ್‌ಕೌಂಟರ್ ಸ್ಪೆಷಲಿಸ್ಟ್​ ಆಗಿ ಹೆಸರು ಮಾಡಲು ಶುರು ಮಾಡಿದರು. ಅಲ್ಲದೇ, ಮುಂಬೈನಲ್ಲಿ ದರೋಡೆಕೋರ ಅಮರ್ ನಾಯ್ಕ್ ಬಳಿ ಕೆಲಸ ಮಾಡುತ್ತಿದ್ದ ಎಲ್​ಟಿಟಿಇಯ 3 ಸದಸ್ಯರನ್ನು ದಯಾ ನಾಯಕ್ ಎನ್​ಕೌಂಟರ್​ ಮಾಡಿದ್ದರು. ಜೊತೆಗೆ ದಯಾ ನಾಯಕ್ ಹೆಸರು ಕೇಳಿದ ತಕ್ಷಣ 90ರ ದಶಕದಲ್ಲಿ ಮುಂಬೈನ ದಾದಾ - ಭಾಯಿಯಂತಹ ಕ್ರಿಮಿನಲ್ ಲೋಕವೇ ನಡುಗುತ್ತಿತ್ತು ಎಂದು ಹಿರಿಯ ಪತ್ರಕರ್ತ ಘನಶ್ಯಾಮ್ ಭಡೇಕರ್ ತಿಳಿಸಿದ್ದಾರೆ.

ದಯಾ ನಾಯಕ್ ಹಲವಾರು ಭೂಗತ ಜಗತ್ತಿನ ಸಹಚರರನ್ನು ಮಟ್ಟ ಹಾಕಿದ್ದರು. ಸಾದಿಕ್ ಕಾಲಿಯಾ, ಶ್ರೀಕಾಂತ್ ಮಾಮಾ, ರಫೀಕ್ ದಿಬ್ಸ್​ವಾಲಾ, ಪರ್ವೇಜ್ ಸಿದ್ದಿಕಿ, ವಿನೋದ್ ಭಟ್ಕರ್ ಮತ್ತು ಸುಭಾಷ್ ಸೇರಿದಂತೆ ಹತ್ತಾರು ಗ್ಯಾಂಗ್‌ಸ್ಟರ್‌ಗಳು ಎನ್‌ಕೌಂಟರ್‌ ಮಾಡುವಲ್ಲಿ ದಯಾ ನಾಯಕ್​ ಯಶಸ್ವಿಯಾಗಿದ್ದರು. ಇದರಿಂದಾಗಿ ದಯಾ ನಾಯಕ್ ಮುಂಬೈನಲ್ಲಿ ಮಾತ್ರವಲ್ಲದೇ ದೇಶದಲ್ಲೇ ಎನ್‌ಕೌಂಟರ್ ಸ್ಪೆಷಲಿಸ್ಟ್ ಆಗಿಯೂ ಹೆಸರುವಾಸಿಯಾಗಿದ್ದಾರೆ. ಈಗ ಮುಂಬೈ ಪೊಲೀಸ್ ಪಡೆಗೆ ಅವರನ್ನು ವರ್ಗಾವಣೆ ಮಾಡಿರುವುದರಿಂದ ಕ್ರಿಮಿನಲ್​ಗಳಿಗೆ ಎಚ್ಚರಿಕೆ ಗಂಟೆಯಾಗಿದೆ ಎಂದು ಘನಶ್ಯಾಮ್ ಭಡೇಕರ್ ಅಭಿಪ್ರಾಯಪಟ್ಟರು.

ಪ್ರಸಿದ್ಧಿಯೊಂದಿಗೆ ವಿವಾದ: ಪೊಲೀಸ್​ ಇಲಾಖೆಯಲ್ಲಿ ಎನ್‌ಕೌಂಟರ್ ಸ್ಪೆಷಲಿಸ್ಟ್​ ಆಗಿ ಪ್ರಸಿದ್ಧಿ ಪಡೆಯುವುದೊಂದಿಗೆ ದಯಾ ನಾಯಕ್ ವಿವಾದಕ್ಕೂ ಒಳಗಾಗಿದ್ದರು. ಜೊತೆಗೆ ಅಕ್ರಮ ಆಸ್ತಿ ಸೇರಿದಂತೆ ಹಲವು ಆರೋಪಗಳು ಅವರ ವಿರುದ್ಧ ಕೇಳಿ ಬಂದಿದ್ದವು. ಅಷ್ಟೇ ಅಲ್ಲ, ಇಂತಹ ಆರೋಪಗಳು ಕೇಳಿ ಬಂದಾಗ ಅಮಾನತು ಕೂಡ ಆಗಿದ್ದರು.

ದಯಾ ನಾಯಕ್ ಕುರಿತ ಚಲನಚಿತ್ರಗಳು: ಈ ಪೊಲೀಸ್​ ಅಧಿಕಾರಿ ದಯಾ ನಾಯಕ್ ಜೀವನದ ಕುರಿತು ಬಾಲಿವುಡ್‌ನಲ್ಲಿ ಹಲವಾರು ಚಲನಚಿತ್ರಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ 'ಅಬ್ ತಕ್ ಛಪ್ಪನ್' ಮತ್ತು 'ದಯಾ ನಾಯಕ್ ಲೈಸೆನ್ಸ್ ಟು ಕಿಲ್' ಎಂಬ ಚಿತ್ರಗಳು ಪ್ರಮುಖವಾದವು.

ಇದನ್ನೂ ಓದಿ: ಛೋಟಾ ರಾಜನ್‌ ಆಪ್ತನನ್ನು ಭಾರತಕ್ಕೆ ಕರೆತಂದ ತನಿಖಾ ಸಂಸ್ಥೆಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.