ETV Bharat / bharat

ಕಾಂಗ್ರೆಸ್​ ನನ್ನ ಸಮಾಧಿ ತೋಡುವ ಕನಸು ಕಾಣುತ್ತಿದೆ : ಮಂಡ್ಯದಲ್ಲಿ ಮೋದಿ ವಾಗ್ದಾಳಿ

author img

By

Published : Mar 12, 2023, 3:27 PM IST

Updated : Mar 12, 2023, 4:38 PM IST

ಮಂಡ್ಯದಲ್ಲಿ ಪ್ರಧಾನಿ ಮೋದಿ ಭಾಷಣ - ಕಾಂಗ್ರೆಸ್​ ವಿರುದ್ಧ ಮೋದಿ ವಾಗ್ದಾಳಿ

Etv Bharat
Etv Bharat
ಮಂಡ್ಯದಲ್ಲಿ ಪ್ರಧಾನಿ ಮೋದಿ ಭಾಷಣ

ಮಂಡ್ಯ : ಕಾಂಗ್ರೆಸ್​​ ನನ್ನ ಸಮಾಧಿ ತೋಡುವ ಕನಸು ಕಾಣುತ್ತಿದೆ. ಸಮಾಧಿ ತೋಡುವುದರಲ್ಲಿ ಕಾಂಗ್ರೆಸ್​​ ನಿರತವಾಗಿದೆ. ಆದರೆ ಮೋದಿ ಸರ್ಕಾರ ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್​​ ವೇ ನಿರ್ಮಾಣ ಮತ್ತು ಬಡ ಜನರ ಜೀವನವನ್ನು ಸುಗಮಗೊಳಿಸುವಲ್ಲಿ ತೊಡಗಿಸಿಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್​ ವಿರುದ್ಧ ಹರಿಹಾಯ್ದರು.

ಬಹುನಿರೀಕ್ಷಿತ ಮೈಸೂರು-ಬೆಂಗಳೂರು ಎಕ್ಸ್​ಪ್ರೆಸ್​ ವೇಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು. ಮಂಡ್ಯದಲ್ಲಿ ನಡೆದ ರೋಡ್​ ಶೋ ಬಳಿಕ ಗೆಜ್ಜಲಗೆರೆಯಲ್ಲಿ ಹೆದ್ದಾರಿಗೆ ಚಾಲನೆ ನೀಡಿದರು. ಬಳಿಕ ಸಾರ್ವಜನಿಕ ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಅವರು, 2014ಕ್ಕಿಂತ ಮೊದಲು ಕಾಂಗ್ರೆಸ್​ ಸರ್ಕಾರ ಬಡವರನ್ನು ನಾಶಗೊಳಿಸುವ ಸರ್ವ ಪ್ರಯತ್ನ ಮಾಡಿತ್ತು. ಬಡವರಿಗೆ ಮೀಸಲಾಗಿದ್ದ ಹಣವನ್ನು ಕಾಂಗ್ರೆಸ್​​ ಲೂಟಿ ಮಾಡಿತ್ತು ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್​ ಆಡಳಿತದಲ್ಲಿ ಬಡವರು ಸರ್ಕಾರಿ ಸೌಲಭ್ಯ ಪಡೆಯುವುದು ಸುಲಭವಾಗಿರಲಿಲ್ಲ. ಆದರೆ ಬಿಜೆಪಿ ಸರ್ಕಾರದಲ್ಲಿ ಸೌಲಭ್ಯಗಳು ಜನರ ಬಾಗಿಲಿಗೆ ತಲುಪುತ್ತಿದೆ. ದೇಶಾದ್ಯಂತ ಆಧುನಿಕ ಮೂಲಸೌಕರ್ಯಗಳ ಕಾರ್ಯ ಹೆಚ್ಚುತ್ತಿದ್ದು, ಕರ್ನಾಟಕ ಮತ್ತು ಭಾರತ ಬದಲಾಗುತ್ತಿದೆ. ಮೂಲ ಸೌಕರ್ಯಗಳು ಕೇವಲ ಅನುಕೂಲಕ್ಕಾಗಿ ಅಲ್ಲ. ಅದರಿಂದ ಉದ್ಯೋಗ ಸೃಷ್ಟಿಯಾಗುತ್ತಿದೆ. ಹೂಡಿಕೆ ಬರುತ್ತಿದೆ. ಗಳಿಕೆಯ ಸಾಧನಗಳು ಮೂಲ ಸೌಕರ್ಯಗಳ ಮೂಲಕ ಸೃಷ್ಟಿಯಾಗುತ್ತಿದೆ ಎಂದರು.

