ETV Bharat / bharat

ದುರ್ಘಟನೆಯಲ್ಲಿ ಬದುಕುಳಿದ ಪೈಲಟ್​​ ವರುಣ್​ ಪ್ರತಾಪ್​ ಸ್ಥಿತಿ ಚಿಂತಾಜನಕ.. 48 ಗಂಟೆ ಅವಧಿ ನೀಡಿದ ವೈದ್ಯರು

author img

By

Published : Dec 9, 2021, 3:47 PM IST

ತಮಿಳುನಾಡಿನ ಕೂನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್​ ದುರಂತದಲ್ಲಿ ಬದುಕುಳಿದಿರುವ ಗ್ರೂಪ್​ ಕ್ಯಾಪ್ಟನ್​ ವರುಣ್ ಪ್ರತಾಪ್ ಪರಿಸ್ಥಿತಿ ಚಿಂತಾಜನಕವಾಗಿದೆ. ವೈದ್ಯರು ಮುಂದಿನ 48 ಗಂಟೆಗಳ ಅವಧಿ ನೀಡಿದ್ದಾರೆ ಎನ್ನಲಾಗಿದೆ.

coonoor helicopter
ಪೈಲಟ್​​ ವರುಣ್​ ಪ್ರತಾಪ್​

ದೇವರಿಯಾ(ಉತ್ತರಪ್ರದೇಶ): ತಮಿಳುನಾಡಿನ ಕೂನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್​ ದುರಂತದಲ್ಲಿ ಬದುಕುಳಿದಿರುವ ಗ್ರೂಪ್​ ಕ್ಯಾಪ್ಟನ್​ ವರುಣ್ ಪ್ರತಾಪ್ ಪರಿಸ್ಥಿತಿ ಚಿಂತಾಜನಕವಾಗಿದೆ. ವೈದ್ಯರು ಮುಂದಿನ 48 ಗಂಟೆಗಳ ಅವಧಿ ನೀಡಿದ್ದಾರೆ ಎನ್ನಲಾಗಿದೆ.

ದುರ್ಘಟನೆಯಲ್ಲಿ ವರುಣ್​ ಅವರ ದೇಹವು ಶೇ.90 ರಷ್ಟು ಸುಟ್ಟು ಹೋಗಿದ್ದು, ತೀವ್ರ ನಿಗಾ ಘಟಕದಲ್ಲಿ ವರುಣ್​ ಪ್ರತಾಪ್​ರಿಗೆ ಚಿಕಿತ್ಸೆ ಮುಂದುವರಿದಿದೆ. ಅಲ್ಲದೇ, ವೈದ್ಯರು ಮುಂದಿನ 48 ಗಂಟೆಗಳ ಅವಧಿ ನೀಡಿದ್ದಾರೆ. ಇದರಿಂದ ವರುಣ್​ ಬದುಕಿ ಬರಲಿ ಎಂದು ಅವರ ಕುಟುಂಬಸ್ಥರು ದೇವರ ಮೊರೆ ಹೋಗಿದ್ದಾರೆ.

ಗ್ರೂಪ್​ ಕ್ಯಾಪ್ಟನ್​ ವರುಣ್ ಪ್ರತಾಪ್​ ಅವರು ಉತ್ತರಪ್ರದೇಶ ಮೂಲದವರಾಗಿದ್ದು, ಅವರ ತಂದೆ ಕೃಷ್ಣಪ್ರತಾಪ್​ ಸಿಂಗ್​ ಸೇನೆಯಲ್ಲಿ ಕರ್ನಲ್​ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇದಲ್ಲದೇ ವರುಣ್​ ಪ್ರತಾಪ್​ರ ಇಬ್ಬರು ಮಕ್ಕಳು ಕೂಡ ನೌಕಾಪಡೆಯಲ್ಲಿದ್ದಾರೆ. ವರುಣ್​ ಇಡೀ ಕುಟುಂಬವೇ ಸೇನೆಯಲ್ಲಿ ದುಡಿಯುತ್ತಿದೆ.

