ETV Bharat / bharat

ಕೇಂದ್ರ ಘೋಷಿಸಿರುವ ಪ್ಯಾಕೇಜ್​ ಗ್ಯಾರಂಟಿ ಕ್ರೆಡಿಟ್ ಅಲ್ಲ: ಪಿ ಚಿದಂಬರಂ ಟೀಕೆ

ಕೇಂದ್ರ ಘೋಷಿಸಿರುವ 'ಸಾಲ.. ಖಾತರಿ ಸಾಲವಲ್ಲ' ಎಂದು ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಟೀಕಿಸಿದ್ದಾರೆ. ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಸೂಚಿಸಿದ 8 ಪರಿಹಾರ ಕ್ರಮಗಳು ಉಪಯೋಗಕ್ಕೆ ಬರಲ್ಲ ಎಂದು ಮಾಜಿ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

author img

By

Published : Jun 29, 2021, 9:17 PM IST

chidambaram
ಪಿ ಚಿದಂಬರಂ ಟೀಕೆ

ನವದೆಹಲಿ: ದೇಶದ ಆರ್ಥಿಕತೆ ಚೇತರಿಕೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೂಚಿಸಿದ 8 ಪರಿಹಾರ ಕ್ರಮಗಳನ್ನು ಕೇಂದ್ರದ ಮಾಜಿ ಹಣಕಾಸು ಪಿ ಚಿದಂಬರಂ ಟೀಕಿಸಿದ್ದಾರೆ. ಕೇಂದ್ರ ಘೋಷಿಸಿರುವ 'ಸಾಲ ಖಾತರಿ ಸಾಲವಲ್ಲ' ಎಂದು ಹೇಳಿದ್ದಾರೆ. ಇದು ಹೆಚ್ಚಿನ ಸಾಲ ಮತ್ತು ಯಾವುದೇ ಬ್ಯಾಂಕರ್ ವ್ಯವಹಾರಕ್ಕಾಗಿ ಸಾಲವನ್ನು ನೀಡುವುದಿಲ್ಲ ಎಂದಿದ್ದಾರೆ.

ಹಣದ ಕೊರತೆಯಿರುವ ವ್ಯವಹಾರಗಳು ಹೆಚ್ಚಿನ ಸಾಲವನ್ನು ಬಯಸುವುದಿಲ್ಲ, ಅವರಿಗೆ ಸಾಲೇತರ ಬಂಡವಾಳ ಬೇಕು. ಹೆಚ್ಚಿನ ಪೂರೈಕೆ ಎಂದರೆ ಹೆಚ್ಚಿನ ಬೇಡಿಕೆ (ಬಳಕೆ) ಎಂದಲ್ಲ ಎಂದಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಹೆಚ್ಚಿನ ಬೇಡಿಕೆ (ಬಳಕೆ) ಹೆಚ್ಚಿನ ಪೂರೈಕೆಯನ್ನು ಪ್ರಚೋದಿಸುತ್ತದೆ ಮತ್ತು ಉದ್ಯೋಗಗಳು ಕಣ್ಮರೆಯಾಗುವ ಮತ್ತು ಆದಾಯ / ವೇತನಗಳು ಕಡಿಮೆಯಾಗುವ ಆರ್ಥಿಕತೆಯಲ್ಲಿ ಬೇಡಿಕೆ (ಬಳಕೆ) ಹೆಚ್ಚಾಗುವುದಿಲ್ಲ ಎಂದು ಚಿದಂಬರಂ ವಿಶ್ಲೇಷಣೆ ಮಾಡಿದ್ದಾರೆ.