ಕನ್ನಡದಲ್ಲಿ ಮೋದಿ ಮಾತು : ಕನ್ನಡದಲ್ಲಿ ಭಾಷಣ ಶುರುಮಾಡಿದ ಪ್ರಧಾನಿ ಮೋದಿ, ಕರ್ನಾಟಕದ ಜನತೆಗೆ ನನ್ನ ನಮಸ್ಕಾರ. ಆದಿಚುಂಚನಗಿರಿ ಆಶೀರ್ವಾದ ಮತ್ತು ಕರ್ನಾಟಕದ ಬೇರೆ ಬೇರೆ ಜನರ ದರ್ಶನ ಸಿಗುತ್ತಿದೆ. ಸಕ್ಕರೆ ನಾಡಿನ ಜನರ ಆಶೀರ್ವಾದವೂ ಇರಲಿ. ಮದ್ದೂರು ಮತ್ತು ಮಂಡ್ಯ ಸಕ್ಕರೆ ನಗರ ಎಂದು ಹೇಳಿದರು. ಕೃಷ್ಣರಾಜ ಒಡೆಯರ್ ಮತ್ತು ವಿಶ್ವೇಶ್ವರಯ್ಯನವರು ಕರ್ನಾಟಕ ಕಂಡ ಮಹಾ ಪುರುಷರು. ಈ ಮಹನೀಯರನ್ನು ಈ ಪುಣ್ಯ ಭೂಮಿ ನಮಗೆ ನೀಡಿದೆ. ಅವರ ತಪಸ್ಸಿನ ಫಲವನ್ನು ಅನುಭವಿಸುತ್ತಿದೆ‌‌. ಇಂತಹ ಮಹಾ ಪುರುಷರ ಪ್ರೇರಣೆಯಿಂದ ಎಲ್ಲಾ ಕಾರ್ಯ ನಡೆಯುತ್ತಿವೆ ಎಂದು ಹೇಳಿದರು.

ಪ್ರಗತಿಗಾಗಿ ಡಬಲ್ ಇಂಜಿನ್ ಸರ್ಕಾರ ನಿರಂತರ ಪ್ರಯತ್ನಿಸುತ್ತಿದೆ. ನಿಮ್ಮ ಋಣವನ್ನು ಬಡ್ಡಿ ಸಮೇತ ತೀರಿಸುವ ಅವಕಾಶ ನಮಗೆ ಸಿಕ್ಕಿದೆ. ಬೆಂಗಳೂರು-ಮೈಸೂರು ಹೆದ್ದಾರಿ ಬಗ್ಗೆ ಚರ್ಚೆ ನಡೆಯುತ್ತಿದೆ. ದೇಶದ ರಸ್ತೆಗಳು ಅಭೂತಪೂರ್ವಯಾಗಿ ಅಭಿವೃದ್ಧಿಯಾಗಬೇಕು. ಬೆಂ-ಮೈ ಹೆದ್ದಾರಿಯಿಂದ ಸಂಚಾರ ಅವಧಿ ಕಡಿಮೆಯಾಗಿದೆ. ಜೊತೆಗೆ ಮೈಸೂರು-ಕುಶಾಲನಗರ ಹೆದ್ದಾರಿಗೂ ಶಂಕು ಸ್ಥಾಪನೆ ನೆರವೇರಿಸಲಾಗಿದೆ. ಈ ಎಲ್ಲಾ ಯೋಜನೆಗಳಿಂದ ಕ್ಷೇತ್ರದ ಅಭಿವೃದ್ಧಿಗೆ ವೇಗ ಸಿಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

