ETV Bharat / bharat

ಭ್ರಷ್ಟಾಚಾರ ಎಲ್ಲೆ ಮೀರಿದ ಎಂದಿದ್ದ ಮೋದಿಗೆ ಬಘೇಲ್ ತಿರುಗೇಟು.. ಛತ್ತೀಸ್‌ಗಢದಲ್ಲಿ ಸುಳ್ಳಿನ ಅಲೆ ಎದ್ದಿದೆ ಎಂದು ಟೀಕಾಪ್ರಹಾರ

author img

By

Published : Jul 7, 2023, 9:43 PM IST

ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯ ರಣಕಹಳೆ ಮೊಳಗಿದಂತೆ ಕಾಣಿಸುತ್ತಿದೆ. ರಾಯಪುರದಲ್ಲಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಸಾವಿರಾರು ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ಛತ್ತೀಸ್‌ಗಢ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ವಾಗ್ದಾಳಿ ನಡೆಸಿದರು. ಇದಕ್ಕೆ ಸಿಎಂ ಭೂಪೇಶ್ ಬಘೇಲ್ ಪ್ರತಿಕ್ರಿಯೆಸಿ , ಪ್ರಧಾನಿ ಛತ್ತೀಸ್‌ಗಢಕ್ಕೆ ಬಂದ ಕೂಡಲೇ ಸುಳ್ಳಿನ ಗಾಳಿ ಬೀಸಲಾರಂಭಿಸಿದೆ ಎಂದು ತಮ್ಮ ಟ್ವೀಟ್​ದಲ್ಲಿ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.

Etv Bharat
ಪ್ರಧಾನಿ ನರೇಂದ್ರ ಮೋದಿ, ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್

ರಾಯಪುರ(ಛತ್ತೀಸ್​​​ಗಢ): ಪ್ರಮಾಣ ವಚನ ಸಮಾರಂಭದಲ್ಲಿ ಗಂಗಾಜಲವನ್ನು ಕೈಯಲ್ಲಿ ಹಿಡಿದುಕೊಂಡು ರಾಜ್ಯದಲ್ಲಿ ಕಾಂಗ್ರೆಸ್ ಹಲವಾರು ಭರವಸೆಗಳನ್ನು ನೀಡಿದೆ. ಅವುಗಳನ್ನು ಈಡೇರಿಸದೇ, ಭ್ರಷ್ಟಾಚಾರದಲ್ಲಿ ತೊಡಗಿದೆ. ಭ್ರಷ್ಟಾಚಾರ ಕಾಂಗ್ರೆಸ್‌ನ ಮೂಲ ಸಿದ್ಧಾಂತವಾಗಿದೆ. ಅದಿಲ್ಲದೇ ಹಳೆಯ ಪಕ್ಷವಾಗಿರುವ ಕಾಂಗ್ರೆಸ್​ ಉಸಿರಾಡಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಆರೋಪ ಮಾಡಿದ್ದರು.

  • आप आए तो फिर झूठ की बयार बहने लगी मोदी जी.

    प्रदेश भाजपा के नेता लगातार किसानों को गुमराह कर रहे थे कि धान खरीदी केंद्र के पैसों से होती है. आप प्रधानमंत्री हैं, आपको तो सच पता है, लेकिन आप भी झूठ बोल गए.

    यह किसानों के नाम पर सबसे बड़ा झूठ है कि केंद्र राज्य के धान उपार्जन का 80…

    — Bhupesh Baghel (@bhupeshbaghel) July 7, 2023 " class="align-text-top noRightClick twitterSection" data=" ">

ಮದ್ಯಪಾನ ನಿಷೇಧ ಮಾಡುವುದಾಗಿ ಕಾಂಗ್ರೆಸ್ ಸುಳ್ಳು ಪ್ರಮಾಣ ಮಾಡಿದ್ದರು. 10 ದಿನಗಳಲ್ಲಿ ಮದ್ಯ ನಿಷೇಧದ ಭರವಸೆ ನೀಡಿ, ಮಹಿಳೆಯರಿಗೆ ದ್ರೋಹ ಮಾಡಿತು. ಆದರೆ ಸಾವಿರ ಕೋಟಿ ರೂ ಮದ್ಯದ ಹಗರಣದಲ್ಲಿ ಕಾಂಗ್ರೆಸ್ ಸರ್ಕಾರ ಭಾಗಿಯಾಗಿದೆ. ಮದ್ಯದ ಹಗರಣದ ಕಮೀಷನ್ ಕಾಂಗ್ರೆಸ್ ನಾಯಕರ ಖಾತೆಗೆ ಹೋಗಿದೆ ಎಂದು ಮೋದಿ ವಾಗ್ದಾಳಿ ನಡೆಸಿದ್ದರು