'ಈ ಬಿಕ್ಕಟ್ಟಿಗೆ ಪರಿಹಾರವೆಂದರೆ ಜನರ ಕೈಯಲ್ಲಿ ಹಣ ನೀಡುವುದು, ವಿಶೇಷವಾಗಿ ಬಡ ಮತ್ತು ಕೆಳ ಮಧ್ಯಮ ವರ್ಗದವರ ಕೈಯಲ್ಲಿ ಹಣದ ಹರಿವು ಹೆಚ್ಚಿಸಬೇಕಾದ ಅಗತ್ಯತೆ ಇದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಕೋವಿಡ್ ಪರಿಸ್ಥಿತಿಯಲ್ಲಿ ಕುಸಿದಿರುವ ದೇಶದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಸೋಮವಾರ ಒಟ್ಟು 8 ಪರಿಹಾರ ಕ್ರಮಗಳನ್ನು ಘೋಷಿಸಿದ್ದರು. 1.5 ಲಕ್ಷ ಕೋಟಿ ರೂ.ಗಳ ಖಾತರಿ ಯೋಜನೆ ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆಯನ್ನೂ ಇದೇ ವೇಳೆ ಅವರು ಪ್ರಕಟಿಸಿದ್ದರು. ಕೋವಿಡ್​ ಪೀಡಿತ ವಲಯಗಳಿಗೆ 1.1 ಲಕ್ಷ ಕೋಟಿ ರೂ. ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆಯ ಒಟ್ಟಾರೆ ಕ್ಯಾಪ್ ಅನ್ನು 3 ಲಕ್ಷ ಕೋಟಿಯಿಂದ 4.5 ಲಕ್ಷ ಕೋಟಿಗೆ ಏರಿಸಲಾಗಿದೆ.

ಸಣ್ಣ ಬಂಡವಾಳ ಕ್ರೆಡಿಟ್ ಬಳಕೆದಾರರಿಗೆ ಮಾತ್ರವಲ್ಲದೇ ಪ್ರವಾಸೋದ್ಯಮಕ್ಕೂ ಸಾಲ ನೀಡಲು ಒಟ್ಟು ನಾಲ್ಕು ಹೊಸ ಕ್ರಮಗಳನ್ನು ಘೋಷಿಸಲಾಯಿತು. ಇದಲ್ಲದೆ, ವೈದ್ಯಕೀಯ ಮೂಲಸೌಕರ್ಯಗಳನ್ನು ನಿರ್ಮಿಸಲು ಸೀತಾರಾಮನ್ 50,000 ಕೋಟಿ ರೂ. ಘೋಷಿಸಿದ್ದಾರೆ.

ಇದನ್ನೂ ಓದಿ:Covid-19 ತಂದಿಟ್ಟ ಬಿಕ್ಕಟ್ಟು: 8 ಅಂಶಗಳ ವಿಶೇಷ ಪ್ಯಾಕೇಜ್​ ಘೋಷಿಸಿದ Sitaraman

ನವದೆಹಲಿ: ದೇಶದ ಆರ್ಥಿಕತೆ ಚೇತರಿಕೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೂಚಿಸಿದ 8 ಪರಿಹಾರ ಕ್ರಮಗಳನ್ನು ಕೇಂದ್ರದ ಮಾಜಿ ಹಣಕಾಸು ಪಿ ಚಿದಂಬರಂ ಟೀಕಿಸಿದ್ದಾರೆ. ಕೇಂದ್ರ ಘೋಷಿಸಿರುವ 'ಸಾಲ ಖಾತರಿ ಸಾಲವಲ್ಲ' ಎಂದು ಹೇಳಿದ್ದಾರೆ. ಇದು ಹೆಚ್ಚಿನ ಸಾಲ ಮತ್ತು ಯಾವುದೇ ಬ್ಯಾಂಕರ್ ವ್ಯವಹಾರಕ್ಕಾಗಿ ಸಾಲವನ್ನು ನೀಡುವುದಿಲ್ಲ ಎಂದಿದ್ದಾರೆ.