ಬಿಜೆಪಿ ಸರ್ಕಾರಕ್ಕೆ ಆಶೀರ್ವಾದ ಮಾಡಿ .. ಬೊಮ್ಮಾಯಿ : ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಸಕ್ಕರೆ ನಾಡಿನ ಮಹಾಜನತೆಗೆ ಹೃದಯಪೂರ್ವಕ ನಮಸ್ಕಾರ. ಸಕ್ಕರೆ ಕಾರ್ಖಾನೆಯನ್ನು ಮಂಡ್ಯದಲ್ಲೇ ಸ್ಥಾಪನೆ ಮಾಡುತ್ತೇವೆ. ಇಂದು ಬೆಂಗಳೂರು ಮೈಸೂರು ಹೈವೆಯನ್ನು ಉದ್ಘಾಟನೆ ಮಾಡಲಾಗಿದೆ. ಇದು ಇಡೀ ದೇಶವನ್ನು ಸಂಪರ್ಕಿಸುತ್ತಿದೆ. ಈ ಸಾಧನೆಯನ್ನು ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದಾರೆ‌ ಎಂದರು.

ಪ್ರಧಾನಿ ಮೋದಿಯವರನ್ನು ವಿಶ್ವನಾಯಕ ಎಂದು ಕರೆಯತ್ತೇವೆ. ಇಡೀ ವಿಶ್ವವೇ ಮೋದಿಯವರನ್ನು ವಿಶ್ವನಾಯಕ ಎಂದು ಒಪ್ಪಿಕೊಂಡಿದೆ. ಇಂದು ಪಾಕಿಸ್ತಾನದ ಸಮಸ್ಯೆ ಬಗೆಹರಿಸಲೂ ಪ್ರಧಾನಿ ನರೇಂದ್ರ ಮೋದಿಯವರೇ ಬೇಕಾಗಿದ್ದಾರೆ. ಚೈನಾದವರು ಮೋದಿಯವರನ್ನು ಬುದ್ಧಿವಂತ ಎಂದು ಹೊಗಳಿದ್ದಾರೆ ಎಂದು ಮೋದಿಯವರನ್ನು ಗುಣಗಾನ ಮಾಡಿದರು.

ಬೆಂಗಳೂರು - ಮೈಸೂರು ಹೆದ್ದಾರಿ ಬಹಳ ದಿನದ ಬೇಡಿಕೆಯಾಗಿತ್ತು. 2014 ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ, ಇದಕ್ಕೆ ಚಾಲನೆ ಕೊಟ್ಟು ಡಿಪಿಆರ್​ ಮಾಡಲಾಯಿತು. 2016ರಲ್ಲಿ ಇದು ಹೆದ್ದಾರಿ ಪ್ರಾಧಿಕಾರಕ್ಕೆ ವರ್ಗಾವಣೆಯಾಗಿತ್ತು‌. 2023ರಲ್ಲಿ ಹೆದ್ದಾರಿ ಕಾಮಗಾರಿ ಮುಗಿದಿದೆ ಎಂದು ಹೇಳಿದರು. ಈ ಯೋಜನೆಗೆ ಅಡಿಗಲ್ಲು ಹಾಕಿದ್ದು ನರೇಂದ್ರ ಮೋದಿ ಅವರು. ಈಗ ಇದನ್ನು ಉದ್ಘಾಟನೆ ಮಾಡುತ್ತಿರುವುದು ನರೇಂದ್ರ ಮೋದಿ ಎಂದು ಹೇಳಿದರು.

