ETV Bharat / bharat

ವಾಮಾಚಾರ ಶಂಕೆ: ದಂಪತಿಯನ್ನು ಕೊಚ್ಚಿ ಕೊಂದ ದುಷ್ಕರ್ಮಿಗಳು! - ವಾಮಾಚಾರ ನಡೆಸುತ್ತಿದ್ದಾರೆ ಎಂಬ ಶಂಕೆಯ ಮೇರೆಗೆ ಕೊಲೆ

ಮನೆಯ ಮುಂಭಾಗದಲ್ಲಿ ದಂಪತಿ ಶವಗಳು ಪತ್ತೆಯಾಗಿದ್ದು, ಇವರು ವಾಮಾಚಾರ ನಡೆಸುತ್ತಿದ್ದಾರೆ ಎಂದು ಕೊಲೆ ಮಾಡಲಾಗಿದೆ ಅಂತಾ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Couple hacked to death in Odisha  two killed on suspicion of sorcery  Couple hacked to death  ದಂಪತಿಯನ್ನು ಕೊಚ್ಚಿ ಕೊಂದ ದುಷ್ಕರ್ಮಿಗಳು  death on suspicion of practicing sorcery in Odisha  ದಂಪತಿಯನ್ನು ಕೊಚ್ಚಿ ಕೊಂದ ದುಷ್ಕರ್ಮಿಗಳು  ದಂಪತಿ ಶವಗಳು ಪತ್ತೆ  ವಾಮಾಚಾರ ನಡೆಸುತ್ತಿದ್ದಾರೆ ಎಂದು ಕೊಲೆ  ವಾಮಾಚಾರ ನಡೆಸುತ್ತಿದ್ದಾರೆ ಎಂಬ ಶಂಕೆಯ ಮೇರೆಗೆ ಕೊಲೆ  ಮನೆಯ ಹೊರಗೆ ರಕ್ತದ ಮಡುವಿನಲ್ಲಿ ಅವರ ಶವಗಳು ಪತ್ತೆ
ದಂಪತಿಯನ್ನು ಕೊಚ್ಚಿ ಕೊಂದ ದುಷ್ಕರ್ಮಿಗಳು!
author img

By

Published : Dec 12, 2022, 11:25 AM IST

ಕಿಯೋಂಝಾರ್ (ಒಡಿಶಾ): ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ 45 ವರ್ಷದ ವ್ಯಕ್ತಿ ಮತ್ತು ಅವರ ಪತ್ನಿಯನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿರುವ ಘಟನೆ ಮುನ್ನೆಲೆಗೆ ಬಂದಿದೆ. ಇವರಿಬ್ಬರು ವಾಮಾಚಾರ ನಡೆಸುತ್ತಿದ್ದಾರೆ ಎಂಬ ಶಂಕೆಯ ಮೇರೆಗೆ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಭಾನುವಾರ ಬೆಳಗ್ಗೆ ದೈತಾರಿ ಪೊಲೀಸ್ ಠಾಣೆ ವ್ಯಾಪ್ತಿಯ ರಸೂಲ್ ಜುಮುಕಿಪಾಟಿಯ ಸಾಹಿ ಗ್ರಾಮದ ದಂಪತಿ ವಾಸಿಸುತ್ತಿದ್ದ ಮನೆಯ ಹೊರಗೆ ರಕ್ತದ ಮಡುವಿನಲ್ಲಿ ಅವರ ಶವಗಳು ಪತ್ತೆಯಾಗಿವೆ. ಹತ್ಯೆಯ ಹಿಂದೆ ವಾಮಾಚಾರದ ಶಂಕೆ ಇದೆ ಎಂದು ತಿಳಿದುಬಂದಿದೆ. ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಕಿಯೋಂಜಾರ್ ಪೊಲೀಸ್ ವರಿಷ್ಠಾಧಿಕಾರಿ ಮಿತ್ರಭಾನು ಮಹಾಪಾತ್ರ ತಿಳಿಸಿದ್ದಾರೆ.

ಶನಿವಾರ ರಾತ್ರಿ ನಮ್ಮ ತಂದೆ ಬಹದಾ ಮುರ್ಮು ಮತ್ತು ತಾಯಿ ಧನಿ (35) ಮನೆಯ ಹೊರಗೆ ಮಲಗಿದ್ದರು. ನಾನು ಮನೆಯೊಳಗೆ ಮಲಗಿದ್ದೆ. ಕಿರುಚಾಟ ಕೇಳಿ ಹೊರಬಂದು ನೋಡಿದಾಗ ನನ್ನ ಪೋಷಕರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ನಾನು ನನ್ನ ಚಿಕ್ಕಪ್ಪ ಕಿಸಾನ್ ಮರಾಂಡಿಗೆ ಕರೆ ಮಾಡಿ ಘಟನೆ ಬಗ್ಗೆ ತಿಳಿಸಿದೆ ಎಂದು ದಂಪತಿಯ ಪುತ್ರಿ ಸಿಂಗೋ ಹೇಳಿದ್ದಾರೆ.