ಈ ಆರೋಪಗಳಿಗೆ ಛತ್ತೀಸ್​ಘಡ್ ಸಿಎಂ ಭೂಪೇಶ್ ಬಘೇಲ್ ಟ್ವೀಟ್​ ಮೂಲಕ ತಿರುಗೇಟು ನೀಡಿದ್ದಾರೆ. ಪ್ರಧಾನಿ ಮೋದಿ ಅವರು ಸುಳ್ಳುಗಳನ್ನು ಹರಿಯ ಬಿಡುತ್ತಿದ್ದಾರೆ ಎಂದು ಅಪಾದಿಸಿದ್ದಾರೆ. ಕಾಂಗ್ರೆಸ್‌ ಸರ್ಕಾರ ವಿರುದ್ಧ ಪ್ರಧಾನಿ ಮೋದಿ ಆರೋಪಿಸಿರುವ ಎಲ್ಲ ಹೇಳಿಕೆಗಳನ್ನು ಸಿಎಂ ಬಘೇಲ್ ನಿರಾಕರಿಸಿದ್ದಾರೆ. ಪ್ರಧಾನಿ ಮೋದಿಯವರ ಆರೋಪದ ಮೇಲೆ, ಸಿಎಂ ಬಘೇಲ್ ಟ್ವೀಟ್ ಮಾಡುವ ಮೂಲಕ ತಮ್ಮ ಪ್ರತ್ಯುತ್ತರ ನೀಡಿದರು.

’’ಮೋದಿ ಜೀ, ನೀವು ಬಂದ ಕೂಡಲೇ ಛತ್ತೀಸ್‌ಗಢದಲ್ಲಿ ಸುಳ್ಳಿನ ಅಲೆಗಳು ಹರಿಯ ತೊಡಗಿದವು. ಕೇಂದ್ರದ ಹಣದಲ್ಲಿ ಭತ್ತ ಖರೀದಿ ಮಾಡಲಾಗಿದೆ ಎಂದು ರಾಜ್ಯದ ಬಿಜೆಪಿ ನಾಯಕರು ರೈತರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ನೀವು ಪ್ರಧಾನಿಯಾಗಿದ್ದೀರಿ, ನಿಮಗೆ ಸತ್ಯ ತಿಳಿದಿದೆ. ಆದರೆ ನೀವು ಸಹ ಸುಳ್ಳು ಹೇಳಿದ್ದೀರಿ. ರಾಜ್ಯದಲ್ಲಿ ಶೇ.80ರಷ್ಟು ಭತ್ತವನ್ನು ಕೇಂದ್ರವೇ ಖರೀದಿಸಿ, ತೆಗೆದುಕೊಳ್ಳುತ್ತದೆ ಎಂಬುದು ರೈತರ ಹೆಸರಿನಲ್ಲಿ ದೊಡ್ಡ ಸುಳ್ಳು‘‘ ಎಂದು ಸಿಎಂ ಭೂಪೇಶ್ ಬಘೇಲ್ ಟ್ವೀಟ್ ಮಾಡಿದ್ದಾರೆ.

ಗಂಗಾಜಲದ ಸುಳ್ಳು ಹೇಳಿಕೆ ಆರೋಪವನ್ನು ನಿರಾಕರಿಸಿದ ಭೂಪೇಶ್ ಬಘೇಲ್ ತಮ್ಮ ಟ್ವೀಟ್‌ನಲ್ಲಿ ಮತ್ತಷ್ಟು ಬರೆದುಕೊಂಡಿದ್ದಾರೆ. ರಾಜ್ಯಗಳಲ್ಲಿನ ಭತ್ತ ಸಂಗ್ರಹಣೆಯಲ್ಲಿ ನಿಮ್ಮ ಸರ್ಕಾರದ ಪಾತ್ರವು ತುಂಬಾ ದೊಡ್ಡದಾಗಿದ್ದರೆ, ನೀವು ಸ್ಪರ್ಧಿಸಿದ ಲೋಕಸಭಾ ವಾರಾಣಸಿ ಕ್ಷೇತ್ರದ ರೈತರಿಂದ 1,000-1,200 ರೂ.ಗೆ ಭತ್ತ ಪಡೆಯಬಹುದು.