ಇನ್ನು ಕೆಲವರು ನಾನು ಮಾಡಿದ್ದು, ನಾನು ಮಾಡಿದ್ದು ಎಂದು ಹೇಳುತ್ತಿದ್ದಾರೆ. ನಾನು ಸತ್ಯವನ್ನೇ ಹೇಳುತ್ತಿದ್ದೇನೆ. ಸತ್ಯವನ್ನು ಬಿಟ್ಟು ಬೇರೆ ಏನು ಹೇಳಲ್ಲ. ಇದಕ್ಕೆ ಅಡಿಗಲ್ಲು ಹಾಕಿದ್ದು ನರೇಂದ್ರ ಮೋದಿ. ಡಬಲ್ ಇಂಜಿನ್ ಸರ್ಕಾರದಿಂದ ಈ ಕೆಲಸ ಮಾಡಲು ಸಾಧ್ಯವಾಗಿದೆ ಎಂದರು.

ಡಬಲ್​ ಇಂಜಿನ್​ ಸರ್ಕಾರದಿಂದ ಅಭಿವೃದ್ಧಿ ಸಾಧ್ಯವಾಗಿದೆ : ಇನ್ನು ಡಬಲ್ ಇಂಜಿನ್ ಸರ್ಕಾರ ಏನು ಮಾಡಿದೆ ಎಂದು ಕೇಳುತ್ತಾರೆ. ಡಬಲ್​ ಇಂಜಿನ್​ ಸರ್ಕಾರ ಕಿಸಾನ್ ಸಮ್ಮಾನ್​​ ಯೋಜನೆಯಡಿ 20 ಸಾವಿರ ಕೋಟಿಯನ್ನು ರೈತರಿಗೆ ಕೊಟ್ಟಿದೆ. ಪ್ರಧಾನ ಮಂತ್ರಿ ಅವಾಸ್ ಯೋಜನೆಯನ್ನು ಜನರಿಗೆ ಮಂಜೂರಾತಿ ಮಾಡಿದೆ. 6 ಸಾವಿರ ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗಿದೆ. ಕರ್ನಾಟಕದ ಅಭಿವೃದ್ಧಿಗಾಗಿ ಡಬಲ್ ಇಂಜಿನ್ ಸರ್ಕಾರ ಮತ್ತೆ ಬರಬೇಕು ಎಂದು ಹೇಳಿದರು.

ಮಂಡ್ಯದ ಸಕ್ಕರೆ ಕಾರ್ಖಾನೆ ಬಂದ್ ಆಗಿತ್ತು. ಬಳಿಕ ಅನುದಾನ ಕೊಟ್ಟು ಪ್ರಾರಂಭ ಮಾಡಿದ್ದು ಬಿಜೆಪಿ ಸರ್ಕಾರ‌. ಇನ್ನು ಎಥೆನಾಲ್ ಪ್ರಾರಂಭ ಮಾಡುತ್ತೇವೆ. ಇಲ್ಲಿನ ನೀರಾವರಿ ಬೇಡಿಕೆ ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಮಂಡ್ಯದಲ್ಲಿ 2ಲಕ್ಷಕ್ಕಿಂತ ಹೆಚ್ಚು ಜನರಿಗೆ ಕಿಸಾನ್ ಸಮ್ಮಾನ್​ ಯೋಜನೆಯಿಂದ ಅನುಕೂಲವಾಗಿದೆ. ರೈತರ ಮಕ್ಕಳಿಗೆ ವಿದ್ಯಾ ನಿಧಿ ಕೊಟ್ಟಿದ್ದೇವೆ. ಬಿಜೆಪಿ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಮಾಡಿದ ಕೆಲಸಗಳನ್ನು ನೋಡಿ ನಮಗೆ ಆಶೀರ್ವಾದ ಮಾಡಿ. ಮಂಡ್ಯವನ್ನು ಮತ್ತಷ್ಟು ಅಭಿವೃದ್ಧಿ ಮಾಡಲು ಸಹಕರಿಸಿ. ನಮ್ಮ ಬಿಜೆಪಿ ಸರ್ಕಾರಕ್ಕೆ ಆಶೀರ್ವಾದ ಮಾಡಿ ಎಂದು ಸಿಎಂ ಜನರಲ್ಲಿ ಮನವಿ ಮಾಡಿದರು.