ಹಣದ ಕೊರತೆಯಿರುವ ವ್ಯವಹಾರಗಳು ಹೆಚ್ಚಿನ ಸಾಲವನ್ನು ಬಯಸುವುದಿಲ್ಲ, ಅವರಿಗೆ ಸಾಲೇತರ ಬಂಡವಾಳ ಬೇಕು. ಹೆಚ್ಚಿನ ಪೂರೈಕೆ ಎಂದರೆ ಹೆಚ್ಚಿನ ಬೇಡಿಕೆ (ಬಳಕೆ) ಎಂದಲ್ಲ ಎಂದಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಹೆಚ್ಚಿನ ಬೇಡಿಕೆ (ಬಳಕೆ) ಹೆಚ್ಚಿನ ಪೂರೈಕೆಯನ್ನು ಪ್ರಚೋದಿಸುತ್ತದೆ ಮತ್ತು ಉದ್ಯೋಗಗಳು ಕಣ್ಮರೆಯಾಗುವ ಮತ್ತು ಆದಾಯ / ವೇತನಗಳು ಕಡಿಮೆಯಾಗುವ ಆರ್ಥಿಕತೆಯಲ್ಲಿ ಬೇಡಿಕೆ (ಬಳಕೆ) ಹೆಚ್ಚಾಗುವುದಿಲ್ಲ ಎಂದು ಚಿದಂಬರಂ ವಿಶ್ಲೇಷಣೆ ಮಾಡಿದ್ದಾರೆ.

'ಈ ಬಿಕ್ಕಟ್ಟಿಗೆ ಪರಿಹಾರವೆಂದರೆ ಜನರ ಕೈಯಲ್ಲಿ ಹಣ ನೀಡುವುದು, ವಿಶೇಷವಾಗಿ ಬಡ ಮತ್ತು ಕೆಳ ಮಧ್ಯಮ ವರ್ಗದವರ ಕೈಯಲ್ಲಿ ಹಣದ ಹರಿವು ಹೆಚ್ಚಿಸಬೇಕಾದ ಅಗತ್ಯತೆ ಇದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಕೋವಿಡ್ ಪರಿಸ್ಥಿತಿಯಲ್ಲಿ ಕುಸಿದಿರುವ ದೇಶದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಸೋಮವಾರ ಒಟ್ಟು 8 ಪರಿಹಾರ ಕ್ರಮಗಳನ್ನು ಘೋಷಿಸಿದ್ದರು. 1.5 ಲಕ್ಷ ಕೋಟಿ ರೂ.ಗಳ ಖಾತರಿ ಯೋಜನೆ ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆಯನ್ನೂ ಇದೇ ವೇಳೆ ಅವರು ಪ್ರಕಟಿಸಿದ್ದರು. ಕೋವಿಡ್​ ಪೀಡಿತ ವಲಯಗಳಿಗೆ 1.1 ಲಕ್ಷ ಕೋಟಿ ರೂ. ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆಯ ಒಟ್ಟಾರೆ ಕ್ಯಾಪ್ ಅನ್ನು 3 ಲಕ್ಷ ಕೋಟಿಯಿಂದ 4.5 ಲಕ್ಷ ಕೋಟಿಗೆ ಏರಿಸಲಾಗಿದೆ.

ಸಣ್ಣ ಬಂಡವಾಳ ಕ್ರೆಡಿಟ್ ಬಳಕೆದಾರರಿಗೆ ಮಾತ್ರವಲ್ಲದೇ ಪ್ರವಾಸೋದ್ಯಮಕ್ಕೂ ಸಾಲ ನೀಡಲು ಒಟ್ಟು ನಾಲ್ಕು ಹೊಸ ಕ್ರಮಗಳನ್ನು ಘೋಷಿಸಲಾಯಿತು. ಇದಲ್ಲದೆ, ವೈದ್ಯಕೀಯ ಮೂಲಸೌಕರ್ಯಗಳನ್ನು ನಿರ್ಮಿಸಲು ಸೀತಾರಾಮನ್ 50,000 ಕೋಟಿ ರೂ. ಘೋಷಿಸಿದ್ದಾರೆ.

ಇದನ್ನೂ ಓದಿ:Covid-19 ತಂದಿಟ್ಟ ಬಿಕ್ಕಟ್ಟು: 8 ಅಂಶಗಳ ವಿಶೇಷ ಪ್ಯಾಕೇಜ್​ ಘೋಷಿಸಿದ Sitaraman

ETV Bharat Logo

Copyright © 2024 Ushodaya Enterprises Pvt. Ltd., All Rights Reserved.