ಪ್ರತಿ ಕ್ವಿಂಟಾಲ್‌ ನೀವು ಏಕೆ ಮಾರಾಟ ಮಾಡಲು ಒತ್ತಾಯಿಸುತ್ತೀರಿ ಮೋದಿ ಜೀ. ಛತ್ತೀಸ್‌ಗಢದ ಬಿಜೆಪಿ ನಾಯಕರು ಪ್ರಧಾನಿಗೆ ತಪ್ಪು ಮಾಹಿತಿ ಒದಗಿಸಿದ್ದಾರೆ. ಗಂಗಾಜಲದ ಪ್ರಮಾಣ ವಚನ ಸ್ವೀಕರಿಸಿ, 10 ದಿನಗಳಲ್ಲಿ 2018 ರಲ್ಲಿ ಸರ್ಕಾರ ರೈತರ ಸಾಲಮನ್ನಾ ಭರವಸೆ ಈಡೇರಿಸಿದ್ದು ಛತ್ತೀಸ್‌ಗಢದ ಪ್ರತಿ ಮಗುವಿಗೆ ಗೊತ್ತು. ನಾವು ಅದನ್ನು ಎರಡು ಗಂಟೆಗಳಲ್ಲಿ ಮಾಡಿದ್ದೇವೆ ಎಂದು ತಿರುಗೇಟು ನೀಡಿದ್ದಾರೆ.

ಕ್ವಿಂಟಾಲ್‌ಗೆ 2100 ರೂ ಭತ್ತ ಖರೀದಿಗೆ ಬೆಂಬಲ ಬೆಲೆ ನೀಡುವುದಾಗಿ ಬಿಜೆಪಿ ಭರವಸೆ ನೀಡಿತ್ತು, ಅದನ್ನು ಈಡೇರಿಸಿಲ್ಲ ಎಂದು ರೈತರಿಗೆ ನೆನಪಿದೆ. ಛತ್ತೀಸ್‌ಗಢದ ರೈತರನ್ನು ದಾರಿ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಿಎಂ ಭೂಪೇಶ್ ಬಘೇಲ್ ಟ್ವೀಟ್​ ಮೂಲಕ ಪ್ರಧಾನಿ ಮೋದಿಗೆ ತಿರುಗೇಟು ನೀಡಿದ್ದಾರೆ.

ಶೇ 80 ರಷ್ಟು ಕೇಂದ್ರದಿಂದ ಭತ್ತ ಖರೀದಿ: ಛತ್ತೀಸ್​ಗಢ ಜನರ ಭರವಸೆಗಳನ್ನು ಈಡೇರಿಸಲು ಕಾಂಗ್ರೆಸ್ ವಿಫಲವಾಗಿದೆ. ರಾಜ್ಯದಲ್ಲಿ ಶೇ.80ಕ್ಕೂ ಹೆಚ್ಚು ಭತ್ತವನ್ನು ಕೇಂದ್ರದಿಂದ ಸಂಗ್ರಹಿಸಲಾಗಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ಬಿ ಜೆಪಿ ನೇತೃತ್ವದ ಕೇಂದ್ರ ಸರಕಾರ ಭತ್ತದ ಬೆಳೆಯುವ ರೈತರಿಗೆ ನೆರವು ನೀಡಿದೆ. 1 ಲಕ್ಷ ಕೋಟಿಗೂ ಹೆಚ್ಚು ಹಣ ರೈತ ಸಮುದಾಯಕ್ಕೆ ನೀಡಿದೆ. ಆದರೆ, ರಾಜ್ಯದ ಅಭಿವೃದ್ಧಿಯನ್ನು ಕುಂಠಿತಗೊಳಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ, ಅಷ್ಟೇ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆಪಾದಿಸಿದ್ದರು.