ಇದನ್ನೂ ಓದಿ : ಸಕ್ಕರೆ ನಾಡಲ್ಲಿ ಮೋದಿಗೆ ಅಕ್ಕರೆಯ ಸ್ವಾಗತ: ಭರ್ಜರಿ ರೋಡ್​​ ಶೋ, ಹೂವಿನ ಸುರಿಮಳೆ!- ವಿಡಿಯೋ

ಮಂಡ್ಯದಲ್ಲಿ ಪ್ರಧಾನಿ ಮೋದಿ ಭಾಷಣ

ಮಂಡ್ಯ : ಕಾಂಗ್ರೆಸ್​​ ನನ್ನ ಸಮಾಧಿ ತೋಡುವ ಕನಸು ಕಾಣುತ್ತಿದೆ. ಸಮಾಧಿ ತೋಡುವುದರಲ್ಲಿ ಕಾಂಗ್ರೆಸ್​​ ನಿರತವಾಗಿದೆ. ಆದರೆ ಮೋದಿ ಸರ್ಕಾರ ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್​​ ವೇ ನಿರ್ಮಾಣ ಮತ್ತು ಬಡ ಜನರ ಜೀವನವನ್ನು ಸುಗಮಗೊಳಿಸುವಲ್ಲಿ ತೊಡಗಿಸಿಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್​ ವಿರುದ್ಧ ಹರಿಹಾಯ್ದರು.

ಬಹುನಿರೀಕ್ಷಿತ ಮೈಸೂರು-ಬೆಂಗಳೂರು ಎಕ್ಸ್​ಪ್ರೆಸ್​ ವೇಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು. ಮಂಡ್ಯದಲ್ಲಿ ನಡೆದ ರೋಡ್​ ಶೋ ಬಳಿಕ ಗೆಜ್ಜಲಗೆರೆಯಲ್ಲಿ ಹೆದ್ದಾರಿಗೆ ಚಾಲನೆ ನೀಡಿದರು. ಬಳಿಕ ಸಾರ್ವಜನಿಕ ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಅವರು, 2014ಕ್ಕಿಂತ ಮೊದಲು ಕಾಂಗ್ರೆಸ್​ ಸರ್ಕಾರ ಬಡವರನ್ನು ನಾಶಗೊಳಿಸುವ ಸರ್ವ ಪ್ರಯತ್ನ ಮಾಡಿತ್ತು. ಬಡವರಿಗೆ ಮೀಸಲಾಗಿದ್ದ ಹಣವನ್ನು ಕಾಂಗ್ರೆಸ್​​ ಲೂಟಿ ಮಾಡಿತ್ತು ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್​ ಆಡಳಿತದಲ್ಲಿ ಬಡವರು ಸರ್ಕಾರಿ ಸೌಲಭ್ಯ ಪಡೆಯುವುದು ಸುಲಭವಾಗಿರಲಿಲ್ಲ. ಆದರೆ ಬಿಜೆಪಿ ಸರ್ಕಾರದಲ್ಲಿ ಸೌಲಭ್ಯಗಳು ಜನರ ಬಾಗಿಲಿಗೆ ತಲುಪುತ್ತಿದೆ. ದೇಶಾದ್ಯಂತ ಆಧುನಿಕ ಮೂಲಸೌಕರ್ಯಗಳ ಕಾರ್ಯ ಹೆಚ್ಚುತ್ತಿದ್ದು, ಕರ್ನಾಟಕ ಮತ್ತು ಭಾರತ ಬದಲಾಗುತ್ತಿದೆ. ಮೂಲ ಸೌಕರ್ಯಗಳು ಕೇವಲ ಅನುಕೂಲಕ್ಕಾಗಿ ಅಲ್ಲ. ಅದರಿಂದ ಉದ್ಯೋಗ ಸೃಷ್ಟಿಯಾಗುತ್ತಿದೆ. ಹೂಡಿಕೆ ಬರುತ್ತಿದೆ. ಗಳಿಕೆಯ ಸಾಧನಗಳು ಮೂಲ ಸೌಕರ್ಯಗಳ ಮೂಲಕ ಸೃಷ್ಟಿಯಾಗುತ್ತಿದೆ ಎಂದರು.