ಇದನ್ನೂ ಓದಿ: 'ಗಂಡನ ಬಗ್ಗೆ ಹೆಮ್ಮೆ ಇದೆ'... ಹೆಲಿಕಾಪ್ಟರ್ ಅಪಘಾತದಲ್ಲಿ ಮಡಿದ ಸತ್ಪಾಲ್‌ ರಾಯ್‌ ಪತ್ನಿ ಕಣ್ಣೀರು

ಪ್ರಸ್ತುತ ವರುಣ್​ ಪ್ರತಾಪ್​ ಅವರು ತಮಿಳುನಾಡಿನ ವೆಲ್ಲಿಂಗ್ಟನ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಸಿಡಿಎಸ್​ ಬಿಪಿನ್​ ರಾವತ್​ ಸೇರಿದಂತೆ 13 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನದ ಪೈಲಟ್​ ಆಗಿದ್ದ ವರುಣ್​ ತಮಿಳುನಾಡಿನ ಕೂನೂರಿನಲ್ಲಿ ನಡೆದ ದುರ್ಘಟನೆಯಲ್ಲಿ ಇವರೊಬ್ಬರೇ ಬದುಕುಳಿದಿದ್ದರು.

ದೇವರಿಯಾ(ಉತ್ತರಪ್ರದೇಶ): ತಮಿಳುನಾಡಿನ ಕೂನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್​ ದುರಂತದಲ್ಲಿ ಬದುಕುಳಿದಿರುವ ಗ್ರೂಪ್​ ಕ್ಯಾಪ್ಟನ್​ ವರುಣ್ ಪ್ರತಾಪ್ ಪರಿಸ್ಥಿತಿ ಚಿಂತಾಜನಕವಾಗಿದೆ. ವೈದ್ಯರು ಮುಂದಿನ 48 ಗಂಟೆಗಳ ಅವಧಿ ನೀಡಿದ್ದಾರೆ ಎನ್ನಲಾಗಿದೆ.

ದುರ್ಘಟನೆಯಲ್ಲಿ ವರುಣ್​ ಅವರ ದೇಹವು ಶೇ.90 ರಷ್ಟು ಸುಟ್ಟು ಹೋಗಿದ್ದು, ತೀವ್ರ ನಿಗಾ ಘಟಕದಲ್ಲಿ ವರುಣ್​ ಪ್ರತಾಪ್​ರಿಗೆ ಚಿಕಿತ್ಸೆ ಮುಂದುವರಿದಿದೆ. ಅಲ್ಲದೇ, ವೈದ್ಯರು ಮುಂದಿನ 48 ಗಂಟೆಗಳ ಅವಧಿ ನೀಡಿದ್ದಾರೆ. ಇದರಿಂದ ವರುಣ್​ ಬದುಕಿ ಬರಲಿ ಎಂದು ಅವರ ಕುಟುಂಬಸ್ಥರು ದೇವರ ಮೊರೆ ಹೋಗಿದ್ದಾರೆ.

ಗ್ರೂಪ್​ ಕ್ಯಾಪ್ಟನ್​ ವರುಣ್ ಪ್ರತಾಪ್​ ಅವರು ಉತ್ತರಪ್ರದೇಶ ಮೂಲದವರಾಗಿದ್ದು, ಅವರ ತಂದೆ ಕೃಷ್ಣಪ್ರತಾಪ್​ ಸಿಂಗ್​ ಸೇನೆಯಲ್ಲಿ ಕರ್ನಲ್​ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇದಲ್ಲದೇ ವರುಣ್​ ಪ್ರತಾಪ್​ರ ಇಬ್ಬರು ಮಕ್ಕಳು ಕೂಡ ನೌಕಾಪಡೆಯಲ್ಲಿದ್ದಾರೆ. ವರುಣ್​ ಇಡೀ ಕುಟುಂಬವೇ ಸೇನೆಯಲ್ಲಿ ದುಡಿಯುತ್ತಿದೆ.

ಇದನ್ನೂ ಓದಿ: 'ಗಂಡನ ಬಗ್ಗೆ ಹೆಮ್ಮೆ ಇದೆ'... ಹೆಲಿಕಾಪ್ಟರ್ ಅಪಘಾತದಲ್ಲಿ ಮಡಿದ ಸತ್ಪಾಲ್‌ ರಾಯ್‌ ಪತ್ನಿ ಕಣ್ಣೀರು

ಪ್ರಸ್ತುತ ವರುಣ್​ ಪ್ರತಾಪ್​ ಅವರು ತಮಿಳುನಾಡಿನ ವೆಲ್ಲಿಂಗ್ಟನ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಸಿಡಿಎಸ್​ ಬಿಪಿನ್​ ರಾವತ್​ ಸೇರಿದಂತೆ 13 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನದ ಪೈಲಟ್​ ಆಗಿದ್ದ ವರುಣ್​ ತಮಿಳುನಾಡಿನ ಕೂನೂರಿನಲ್ಲಿ ನಡೆದ ದುರ್ಘಟನೆಯಲ್ಲಿ ಇವರೊಬ್ಬರೇ ಬದುಕುಳಿದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.