7600 ಕೋಟಿ ರೂ ಅಭಿವೃದ್ಧಿ ಕಾಮಗಾರಿಗೆ ಚಾಲನೆ: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ರಾಯ್‌ಪುರದಲ್ಲಿ 7600 ಕೋಟಿ ರೂ ವೆಚ್ಚದ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಇದರಡಿ ಎಂಟು ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಯಿತು. 4 ವರ್ಷದ ಬಳಿಕ ಛತ್ತೀಸ್‌ಗಢದಲ್ಲಿ ನಡೆದ ರ‍್ಯಾಲಿಯಲ್ಲಿ ಭಾಗವಹಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.

ಇದನ್ನೂಓದಿ:Maharashtra Political Crisis: ಉದ್ಧವ್​ ಠಾಕ್ರೆ ಬಣಕ್ಕೆ ಮತ್ತೊಂದು ಶಾಕ್​, ಶಿಂಧೆ ಬಣದತ್ತ ಮತ್ತೊಬ್ಬ ಶಿವಸೇನಾ ನಾಯಕಿ?

ರಾಯಪುರ(ಛತ್ತೀಸ್​​​ಗಢ): ಪ್ರಮಾಣ ವಚನ ಸಮಾರಂಭದಲ್ಲಿ ಗಂಗಾಜಲವನ್ನು ಕೈಯಲ್ಲಿ ಹಿಡಿದುಕೊಂಡು ರಾಜ್ಯದಲ್ಲಿ ಕಾಂಗ್ರೆಸ್ ಹಲವಾರು ಭರವಸೆಗಳನ್ನು ನೀಡಿದೆ. ಅವುಗಳನ್ನು ಈಡೇರಿಸದೇ, ಭ್ರಷ್ಟಾಚಾರದಲ್ಲಿ ತೊಡಗಿದೆ. ಭ್ರಷ್ಟಾಚಾರ ಕಾಂಗ್ರೆಸ್‌ನ ಮೂಲ ಸಿದ್ಧಾಂತವಾಗಿದೆ. ಅದಿಲ್ಲದೇ ಹಳೆಯ ಪಕ್ಷವಾಗಿರುವ ಕಾಂಗ್ರೆಸ್​ ಉಸಿರಾಡಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಆರೋಪ ಮಾಡಿದ್ದರು.

  • आप आए तो फिर झूठ की बयार बहने लगी मोदी जी.

    प्रदेश भाजपा के नेता लगातार किसानों को गुमराह कर रहे थे कि धान खरीदी केंद्र के पैसों से होती है. आप प्रधानमंत्री हैं, आपको तो सच पता है, लेकिन आप भी झूठ बोल गए.

    यह किसानों के नाम पर सबसे बड़ा झूठ है कि केंद्र राज्य के धान उपार्जन का 80…

    — Bhupesh Baghel (@bhupeshbaghel) July 7, 2023 " class="align-text-top noRightClick twitterSection" data=" ">

ಮದ್ಯಪಾನ ನಿಷೇಧ ಮಾಡುವುದಾಗಿ ಕಾಂಗ್ರೆಸ್ ಸುಳ್ಳು ಪ್ರಮಾಣ ಮಾಡಿದ್ದರು. 10 ದಿನಗಳಲ್ಲಿ ಮದ್ಯ ನಿಷೇಧದ ಭರವಸೆ ನೀಡಿ, ಮಹಿಳೆಯರಿಗೆ ದ್ರೋಹ ಮಾಡಿತು. ಆದರೆ ಸಾವಿರ ಕೋಟಿ ರೂ ಮದ್ಯದ ಹಗರಣದಲ್ಲಿ ಕಾಂಗ್ರೆಸ್ ಸರ್ಕಾರ ಭಾಗಿಯಾಗಿದೆ. ಮದ್ಯದ ಹಗರಣದ ಕಮೀಷನ್ ಕಾಂಗ್ರೆಸ್ ನಾಯಕರ ಖಾತೆಗೆ ಹೋಗಿದೆ ಎಂದು ಮೋದಿ ವಾಗ್ದಾಳಿ ನಡೆಸಿದ್ದರು