ಕನ್ನಡದಲ್ಲಿ ಮೋದಿ ಮಾತು : ಕನ್ನಡದಲ್ಲಿ ಭಾಷಣ ಶುರುಮಾಡಿದ ಪ್ರಧಾನಿ ಮೋದಿ, ಕರ್ನಾಟಕದ ಜನತೆಗೆ ನನ್ನ ನಮಸ್ಕಾರ. ಆದಿಚುಂಚನಗಿರಿ ಆಶೀರ್ವಾದ ಮತ್ತು ಕರ್ನಾಟಕದ ಬೇರೆ ಬೇರೆ ಜನರ ದರ್ಶನ ಸಿಗುತ್ತಿದೆ. ಸಕ್ಕರೆ ನಾಡಿನ ಜನರ ಆಶೀರ್ವಾದವೂ ಇರಲಿ. ಮದ್ದೂರು ಮತ್ತು ಮಂಡ್ಯ ಸಕ್ಕರೆ ನಗರ ಎಂದು ಹೇಳಿದರು. ಕೃಷ್ಣರಾಜ ಒಡೆಯರ್ ಮತ್ತು ವಿಶ್ವೇಶ್ವರಯ್ಯನವರು ಕರ್ನಾಟಕ ಕಂಡ ಮಹಾ ಪುರುಷರು. ಈ ಮಹನೀಯರನ್ನು ಈ ಪುಣ್ಯ ಭೂಮಿ ನಮಗೆ ನೀಡಿದೆ. ಅವರ ತಪಸ್ಸಿನ ಫಲವನ್ನು ಅನುಭವಿಸುತ್ತಿದೆ‌‌. ಇಂತಹ ಮಹಾ ಪುರುಷರ ಪ್ರೇರಣೆಯಿಂದ ಎಲ್ಲಾ ಕಾರ್ಯ ನಡೆಯುತ್ತಿವೆ ಎಂದು ಹೇಳಿದರು.

ಪ್ರಗತಿಗಾಗಿ ಡಬಲ್ ಇಂಜಿನ್ ಸರ್ಕಾರ ನಿರಂತರ ಪ್ರಯತ್ನಿಸುತ್ತಿದೆ. ನಿಮ್ಮ ಋಣವನ್ನು ಬಡ್ಡಿ ಸಮೇತ ತೀರಿಸುವ ಅವಕಾಶ ನಮಗೆ ಸಿಕ್ಕಿದೆ. ಬೆಂಗಳೂರು-ಮೈಸೂರು ಹೆದ್ದಾರಿ ಬಗ್ಗೆ ಚರ್ಚೆ ನಡೆಯುತ್ತಿದೆ. ದೇಶದ ರಸ್ತೆಗಳು ಅಭೂತಪೂರ್ವಯಾಗಿ ಅಭಿವೃದ್ಧಿಯಾಗಬೇಕು. ಬೆಂ-ಮೈ ಹೆದ್ದಾರಿಯಿಂದ ಸಂಚಾರ ಅವಧಿ ಕಡಿಮೆಯಾಗಿದೆ. ಜೊತೆಗೆ ಮೈಸೂರು-ಕುಶಾಲನಗರ ಹೆದ್ದಾರಿಗೂ ಶಂಕು ಸ್ಥಾಪನೆ ನೆರವೇರಿಸಲಾಗಿದೆ. ಈ ಎಲ್ಲಾ ಯೋಜನೆಗಳಿಂದ ಕ್ಷೇತ್ರದ ಅಭಿವೃದ್ಧಿಗೆ ವೇಗ ಸಿಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

