ನವದೆಹಲಿ: ವಿಧಾನಸಭಾ ಸಮಿತಿ ಸದಸ್ಯರು ಇತ್ತೀಚೆಗೆ ಹಿರಿಯ ಐಎಎಸ್ ಅಧಿಕಾರಿ, ವಿಶೇಷ ಕಾರ್ಯದರ್ಶಿ (vigilance) ವೈ ವಿ ವಿ ಜೆ ರಾಜಶೇಖರ್ ಅವರ ಒಬಿಸಿ ಪ್ರಮಾಣಪತ್ರ ಪರಿಶೀಲಿಸುವ ಸಲುವಾಗಿ ಅವರ ಹುಟ್ಟೂರಿಗೆ ಭೇಟಿ ನೀಡಿದೆ. ಜೂನ್ ತಿಂಗಳಲ್ಲಿ ಅಮಾನತುಗೊಂಡ DANICS ಅಧಿಕಾರಿ ರಾಜಶೇಖರ್ ವಿರುದ್ಧ ಕೆಲ ಆರೋಪಗಳನ್ನು ಮಾಡಿದ್ದರು. 1994ರಲ್ಲಿ ಸಿವಿಲ್ ಸರ್ವೀಸ್ ಪರೀಕ್ಷೆ ಬರೆಯುವ ವೇಳೆ ನಕಲಿ ಒಬಿಸಿ ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂದು ದೂರು ಸಲ್ಲಿಸಿದ್ದರು. ವೈ ವಿ ವಿ ಜೆ ರಾಜಶೇಖರ್ ಒಬಿಸಿ ವರ್ಗಕ್ಕೆ ಸೇರಿದವರಲ್ಲ ಎಂಬುದಾಗಿ ಆರೋಪಿಸಿದ್ದರು.
ದೆಹಲಿ ವಿಧಾನಸಭೆಯ ಒಬಿಸಿ ಕಲ್ಯಾಣ ಸಮಿತಿಯು ದೂರನ್ನು ಪರಿಗಣಿಸಿ ತಮ್ಮ ನಿಲುವನ್ನು ಮಂಡಿಸುವಂತೆ ರಾಜಶೇಖರ್ ಅವರಿಗೆ ನೋಟಿಸ್ ಜಾರಿಗೊಳಿಸಿದೆ. ಆದರೆ, ರಾಜಶೇಖರ್ ಅವರು ಸಮಿತಿ ಮುಂದೆ ಹಾಜರಾಗಿಲ್ಲ. ನಿಯಮಗಳ ಪ್ರಕಾರ ಸೇವಾ ವಿಷಯಗಳಲ್ಲಿ ನೀವು ಯಾವದೇ ಅಧಿಕಾರ ಹೊಂದಿಲ್ಲ ಎಂದು ಸಮಿತಿಗೆ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಶೇಖರ್ ಅವರಿಂದ ಶೀಘ್ರ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಈ ಹಿನ್ನೆಲೆ ಆಮ್ ಆದ್ಮಿ ಪಕ್ಷದ ಶಾಸಕ ಮದನ್ ಲಾಲ್ ನೇತೃತ್ವದಲ್ಲಿ ವಿಧಾನಸಭೆಯ ಒಬಿಸಿ ಕಲ್ಯಾಣ ಸಮಿತಿಯ ಮೂವರು ಸದಸ್ಯರು ಈ ವಾರದ ಆರಂಭದಲ್ಲಿ ವಿಶಾಖಪಟ್ಟನಂ ಮತ್ತು ಅನಕಪಲ್ಲಿಗೆ ಭೇಡಿ ಕೊಟ್ಟಿತ್ತು. ಈ ಭೇಟಿ ರಾಜಶೇಖರ್ ಅವರ ಜಾತಿ ಪ್ರಮಾಣಪತ್ರದ ಪರಿಶೀಲನೆ ಕುರಿತಾಗಿತ್ತು. ಸಮಿತಿ ಈಗಾಗಲೇ ರಾಜಶೇಖರ್ ಅವರಿಗೆ ಹಲವು ನೋಟಿಸ್ಗಳನ್ನು ಜಾರಿಗೊಳಿಸಿದೆ. ಆದರೆ, ಸಮಿತಿ ಮುಂದೆ ರಾಜಶೇಖರ್ ಅವರು ಹಾಜರಾಗಿಲ್ಲ ಎಂದು ಶಾಸಕ ಮದನ್ ಲಾಲ್ ತಿಳಿಸಿದ್ದಾರೆ. ನಂತರ ಸೇವಾ ಮತ್ತು ವಿಜಿಲೆನ್ಸ್ ಇಲಾಖೆಗಳಿಂದ ಮಾಹಿತಿ ಕೇಳಲಾಗಿದ್ದರೂ ಕೂಡ ಸಂಬಂಧಿತ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ ಎಂದು ಕೂಡ ತಿಳಿಸಿದ್ದಾರೆ.
ಸಮಿತಿ ವಿಶಾಖಪಟ್ಟಣಕ್ಕೆ ಭೇಟಿ ಕೊಟ್ಟಿದೆ. ರಾಜಶೇಖರ್ ಅವರು ಅನಕಪಲ್ಲಿಗೆ ಸೇರಿದ್ದು, ಪ್ರಸ್ತುತ ಆಂಧ್ರಪ್ರದೇಶದಲ್ಲಿ ಪ್ರತ್ಯೇಖ ಜಿಲ್ಲೆಯಾಗಿದೆ. ಅನಕಪಲ್ಲ ಅಧಿಕಾರಿಗಳು ಸಮಿತಿಯೊಂದಿಗೆ ಸಹಕರಿಸಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ವಿಷಯಗಳನ್ನು ಒದಗಿಸಲಿಲ್ಲ ಎಂದಿದ್ದಾರೆ. ಈ ಬಗ್ಗೆ ಮುಂದಿನ ಸಭೆಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಮದನ್ ಲಾಲ್ ತಿಳಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್ ಸರ್ಕಾರಕ್ಕೆ ಸಂಬಂಧಿಸಿದಂತೆ ಹಲವು ತನಿಖೆಗಳನ್ನು ನೋಡಿಕೊಳ್ಳುತ್ತಿದ್ದ ಅಧಿಕಾರಿ ರಾಜಶೇಖರ್ ಅವರನ್ನು ಆಮ್ ಆದ್ಮಿ ಪಕ್ಷ ಗುರಿಯಾಗಿಸಿತ್ತು ಎಂದು ಮೂಲಗಳು ತಿಳಿಸಿವೆ. ರಾಜಶೇಖರ್ ಅವರು ಯೂನಿಯನ್ ಪಬ್ಲಿಕ್ ಸರ್ವೀಸ್ ಕಮೊಷನ್ ನಿಂದ DANICS (ದೆಹಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ನಾಗರಿಕ ಸೇವೆಗಲು) ಅಧಿಕಾರಿಯಾಗಿ ಆಯ್ಕೆ ಮಾಡಲಾಗಿತ್ತು. ಆ ಸಮಯದಲ್ಲಿ ಸಂಬಂಧಪಟ್ಟ ಇಲಾಖೆಗಳು ದಾಖಲೆ ಪರಿಶೀಲನೆ ಮಾಡಿತ್ತು.