ಈ ಆರೋಪಗಳಿಗೆ ಛತ್ತೀಸ್​ಘಡ್ ಸಿಎಂ ಭೂಪೇಶ್ ಬಘೇಲ್ ಟ್ವೀಟ್​ ಮೂಲಕ ತಿರುಗೇಟು ನೀಡಿದ್ದಾರೆ. ಪ್ರಧಾನಿ ಮೋದಿ ಅವರು ಸುಳ್ಳುಗಳನ್ನು ಹರಿಯ ಬಿಡುತ್ತಿದ್ದಾರೆ ಎಂದು ಅಪಾದಿಸಿದ್ದಾರೆ. ಕಾಂಗ್ರೆಸ್‌ ಸರ್ಕಾರ ವಿರುದ್ಧ ಪ್ರಧಾನಿ ಮೋದಿ ಆರೋಪಿಸಿರುವ ಎಲ್ಲ ಹೇಳಿಕೆಗಳನ್ನು ಸಿಎಂ ಬಘೇಲ್ ನಿರಾಕರಿಸಿದ್ದಾರೆ. ಪ್ರಧಾನಿ ಮೋದಿಯವರ ಆರೋಪದ ಮೇಲೆ, ಸಿಎಂ ಬಘೇಲ್ ಟ್ವೀಟ್ ಮಾಡುವ ಮೂಲಕ ತಮ್ಮ ಪ್ರತ್ಯುತ್ತರ ನೀಡಿದರು.

’’ಮೋದಿ ಜೀ, ನೀವು ಬಂದ ಕೂಡಲೇ ಛತ್ತೀಸ್‌ಗಢದಲ್ಲಿ ಸುಳ್ಳಿನ ಅಲೆಗಳು ಹರಿಯ ತೊಡಗಿದವು. ಕೇಂದ್ರದ ಹಣದಲ್ಲಿ ಭತ್ತ ಖರೀದಿ ಮಾಡಲಾಗಿದೆ ಎಂದು ರಾಜ್ಯದ ಬಿಜೆಪಿ ನಾಯಕರು ರೈತರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ನೀವು ಪ್ರಧಾನಿಯಾಗಿದ್ದೀರಿ, ನಿಮಗೆ ಸತ್ಯ ತಿಳಿದಿದೆ. ಆದರೆ ನೀವು ಸಹ ಸುಳ್ಳು ಹೇಳಿದ್ದೀರಿ. ರಾಜ್ಯದಲ್ಲಿ ಶೇ.80ರಷ್ಟು ಭತ್ತವನ್ನು ಕೇಂದ್ರವೇ ಖರೀದಿಸಿ, ತೆಗೆದುಕೊಳ್ಳುತ್ತದೆ ಎಂಬುದು ರೈತರ ಹೆಸರಿನಲ್ಲಿ ದೊಡ್ಡ ಸುಳ್ಳು‘‘ ಎಂದು ಸಿಎಂ ಭೂಪೇಶ್ ಬಘೇಲ್ ಟ್ವೀಟ್ ಮಾಡಿದ್ದಾರೆ.

ಗಂಗಾಜಲದ ಸುಳ್ಳು ಹೇಳಿಕೆ ಆರೋಪವನ್ನು ನಿರಾಕರಿಸಿದ ಭೂಪೇಶ್ ಬಘೇಲ್ ತಮ್ಮ ಟ್ವೀಟ್‌ನಲ್ಲಿ ಮತ್ತಷ್ಟು ಬರೆದುಕೊಂಡಿದ್ದಾರೆ. ರಾಜ್ಯಗಳಲ್ಲಿನ ಭತ್ತ ಸಂಗ್ರಹಣೆಯಲ್ಲಿ ನಿಮ್ಮ ಸರ್ಕಾರದ ಪಾತ್ರವು ತುಂಬಾ ದೊಡ್ಡದಾಗಿದ್ದರೆ, ನೀವು ಸ್ಪರ್ಧಿಸಿದ ಲೋಕಸಭಾ ವಾರಾಣಸಿ ಕ್ಷೇತ್ರದ ರೈತರಿಂದ 1,000-1,200 ರೂ.ಗೆ ಭತ್ತ ಪಡೆಯಬಹುದು.