ಬಿಜೆಪಿ ಸರ್ಕಾರಕ್ಕೆ ಆಶೀರ್ವಾದ ಮಾಡಿ .. ಬೊಮ್ಮಾಯಿ : ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಸಕ್ಕರೆ ನಾಡಿನ ಮಹಾಜನತೆಗೆ ಹೃದಯಪೂರ್ವಕ ನಮಸ್ಕಾರ. ಸಕ್ಕರೆ ಕಾರ್ಖಾನೆಯನ್ನು ಮಂಡ್ಯದಲ್ಲೇ ಸ್ಥಾಪನೆ ಮಾಡುತ್ತೇವೆ. ಇಂದು ಬೆಂಗಳೂರು ಮೈಸೂರು ಹೈವೆಯನ್ನು ಉದ್ಘಾಟನೆ ಮಾಡಲಾಗಿದೆ. ಇದು ಇಡೀ ದೇಶವನ್ನು ಸಂಪರ್ಕಿಸುತ್ತಿದೆ. ಈ ಸಾಧನೆಯನ್ನು ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದಾರೆ‌ ಎಂದರು.

ಪ್ರಧಾನಿ ಮೋದಿಯವರನ್ನು ವಿಶ್ವನಾಯಕ ಎಂದು ಕರೆಯತ್ತೇವೆ. ಇಡೀ ವಿಶ್ವವೇ ಮೋದಿಯವರನ್ನು ವಿಶ್ವನಾಯಕ ಎಂದು ಒಪ್ಪಿಕೊಂಡಿದೆ. ಇಂದು ಪಾಕಿಸ್ತಾನದ ಸಮಸ್ಯೆ ಬಗೆಹರಿಸಲೂ ಪ್ರಧಾನಿ ನರೇಂದ್ರ ಮೋದಿಯವರೇ ಬೇಕಾಗಿದ್ದಾರೆ. ಚೈನಾದವರು ಮೋದಿಯವರನ್ನು ಬುದ್ಧಿವಂತ ಎಂದು ಹೊಗಳಿದ್ದಾರೆ ಎಂದು ಮೋದಿಯವರನ್ನು ಗುಣಗಾನ ಮಾಡಿದರು.

ಬೆಂಗಳೂರು - ಮೈಸೂರು ಹೆದ್ದಾರಿ ಬಹಳ ದಿನದ ಬೇಡಿಕೆಯಾಗಿತ್ತು. 2014 ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ, ಇದಕ್ಕೆ ಚಾಲನೆ ಕೊಟ್ಟು ಡಿಪಿಆರ್​ ಮಾಡಲಾಯಿತು. 2016ರಲ್ಲಿ ಇದು ಹೆದ್ದಾರಿ ಪ್ರಾಧಿಕಾರಕ್ಕೆ ವರ್ಗಾವಣೆಯಾಗಿತ್ತು‌. 2023ರಲ್ಲಿ ಹೆದ್ದಾರಿ ಕಾಮಗಾರಿ ಮುಗಿದಿದೆ ಎಂದು ಹೇಳಿದರು. ಈ ಯೋಜನೆಗೆ ಅಡಿಗಲ್ಲು ಹಾಕಿದ್ದು ನರೇಂದ್ರ ಮೋದಿ ಅವರು. ಈಗ ಇದನ್ನು ಉದ್ಘಾಟನೆ ಮಾಡುತ್ತಿರುವುದು ನರೇಂದ್ರ ಮೋದಿ ಎಂದು ಹೇಳಿದರು.

ಇನ್ನು ಕೆಲವರು ನಾನು ಮಾಡಿದ್ದು, ನಾನು ಮಾಡಿದ್ದು ಎಂದು ಹೇಳುತ್ತಿದ್ದಾರೆ. ನಾನು ಸತ್ಯವನ್ನೇ ಹೇಳುತ್ತಿದ್ದೇನೆ. ಸತ್ಯವನ್ನು ಬಿಟ್ಟು ಬೇರೆ ಏನು ಹೇಳಲ್ಲ. ಇದಕ್ಕೆ ಅಡಿಗಲ್ಲು ಹಾಕಿದ್ದು ನರೇಂದ್ರ ಮೋದಿ. ಡಬಲ್ ಇಂಜಿನ್ ಸರ್ಕಾರದಿಂದ ಈ ಕೆಲಸ ಮಾಡಲು ಸಾಧ್ಯವಾಗಿದೆ ಎಂದರು.