ರಾತ್ರಿ 12:30 ರ ಸುಮಾರಿಗೆ ಸಿಂಗೋದಿಂದ ನನಗೆ ಕರೆ ಬಂತು. ನಾನು, ನನ್ನ ಹಿರಿಯ ಮಗನೊಂದಿಗೆ ಬೈಕ್​ನಲ್ಲಿ ಗ್ರಾಮಕ್ಕೆ ಬಂದೆವು ಎಂದು ಮರಾಂಡಿ ಹೇಳಿದರು. ಮಾಹಿತಿ ತಿಳಿದ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

ಓದಿ: 1992 ಗಲಭೆ ಪ್ರಕರಣ.. ಬರೋಬ್ಬರಿ 30 ವರ್ಷಗಳ ನಂತರ ಆರೋಪಿ ಸೆರೆ

ಕಿಯೋಂಝಾರ್ (ಒಡಿಶಾ): ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ 45 ವರ್ಷದ ವ್ಯಕ್ತಿ ಮತ್ತು ಅವರ ಪತ್ನಿಯನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿರುವ ಘಟನೆ ಮುನ್ನೆಲೆಗೆ ಬಂದಿದೆ. ಇವರಿಬ್ಬರು ವಾಮಾಚಾರ ನಡೆಸುತ್ತಿದ್ದಾರೆ ಎಂಬ ಶಂಕೆಯ ಮೇರೆಗೆ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಭಾನುವಾರ ಬೆಳಗ್ಗೆ ದೈತಾರಿ ಪೊಲೀಸ್ ಠಾಣೆ ವ್ಯಾಪ್ತಿಯ ರಸೂಲ್ ಜುಮುಕಿಪಾಟಿಯ ಸಾಹಿ ಗ್ರಾಮದ ದಂಪತಿ ವಾಸಿಸುತ್ತಿದ್ದ ಮನೆಯ ಹೊರಗೆ ರಕ್ತದ ಮಡುವಿನಲ್ಲಿ ಅವರ ಶವಗಳು ಪತ್ತೆಯಾಗಿವೆ. ಹತ್ಯೆಯ ಹಿಂದೆ ವಾಮಾಚಾರದ ಶಂಕೆ ಇದೆ ಎಂದು ತಿಳಿದುಬಂದಿದೆ. ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಕಿಯೋಂಜಾರ್ ಪೊಲೀಸ್ ವರಿಷ್ಠಾಧಿಕಾರಿ ಮಿತ್ರಭಾನು ಮಹಾಪಾತ್ರ ತಿಳಿಸಿದ್ದಾರೆ.

ಶನಿವಾರ ರಾತ್ರಿ ನಮ್ಮ ತಂದೆ ಬಹದಾ ಮುರ್ಮು ಮತ್ತು ತಾಯಿ ಧನಿ (35) ಮನೆಯ ಹೊರಗೆ ಮಲಗಿದ್ದರು. ನಾನು ಮನೆಯೊಳಗೆ ಮಲಗಿದ್ದೆ. ಕಿರುಚಾಟ ಕೇಳಿ ಹೊರಬಂದು ನೋಡಿದಾಗ ನನ್ನ ಪೋಷಕರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ನಾನು ನನ್ನ ಚಿಕ್ಕಪ್ಪ ಕಿಸಾನ್ ಮರಾಂಡಿಗೆ ಕರೆ ಮಾಡಿ ಘಟನೆ ಬಗ್ಗೆ ತಿಳಿಸಿದೆ ಎಂದು ದಂಪತಿಯ ಪುತ್ರಿ ಸಿಂಗೋ ಹೇಳಿದ್ದಾರೆ.

ರಾತ್ರಿ 12:30 ರ ಸುಮಾರಿಗೆ ಸಿಂಗೋದಿಂದ ನನಗೆ ಕರೆ ಬಂತು. ನಾನು, ನನ್ನ ಹಿರಿಯ ಮಗನೊಂದಿಗೆ ಬೈಕ್​ನಲ್ಲಿ ಗ್ರಾಮಕ್ಕೆ ಬಂದೆವು ಎಂದು ಮರಾಂಡಿ ಹೇಳಿದರು. ಮಾಹಿತಿ ತಿಳಿದ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

ಓದಿ: 1992 ಗಲಭೆ ಪ್ರಕರಣ.. ಬರೋಬ್ಬರಿ 30 ವರ್ಷಗಳ ನಂತರ ಆರೋಪಿ ಸೆರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.