ಪ್ರತಿ ಕ್ವಿಂಟಾಲ್‌ ನೀವು ಏಕೆ ಮಾರಾಟ ಮಾಡಲು ಒತ್ತಾಯಿಸುತ್ತೀರಿ ಮೋದಿ ಜೀ. ಛತ್ತೀಸ್‌ಗಢದ ಬಿಜೆಪಿ ನಾಯಕರು ಪ್ರಧಾನಿಗೆ ತಪ್ಪು ಮಾಹಿತಿ ಒದಗಿಸಿದ್ದಾರೆ. ಗಂಗಾಜಲದ ಪ್ರಮಾಣ ವಚನ ಸ್ವೀಕರಿಸಿ, 10 ದಿನಗಳಲ್ಲಿ 2018 ರಲ್ಲಿ ಸರ್ಕಾರ ರೈತರ ಸಾಲಮನ್ನಾ ಭರವಸೆ ಈಡೇರಿಸಿದ್ದು ಛತ್ತೀಸ್‌ಗಢದ ಪ್ರತಿ ಮಗುವಿಗೆ ಗೊತ್ತು. ನಾವು ಅದನ್ನು ಎರಡು ಗಂಟೆಗಳಲ್ಲಿ ಮಾಡಿದ್ದೇವೆ ಎಂದು ತಿರುಗೇಟು ನೀಡಿದ್ದಾರೆ.

ಕ್ವಿಂಟಾಲ್‌ಗೆ 2100 ರೂ ಭತ್ತ ಖರೀದಿಗೆ ಬೆಂಬಲ ಬೆಲೆ ನೀಡುವುದಾಗಿ ಬಿಜೆಪಿ ಭರವಸೆ ನೀಡಿತ್ತು, ಅದನ್ನು ಈಡೇರಿಸಿಲ್ಲ ಎಂದು ರೈತರಿಗೆ ನೆನಪಿದೆ. ಛತ್ತೀಸ್‌ಗಢದ ರೈತರನ್ನು ದಾರಿ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಿಎಂ ಭೂಪೇಶ್ ಬಘೇಲ್ ಟ್ವೀಟ್​ ಮೂಲಕ ಪ್ರಧಾನಿ ಮೋದಿಗೆ ತಿರುಗೇಟು ನೀಡಿದ್ದಾರೆ.

ಶೇ 80 ರಷ್ಟು ಕೇಂದ್ರದಿಂದ ಭತ್ತ ಖರೀದಿ: ಛತ್ತೀಸ್​ಗಢ ಜನರ ಭರವಸೆಗಳನ್ನು ಈಡೇರಿಸಲು ಕಾಂಗ್ರೆಸ್ ವಿಫಲವಾಗಿದೆ. ರಾಜ್ಯದಲ್ಲಿ ಶೇ.80ಕ್ಕೂ ಹೆಚ್ಚು ಭತ್ತವನ್ನು ಕೇಂದ್ರದಿಂದ ಸಂಗ್ರಹಿಸಲಾಗಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ಬಿ ಜೆಪಿ ನೇತೃತ್ವದ ಕೇಂದ್ರ ಸರಕಾರ ಭತ್ತದ ಬೆಳೆಯುವ ರೈತರಿಗೆ ನೆರವು ನೀಡಿದೆ. 1 ಲಕ್ಷ ಕೋಟಿಗೂ ಹೆಚ್ಚು ಹಣ ರೈತ ಸಮುದಾಯಕ್ಕೆ ನೀಡಿದೆ. ಆದರೆ, ರಾಜ್ಯದ ಅಭಿವೃದ್ಧಿಯನ್ನು ಕುಂಠಿತಗೊಳಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ, ಅಷ್ಟೇ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆಪಾದಿಸಿದ್ದರು.

7600 ಕೋಟಿ ರೂ ಅಭಿವೃದ್ಧಿ ಕಾಮಗಾರಿಗೆ ಚಾಲನೆ: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ರಾಯ್‌ಪುರದಲ್ಲಿ 7600 ಕೋಟಿ ರೂ ವೆಚ್ಚದ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಇದರಡಿ ಎಂಟು ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಯಿತು. 4 ವರ್ಷದ ಬಳಿಕ ಛತ್ತೀಸ್‌ಗಢದಲ್ಲಿ ನಡೆದ ರ‍್ಯಾಲಿಯಲ್ಲಿ ಭಾಗವಹಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.

ಇದನ್ನೂಓದಿ:Maharashtra Political Crisis: ಉದ್ಧವ್​ ಠಾಕ್ರೆ ಬಣಕ್ಕೆ ಮತ್ತೊಂದು ಶಾಕ್​, ಶಿಂಧೆ ಬಣದತ್ತ ಮತ್ತೊಬ್ಬ ಶಿವಸೇನಾ ನಾಯಕಿ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.