ಡಬಲ್​ ಇಂಜಿನ್​ ಸರ್ಕಾರದಿಂದ ಅಭಿವೃದ್ಧಿ ಸಾಧ್ಯವಾಗಿದೆ : ಇನ್ನು ಡಬಲ್ ಇಂಜಿನ್ ಸರ್ಕಾರ ಏನು ಮಾಡಿದೆ ಎಂದು ಕೇಳುತ್ತಾರೆ. ಡಬಲ್​ ಇಂಜಿನ್​ ಸರ್ಕಾರ ಕಿಸಾನ್ ಸಮ್ಮಾನ್​​ ಯೋಜನೆಯಡಿ 20 ಸಾವಿರ ಕೋಟಿಯನ್ನು ರೈತರಿಗೆ ಕೊಟ್ಟಿದೆ. ಪ್ರಧಾನ ಮಂತ್ರಿ ಅವಾಸ್ ಯೋಜನೆಯನ್ನು ಜನರಿಗೆ ಮಂಜೂರಾತಿ ಮಾಡಿದೆ. 6 ಸಾವಿರ ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗಿದೆ. ಕರ್ನಾಟಕದ ಅಭಿವೃದ್ಧಿಗಾಗಿ ಡಬಲ್ ಇಂಜಿನ್ ಸರ್ಕಾರ ಮತ್ತೆ ಬರಬೇಕು ಎಂದು ಹೇಳಿದರು.

ಮಂಡ್ಯದ ಸಕ್ಕರೆ ಕಾರ್ಖಾನೆ ಬಂದ್ ಆಗಿತ್ತು. ಬಳಿಕ ಅನುದಾನ ಕೊಟ್ಟು ಪ್ರಾರಂಭ ಮಾಡಿದ್ದು ಬಿಜೆಪಿ ಸರ್ಕಾರ‌. ಇನ್ನು ಎಥೆನಾಲ್ ಪ್ರಾರಂಭ ಮಾಡುತ್ತೇವೆ. ಇಲ್ಲಿನ ನೀರಾವರಿ ಬೇಡಿಕೆ ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಮಂಡ್ಯದಲ್ಲಿ 2ಲಕ್ಷಕ್ಕಿಂತ ಹೆಚ್ಚು ಜನರಿಗೆ ಕಿಸಾನ್ ಸಮ್ಮಾನ್​ ಯೋಜನೆಯಿಂದ ಅನುಕೂಲವಾಗಿದೆ. ರೈತರ ಮಕ್ಕಳಿಗೆ ವಿದ್ಯಾ ನಿಧಿ ಕೊಟ್ಟಿದ್ದೇವೆ. ಬಿಜೆಪಿ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಮಾಡಿದ ಕೆಲಸಗಳನ್ನು ನೋಡಿ ನಮಗೆ ಆಶೀರ್ವಾದ ಮಾಡಿ. ಮಂಡ್ಯವನ್ನು ಮತ್ತಷ್ಟು ಅಭಿವೃದ್ಧಿ ಮಾಡಲು ಸಹಕರಿಸಿ. ನಮ್ಮ ಬಿಜೆಪಿ ಸರ್ಕಾರಕ್ಕೆ ಆಶೀರ್ವಾದ ಮಾಡಿ ಎಂದು ಸಿಎಂ ಜನರಲ್ಲಿ ಮನವಿ ಮಾಡಿದರು.

ಇದನ್ನೂ ಓದಿ : ಸಕ್ಕರೆ ನಾಡಲ್ಲಿ ಮೋದಿಗೆ ಅಕ್ಕರೆಯ ಸ್ವಾಗತ: ಭರ್ಜರಿ ರೋಡ್​​ ಶೋ, ಹೂವಿನ ಸುರಿಮಳೆ!- ವಿಡಿಯೋ

Last Updated : Mar 12, 2023, 4:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.